ತಿಹಾರ್ ಜೈಲಿಗೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಶಿಫ್ಟ್, ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ
1128 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜೈಲು ವಾಸ ಮುಂದುವರಿದಿದೆ. ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯ ಅವರಿಗೆ ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಸೋಮವಾರ ಆದೇಶ ನೀಡಿದೆ. ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಹದಿನೈದು ದಿನಗಳವರೆಗೂ ಸಿಎಂ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನ 2ನೇ ನಂಬರ್ ಜೈಲಿಗೆ ಕಳುಹಿಸಲಾಗಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಇ.ಡಿಯ ಒಂಬತ್ತು ಸಮನ್ಸ್ಗಳಿಗೆ ಉತ್ತರ ನೀಡಿರಲಿಲ್ಲ. ವಿಚಾರಣೆಗೂ ಹಾಜರಾಗಿರಲಿಲ್ಲ. ಮಾರ್ಚ್ 21 ರಂದು ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಅವರು ಇ.ಡಿ ಕಸ್ಟಡಿಯಲ್ಲಿದ್ದರು. ಜೈಲಿನಲ್ಲಿ ಇದ್ದುಕೊಂಡೇ ಅವರು ಸರಕಾರವನ್ನು ನಡೆಸುತ್ತಿದ್ದಾರೆ. ಅರವಿಂದ ಕೇಜ್ರಿವಾಲ್ ಮುಂದಿನ 15 ದಿನಗಳು ಜೈಲಿನಲ್ಲಿ ಇರಬೇಕಿದೆ. ಇದಕ್ಕಾಗಿ ತಿಹಾರ್ ಜೈಲಿನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜೈಲಿನಲ್ಲಿ ಕುಳಿತೇ ಸರ್ಕಾರ ನಡೆಸಬೇಕಿರುವ ಕೇಜ್ರಿವಾಲ್, ತಮ್ಮ ವಕೀಲರ ತಂಡದ ಜೊತೆಗಿನ ಭೇಟಿಗೂ ಸಮಯಾವಕಾಶ ಸಿಗಲಿದೆ. ರಾಮಾಯಣ, ಭಗವದ್ಗೀತೆ ಹಾಗೂ ಇತರೆ ಪುಸ್ತಕವನ್ನೂ ಓದಲಿದ್ದಾರೆ. ಮಧುಮೇಹಿ ಆದ ಕಾರಣ ಸೂಕ್ತ ಊಟ, ತಿಂಡಿ ಸೌಲಭ್ಯವೂ ಇರಲಿದೆ.
ಸೋಮವಾರ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಇ.ಡಿ ಪರ ವಕೀಲರು, 'ಕೇಜ್ರಿವಾಲ್ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ. ಸುಳ್ಳು ಉತ್ತರಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಅವರು ತಮ್ಮ ಡಿಜಿಟಲ್ ಸಾಧನಗಳ ಪಾಸ್ವರ್ಡ್ಗಳನ್ನು ನೀಡುತ್ತಿಲ್ಲ' ಎಂದು ಹೇಳಿದರು. ನ್ಯಾಯಾಲಯವು ಕೇಜ್ರಿವಾಲ್ ಅವರನ್ನು 15 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಇರಿಸುವಂತೆ ಹೇಳಿತು. ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯುವಾಗ ಎಎಪಿ ಕಾರ್ಯಕರ್ತರು, ಕೇಜ್ರಿವಾಲ್ ಅಭಿಮಾನಿಗಳು ದಾರಿಯುದ್ದಕ್ಕೂ ಸೇರಿದ್ದರು. ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಇ.ಡಿಯ ಒಂಬತ್ತು ಸಮನ್ಸ್ಗಳಿಗೆ ಉತ್ತರ ನೀಡಿರಲಿಲ್ಲ. ವಿಚಾರಣೆಗೂ ಹಾಜರಾಗಿರಲಿಲ್ಲ. ಮಾರ್ಚ್ 21 ರಂದು ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಅವರು ಇ.ಡಿ ಕಸ್ಟಡಿಯಲ್ಲಿದ್ದರು. ಜೈಲಿನಲ್ಲಿ ಇದ್ದುಕೊಂಡೇ ಅವರು ಸರಕಾರವನ್ನು ನಡೆಸುತ್ತಿದ್ದಾರೆ. ಅರವಿಂದ ಕೇಜ್ರಿವಾಲ್ ಮುಂದಿನ 15 ದಿನಗಳು ಜೈಲಿನಲ್ಲಿ ಇರಬೇಕಿದೆ. ಇದಕ್ಕಾಗಿ ತಿಹಾರ್ ಜೈಲಿನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜೈಲಿನಲ್ಲಿ ಕುಳಿತೇ ಸರ್ಕಾರ ನಡೆಸಬೇಕಿರುವ ಕೇಜ್ರಿವಾಲ್, ತಮ್ಮ ವಕೀಲರ ತಂಡದ ಜೊತೆಗಿನ ಭೇಟಿಗೂ ಸಮಯಾವಕಾಶ ಸಿಗಲಿದೆ. ರಾಮಾಯಣ, ಭಗವದ್ಗೀತೆ ಹಾಗೂ ಇತರೆ ಪುಸ್ತಕವನ್ನೂ ಓದಲಿದ್ದಾರೆ. ಮಧುಮೇಹಿ ಆದ ಕಾರಣ ಸೂಕ್ತ ಊಟ, ತಿಂಡಿ ಸೌಲಭ್ಯವೂ ಇರಲಿದೆ.
ಸೋಮವಾರ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಇ.ಡಿ ಪರ ವಕೀಲರು, 'ಕೇಜ್ರಿವಾಲ್ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ. ಸುಳ್ಳು ಉತ್ತರಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಅವರು ತಮ್ಮ ಡಿಜಿಟಲ್ ಸಾಧನಗಳ ಪಾಸ್ವರ್ಡ್ಗಳನ್ನು ನೀಡುತ್ತಿಲ್ಲ' ಎಂದು ಹೇಳಿದರು. ನ್ಯಾಯಾಲಯವು ಕೇಜ್ರಿವಾಲ್ ಅವರನ್ನು 15 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಇರಿಸುವಂತೆ ಹೇಳಿತು. ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯುವಾಗ ಎಎಪಿ ಕಾರ್ಯಕರ್ತರು, ಕೇಜ್ರಿವಾಲ್ ಅಭಿಮಾನಿಗಳು ದಾರಿಯುದ್ದಕ್ಕೂ ಸೇರಿದ್ದರು. ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.