Explainer Video: ‘ಕನಿಷ್ಟ ಬೆಂಬಲ ಬೆಲೆ’ ಸಂಕಷ್ಟವೇನು? ಸುದೀರ್ಘ ಹೋರಾಟಕ್ಕೆ ಕೃಷಿಕರ ಪಣ!
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ದಿಲ್ಲಿ ಸುತ್ತಲಿನ ರಾಜ್ಯಗಳ ರೈತರು ರಾಜಧಾನಿಗೆ ಮತ್ತೆ ಲಗ್ಗೆ ಇಟ್ಟಿದ್ದಾರೆ. ‘ಕನಿಷ್ಟ ಬೆಂಬಲ ಬೆಲೆ’ ನೀಡಬೇಕು ಅನ್ನೋದು ಅವರ ಪ್ರಮುಖ ಬೇಡಿಕೆ. ಈ ಬೇಡಿಕೆ ಈಡೇರಿಸಿಕೊಳ್ಳೋದಕ್ಕೆ ಸುದೀರ್ಘ ಹೋರಾಟ ನಡೆಸಲು ಕೃಷಿಕರ ಪಣ ತೊಟ್ಟಂತಿದೆ! ದಿಲ್ಲಿಗೆ ಯುಪಿ, ಹರ್ಯಾಣ, ಪಂಜಾಬ್ ರೈತರು ದಾಂಗುಡಿ ಇಟ್ಟಿದ್ದು, 6 ತಿಂಗಳಿಗೂ ಹೆಚ್ಚು ಕಾಲ ಗಡಿ ಬಂದ್ ಆಗುವ ಸಾಧ್ಯತೆಗಳು ಕಂಡು ಬರ್ತಿವೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಕೇಂದ್ರ ಸರ್ಕಾರಕ್ಕೆ ಅತಿ ದೊಡ್ಡ ಸವಾಲು ಎದುರಾಗಿದೆ.
2020 -2021ರಲ್ಲಿ ದಿಲ್ಲಿ ಚಲೋ ಹೋರಾಟ ನಡೆಸಿದ್ದ ರೈತರು ಪ್ರಮುಖವಾಗಿ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿದ್ದರು. ಜೊತೆಯಲ್ಲೇ ಇನ್ನೂ ಹಲವು ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟಿದ್ದರು. ಈ ಪೈಕಿ ಕೃಷಿ ಕಾಯ್ದೆಗಳನ್ನ ರದ್ದು ಮಾಡಿದ್ದ ಸರ್ಕಾರ, ಇನ್ನುಳಿದ ಎಲ್ಲ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿತ್ತು. ಆದರೆ, ನಮ್ಮ ಬೇಡಿಕೆಗಳು ಈಡೇರಿಲ್ಲ ಅನ್ನೋದು ರೈತರ ಆರೋಪ. ನಮ್ಮ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡ್ತಿದೆ ಎಂದು ಅನ್ನದಾತರು ಸಿಡಿದೆದ್ದಿದ್ದಾರೆ. ಹಲವು ಬೇಡಿಕೆಗಳ ಪಟ್ಟಿಯನ್ನೇ ಸರ್ಕಾರದ ಮುಂದಿಟ್ಟಿದ್ದಾರೆ.
ಸರ್ಕಾರ ತಮ್ಮ ಫಸಲಿಗೆ ಕನಿಷ್ಟ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಲಖೀಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ನಾಯಕನ ವಾಹನ ಹರಿದು ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ ಕೊಡಬೇಕು. ರೈತರ ವಿರುದ್ಧ ದಾಖಲು ಮಾಡಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ರೈತ ಹೋರಾಟಗಳಲ್ಲಿ ಮಡಿದವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. 2013ರ ಭೂ ಸ್ವಾಧೀನ ಕಾಯ್ದೆಯನ್ನು ಮರು ಸ್ಥಾಪಿಸಿ ಸೂಕ್ತ ಪರಿಹಾರ ನೀಡಬೇಕು. ವಿಶ್ವ ವ್ಯಾಪಾರ ಸಂಸ್ಥೆಯಿಂದಲೇ ಭಾರತ ನಿರ್ಗಮಿಸಬೇಕು ಅನ್ನೋದು ಕೃಷಿಕರ ಪ್ರಮುಖ ಬೇಡಿಕೆಗಳು.
2020 -2021ರಲ್ಲಿ ದಿಲ್ಲಿ ಚಲೋ ಹೋರಾಟ ನಡೆಸಿದ್ದ ರೈತರು ಪ್ರಮುಖವಾಗಿ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿದ್ದರು. ಜೊತೆಯಲ್ಲೇ ಇನ್ನೂ ಹಲವು ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟಿದ್ದರು. ಈ ಪೈಕಿ ಕೃಷಿ ಕಾಯ್ದೆಗಳನ್ನ ರದ್ದು ಮಾಡಿದ್ದ ಸರ್ಕಾರ, ಇನ್ನುಳಿದ ಎಲ್ಲ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿತ್ತು. ಆದರೆ, ನಮ್ಮ ಬೇಡಿಕೆಗಳು ಈಡೇರಿಲ್ಲ ಅನ್ನೋದು ರೈತರ ಆರೋಪ. ನಮ್ಮ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡ್ತಿದೆ ಎಂದು ಅನ್ನದಾತರು ಸಿಡಿದೆದ್ದಿದ್ದಾರೆ. ಹಲವು ಬೇಡಿಕೆಗಳ ಪಟ್ಟಿಯನ್ನೇ ಸರ್ಕಾರದ ಮುಂದಿಟ್ಟಿದ್ದಾರೆ.
ಸರ್ಕಾರ ತಮ್ಮ ಫಸಲಿಗೆ ಕನಿಷ್ಟ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಲಖೀಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ನಾಯಕನ ವಾಹನ ಹರಿದು ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ ಕೊಡಬೇಕು. ರೈತರ ವಿರುದ್ಧ ದಾಖಲು ಮಾಡಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ರೈತ ಹೋರಾಟಗಳಲ್ಲಿ ಮಡಿದವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. 2013ರ ಭೂ ಸ್ವಾಧೀನ ಕಾಯ್ದೆಯನ್ನು ಮರು ಸ್ಥಾಪಿಸಿ ಸೂಕ್ತ ಪರಿಹಾರ ನೀಡಬೇಕು. ವಿಶ್ವ ವ್ಯಾಪಾರ ಸಂಸ್ಥೆಯಿಂದಲೇ ಭಾರತ ನಿರ್ಗಮಿಸಬೇಕು ಅನ್ನೋದು ಕೃಷಿಕರ ಪ್ರಮುಖ ಬೇಡಿಕೆಗಳು.