ಹೊಸದಿಲ್ಲಿ: ಎಎಪಿಯು ಒಬ್ಬ ಶಾಸಕರನ್ನು ಹೊಂದುವ ಬಗ್ಗೆ ಯಾರೂ ಯೋಚಿಸಿರಲಿಲ್ಲ- ಸಿಎಂ ಅರವಿಂದ್ ಕೇಜ್ರಿವಾಲ್
1230 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಹೊಸದಿಲ್ಲಿ: ಪಂಜಾಬ್ ಮತ್ತು ದಿಲ್ಲಿಯಲ್ಲಿ ಸರಕಾರ ರೂಪಿಸಿರುವ ಆಮ್ ಆದ್ಮಿ ಪಾರ್ಟಿಗೆ (ಎಎಪಿ) ಭಾರತೀಯ ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ. ದಿಲ್ಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಯ ಅರವಿಂದ್ ಕೇಜ್ರಿವಾಲ್ ಈ ಬೆಳವಣಿಗೆಯನ್ನು ಚಮಾತ್ಕಾರ ಎಂದು ಕರೆದಿದ್ದಾರೆ. ''2012ರ ನವೆಂಬರ್ 26ರಂದು ನಮ್ಮ ಪಕ್ಷ ಸ್ಥಾಪನೆಯಾದಾಗ ಪಕ್ಷವು ಒಬ್ಬ ಶಾಸಕರನ್ನು ಹೊಂದುವ ಬಗ್ಗೆ ಯಾರೊಬ್ಬರೂ ಯೋಚಿಸಿಯೂ ಇರಲಿಲ್ಲ. ಈಗ ಹತ್ತೂವರೆ ವರ್ಷಗಳ ಬಳಿಕ ಎಎಪಿಯು ರಾಷ್ಟ್ರೀಯ ಪಕ್ಷವಾಗಿದೆ'' ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
''ಆಗ ನಮ್ಮಲ್ಲಿ ಹಣವಿರಲಿಲ್ಲ ಅಥವಾ ಜನರು ಇರಲಿಲ್ಲ. ಈಗಲೂ ನಮ್ಮಲ್ಲಿ ಹಣವಿಲ್ಲ, ಆದರೆ ಸಾಕಷ್ಟು ಜನರಿದ್ದಾರೆ. ಭಗವಂತ ನಮ್ಮ ಜೊತೆಗಿದ್ದಾರೆ. ದೇಶಕ್ಕಾಗಿ ಏನಾದರೂ ಮಾಡಲೆಂದು ಭಗವಂತ ಬಯಸಿದ್ದಾರೆ. ಈ ಸಂಭ್ರಮದ ಸಮಯದಲ್ಲಿ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಸಹ ಇರಬೇಕಿತ್ತು...'' ಎಂದು ಕೇಜ್ರಿವಾಲ್ ಹೇಳಿದರು.
''ದೇಶದ ಜನರು ಬದಲಾವಣೆಯನ್ನು ಬಯಸಿದ್ದಾರೆ, ಕೆಲಸ ಮಾಡುವವರನ್ನು ಎದುರು ನೋಡುತ್ತಿದ್ದಾರೆ. ಅದು ಕೇವಲ ಅರವಿಂದ್ ಕೇಜ್ರಿವಾಲ್ ಅವರ ಎಎಪಿಯಿಂದ ಸಾಧ್ಯ ಎಂಬುದು ಜನರಿಗೆ ತಿಳಿದಿದೆ. ಜನರಿಗೆ ಕಾಯಕ ಮಾಡುವ ರಾಜಕೀಯದ ಬಗ್ಗೆ ಆಸಕ್ತಿ ತೋರಿದ್ದಾರೆಯೇ ವಿನಃ ಜಾತಿ ಅಥವಾ ಧರ್ಮ ರಾಜಕಾರಣದ ಬಗ್ಗೆ ಅಲ್ಲ'' ಎಂದು ಎಎಪಿ ನಾಯಕಿ ಆತಿಶಿ ಅಭಿಪ್ರಾಯ ಪಟ್ಟಿದ್ದಾರೆ.
''ಪಕ್ಷದ ಉದ್ದೇಶದ ಬಗ್ಗೆ ನಾವು ದೇಶದಾದ್ಯಂತ ಅರಿವು ಮೂಡಿಸಿದ್ದೇವೆ. ದಿಲ್ಲಿ ಮತ್ತು ಪಂಜಾಬ್ನಲ್ಲಿ ನಮ್ಮ ಸರಕಾರಗಳಿವೆ, ಗೋವಾ ಹಾಗೂ ಗುಜರಾತ್ನಲ್ಲಿ ನಮ್ಮ ಶಾಸಕರಿದ್ದಾರೆ. ಹಣ ಬಲ್ಲವಿಲ್ಲದ, ಜಾತಿ ಅಥವಾ ಧರ್ಮದ ಆಧಾರದ ಮೇಲೆ ಮತಗಳನ್ನು ಯಾಚಿಸದ ಪುಟ್ಟ ಪಕ್ಷ ನಮ್ಮದು'' ಎಂದು ಹೇಳಿದ್ದಾರೆ.
ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿರುವ ಬಗ್ಗೆ ಸಂಸದ ರಾಘವ್ ಚಡ್ಡಾ ಖುಷಿ ಹಂಚಿಕೊಂಡಿದ್ದಾರೆ. ''ನಾವು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಸ್ಟಾರ್ಟ್-ಅಪ್. ನಮ್ಮ ಮೇಲೆ ನಂಬಿಕೆ ಇಟ್ಟಿರುವ ಜನರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ. ಪಕ್ಷದ ಸದಸ್ಯರು ಹಾಗೂ ಅರವಿಂದ್ ಕೇಜ್ರಿವಾಲ್ ಅವರ ದಣಿವರಿಯದ ಕಾರ್ಯದಿಂದಾಗಿ ಇದು ಸಾಧ್ಯವಾಗಿದೆ'' ಎಂದರು.
ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕಿದ್ದು, ತೃಣಮೂಲ ಕಾಂಗ್ರೆಸ್, ಎನ್ಸಿಪಿ ಹಾಗೂ ಸಿಪಿಐ ಪಕ್ಷಗಳನ್ನು ಭಾರತೀಯ ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷದ ಸ್ಥಾನಮಾನದಿಂದ ಹೊರತಂದಿದೆ. ಎಎಪಿಯು 2015ರಿಂದ ದಿಲ್ಲಿ ವಿಧಾನಸಭೆಯ ಚುಕ್ಕಾಣಿ ಹಿಡಿದಿದ್ದು, 2022ರ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಬಹುಮತ ಸಾಧಿಸಿದೆ.
''ಆಗ ನಮ್ಮಲ್ಲಿ ಹಣವಿರಲಿಲ್ಲ ಅಥವಾ ಜನರು ಇರಲಿಲ್ಲ. ಈಗಲೂ ನಮ್ಮಲ್ಲಿ ಹಣವಿಲ್ಲ, ಆದರೆ ಸಾಕಷ್ಟು ಜನರಿದ್ದಾರೆ. ಭಗವಂತ ನಮ್ಮ ಜೊತೆಗಿದ್ದಾರೆ. ದೇಶಕ್ಕಾಗಿ ಏನಾದರೂ ಮಾಡಲೆಂದು ಭಗವಂತ ಬಯಸಿದ್ದಾರೆ. ಈ ಸಂಭ್ರಮದ ಸಮಯದಲ್ಲಿ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಸಹ ಇರಬೇಕಿತ್ತು...'' ಎಂದು ಕೇಜ್ರಿವಾಲ್ ಹೇಳಿದರು.
''ದೇಶದ ಜನರು ಬದಲಾವಣೆಯನ್ನು ಬಯಸಿದ್ದಾರೆ, ಕೆಲಸ ಮಾಡುವವರನ್ನು ಎದುರು ನೋಡುತ್ತಿದ್ದಾರೆ. ಅದು ಕೇವಲ ಅರವಿಂದ್ ಕೇಜ್ರಿವಾಲ್ ಅವರ ಎಎಪಿಯಿಂದ ಸಾಧ್ಯ ಎಂಬುದು ಜನರಿಗೆ ತಿಳಿದಿದೆ. ಜನರಿಗೆ ಕಾಯಕ ಮಾಡುವ ರಾಜಕೀಯದ ಬಗ್ಗೆ ಆಸಕ್ತಿ ತೋರಿದ್ದಾರೆಯೇ ವಿನಃ ಜಾತಿ ಅಥವಾ ಧರ್ಮ ರಾಜಕಾರಣದ ಬಗ್ಗೆ ಅಲ್ಲ'' ಎಂದು ಎಎಪಿ ನಾಯಕಿ ಆತಿಶಿ ಅಭಿಪ್ರಾಯ ಪಟ್ಟಿದ್ದಾರೆ.
''ಪಕ್ಷದ ಉದ್ದೇಶದ ಬಗ್ಗೆ ನಾವು ದೇಶದಾದ್ಯಂತ ಅರಿವು ಮೂಡಿಸಿದ್ದೇವೆ. ದಿಲ್ಲಿ ಮತ್ತು ಪಂಜಾಬ್ನಲ್ಲಿ ನಮ್ಮ ಸರಕಾರಗಳಿವೆ, ಗೋವಾ ಹಾಗೂ ಗುಜರಾತ್ನಲ್ಲಿ ನಮ್ಮ ಶಾಸಕರಿದ್ದಾರೆ. ಹಣ ಬಲ್ಲವಿಲ್ಲದ, ಜಾತಿ ಅಥವಾ ಧರ್ಮದ ಆಧಾರದ ಮೇಲೆ ಮತಗಳನ್ನು ಯಾಚಿಸದ ಪುಟ್ಟ ಪಕ್ಷ ನಮ್ಮದು'' ಎಂದು ಹೇಳಿದ್ದಾರೆ.
ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿರುವ ಬಗ್ಗೆ ಸಂಸದ ರಾಘವ್ ಚಡ್ಡಾ ಖುಷಿ ಹಂಚಿಕೊಂಡಿದ್ದಾರೆ. ''ನಾವು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಸ್ಟಾರ್ಟ್-ಅಪ್. ನಮ್ಮ ಮೇಲೆ ನಂಬಿಕೆ ಇಟ್ಟಿರುವ ಜನರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ. ಪಕ್ಷದ ಸದಸ್ಯರು ಹಾಗೂ ಅರವಿಂದ್ ಕೇಜ್ರಿವಾಲ್ ಅವರ ದಣಿವರಿಯದ ಕಾರ್ಯದಿಂದಾಗಿ ಇದು ಸಾಧ್ಯವಾಗಿದೆ'' ಎಂದರು.
ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕಿದ್ದು, ತೃಣಮೂಲ ಕಾಂಗ್ರೆಸ್, ಎನ್ಸಿಪಿ ಹಾಗೂ ಸಿಪಿಐ ಪಕ್ಷಗಳನ್ನು ಭಾರತೀಯ ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷದ ಸ್ಥಾನಮಾನದಿಂದ ಹೊರತಂದಿದೆ. ಎಎಪಿಯು 2015ರಿಂದ ದಿಲ್ಲಿ ವಿಧಾನಸಭೆಯ ಚುಕ್ಕಾಣಿ ಹಿಡಿದಿದ್ದು, 2022ರ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಬಹುಮತ ಸಾಧಿಸಿದೆ.