ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರದಿಂದ ಬಂತು ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ!
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಸಂಸತ್ನ ಉಭಯ ಸದನಗಳಲ್ಲೂ 2019ರಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆಯು ಪಾಸ್ ಆಗಿ ರಾಷ್ಟ್ರಪತಿಗಳ ಅಂಕಿತ ಬಿದ್ದಿದೆ. ಆದರೂ ಅನುಷ್ಟಾನಕ್ಕೆ ಮಾತ್ರ ಬಂದಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ನಡೆದ ಪ್ರತಿಭಟನೆಗಳಿಂದಾಗಿ ಸರ್ಕಾರ ಈ ಕಾಯ್ದೆ ಜಾರಿಗೆ ಅಧಿಸೂಚನೆಯನ್ನೇ ಹೊರಡಿಸಿರಲಿಲ್ಲ. ಇದೀಗ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಲವೇ ದಿನ ಇರುವ ಹೊತ್ತಲ್ಲಿ ಕೇಂದ್ರ ಸರ್ಕಾರವು ಸಿಎಎ ಜಾರಿಗೆ ಅಧಿಸೂಚನೆ ಪ್ರಕಟಿಸಿದೆ.
ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಮಾರ್ಚ್ 11, ಸೋಮವಾರ ಸಂಜೆ ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಟವಾಗಿದೆ. ಲೋಕಸಭಾ ಚುನಾವಣೆಗೆ ಮುನ್ನವೇ ದೇಶಾದ್ಯಂತ ಸಿಎಎ ಜಾರಿ ಮಾಡೋದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಿದ್ದರು. ಅಮಿತ್ ಶಾ ಅವರ ಹೇಳಿಕೆ ಹೊರ ಬಿದ್ದ ಒಂದು ತಿಂಗಳ ಒಳಗಾಗಿಯೇ ಅಧಿಸೂಚನೆ ಹೊರ ಬಂದಿದೆ.
ಏನಿದು ಸಿಎಎ? ಜಾರಿಗೆ ವಿರೋಧ ಯಾಕೆ?
ಸಿಟಿಜನ್ಶಿಪ್ ಅಮೆಂಡ್ಮೆಂಟ್ ಆಕ್ಟ್ ಅನ್ನು ಸರಳವಾಗಿ ಸಿಎಎ ಎನ್ನಲಾಗುತ್ತೆ. ಭಾರತದ ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿ ಬಹುಸಂಖ್ಯಾತ ಮುಸ್ಲಿಮರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಅಲ್ಪಸಂಖ್ಯಾತ ಹಿಂದೂಗಳೂ ಸೇರಿದಂತೆ ಹಲವು ಸಮುದಾಯದವರಿಗೆ ಭಾರತದ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ಈಗಾಗಲೇ ಸಾಕಷ್ಟು ಅಲ್ಪಸಂಖ್ಯಾತ ಸಮುದಾಯಗಳ ಜನರು ಭಾರತಕ್ಕೆ ವಲಸೆ ಬಂದಿದ್ದಾರೆ. ವಲಸೆ ಬರುವ ಜನರನ್ನು ಗುರ್ತಿಸಿ ಅವರಿಗೆ ಭಾರತದ ಪೌರತ್ವ ನೀಡಿ ಮುಖ್ಯ ವಾಹಿನಿಗೆ ಬೆರೆಯುವಂತೆ ಮಾಡೋದು ಸಿಎಎ ಆಶಯ.
2014 ಡಿಸೆಂಬರ್ 31 ರ ಒಳಗೆ ಪಾಕಿಸ್ತಾನ, ಬಾಂಗ್ಲಾ ದೇಶ ಹಾಗೂ ಅಫ್ಘಾನಿಸ್ತಾನದಿಂದ ಬಂದ ಅಲ್ಪಸಂಖ್ಯಾತರಿಗೆ ಈ ಕಾಯ್ದೆ ಅನ್ವಯ ಆಗುತ್ತೆ. ಈ 3 ದೇಶಗಳ 6 ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ ಕಾಯ್ದೆ ಅನ್ವಯ. ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೈಸ್ತರಿಗೆ ಸಿಎಎ ಅಡಿ ಭಾರತದ ಪೌರತ್ವ ಸಿಗಲಿದೆ. ಆದರೆ, 2014ರ ಒಳಗೆ ಮುಸ್ಲಿಂ ದೇಶಗಳಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮರಿಗೆ ಈ ಕಾಯ್ದೆ ಅಡಿ ಪೌರತ್ವ ಸಿಗೋದಿಲ್ಲ. ಹೀಗಾಗಿ, ಮುಸ್ಲಿಮರಿಗೆ ಪೌರತ್ವ ಸಿಗೋದಿಲ್ಲ ಅನ್ನೋ ಒಂದೇ ಒಂದು ವಿಚಾರವೇ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ.
2019ರಲ್ಲೇ ಸಂಸತ್ನ ಉಭಯ ಸದನಗಳಲ್ಲೂ ಸಿಎಎಗೆ ಸಮ್ಮತಿ ಸಿಕ್ಕಿದೆ. ರಾಷ್ಟ್ರಪತಿಗಳು ಅಂಕಿತವನ್ನೂ ಹಾಕಿದ್ದಾರೆ. ಆದರೆ, ಇದರ ಬೆನ್ನಲ್ಲೇ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಶಹೀನ್ ಭಾಗ್ನಲ್ಲಂತೂ ವರ್ಷಗಟ್ಟಲೆ ಪ್ರತಿಭಟನೆ ನಡೆಯಿತು. ಸಿಎಎ ಕಾಯ್ದೆ ಮೂಲಕ ಮುಸ್ಲಿಂ ಸಮುದಾಯವನ್ನ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ಆರೋಪದ ಜೊತೆಯಲ್ಲೇ ಇದಕ್ಕೆ ಎನ್ಆರ್ಸಿ ಥಳುಕನ್ನೂ ಹಾಕಲಾಯ್ತು. ಹೀಗಾಗಿ, ಸಿಎಎ ಕಾಯ್ದೆ ಜಾರಿ ನೆನೆಗುದಿಗೆ ಬಿದ್ದಿತ್ತು.
ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಮಾರ್ಚ್ 11, ಸೋಮವಾರ ಸಂಜೆ ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಟವಾಗಿದೆ. ಲೋಕಸಭಾ ಚುನಾವಣೆಗೆ ಮುನ್ನವೇ ದೇಶಾದ್ಯಂತ ಸಿಎಎ ಜಾರಿ ಮಾಡೋದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಿದ್ದರು. ಅಮಿತ್ ಶಾ ಅವರ ಹೇಳಿಕೆ ಹೊರ ಬಿದ್ದ ಒಂದು ತಿಂಗಳ ಒಳಗಾಗಿಯೇ ಅಧಿಸೂಚನೆ ಹೊರ ಬಂದಿದೆ.
ಏನಿದು ಸಿಎಎ? ಜಾರಿಗೆ ವಿರೋಧ ಯಾಕೆ?
ಸಿಟಿಜನ್ಶಿಪ್ ಅಮೆಂಡ್ಮೆಂಟ್ ಆಕ್ಟ್ ಅನ್ನು ಸರಳವಾಗಿ ಸಿಎಎ ಎನ್ನಲಾಗುತ್ತೆ. ಭಾರತದ ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿ ಬಹುಸಂಖ್ಯಾತ ಮುಸ್ಲಿಮರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಅಲ್ಪಸಂಖ್ಯಾತ ಹಿಂದೂಗಳೂ ಸೇರಿದಂತೆ ಹಲವು ಸಮುದಾಯದವರಿಗೆ ಭಾರತದ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ಈಗಾಗಲೇ ಸಾಕಷ್ಟು ಅಲ್ಪಸಂಖ್ಯಾತ ಸಮುದಾಯಗಳ ಜನರು ಭಾರತಕ್ಕೆ ವಲಸೆ ಬಂದಿದ್ದಾರೆ. ವಲಸೆ ಬರುವ ಜನರನ್ನು ಗುರ್ತಿಸಿ ಅವರಿಗೆ ಭಾರತದ ಪೌರತ್ವ ನೀಡಿ ಮುಖ್ಯ ವಾಹಿನಿಗೆ ಬೆರೆಯುವಂತೆ ಮಾಡೋದು ಸಿಎಎ ಆಶಯ.
2014 ಡಿಸೆಂಬರ್ 31 ರ ಒಳಗೆ ಪಾಕಿಸ್ತಾನ, ಬಾಂಗ್ಲಾ ದೇಶ ಹಾಗೂ ಅಫ್ಘಾನಿಸ್ತಾನದಿಂದ ಬಂದ ಅಲ್ಪಸಂಖ್ಯಾತರಿಗೆ ಈ ಕಾಯ್ದೆ ಅನ್ವಯ ಆಗುತ್ತೆ. ಈ 3 ದೇಶಗಳ 6 ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ ಕಾಯ್ದೆ ಅನ್ವಯ. ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೈಸ್ತರಿಗೆ ಸಿಎಎ ಅಡಿ ಭಾರತದ ಪೌರತ್ವ ಸಿಗಲಿದೆ. ಆದರೆ, 2014ರ ಒಳಗೆ ಮುಸ್ಲಿಂ ದೇಶಗಳಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮರಿಗೆ ಈ ಕಾಯ್ದೆ ಅಡಿ ಪೌರತ್ವ ಸಿಗೋದಿಲ್ಲ. ಹೀಗಾಗಿ, ಮುಸ್ಲಿಮರಿಗೆ ಪೌರತ್ವ ಸಿಗೋದಿಲ್ಲ ಅನ್ನೋ ಒಂದೇ ಒಂದು ವಿಚಾರವೇ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ.
2019ರಲ್ಲೇ ಸಂಸತ್ನ ಉಭಯ ಸದನಗಳಲ್ಲೂ ಸಿಎಎಗೆ ಸಮ್ಮತಿ ಸಿಕ್ಕಿದೆ. ರಾಷ್ಟ್ರಪತಿಗಳು ಅಂಕಿತವನ್ನೂ ಹಾಕಿದ್ದಾರೆ. ಆದರೆ, ಇದರ ಬೆನ್ನಲ್ಲೇ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಶಹೀನ್ ಭಾಗ್ನಲ್ಲಂತೂ ವರ್ಷಗಟ್ಟಲೆ ಪ್ರತಿಭಟನೆ ನಡೆಯಿತು. ಸಿಎಎ ಕಾಯ್ದೆ ಮೂಲಕ ಮುಸ್ಲಿಂ ಸಮುದಾಯವನ್ನ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ಆರೋಪದ ಜೊತೆಯಲ್ಲೇ ಇದಕ್ಕೆ ಎನ್ಆರ್ಸಿ ಥಳುಕನ್ನೂ ಹಾಕಲಾಯ್ತು. ಹೀಗಾಗಿ, ಸಿಎಎ ಕಾಯ್ದೆ ಜಾರಿ ನೆನೆಗುದಿಗೆ ಬಿದ್ದಿತ್ತು.