ಅಭಿಮಾನಿಗಳ ದುರ್ಮರಣ; ನಟ ಯಶ್ ಕಣ್ಣೀರು; ಕುಟುಂಬಸ್ಥರಿಗೆ ಯಶ್ ಸಾಂತ್ವನ
1249 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಗದಗ : ನಟ ಯಶ್ ಜನ್ನ ದಿನದ ಸಂಭ್ರಮಾಚರಣೆಗೆ ಕಟೌಟ್ ಕಟ್ಟುವಾಗ ವಿದ್ಯುತ್ ತಗುಲಿ ಮೃತಪಟ್ಟ ತಾಲೂಕಿನ ಸೂರಣಗಿ ಗ್ರಾಮದ ಮೂವರು ಅಭಿಮಾನಿಗಳ ಕುಟುಂಬಗಳ ಮನೆಗೆ ನಟ ಯಶ್ ಸಂಜೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮೊದಲು ಮೃತ ಮುರಳಿ ನಡುವಿನಮನಿ ಅವರ ಮನೆಗೆ ಭೇಟಿ ನೀಡಿದ ಯಶ್ ಕುಟುಂಬದವರಿಗೆ ಸಮಾಧಾನ ಹೇಳಿದರು. ಬಳಿಕ, ನವೀನ ನೀಲಪ್ಪ ಹರಿಜನ ಹಾಗೂ ಹನುಮಂತ ಮಜ್ಜೂರಪ್ಪ ಹರಿಜನ ಅವರ ಮನೆಗೆ ಭೇಟಿ ನೀಡಿದರು.
ನಟ ಯಶ್ ಬರುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ಗ್ರಾಮಗಳ ಸಾವಿರಾರು ಅಭಿಮಾನಿಗಳು ಸೂರಣಗಿ ಗ್ರಾಮದಲ್ಲಿ ಜಮಾಯಿಸಿದ್ದರು. ಮಾರ್ಗದುದ್ದಕ್ಕೂ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮೃತರ ಮನೆಯ ಮುಂದೆ ಸುಮಾರು 3 ಗಂಟೆಗಳ ಕಾಲ ತಳ್ಳಾಟ ನೂಕಾಟ ನಡೆಯಿತು. ಗದ್ದಲ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ
ಮೊದಲು ಮೃತ ಮುರಳಿ ನಡುವಿನಮನಿ ಅವರ ಮನೆಗೆ ಭೇಟಿ ನೀಡಿದ ಯಶ್ ಕುಟುಂಬದವರಿಗೆ ಸಮಾಧಾನ ಹೇಳಿದರು. ಬಳಿಕ, ನವೀನ ನೀಲಪ್ಪ ಹರಿಜನ ಹಾಗೂ ಹನುಮಂತ ಮಜ್ಜೂರಪ್ಪ ಹರಿಜನ ಅವರ ಮನೆಗೆ ಭೇಟಿ ನೀಡಿದರು.
ನಟ ಯಶ್ ಬರುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ಗ್ರಾಮಗಳ ಸಾವಿರಾರು ಅಭಿಮಾನಿಗಳು ಸೂರಣಗಿ ಗ್ರಾಮದಲ್ಲಿ ಜಮಾಯಿಸಿದ್ದರು. ಮಾರ್ಗದುದ್ದಕ್ಕೂ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮೃತರ ಮನೆಯ ಮುಂದೆ ಸುಮಾರು 3 ಗಂಟೆಗಳ ಕಾಲ ತಳ್ಳಾಟ ನೂಕಾಟ ನಡೆಯಿತು. ಗದ್ದಲ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ