'ಮಾತೃ ಪಕ್ಷ'ಕ್ಕೆ ಯಾರು ವಾಪಸ್? ಯಾರಿಗೆ ರಿಟರ್ನ್ ಟಿಕೆಟ್ ಇಲ್ಲ?
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಬಿಜೆಪಿಗೆ ಹಾರಿ ದೋಸ್ತಿ ಸರ್ಕಾರ ಬೀಳಿಸಿದ ಹಲವು ಶಾಸಕರು 2019, 2023ರ ಚುನಾವಣೆಗಳಲ್ಲಿ ಏರಿಳಿತ ಕಂಡಿದ್ದಾರೆ. 2023ರಲ್ಲಿ ಗೆದ್ದವರ ಪೈಕಿ ಕೆಲವರು ಅದರಲ್ಲೂ ಕಾಂಗ್ರೆಸ್ನಿಂದ ಬಿಜೆಪಿಗೆ ಹಾರಿದ್ದವರು ತವರಿಗೆ ವಾಪಸ್ ಬರೋಕೆ ಯತ್ನಿಸ್ತಿದ್ದಾರೆ ಎನ್ನಲಾಗ್ತಿದೆ. ಆದರೆ, ಎಲ್ಲ ಶಾಸಕರನ್ನೂ ‘ಮಾತೃ ಪಕ್ಷ’ಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಹಿಂದೇಟು ಹಾಕ್ತಿದೆ ಅನ್ನೋ ಮಾಹಿತಿ ಇದೆ. ಹೀಗಾಗಿ, ಯಾವ ಶಾಸಕರು ವಾಪಸ್ ಹೋಗಬಹುದು? ಯಾರಿಗೆ ರಿಟರ್ನ್ ಟಿಕೆಟ್ ಇಲ್ಲ? ಅನ್ನೋದ್ರ ವಿಶ್ಲೇಷಣೆ ಇಲ್ಲಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಬೀಳಿಸೋಕೆ ಕಾರಣವಾಗಿದ್ದ ಹಲವು ಶಾಸಕರು ಮುಂಬೈನ ಹೋಟೆಲ್ ಒಂದರಲ್ಲಿ ಠಿಕಾಣಿ ಹೂಡಿದ್ದರು. ಇದೇ ಕಾರಣಕ್ಕಾಗಿ ಬಾಂಬೆ ಬಾಯ್ಸ್ ಎಂದೇ ಹೆಸರಾದ ಈ ಶಾಸಕರ ಒಟ್ಟು ಸಂಖ್ಯೆ 17. ಈ ಪೈಕಿ 12 ಮಂದಿ ಕಾಂಗ್ರೆಸ್ನಿಂದ ಬಂದವರು. ಮೂವರು ಜೆಡಿಎಸ್, ಇಬ್ಬರು ಪಕ್ಷೇತರ ಸದಸ್ಯರಾಗಿದ್ದರು. ದೋಸ್ತಿ ಸರ್ಕಾರ ಉರುಳಿಸಿದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸಚಿವ ಪಟ್ಟ, ನಿಗಮ ಮಂಡಳಿ ಪಟ್ಟ ಅನುಭವಿಸಿದ ಈ ತಂಡದ ಸದಸ್ಯರು, ತಮ್ಮ ಕ್ಷೇತ್ರಾಭಿವೃದ್ದಿಗೆ ಭರಪೂರ ಅನುದಾನವನ್ನೂ ಪಡೆದಿದ್ದರು. ಕೆಲವರು ಉಪ ಚುನಾವಣೆಗಳಲ್ಲಿ ಸೋತರೂ ಮೇಲ್ಮನೆ ಸದಸ್ಯರಾಗಿದ್ದರು. ಆದ್ರೆ, 2023ರ ಚುನಾವಣೆಯಲ್ಲಿ ಎಲ್ಲರ ಅದೃಷ್ಟವೂ ನೆಟ್ಟಗಿರಲಿಲ್ಲ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಬೀಳಿಸೋಕೆ ಕಾರಣವಾಗಿದ್ದ ಹಲವು ಶಾಸಕರು ಮುಂಬೈನ ಹೋಟೆಲ್ ಒಂದರಲ್ಲಿ ಠಿಕಾಣಿ ಹೂಡಿದ್ದರು. ಇದೇ ಕಾರಣಕ್ಕಾಗಿ ಬಾಂಬೆ ಬಾಯ್ಸ್ ಎಂದೇ ಹೆಸರಾದ ಈ ಶಾಸಕರ ಒಟ್ಟು ಸಂಖ್ಯೆ 17. ಈ ಪೈಕಿ 12 ಮಂದಿ ಕಾಂಗ್ರೆಸ್ನಿಂದ ಬಂದವರು. ಮೂವರು ಜೆಡಿಎಸ್, ಇಬ್ಬರು ಪಕ್ಷೇತರ ಸದಸ್ಯರಾಗಿದ್ದರು. ದೋಸ್ತಿ ಸರ್ಕಾರ ಉರುಳಿಸಿದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸಚಿವ ಪಟ್ಟ, ನಿಗಮ ಮಂಡಳಿ ಪಟ್ಟ ಅನುಭವಿಸಿದ ಈ ತಂಡದ ಸದಸ್ಯರು, ತಮ್ಮ ಕ್ಷೇತ್ರಾಭಿವೃದ್ದಿಗೆ ಭರಪೂರ ಅನುದಾನವನ್ನೂ ಪಡೆದಿದ್ದರು. ಕೆಲವರು ಉಪ ಚುನಾವಣೆಗಳಲ್ಲಿ ಸೋತರೂ ಮೇಲ್ಮನೆ ಸದಸ್ಯರಾಗಿದ್ದರು. ಆದ್ರೆ, 2023ರ ಚುನಾವಣೆಯಲ್ಲಿ ಎಲ್ಲರ ಅದೃಷ್ಟವೂ ನೆಟ್ಟಗಿರಲಿಲ್ಲ.