ಸಿದ್ದರಾಮಯ್ಯ ಬಜೆಟ್ ಡಿಕೆ ಶಿವಕುಮಾರ್ಗೂ ನಿರಾಸೆ ತಂದಿದೆ ; ಬಿವೈ ವಿಜಯೇಂದ್ರ ಲೇವಡಿ
1142 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ನಿರಾಸೆ ತಂದಿದೆ ಎಂದು ವ್ಯಂಗ್ಯವಾಗಿ ಟೀಕಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಬಜೆಟ್ ಕುರಿತಾಗಿ ಮಾತನಾಡಿ, ಸಿದ್ದರಾಮಯ್ಯ ಅವರ 14ನೇ ಬಜೆಟ್ ಕುರಿತಾಗಿ ಸಾಕಷ್ಟು ನಿರೀಕ್ಷೆ ಇತ್ತು. ಆದ್ರೆ ಇದೊಂದು ನಿರಾಶದಾಯಕ ಬಜೆಟ್ ಎಂದರು. ಬಹುಶಃ ಡಿಕೆಶಿ ಅವರಿಗೂ ನಿರಾಸೆಯಾಗಿದೆ. ಮೇಕೆದಾಟು ಯೋಜನೆಗಾಗಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಮಾಡಲಾಗಿತ್ತು, ಆದರೆ ಈಗ ಮೇಕೆದಾಟು, ಮಹಾದಾಯಿಗೆ ಅನುದಾನವೇ ಮೀಸಲಿಟ್ಟಿಲ್ಲ ಎಂದರು.
ಡಿಕೆಶಿ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಶ್ರಮ ಬುದ್ಧಿವಂತಿಕೆಯನ್ನು ಬಜೆಟ್ ಗಾಗಿ ಉಪಯೋಗಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದೆ ಎಂದರು. ಜೊತೆಗೆ ಡಿಕೆಶಿ ಅವರಿಗೆ ಪಾಠ ಕಲಿಸೋ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ ಎಂದರು.
ವಿಧಾನಸೌಧದಲ್ಲಿ ಶುಕ್ರವಾರ ಬಜೆಟ್ ಕುರಿತಾಗಿ ಮಾತನಾಡಿ, ಸಿದ್ದರಾಮಯ್ಯ ಅವರ 14ನೇ ಬಜೆಟ್ ಕುರಿತಾಗಿ ಸಾಕಷ್ಟು ನಿರೀಕ್ಷೆ ಇತ್ತು. ಆದ್ರೆ ಇದೊಂದು ನಿರಾಶದಾಯಕ ಬಜೆಟ್ ಎಂದರು. ಬಹುಶಃ ಡಿಕೆಶಿ ಅವರಿಗೂ ನಿರಾಸೆಯಾಗಿದೆ. ಮೇಕೆದಾಟು ಯೋಜನೆಗಾಗಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಮಾಡಲಾಗಿತ್ತು, ಆದರೆ ಈಗ ಮೇಕೆದಾಟು, ಮಹಾದಾಯಿಗೆ ಅನುದಾನವೇ ಮೀಸಲಿಟ್ಟಿಲ್ಲ ಎಂದರು.
ಡಿಕೆಶಿ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಶ್ರಮ ಬುದ್ಧಿವಂತಿಕೆಯನ್ನು ಬಜೆಟ್ ಗಾಗಿ ಉಪಯೋಗಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದೆ ಎಂದರು. ಜೊತೆಗೆ ಡಿಕೆಶಿ ಅವರಿಗೆ ಪಾಠ ಕಲಿಸೋ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ ಎಂದರು.