Explainer Video: ರಾಜ್ಯದಲ್ಲೂ ಜಾತಿ ಗಣತಿ ಅಂಗೀಕಾರ? ಮೀಸಲಾತಿ ಬದಲಾವಣೆ?
1191 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಜಾತಿ ಗಣತಿ ಭೂತ ಮತ್ತೆ ರಾಜ್ಯ ಸರ್ಕಾರದ ಹೆಗಲೇರಿದೆ. ಮೀಸಲಾತಿ ಪರಿಷ್ಕರಣೆಯ ಹುತ್ತಕ್ಕೆ ಸಿಎಂ ಸಿದ್ದರಾಮಯ್ಯ ಕೈ ಹಾಕ್ತಾರಾ ಅನ್ನೋ ಕುತೂಹಲ ಶುರುವಾಗಿದೆ. ಬಿಹಾರ ಮಾದರಿಯಲ್ಲೇ ಕರ್ನಾಟಕ ರಾಜ್ಯದಲ್ಲೂ ಜಾತಿ ಗಣತಿ ಅಂಗೀಕಾರವಾಗುತ್ತಾ? ಮೀಸಲಾತಿ ಬದಲಾವಣೆ ಆಗುತ್ತಾ? ಅನ್ನೋ ಪ್ರಶ್ನೆಗಳೆದ್ದಿವೆ. ಈ ಹಂತದಲ್ಲಿ ಒಕ್ಕಲಿಗ, ಲಿಂಗಾಯತರ ವಾದವೇನು? ರಾಜ್ಯದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ಪಾಲು ಎಷ್ಟು? ಬಿಜೆಪಿ - ಜೆಡಿಎಸ್ ಪಕ್ಷಗಳ ನಿಲುವೇನು? ಈ ಕುರಿತ ಅವಲೋಕನ ಇಲ್ಲಿದೆ.
ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಸಿದ್ದವಾಗಿ 8 ವರ್ಷ ಕಳೆದಿದೆ. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯಲ್ಲೇ ಜಾತಿ ಗಣತಿ ನಡೆಸಲು ಆದೇಶ ನೀಡಲಾಗಿತ್ತು. 2016ರಲ್ಲೇ ಕಾಂತರಾಜು ಆಯೋಗ ಜಾತಿ ಗಣತಿ ಸಿದ್ದಪಡಿಸಿತ್ತು. ಆದರೆ, ಈ ವರದಿ ಇನ್ನೂ ಕೋಲ್ಡ್ ಸ್ಟೋರೇಜ್ನಲ್ಲೇ ಇದೆ. ಇದೀಗ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನ ಅಲ್ಲಿನ ಸರ್ಕಾರ ಅಂಗೀಕರಿಸಿ ಮೀಸಲಾತಿ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಜಾತಿ ಗಣತಿ ವರದಿ ಅಂಗೀಕರಿಸಬೇಕು ಅನ್ನೋ ಮಾತುಗಳು ಕೇಳಿ ಬಂದ ಬೆನ್ನಲ್ಲೇ, ಲಿಂಗಾಯತ ಸಮುದಾಯ ಸಿಡಿದೆದ್ದಿದೆ. ಕಾಂಗ್ರೆಸ್ನ ಹಿರಿಯ ನಾಯಕರೂ ಆಗಿರುವ ಲಿಂಗಾಯತ ಸಮುದಾಯದ ನಾಯಕ ಶಾಮನೂರು ಶಿವಶಂಕರಪ್ಪ, ಜಾತಿ ಗಣತಿ ವರದಿ ಸರಿ ಇಲ್ಲ ಎಂದಿದ್ದಾರೆ.
ಜಾತಿ ಗಣತಿ ವರದಿ ಅವೈಜ್ಞಾನಿಕ ಎಂದಿರುವ ಶಾಮನೂರು ಶಿವಶಂಕರಪ್ಪ, 8 ವರ್ಷಗಳ ಹಿಂದೆ ಸಿದ್ದವಾಗಿರುವ ವರದಿಯನ್ನ ಈಗ ಸ್ವೀಕಾರ ಮಾಡೋದು ಸರಿಯಲ್ಲ ಎಂದಿದ್ದಾರೆ. ಮತ್ತೆ ಸಮೀಕ್ಷೆ ನಡೆಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಜಾತಿ ಗಣತಿ ವರದಿ ವಿರುದ್ಧ ಮಾತನಾಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು ಅನ್ನೋದು ಭಾರೀ ಕುತೂಹಲ ಕೆರಳಿಸಿದೆ. ಯಾಕಂದ್ರೆ, ಶಿವಶಂಕರಪ್ಪ ಅವರು ಜಾತಿ ಗಣತಿಗೆ ವಿರೋಧ ಮಾಡಿರೋದಷ್ಟೇ ಅಲ್ಲ, ಈ ವರದಿಯನ್ನ ಮನೆಯಲ್ಲೇ ಕೂತು ಸಿದ್ದಪಡಿಸಲಾಗಿದೆ ಅಂತಾನೂ ಕಿಡಿ ಕಾರಿದ್ಧಾರೆ.
ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಸಿದ್ದವಾಗಿ 8 ವರ್ಷ ಕಳೆದಿದೆ. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯಲ್ಲೇ ಜಾತಿ ಗಣತಿ ನಡೆಸಲು ಆದೇಶ ನೀಡಲಾಗಿತ್ತು. 2016ರಲ್ಲೇ ಕಾಂತರಾಜು ಆಯೋಗ ಜಾತಿ ಗಣತಿ ಸಿದ್ದಪಡಿಸಿತ್ತು. ಆದರೆ, ಈ ವರದಿ ಇನ್ನೂ ಕೋಲ್ಡ್ ಸ್ಟೋರೇಜ್ನಲ್ಲೇ ಇದೆ. ಇದೀಗ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನ ಅಲ್ಲಿನ ಸರ್ಕಾರ ಅಂಗೀಕರಿಸಿ ಮೀಸಲಾತಿ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಜಾತಿ ಗಣತಿ ವರದಿ ಅಂಗೀಕರಿಸಬೇಕು ಅನ್ನೋ ಮಾತುಗಳು ಕೇಳಿ ಬಂದ ಬೆನ್ನಲ್ಲೇ, ಲಿಂಗಾಯತ ಸಮುದಾಯ ಸಿಡಿದೆದ್ದಿದೆ. ಕಾಂಗ್ರೆಸ್ನ ಹಿರಿಯ ನಾಯಕರೂ ಆಗಿರುವ ಲಿಂಗಾಯತ ಸಮುದಾಯದ ನಾಯಕ ಶಾಮನೂರು ಶಿವಶಂಕರಪ್ಪ, ಜಾತಿ ಗಣತಿ ವರದಿ ಸರಿ ಇಲ್ಲ ಎಂದಿದ್ದಾರೆ.
ಜಾತಿ ಗಣತಿ ವರದಿ ಅವೈಜ್ಞಾನಿಕ ಎಂದಿರುವ ಶಾಮನೂರು ಶಿವಶಂಕರಪ್ಪ, 8 ವರ್ಷಗಳ ಹಿಂದೆ ಸಿದ್ದವಾಗಿರುವ ವರದಿಯನ್ನ ಈಗ ಸ್ವೀಕಾರ ಮಾಡೋದು ಸರಿಯಲ್ಲ ಎಂದಿದ್ದಾರೆ. ಮತ್ತೆ ಸಮೀಕ್ಷೆ ನಡೆಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಜಾತಿ ಗಣತಿ ವರದಿ ವಿರುದ್ಧ ಮಾತನಾಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು ಅನ್ನೋದು ಭಾರೀ ಕುತೂಹಲ ಕೆರಳಿಸಿದೆ. ಯಾಕಂದ್ರೆ, ಶಿವಶಂಕರಪ್ಪ ಅವರು ಜಾತಿ ಗಣತಿಗೆ ವಿರೋಧ ಮಾಡಿರೋದಷ್ಟೇ ಅಲ್ಲ, ಈ ವರದಿಯನ್ನ ಮನೆಯಲ್ಲೇ ಕೂತು ಸಿದ್ದಪಡಿಸಲಾಗಿದೆ ಅಂತಾನೂ ಕಿಡಿ ಕಾರಿದ್ಧಾರೆ.