Explainer Video: ಬೆಂಗಳೂರು ಜನರಿಗೆ ಟ್ಯಾಂಕರ್, ಬೋರ್ವೆಲ್ ನೀರೇ ಆಸರೆ..!
1355 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಕಾವೇರಿ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಮುಂದಿನ ಮೂರು ತಿಂಗಳ ಕಾಲ ಟ್ಯಾಂಕರ್, ಬೋರ್ವೆಲ್ ನೀರೇ ಆಸರೆ ಆಗಬೇಕಿದೆ. ಬೇಸಿಗೆ ಹೊತ್ತಲ್ಲಿ ಜಲಮಂಡಳಿ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ನೋಡಿದರೆ ಬೆಂಕಿ ಬಿದ್ದಾಗ ಬಾವಿ ತೋಡೋಕೆ ಹೊರಟಂತಿದೆ. ಈ ನಡುವೆ, ಖಾಸಗಿ ಟ್ಯಾಂಕರ್ ಮಾಫಿಯಾಗೆ ಕೂಡಾ ಕಡಿವಾಣ ಇಲ್ಲದಂತಾಗಿದ್ದು, ಬೇಸಿಗೆ ಬಿಸಿಯಲ್ಲಿ ಜನರ ಜೇಬಿಗೂ ಕತ್ತರಿ ಬೀಳುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಬಹುಪಾಲು ಜನರಿಗೆ ಮುಂದಿನ 3 ತಿಂಗಳ ಕಾಲ ಬೋರ್ವೆಲ್ ನೀರೇ ಆಸರೆ ಆಗಬೇಕಿದೆ. ಅದರಲ್ಲೂ ಟ್ಯಾಂಕರ್ಗಳ ಮೂಲಕ ಸರಬರಾಜಾಗುವ ನೀರನ್ನೇ ಅವಲಂಬಿಸಬೇಕಿದೆ. ಏಕೆಂದರೆ, ಬೆಂಗಳೂರಿಗೆ ಕುಡಿಯುವ ನೀರಿನ ಮೂಲವಾಗಿದ್ದ ಕಾವೇರಿ ನದಿ ಕಣಿವೆಯಲ್ಲಿ ನೀರಿನ ಕೊರತೆ ಉಂಟಾಗಿದೆ. ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ, ಬಿಬಿಎಂಪಿ ಹಾಗೂ ಜಲಮಂಡಳಿಗಳು ಜಂಟಿಯಾಗಿ ಸಮರವನ್ನೇ ಸಾರಿವೆ ಎನ್ನಬಹುದು. ಬೇಸಿಗೆ ವೇಳೆ ನೀರಿನ ಅಭಾವ ಎದುರಾಗಬಹುದಾದ ಪ್ರದೇಶಗಳಲ್ಲಿ ಕನಿಷ್ಟ ಪಕ್ಷ ಕುಡಿಯುವ ನೀರನ್ನಾದರೂ ಒದಗಿಸಲು ಸರ್ವ ಕ್ರಮಗಳನ್ನೂ ಕೈಗೊಂಡಿದೆ. ಒಂದೆಡೆ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಮುಂದಾಗಿರುವ ಜಲಮಂಡಳಿ, ಮತ್ತೊಂದೆಡೆ ಜನರಿಗೆ ಜಲ ಸಂರಕ್ಷಣೆಯ ಅರಿವು ಮೂಡಿಸೋದಕ್ಕೂ ಹಲವು ಕ್ರಮಗಳನ್ನ ಕೈಗೊಂಡಿದೆ.
ನೀರು ಉಳಿಸಿ, ಬೆಂಗಳೂರು ಉಳಿಸಿ ಅಭಿಯಾನವನ್ನು ಕೈಗೊಳ್ಳಲು ಜಲ ಮಂಡಳಿತ ಮುಂದಾಗಿದೆ. ಜನರು ವಾಹನ ತೊಳೆಯಲು, ತೋಟಗಾರಿಕೆ, ಫ್ಲಶ್ ಹಾಗೂ ಪಾರ್ಕಿಂಗ್ ಪ್ರದೇಶ ಸ್ವಚ್ಛತೆ ಸೇರಿದಂತೆ ಹಲವು ಸ್ವಚ್ಛತಾ ಕಾರ್ಯಗಳಿಗೆ ಕುಡಿಯುವ ನೀರನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ. ಸಂಸ್ಕರಿಸಿದ ನೀರಿನಿಂದ ಕೆರೆಗಳನ್ನು ತುಂಬಿಸಲು ಸರ್ವ ಕ್ರಮ ಕೈಗೊಂಡಿರೋದಾಗಿ ಜಲಮಂಡಳಿ ಹೇಳಿದೆ. ಐಐಎಸ್ಸಿ, ಐಐಎಂ, ಬಿಎಚ್ಇಇಲ್ ಸೇರಿದಂತೆ ಹಲವು ಸಂಸ್ಥೆಗಳು ಬಳಸಿದ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರು ಬಳಸಲು ತಾಕೀತು ಮಾಡಲಾಗಿದೆ. ಇನ್ನು ಕೈಗಾರಿಕೆಗಳಲ್ಲಿ ಕುಡಿಯುವುದಕ್ಕೆ ಹೊರತುಪಡಿಸಿ ಮಿಕ್ಕ ಬಳಕೆಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನೇ ಬಳಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಬಹುಪಾಲು ಜನರಿಗೆ ಮುಂದಿನ 3 ತಿಂಗಳ ಕಾಲ ಬೋರ್ವೆಲ್ ನೀರೇ ಆಸರೆ ಆಗಬೇಕಿದೆ. ಅದರಲ್ಲೂ ಟ್ಯಾಂಕರ್ಗಳ ಮೂಲಕ ಸರಬರಾಜಾಗುವ ನೀರನ್ನೇ ಅವಲಂಬಿಸಬೇಕಿದೆ. ಏಕೆಂದರೆ, ಬೆಂಗಳೂರಿಗೆ ಕುಡಿಯುವ ನೀರಿನ ಮೂಲವಾಗಿದ್ದ ಕಾವೇರಿ ನದಿ ಕಣಿವೆಯಲ್ಲಿ ನೀರಿನ ಕೊರತೆ ಉಂಟಾಗಿದೆ. ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ, ಬಿಬಿಎಂಪಿ ಹಾಗೂ ಜಲಮಂಡಳಿಗಳು ಜಂಟಿಯಾಗಿ ಸಮರವನ್ನೇ ಸಾರಿವೆ ಎನ್ನಬಹುದು. ಬೇಸಿಗೆ ವೇಳೆ ನೀರಿನ ಅಭಾವ ಎದುರಾಗಬಹುದಾದ ಪ್ರದೇಶಗಳಲ್ಲಿ ಕನಿಷ್ಟ ಪಕ್ಷ ಕುಡಿಯುವ ನೀರನ್ನಾದರೂ ಒದಗಿಸಲು ಸರ್ವ ಕ್ರಮಗಳನ್ನೂ ಕೈಗೊಂಡಿದೆ. ಒಂದೆಡೆ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಮುಂದಾಗಿರುವ ಜಲಮಂಡಳಿ, ಮತ್ತೊಂದೆಡೆ ಜನರಿಗೆ ಜಲ ಸಂರಕ್ಷಣೆಯ ಅರಿವು ಮೂಡಿಸೋದಕ್ಕೂ ಹಲವು ಕ್ರಮಗಳನ್ನ ಕೈಗೊಂಡಿದೆ.
ನೀರು ಉಳಿಸಿ, ಬೆಂಗಳೂರು ಉಳಿಸಿ ಅಭಿಯಾನವನ್ನು ಕೈಗೊಳ್ಳಲು ಜಲ ಮಂಡಳಿತ ಮುಂದಾಗಿದೆ. ಜನರು ವಾಹನ ತೊಳೆಯಲು, ತೋಟಗಾರಿಕೆ, ಫ್ಲಶ್ ಹಾಗೂ ಪಾರ್ಕಿಂಗ್ ಪ್ರದೇಶ ಸ್ವಚ್ಛತೆ ಸೇರಿದಂತೆ ಹಲವು ಸ್ವಚ್ಛತಾ ಕಾರ್ಯಗಳಿಗೆ ಕುಡಿಯುವ ನೀರನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ. ಸಂಸ್ಕರಿಸಿದ ನೀರಿನಿಂದ ಕೆರೆಗಳನ್ನು ತುಂಬಿಸಲು ಸರ್ವ ಕ್ರಮ ಕೈಗೊಂಡಿರೋದಾಗಿ ಜಲಮಂಡಳಿ ಹೇಳಿದೆ. ಐಐಎಸ್ಸಿ, ಐಐಎಂ, ಬಿಎಚ್ಇಇಲ್ ಸೇರಿದಂತೆ ಹಲವು ಸಂಸ್ಥೆಗಳು ಬಳಸಿದ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರು ಬಳಸಲು ತಾಕೀತು ಮಾಡಲಾಗಿದೆ. ಇನ್ನು ಕೈಗಾರಿಕೆಗಳಲ್ಲಿ ಕುಡಿಯುವುದಕ್ಕೆ ಹೊರತುಪಡಿಸಿ ಮಿಕ್ಕ ಬಳಕೆಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನೇ ಬಳಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.