ನೆನಪಿನಲ್ಲಿಡಿ, ಈ ಬಾರಿ ಬಿಜೆಪಿ ಗೆದ್ದು ಸಂವಿಧಾನ ಬದಲಾದರೆ, ದೇಶ ಹೊತ್ತಿ ಉರಿಯಲಿದೆ!- ರಾಹುಲ್ ಗಾಂಧಿ
1314 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿದಿಲ್ಲಿಯ ರಾಮಲೀಲಾ ಮೈದಾನದಲ್ಲಿ 'ಇಂಡಿಯಾ' ಮೈತ್ರಿಕೂಟವು ಭಾನುವಾರ ಬೃಹತ್ ಜಾಥಾ ನಡೆಸಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಬಂಧನವನ್ನು ವಿರೋಧಿಸಿ ಸಮಾವೇಶ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣೆಯನ್ನು ಐಪಿಎಲ್ ಕ್ರಿಕೆಟ್ಗೆ ಹೋಲಿಸಿ ಮಾತನಾಡಿದರು.
''ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸ್ ನಡೆದಿರುವಂತೆ ಮುಂಬರುವ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಲು ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ಮ್ಯಾಚ್ ಶುರುವಾಗುವುದಕ್ಕೂ ಮುಂಚೆಯೇ ನಮ್ಮ ಇಬ್ಬರು ನಾಯಕರನ್ನು ಬಂಧಿಸಿದ್ದಾರೆ. ನಮ್ಮ ಬ್ಯಾಂಕ್ ಅಕೌಂಟ್ಗಳನ್ನು ಬಂದ್ ಮಾಡಿದ್ದಾರೆ. ಅಂಪೈರನ್ನೂ ಮೋದಿ ಅವರೇ ನೇಮಿಸಿದ್ದಾರೆ'' ಎಂದು ಕಿಡಿ ಕಾರಿದರು.
''ಈ ಫಿಕ್ಸಿಂಗ್ ಚುನಾವಣೆಯಲ್ಲಿ ಅಕಸ್ಮಾತ್ ಬಿಜೆಪಿ ಏನಾದರೂ ಗೆಲುವು ಸಾಧಿಸಿದರೆ, ಅವರು ಸಂವಿಧಾನವನ್ನು ಬದಲಿಸುತ್ತಾರೆ. ಹಾಗೇನಾದರೂ ಆದರೆ ದೇಶದಲ್ಲಿ ಬೆಂಕಿ ಬೀಳಲಿದೆ. ಇದನ್ನು ನೆನಪಿನಲ್ಲಿಡಿ'' ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿಯವರು ಮಾಧ್ಯಮಗಳನ್ನು ಹಾಗೂ ವರದಿಗಾರರನ್ನು ಖರೀದಿಸುತ್ತಿದ್ದಾರೆ ಹಾಗೂ ಬಾಯಿ ಮುಚ್ಚಿಸುತ್ತಿದ್ದಾರೆ. ಆದರೆ, ದೇಶ ಪ್ರತಿಯೊಬ್ಬರ ಬಾಯಿ ಮುಚ್ಚಿಸಲು ಆಗುವುದಿಲ್ಲ. ಇ.ಡಿ., ಐಟಿ, ಸಿಬಿಐ ಬಳಸಿಕೊಂಡು ಎಲ್ಲರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ.
''ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸ್ ನಡೆದಿರುವಂತೆ ಮುಂಬರುವ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಲು ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ಮ್ಯಾಚ್ ಶುರುವಾಗುವುದಕ್ಕೂ ಮುಂಚೆಯೇ ನಮ್ಮ ಇಬ್ಬರು ನಾಯಕರನ್ನು ಬಂಧಿಸಿದ್ದಾರೆ. ನಮ್ಮ ಬ್ಯಾಂಕ್ ಅಕೌಂಟ್ಗಳನ್ನು ಬಂದ್ ಮಾಡಿದ್ದಾರೆ. ಅಂಪೈರನ್ನೂ ಮೋದಿ ಅವರೇ ನೇಮಿಸಿದ್ದಾರೆ'' ಎಂದು ಕಿಡಿ ಕಾರಿದರು.
''ಈ ಫಿಕ್ಸಿಂಗ್ ಚುನಾವಣೆಯಲ್ಲಿ ಅಕಸ್ಮಾತ್ ಬಿಜೆಪಿ ಏನಾದರೂ ಗೆಲುವು ಸಾಧಿಸಿದರೆ, ಅವರು ಸಂವಿಧಾನವನ್ನು ಬದಲಿಸುತ್ತಾರೆ. ಹಾಗೇನಾದರೂ ಆದರೆ ದೇಶದಲ್ಲಿ ಬೆಂಕಿ ಬೀಳಲಿದೆ. ಇದನ್ನು ನೆನಪಿನಲ್ಲಿಡಿ'' ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿಯವರು ಮಾಧ್ಯಮಗಳನ್ನು ಹಾಗೂ ವರದಿಗಾರರನ್ನು ಖರೀದಿಸುತ್ತಿದ್ದಾರೆ ಹಾಗೂ ಬಾಯಿ ಮುಚ್ಚಿಸುತ್ತಿದ್ದಾರೆ. ಆದರೆ, ದೇಶ ಪ್ರತಿಯೊಬ್ಬರ ಬಾಯಿ ಮುಚ್ಚಿಸಲು ಆಗುವುದಿಲ್ಲ. ಇ.ಡಿ., ಐಟಿ, ಸಿಬಿಐ ಬಳಸಿಕೊಂಡು ಎಲ್ಲರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ.