ಒಡಿಶಾ ದುರಂತ ಸಂಭವಿಸಿ 51 ಗಂಟೆಗಳ ಬಳಿಕ ರೈಲ್ವೇ ಸಂಚಾರ ಶುರು; ರೈಲಿಗೆ ಕೈಮುಗಿದು ಅಶ್ವಿನಿ ವೈಷ್ಣವ್ ಭಾವುಕ
1052 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಬಾಲಾಸೋರ್: ಒಡಿಶಾದ ಬಾಲಾಸೋರ್ ಬಳಿ ಭೀಕರ ರೈಲು ದುರಂತ ನಡೆದು 51 ಗಂಟೆಗಳ ಬಳಿಕ ಮತ್ತೆ ರೈಲು ಸಂಚಾರ ಶುರುವಾಗಿದೆ. ಭೀಕರ ಅಪಘಾತದಲ್ಲಿ 275 ಜನ ಮೃತಪಟ್ಟಿದ್ದು, 1000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ್ದರಿಂದ ಎರಡು ದಿನಗಳ ಕಾಲ ರೈಲು ಸಂಚಾರ ಆ ಮಾರ್ಗದಲ್ಲಿ ಬಂದ್ ಆಗಿತ್ತು. ಈಗ 51 ಗಂಟೆಗಳ ಸತತ ಕಾರ್ಯಾಚರಣೆ ಮತ್ತು ಮಾರ್ಗ ಮರು ನಿರ್ಮಾಣದಿಂದ ರೈಲ್ವೇ ಸಂಚಾರ ಮತ್ತೆ ಆರಂಭವಾಗಿದೆ.
ಅಪಘಾತದ ಬಳಿಕ ಬಂದ ಮೊದಲ ಗೂಡ್ಸ್ ರೈಲನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸ್ವಾಗತಿಸಿದರು. ಈ ವೇಳೆ ರೈಲಿಗೆ ಕೈ ಮುಗಿದು ಅವರು ಭಾವುಕರಾದರು. ರೈಲ್ವೇ ಅಪಘಾತ ನಡೆದ ಮರುದಿನದಿಂದಲೂ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದ ಅವರು ಅಲ್ಲಿಯೇ ಅಧಿಕಾರಿಗಳ ಸಭೆಗಳನ್ನು ನಡೆಸಿ, ವಾಪಸ್ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಮ್ಮ ಜವಾಬ್ದಾರಿ ಇನ್ನು ಮುಗಿದಿಲ್ಲ ಎಂದು ಭಾವುಕರಾದರು.
ಅಪಘಾತದ ಬಳಿಕ ಬಂದ ಮೊದಲ ಗೂಡ್ಸ್ ರೈಲನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸ್ವಾಗತಿಸಿದರು. ಈ ವೇಳೆ ರೈಲಿಗೆ ಕೈ ಮುಗಿದು ಅವರು ಭಾವುಕರಾದರು. ರೈಲ್ವೇ ಅಪಘಾತ ನಡೆದ ಮರುದಿನದಿಂದಲೂ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದ ಅವರು ಅಲ್ಲಿಯೇ ಅಧಿಕಾರಿಗಳ ಸಭೆಗಳನ್ನು ನಡೆಸಿ, ವಾಪಸ್ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಮ್ಮ ಜವಾಬ್ದಾರಿ ಇನ್ನು ಮುಗಿದಿಲ್ಲ ಎಂದು ಭಾವುಕರಾದರು.