ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಬಿಎಸ್ವೈ ತಂತ್ರ; ವಿರೋಧಿಗಳಿಗೆ ಟಕ್ಕರ್ ಕೊಟ್ಟ ರಾಜಾಹುಲಿ!
1509 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ತಂತ್ರಗಳ ಪೈಕಿ ಕೆಲವೊಂದು ಫಲಿಸಿವೆ. ಅದರಲ್ಲೂ ವಿರೋಧದ ನಡುವೆಯೂ ‘ತಮ್ಮವರಿಗೆ’ ಟಿಕೆಟ್ ಕೊಡಿಸುವಲ್ಲಿ ಸಫಲರಾದರೆ, ವಿರೋಧಿ ಗುಂಪಿನ ಸದ್ದಡಗಿಸುವಲ್ಲೂ ಯಶಸ್ವಿಯಾಗಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆಗೆ ವ್ಯಾಪಕ ವಿರೋಧ ಇತ್ತು. ಬಹುತೇಕ ಈ ಬಾರಿ ಅವರಿಗೆ ಟಿಕೆಟ್ ಕೈತಪ್ಪುತ್ತದೆ ಎಂಬ ನಿರೀಕ್ಷೆಯೂ ಇತ್ತು. ಶೋಭಾ ವಿರುದ್ಧ ಗೋಬ್ಯಾಕ್ ಅಭಿಯಾನವೂ ನಡೆದಿತ್ತು. ಇದರ ಹಿಂದೆ ಆ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದ ಬಿಜೆಪಿಯ ಓರ್ವ ನಾಯಕನ ಕೈವಾಡವೂ ಇದೆ ಎಂಬ ಗುಸು ಗುಸು ಚರ್ಚೆಗಳು ನಡೆದಿದ್ದವು. ನಿರೀಕ್ಷೆಯಂತೆ ಶೋಭಾ ಕರಂದ್ಲಾಜೆಗೆ ಉಡುಪಿ- ಚಿಕ್ಕಮಗಳೂರು ಟಿಕೆಟ್ ಕೈತಪ್ಪಿದರೂ ಬೆಂಗಳೂರು ಉತ್ತರದಲ್ಲಿ ಟಿಕೆಟ್ ಕೊಡಿಸುವಲ್ಲಿ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಅದಷ್ಟು ಮಾತ್ರವಲ್ಲ, ಉಡುಪಿ ಚಿಕ್ಕಮಗಳೂರಿಗೆ ತಮ್ಮದೇ ಬಳಗದ ಕೋಟಾ ಶ್ರೀನಿವಾಸ್ ಪೂಜಾರಿಗೆ ಟಿಕೆಟ್ ಕೊಡಿಸುವಲ್ಲೂ ಬಿಎಸ್ವೈ ಸಕ್ಸಸ್ ಆಗಿದ್ದಾರೆ.
ಉಡುಪಿ ಚಿಕ್ಕಮಗಳೂರು ಟಿಕೆಟ್ ಹಿಂದೆ ಮತ್ತೊಂದು ತಂತ್ರಗಾರಿಕೆಯೂ ಅಡಗಿದೆ. ಈ ಕ್ಷೇತ್ರದಲ್ಲಿ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸುವುದರೊಂದಿಗೆ ಶಿವಮೊಗ್ಗದಲ್ಲಿ ಈಡಿಗ ಸಮುದಾಯದ ವಿರೋಧ ತನ್ನ ಪುತ್ರ ಬಿವೈ ರಾಘವೇಂದ್ರ ಅವರಿಗೆ ಎದುರಾಗದಂತೆ ನೋಡಿಕೊಳ್ಳುವಲ್ಲೂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಇನ್ನು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸೈಡ್ಲೈನ್ ಆಗಿತ್ತು. ಇದರ ಪರಿಣಾಮವೂ ಫಲಿತಾಂಶದಲ್ಲಿ ಕಂಡು ಬಂದಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಬಹುಮುಖ್ಯವಾಗಿದೆ. ಇಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ನೀಡುವುದರ ಜೊತೆಗೆ ವಿರೋಧಿ ಬಣದ ಸದ್ದಡಗಿಸುವಲ್ಲೂ ಕೊಂಚ ಮಟ್ಟಿನ ಯಶಸ್ವಿಯನ್ನು ಅವರು ಕಂಡಿದ್ದಾರೆ. ಮೈಸೂರು ಕೊಡಗು ಕ್ಷೇತ್ರದಲ್ಲಿ ಸಂಸದ ಪ್ರಪಾಪ ಸಿಂಹಗೆ ಹೈಕಮಾಂಡ್ ಮಟ್ಟದ ಉನ್ನತ ನಾಯಕರೊಬ್ಬರ ಬೆಂಬಲ ಇದ್ದರೂ ಅವರ ಬದಲಾಗಿ ರಾಜವಂಶಸ್ಥ ಯದುವೀರ್ಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಸಕ್ಸಸ್ ಆಗಿದ್ದಾರೆ.
ಇನ್ನು ಹಾವೇರಿಯಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ಭಾರೀ ಪ್ರಯತ್ನ ನಡೆಸಿದ್ದರು. ಆದರೆ ಅದು ಕೂಡಾ ಯಶಸ್ವಿ ಆಗಿಲ್ಲ. ಬದಲಾಗಿ ಲೋಕಸಭೆ ಚುನಾವಣೆಯಲ್ಲಿ ಅಷ್ಟೇನು ಆಸಕ್ತಿ ಹೊಂದಿಲ್ಲದ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿಯಲ್ಲಿ ಕಣಕ್ಕಿಳಿಸುವಲ್ಲಿ ಯಡಿಯೂರಪ್ಪ ಕೈ ಮೇಲಾಗಿದೆ.
ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ವೈ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಚಿವ ಸಿ.ಟಿ ರವಿ ಅವರು ಈ ಬಾರಿ ಎರಡು ಕ್ಷೇತ್ರದತ್ತ ಕಣ್ಣಿಟ್ಟಿದ್ದರು. ಬೆಂಗಳೂರು ಉತ್ತರ ಅಥವಾ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದರು. ಕೊನೆಯ ಗಳಿಗೆಯ ವರೆಗೂ ಅವರು ನಡೆಸಿದ ಪ್ರಯತ್ನ ಫಲ ನೀಡಿಲ್ಲ.
ಈ ಮೂಲಕ ವಿರೋಧದ ನಡುವೆಯೂ ತಮ್ಮವರಿಗೆ ಟಿಕೆಟ್ ಕೊಡಿಸುವಲ್ಲಿ ಬಹುತೇಕ ಯಶಸ್ವಿಯಾಗುವುದಲ್ಲದೆ, ವಿರೋಧಿ ಬಣವನ್ನು ಟಿಕೆಟ್ ವಿಚಾರದಲ್ಲಿ ಕಟ್ಟಿ ಹಾಕುವಲ್ಲಿ ಮೊದಲ ಪಟ್ಟಿಯಲ್ಲಿ ಯಡಿಯೂರಪ್ಪ ಹಾಗೂ ತಂಡ ಯಶಸ್ವಿಯಾಗಿದೆ ಎಂಬ ಚರ್ಚೆಗಳು ಬಿಜೆಪಿ ಮೊಗಸಾಲೆಯಲ್ಲಿ ನಡೆಯುತ್ತಿವೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆಗೆ ವ್ಯಾಪಕ ವಿರೋಧ ಇತ್ತು. ಬಹುತೇಕ ಈ ಬಾರಿ ಅವರಿಗೆ ಟಿಕೆಟ್ ಕೈತಪ್ಪುತ್ತದೆ ಎಂಬ ನಿರೀಕ್ಷೆಯೂ ಇತ್ತು. ಶೋಭಾ ವಿರುದ್ಧ ಗೋಬ್ಯಾಕ್ ಅಭಿಯಾನವೂ ನಡೆದಿತ್ತು. ಇದರ ಹಿಂದೆ ಆ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದ ಬಿಜೆಪಿಯ ಓರ್ವ ನಾಯಕನ ಕೈವಾಡವೂ ಇದೆ ಎಂಬ ಗುಸು ಗುಸು ಚರ್ಚೆಗಳು ನಡೆದಿದ್ದವು. ನಿರೀಕ್ಷೆಯಂತೆ ಶೋಭಾ ಕರಂದ್ಲಾಜೆಗೆ ಉಡುಪಿ- ಚಿಕ್ಕಮಗಳೂರು ಟಿಕೆಟ್ ಕೈತಪ್ಪಿದರೂ ಬೆಂಗಳೂರು ಉತ್ತರದಲ್ಲಿ ಟಿಕೆಟ್ ಕೊಡಿಸುವಲ್ಲಿ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಅದಷ್ಟು ಮಾತ್ರವಲ್ಲ, ಉಡುಪಿ ಚಿಕ್ಕಮಗಳೂರಿಗೆ ತಮ್ಮದೇ ಬಳಗದ ಕೋಟಾ ಶ್ರೀನಿವಾಸ್ ಪೂಜಾರಿಗೆ ಟಿಕೆಟ್ ಕೊಡಿಸುವಲ್ಲೂ ಬಿಎಸ್ವೈ ಸಕ್ಸಸ್ ಆಗಿದ್ದಾರೆ.
ಉಡುಪಿ ಚಿಕ್ಕಮಗಳೂರು ಟಿಕೆಟ್ ಹಿಂದೆ ಮತ್ತೊಂದು ತಂತ್ರಗಾರಿಕೆಯೂ ಅಡಗಿದೆ. ಈ ಕ್ಷೇತ್ರದಲ್ಲಿ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸುವುದರೊಂದಿಗೆ ಶಿವಮೊಗ್ಗದಲ್ಲಿ ಈಡಿಗ ಸಮುದಾಯದ ವಿರೋಧ ತನ್ನ ಪುತ್ರ ಬಿವೈ ರಾಘವೇಂದ್ರ ಅವರಿಗೆ ಎದುರಾಗದಂತೆ ನೋಡಿಕೊಳ್ಳುವಲ್ಲೂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಇನ್ನು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸೈಡ್ಲೈನ್ ಆಗಿತ್ತು. ಇದರ ಪರಿಣಾಮವೂ ಫಲಿತಾಂಶದಲ್ಲಿ ಕಂಡು ಬಂದಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಬಹುಮುಖ್ಯವಾಗಿದೆ. ಇಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ನೀಡುವುದರ ಜೊತೆಗೆ ವಿರೋಧಿ ಬಣದ ಸದ್ದಡಗಿಸುವಲ್ಲೂ ಕೊಂಚ ಮಟ್ಟಿನ ಯಶಸ್ವಿಯನ್ನು ಅವರು ಕಂಡಿದ್ದಾರೆ. ಮೈಸೂರು ಕೊಡಗು ಕ್ಷೇತ್ರದಲ್ಲಿ ಸಂಸದ ಪ್ರಪಾಪ ಸಿಂಹಗೆ ಹೈಕಮಾಂಡ್ ಮಟ್ಟದ ಉನ್ನತ ನಾಯಕರೊಬ್ಬರ ಬೆಂಬಲ ಇದ್ದರೂ ಅವರ ಬದಲಾಗಿ ರಾಜವಂಶಸ್ಥ ಯದುವೀರ್ಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಸಕ್ಸಸ್ ಆಗಿದ್ದಾರೆ.
ಇನ್ನು ಹಾವೇರಿಯಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ಭಾರೀ ಪ್ರಯತ್ನ ನಡೆಸಿದ್ದರು. ಆದರೆ ಅದು ಕೂಡಾ ಯಶಸ್ವಿ ಆಗಿಲ್ಲ. ಬದಲಾಗಿ ಲೋಕಸಭೆ ಚುನಾವಣೆಯಲ್ಲಿ ಅಷ್ಟೇನು ಆಸಕ್ತಿ ಹೊಂದಿಲ್ಲದ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿಯಲ್ಲಿ ಕಣಕ್ಕಿಳಿಸುವಲ್ಲಿ ಯಡಿಯೂರಪ್ಪ ಕೈ ಮೇಲಾಗಿದೆ.
ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ವೈ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಚಿವ ಸಿ.ಟಿ ರವಿ ಅವರು ಈ ಬಾರಿ ಎರಡು ಕ್ಷೇತ್ರದತ್ತ ಕಣ್ಣಿಟ್ಟಿದ್ದರು. ಬೆಂಗಳೂರು ಉತ್ತರ ಅಥವಾ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದರು. ಕೊನೆಯ ಗಳಿಗೆಯ ವರೆಗೂ ಅವರು ನಡೆಸಿದ ಪ್ರಯತ್ನ ಫಲ ನೀಡಿಲ್ಲ.
ಈ ಮೂಲಕ ವಿರೋಧದ ನಡುವೆಯೂ ತಮ್ಮವರಿಗೆ ಟಿಕೆಟ್ ಕೊಡಿಸುವಲ್ಲಿ ಬಹುತೇಕ ಯಶಸ್ವಿಯಾಗುವುದಲ್ಲದೆ, ವಿರೋಧಿ ಬಣವನ್ನು ಟಿಕೆಟ್ ವಿಚಾರದಲ್ಲಿ ಕಟ್ಟಿ ಹಾಕುವಲ್ಲಿ ಮೊದಲ ಪಟ್ಟಿಯಲ್ಲಿ ಯಡಿಯೂರಪ್ಪ ಹಾಗೂ ತಂಡ ಯಶಸ್ವಿಯಾಗಿದೆ ಎಂಬ ಚರ್ಚೆಗಳು ಬಿಜೆಪಿ ಮೊಗಸಾಲೆಯಲ್ಲಿ ನಡೆಯುತ್ತಿವೆ.