ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣಕ್ಕೆ ಕಾಂಗ್ರೆಸ್ ಭಾಗ್ಯಗಳ ಸುರಿಮಳೆ!
1173 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಪಂಚ ರಾಜ್ಯ ಚುನಾವಣೆಗೆ ಕಾಂಗ್ರೆಸ್ ಭಾಗ್ಯ ಸರಣಿ ಪ್ರಕಟವಾಗಿದೆ. ಕರ್ನಾಟಕ ಮಾದರಿಯಲ್ಲೇ ಐದೂ ರಾಜ್ಯಗಳಿಗೆ ಕಾಂಗ್ರೆಸ್ ಪಕ್ಷ 5 ರೀತಿಯ ಉಚಿತ ಗ್ಯಾರಂಟಿ ಭಾಗ್ಯಗಳ ಪಟ್ಟಿ ಪ್ರಕಟ ಮಾಡಿದೆ. ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣಕ್ಕೆ ಬಿಟ್ಟಿ ಭಾಗ್ಯಗಳ ಸುರಿಮಳೆ ಆಗಿದೆ. ಇನ್ನು ಛತ್ತೀಸ್ಗಢ, ಮಿಜೋರಾಂನಲ್ಲಿ ಬುಡಕಟ್ಟು ಜನರನ್ನು ಗಮನದಲ್ಲಿ ಇಟ್ಟುಕೊಂಡು ಹಲವು ಯೋಜನೆ ಪ್ರಕಟಿಸಲಾಗಿದೆ. ಕಾಂಗ್ರೆಸ್ನ ಉಚಿತ ಭಾಗ್ಯಗಳ ಎದುರು ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳ ಪ್ರತಿತಂತ್ರ ಏನು ಅನ್ನೋದೇ ಸದ್ಯದ ಪ್ರಶ್ನೆ..
ಕರ್ನಾಟಕ ಹಾಗೂ ತೆಲಂಗಾಣ ರಾಜ್ಯದ ಜನ ಜೀವನದಲ್ಲಿ ಹಲವು ಸಾಮ್ಯತೆಗಳಿವೆ. ಕರ್ನಾಟಕದ ಗಡಿಯಲ್ಲೇ ಇರುವ ತೆಲಂಗಾಣ ಜನರ ಸಮಸ್ಯೆಗಳು ಹಾಗೂ ಕರ್ನಾಟಕ ಜನತೆ ಎದುರಿಸುತ್ತಿರುವ ಸವಾಲುಗಳಿಗೆ ಹೋಲಿಕೆ ಇದೆ. ಆದರೆ, ಕರ್ನಾಟಕಕ್ಕೆ ಹೋಲಿಸಿದರೆ ತೆಲಂಗಾಣದಲ್ಲಿ ರಾಜಕೀಯ ಪರಿಸ್ಥಿತಿ ವಿಭಿನ್ನವಾಗಿದೆ. ಈ ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ತೆಲಂಗಾಣ ರಾಜ್ಯದಲ್ಲಿ ಕರ್ನಾಟಕ ಮಾದರಿಯಲ್ಲೇ ಹಲವು ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ. ಕೆಲವೊಂದು ಬದಲಾವಣೆಗಳನ್ನೂ ಮಾಡಿದೆ.
ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆ ಮಾದರಿಯಲ್ಲೇ ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಘೋಷಿಸಿದೆ. ಮಹಿಳೆಯರಿಗೆ ಪ್ರತಿ ತಿಂಗಳೂ 2,500 ರೂ. ನೀಡೋದಾಗಿ ಹೇಳಿದೆ. ಇದಲ್ಲದೆ ಕರ್ನಾಟಕದ ಶಕ್ತಿ ಯೋಜನೆ ಮಾದರಿಯಲ್ಲಿ ತೆಲಂಗಾಣದಲ್ಲೂ ಮಹಿಳೆಯರಿಗೆ ಅಲ್ಲಿನ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಯೋಜನೆ ಘೋಷಿಸಿದೆ. ತೆಲಂಗಾಣದಲ್ಲಿ ಎಲ್ಲರ ಮನೆಗೂ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆಯನ್ನ ಕಾಂಗ್ರೆಸ್ ಪ್ರಕಟಿಸಿದೆ. ಜೊತೆಗೆ ರೈತ ಭರೋಸಾ ಯೋಜನೆ ಅಡಿ ಕೃಷಿಕರಿಗೆ ವರ್ಷಕ್ಕೆ 15 ಸಾವಿರ ರೂ., ಕೃಷಿ ಕಾರ್ಮಿಕರಿಗೆ ಪ್ರತಿ ವರ್ಷಕ್ಕೆ 12 ಸಾವಿರ ರೂ. ಹಾಗೂ ಪ್ರತಿ ಕ್ವಿಂಟಾಲ್ ಭತ್ತಕ್ಕೆ 500 ರೂ. ಬೋನಸ್ ನೀಡೋದಾಗಿ ಹೇಳಿದೆ. ಕರ್ನಾಟಕದ ಗೃಹ ಜ್ಯೋತಿ ಯೋಜನೆಯನ್ನ ತೆಲಂಗಾಣಕ್ಕೂ ವಿಸ್ತರಿಸಿದೆ. ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡೋದಾಗಿ ಹೇಳಿದೆ. ಇದಲ್ಲದೆ ಯುವ ವಿಕಾಸಂ ಅನ್ನೋ ಯೋಜನೆ ಅಡಿ ಯುವಕರಿಗೆ 5 ಲಕ್ಷ ರೂ. ಆರ್ಥಿಕ ನೆರವು ಹಾಗೂ ಉಚಿತವಾಗಿ ಕೋಚಿಂಗ್ ಕೊಡೋದಾಗಿ ಭರವಸೆ ನೀಡಿದೆ. ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 4 ಸಾವಿರ ರೂ. ವೃದ್ಧಾಪ್ಯ ವೇತನ ಹಾಗೂ ರಾಜೀವ್ ಆರೋಗ್ಯ ಶ್ರೀ ಯೋಜನೆ ಅಡಿ 10 ಲಕ್ಷ ರೂ. ಆರೋಗ್ಯ ವಿಮೆ ಕೊಡೋದಾಗಿ ಹೇಳಿದೆ. ಇದಲ್ಲದೆ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಇಂದಿರಮ್ಮ ಇಂಟ್ಲು ಯೋಜನೆ ಅಡಿ 5 ಲಕ್ಷ ರೂ. ನೆರವು ನೀಡೋದಾಗಿ ಹೇಳಿದೆ. ಉದ್ಯಮ ನಡೆಸುವವರಿಗೆ 250 ಚದರ ಗಜ ಜಾಗ ನೀಡೋದಾಗಿ ಹೇಳಿದೆ.
ಕರ್ನಾಟಕ ಹಾಗೂ ತೆಲಂಗಾಣ ರಾಜ್ಯದ ಜನ ಜೀವನದಲ್ಲಿ ಹಲವು ಸಾಮ್ಯತೆಗಳಿವೆ. ಕರ್ನಾಟಕದ ಗಡಿಯಲ್ಲೇ ಇರುವ ತೆಲಂಗಾಣ ಜನರ ಸಮಸ್ಯೆಗಳು ಹಾಗೂ ಕರ್ನಾಟಕ ಜನತೆ ಎದುರಿಸುತ್ತಿರುವ ಸವಾಲುಗಳಿಗೆ ಹೋಲಿಕೆ ಇದೆ. ಆದರೆ, ಕರ್ನಾಟಕಕ್ಕೆ ಹೋಲಿಸಿದರೆ ತೆಲಂಗಾಣದಲ್ಲಿ ರಾಜಕೀಯ ಪರಿಸ್ಥಿತಿ ವಿಭಿನ್ನವಾಗಿದೆ. ಈ ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ತೆಲಂಗಾಣ ರಾಜ್ಯದಲ್ಲಿ ಕರ್ನಾಟಕ ಮಾದರಿಯಲ್ಲೇ ಹಲವು ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ. ಕೆಲವೊಂದು ಬದಲಾವಣೆಗಳನ್ನೂ ಮಾಡಿದೆ.
ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆ ಮಾದರಿಯಲ್ಲೇ ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಘೋಷಿಸಿದೆ. ಮಹಿಳೆಯರಿಗೆ ಪ್ರತಿ ತಿಂಗಳೂ 2,500 ರೂ. ನೀಡೋದಾಗಿ ಹೇಳಿದೆ. ಇದಲ್ಲದೆ ಕರ್ನಾಟಕದ ಶಕ್ತಿ ಯೋಜನೆ ಮಾದರಿಯಲ್ಲಿ ತೆಲಂಗಾಣದಲ್ಲೂ ಮಹಿಳೆಯರಿಗೆ ಅಲ್ಲಿನ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಯೋಜನೆ ಘೋಷಿಸಿದೆ. ತೆಲಂಗಾಣದಲ್ಲಿ ಎಲ್ಲರ ಮನೆಗೂ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆಯನ್ನ ಕಾಂಗ್ರೆಸ್ ಪ್ರಕಟಿಸಿದೆ. ಜೊತೆಗೆ ರೈತ ಭರೋಸಾ ಯೋಜನೆ ಅಡಿ ಕೃಷಿಕರಿಗೆ ವರ್ಷಕ್ಕೆ 15 ಸಾವಿರ ರೂ., ಕೃಷಿ ಕಾರ್ಮಿಕರಿಗೆ ಪ್ರತಿ ವರ್ಷಕ್ಕೆ 12 ಸಾವಿರ ರೂ. ಹಾಗೂ ಪ್ರತಿ ಕ್ವಿಂಟಾಲ್ ಭತ್ತಕ್ಕೆ 500 ರೂ. ಬೋನಸ್ ನೀಡೋದಾಗಿ ಹೇಳಿದೆ. ಕರ್ನಾಟಕದ ಗೃಹ ಜ್ಯೋತಿ ಯೋಜನೆಯನ್ನ ತೆಲಂಗಾಣಕ್ಕೂ ವಿಸ್ತರಿಸಿದೆ. ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡೋದಾಗಿ ಹೇಳಿದೆ. ಇದಲ್ಲದೆ ಯುವ ವಿಕಾಸಂ ಅನ್ನೋ ಯೋಜನೆ ಅಡಿ ಯುವಕರಿಗೆ 5 ಲಕ್ಷ ರೂ. ಆರ್ಥಿಕ ನೆರವು ಹಾಗೂ ಉಚಿತವಾಗಿ ಕೋಚಿಂಗ್ ಕೊಡೋದಾಗಿ ಭರವಸೆ ನೀಡಿದೆ. ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 4 ಸಾವಿರ ರೂ. ವೃದ್ಧಾಪ್ಯ ವೇತನ ಹಾಗೂ ರಾಜೀವ್ ಆರೋಗ್ಯ ಶ್ರೀ ಯೋಜನೆ ಅಡಿ 10 ಲಕ್ಷ ರೂ. ಆರೋಗ್ಯ ವಿಮೆ ಕೊಡೋದಾಗಿ ಹೇಳಿದೆ. ಇದಲ್ಲದೆ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಇಂದಿರಮ್ಮ ಇಂಟ್ಲು ಯೋಜನೆ ಅಡಿ 5 ಲಕ್ಷ ರೂ. ನೆರವು ನೀಡೋದಾಗಿ ಹೇಳಿದೆ. ಉದ್ಯಮ ನಡೆಸುವವರಿಗೆ 250 ಚದರ ಗಜ ಜಾಗ ನೀಡೋದಾಗಿ ಹೇಳಿದೆ.