ಬಿಎಸ್ವೈನಿಂದ ನಿಜಕ್ಕೂ ಮೋಸ ಹೋದ್ರಾ ಈಶ್ವರಪ್ಪ? ಕಮಲದ ಮಾಜಿ ಜೋಡೆತ್ತುಗಳ ನಡುವೆ ತೀವ್ರಗೊಂಡ ಸಮರ!
1845 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಬಳ್ಳಾರಿ ಮೂಲದ ಕೆಎಸ್ ಈಶ್ವರಪ್ಪ ಹಾಗೂ ಮಂಡ್ಯ ಮೂಲದ ಯಡಿಯೂರಪ್ಪ ಶಿವಮೊಗ್ಗಕ್ಕೆ ಆಗಮಿಸಿ ಸಂಘದ ಸೂಚನೆಯಂತೆ ಪಕ್ಷ ಕಟ್ಟಿದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಗ್ರಾಮ ಗ್ರಾಮಗಳಲ್ಲಿ ಸುತ್ತಾಡಿ ಪಕ್ಷವನ್ನು ಬಲಪಡಿಸಿದರು. ರೈತರ ಸಮಸ್ಯೆ, ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ನಾಯಕರಾಗಿ ಬೆಳೆದರೆ ಈಶ್ವರಪ್ಪ ಹಿಂದುತ್ವವನ್ನು ಅಸ್ತ್ರವನ್ನಾಗಿ ಬಳಸಿ ರಾಜಕೀಯವಾಗಿ ಬೇರೂರಿದರು.
ಆಪ್ತ ಸ್ನೇಹಿತರಾಗಿದ್ದ ಬಿಎಸ್ ಯಡಿಯೂರಪ್ಪ ಹಾಗೂ ಕೆ.ಎಸ್ ಈಶ್ವರಪ್ಪ ಜೊತೆಗೂಡಿ ವ್ಯಾಪಾರ ನಡೆಸಿದ್ದರು. ಇಬ್ಬರ ಪತ್ನಿಯರ ಹೆಸರಿನಲ್ಲಿ ಒಂದು ಕಂಪನಿಯನ್ನು ಆರಂಭಿಸಿದ್ದರು. ಜೆಎಎಂ ಎಂಬ ಸಿಮೆಂಟ್ ಹಾಗೂ ಪೈಪ್ ತಯಾರಿಸುವ ಕಾರ್ಖಾನೆಯನ್ನು 1994ರಲ್ಲಿ ಪ್ರಾರಂಭ ಮಾಡಿದ್ದರು. ಇಷ್ಟೊಂದು ಆಪ್ತರಾಗಿದ್ದ ಇವರಿಬ್ಬರು ರಾಜಕೀಯವಾಗಿ ಉನ್ನತ ಸ್ಥಾನಮಾನ ಪಡೆದುಕೊಳ್ಳುತ್ತಿದ್ದಂತ ಸಂಬಂಧ ಹಳಸತೊಡಗಿತು. ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೂಲಕ ಮೊದಲ ಬಾರಿ ಅಧಿಕಾರವನ್ನು ಅನುಭವಿಸಿದ ಬಿಜೆಪಿ ಪಕ್ಷದಲ್ಲಿ ಅಂದು ಬಿಎಸ್ವೈ ಉಪಮುಖ್ಯಮಂತ್ರಿಯಾದರೆ, ಈಶ್ವರಪ್ಪ ಸಚಿವರಾಗಿದ್ದರು. ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆದರು. ಬಳಿಕ ಕುಟುಂಬ ರಾಜಕಾರಣ ಹಸ್ತಕ್ಷೇಪ ಇವರಿಬ್ಬರ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿತು. ಶಿವಮೊಗ್ಗದಲ್ಲಿ ಲೋಕಸಭಾ ಕ್ಷೇತ್ರಕ್ಕೆ ಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸಿದ ಯಡಿಯೂರಪ್ಪ ನಡೆಗೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ರಾಜ್ಯಾಧ್ಯಕ್ಷರಾದರು.ಬಿಜೆಪಿ ತೊರೆದು ಬಿಎಸ್ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದ ಸಂದರ್ಭದಲ್ಲಿ ಈಶ್ವರಪ್ಪ ಅವರು ಬಿಎಸ್ವೈಯನ್ನು ಕಟುವಾಗಿ ಟೀಕಿಸಿದ್ದರು.
ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಸದ್ಯ ಪ್ರಶ್ನಾತೀತ ನಾಯಕರಾಗಿದ್ದಾರೆ. ಅಡೆ ತಡೆಗಳ ನಡುವೆಯೂ ಅವರನ್ನು ಇದೀಗ ಪಕ್ಷದ ಹಿಡಿತವನ್ನು ಮತ್ತೊಮ್ಮೆ ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಅಷ್ಟಕ್ಕೂ ಕುಟುಂಬ ರಾಜಕಾರಣದ ವಿರುದ್ಧ ಇರುವ ಬಿಜೆಪಿಯಲ್ಲಿ ಯಡಿಯೂರಪ್ಪ ಪುತ್ರರಿಗೆ ಸೂಕ್ತ ಸ್ಥಾನಮಾನ ಸಿಕ್ಕಿದೆ. ಬಿಎಸ್ವೈ ಓರ್ವ ಪುತ್ರ ಬಿವೈ ರಾಘವೇಂದ್ರ ಅವರು ಶಿವಮೊಗ್ಗ ಸಂಸದರಾಗಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಸಿಕ್ಕಿದೆ. ಮತ್ತೋರ್ವ ಪುತ್ರ ಬಿವೈ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ.
ಆಪ್ತ ಸ್ನೇಹಿತರಾಗಿದ್ದ ಬಿಎಸ್ ಯಡಿಯೂರಪ್ಪ ಹಾಗೂ ಕೆ.ಎಸ್ ಈಶ್ವರಪ್ಪ ಜೊತೆಗೂಡಿ ವ್ಯಾಪಾರ ನಡೆಸಿದ್ದರು. ಇಬ್ಬರ ಪತ್ನಿಯರ ಹೆಸರಿನಲ್ಲಿ ಒಂದು ಕಂಪನಿಯನ್ನು ಆರಂಭಿಸಿದ್ದರು. ಜೆಎಎಂ ಎಂಬ ಸಿಮೆಂಟ್ ಹಾಗೂ ಪೈಪ್ ತಯಾರಿಸುವ ಕಾರ್ಖಾನೆಯನ್ನು 1994ರಲ್ಲಿ ಪ್ರಾರಂಭ ಮಾಡಿದ್ದರು. ಇಷ್ಟೊಂದು ಆಪ್ತರಾಗಿದ್ದ ಇವರಿಬ್ಬರು ರಾಜಕೀಯವಾಗಿ ಉನ್ನತ ಸ್ಥಾನಮಾನ ಪಡೆದುಕೊಳ್ಳುತ್ತಿದ್ದಂತ ಸಂಬಂಧ ಹಳಸತೊಡಗಿತು. ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೂಲಕ ಮೊದಲ ಬಾರಿ ಅಧಿಕಾರವನ್ನು ಅನುಭವಿಸಿದ ಬಿಜೆಪಿ ಪಕ್ಷದಲ್ಲಿ ಅಂದು ಬಿಎಸ್ವೈ ಉಪಮುಖ್ಯಮಂತ್ರಿಯಾದರೆ, ಈಶ್ವರಪ್ಪ ಸಚಿವರಾಗಿದ್ದರು. ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆದರು. ಬಳಿಕ ಕುಟುಂಬ ರಾಜಕಾರಣ ಹಸ್ತಕ್ಷೇಪ ಇವರಿಬ್ಬರ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿತು. ಶಿವಮೊಗ್ಗದಲ್ಲಿ ಲೋಕಸಭಾ ಕ್ಷೇತ್ರಕ್ಕೆ ಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸಿದ ಯಡಿಯೂರಪ್ಪ ನಡೆಗೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ರಾಜ್ಯಾಧ್ಯಕ್ಷರಾದರು.ಬಿಜೆಪಿ ತೊರೆದು ಬಿಎಸ್ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದ ಸಂದರ್ಭದಲ್ಲಿ ಈಶ್ವರಪ್ಪ ಅವರು ಬಿಎಸ್ವೈಯನ್ನು ಕಟುವಾಗಿ ಟೀಕಿಸಿದ್ದರು.
ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಸದ್ಯ ಪ್ರಶ್ನಾತೀತ ನಾಯಕರಾಗಿದ್ದಾರೆ. ಅಡೆ ತಡೆಗಳ ನಡುವೆಯೂ ಅವರನ್ನು ಇದೀಗ ಪಕ್ಷದ ಹಿಡಿತವನ್ನು ಮತ್ತೊಮ್ಮೆ ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಅಷ್ಟಕ್ಕೂ ಕುಟುಂಬ ರಾಜಕಾರಣದ ವಿರುದ್ಧ ಇರುವ ಬಿಜೆಪಿಯಲ್ಲಿ ಯಡಿಯೂರಪ್ಪ ಪುತ್ರರಿಗೆ ಸೂಕ್ತ ಸ್ಥಾನಮಾನ ಸಿಕ್ಕಿದೆ. ಬಿಎಸ್ವೈ ಓರ್ವ ಪುತ್ರ ಬಿವೈ ರಾಘವೇಂದ್ರ ಅವರು ಶಿವಮೊಗ್ಗ ಸಂಸದರಾಗಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಸಿಕ್ಕಿದೆ. ಮತ್ತೋರ್ವ ಪುತ್ರ ಬಿವೈ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ.