'ಭವಿಷ್ಯದಲ್ಲಿ ವಿಪತ್ತುಗಳ ನಿರ್ವಹಣೆ, ನಿಯಂತ್ರಣದಲ್ಲಿ ಕೃತಕ ಬುದ್ಧಿಮತ್ತೆ ಪಾತ್ರ ಮಹತ್ವದ್ದು'
1004 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಕೃಷಿ ಮತ್ತು ಭವಿಷ್ಯದ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಬಹುಮುಖ್ಯ ಪಾತ್ರವಹಿಸಲಿದೆ. ಹೀಗಾಗಿ ಅದನ್ನು ಜಗತ್ತಿನ ವಿರುದ್ಧ ಶಸ್ತ್ರದಂತೆ ದುರ್ಬಳಕೆಯಾಗುವುದನ್ನು ತಡೆಯುವುದು ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 'ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ' (ರೈಸ್) ಕುರಿತ 2020ನೇ ಸಾಲಿನ ಜಾಗತಿಕ ವರ್ಚುಯಲ್ ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.''ಭವಿಷ್ಯದಲ್ಲಿ ವಿಪತ್ತುಗಳ ನಿರ್ವಹಣೆ, ನಿಯಂತ್ರಣದಲ್ಲಿ ಕೃತಕ ಬುದ್ಧಿಮತ್ತೆ ಮುಖ್ಯ ಎನಿಸಲಿದೆ. ಮಾನವನ ಬುದ್ಧಿಶಕ್ತಿಗೆ ಸಿಕ್ಕ ಅತ್ಯುನ್ನತ ಶ್ಲಾಘನೆಯೇ 'ಎಐ'. ಇತಿಹಾಸದ ಪ್ರತಿ ಹಂತಗಳಲ್ಲೂ ಜಗತ್ತನ್ನು ಭಾರತ ತನ್ನ ಜ್ಞಾನ ಮತ್ತು ಕಲಿಕೆಯ ಬಲದಿಂದ ಮುನ್ನೆಡಸಿರುವ ನಿದರ್ಶನಗಳಿವೆ. ಹಾಗಾಗಿ ಮಹತ್ತರ ತಂತ್ರಜ್ಞಾನವಾದ ಎಐ ದುರ್ಬಳಕೆಯನ್ನು ಮುನ್ನೆಚ್ಚರಿಕೆ ವಹಿಸಿ ಈಗಿನಿಂದಲೇ ತಡೆಯುವುದು ಪ್ರಮುಖ ವಿಚಾರವಾಗಿದೆ'' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.