ಸುಪ್ರೀಂ ಕೋರ್ಟ್ ಸೂಚನೆಯಂತೆ ಚುನಾವಣಾ ಬಾಂಡ್ ವಿವರ ಸಲ್ಲಿಸಿದ ಎಸ್ಬಿಐ, ಬಹಿರಂಗಪಡಿಸಬೇಕಿದೆ ಎಲೆಕ್ಷನ್ ಕಮಿಷನ್
1192 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಸುಪ್ರೀಂ ಕೋರ್ಟ್ ವಿಧಿಸಿದ್ದ ಡೆಡ್ಲೈನ್ ಅನ್ವಯ ಮಂಗಳವಾರ ಸಂಜೆ ಬ್ಯಾಂಕ್ನ ಕಾರ್ಯ ಕಲಾಪದ ಅವಧಿ ಮುಕ್ತಾಯವಾಗುವ ಮುನ್ನ ಎಲೆಕ್ಟೊರಲ್ ಬಾಂಡ್ ವಿವರಗಳನ್ನು ಚುನಾವಣಾ ಆಯೋಗಕ್ಕೆ ಎಸ್ಬಿಐ ಸಲ್ಲಿಕೆ ಮಾಡಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡಲು ಚುನಾವಣಾ ಬಾಂಡ್ ಪರಿಚಯಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ಆಪಾದನೆಗಳು ಕೇಳಿ ಬಂದಿದ್ದವು. ಚುನಾವಣಾ ಬಾಂಡ್ನಿಂದ ಬಿಜೆಪಿಗೆ ಹೆಚ್ಚು ಲಾಭವಾಗಿದೆ ಎಂದು ಆರೋಪ ಮಾಡಲಾಗಿತ್ತು. ಈ ಕುರಿತ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪಾರದರ್ಶಕತೆ ಇಲ್ಲದ ಕಾರಣ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದಿತ್ತು. ಅಷ್ಟೇ ಅಲ್ಲ, ವಿವರ ಕೊಡಲು ಸಮಯ ಕೇಳಿದ ಎಸ್ಬಿಐಗೂ ಚಾಟಿ ಬೀಸಿತ್ತು. ಇದೀಗ ಚುನಾವಣಾ ಬಾಂಡ್ ಕುರಿತಾದ ಸಮಗ್ರ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.
ಚುನಾವಣಾ ಬಾಂಡ್ಗಳನ್ನು ಅಸಂವಿಧಾನಿಕ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಮೂರು ವಾರಗಳ ಒಳಗೆ ಚುನಾವಣಾ ಆಯೋಗಕ್ಕೆ ಎಲೆಕ್ಟೊರಲ್ ಬಾಂಡ್ ವಿವರಗಳನ್ನು ನೀಡಬೇಕು ಎಂದು ಎಸ್ಬಿಐಗೆ ತಾಕೀತು ಮಾಡಿತ್ತು. ಆದರೆ, ವಿವರ ನೀಡಲು ಜೂನ್ 30ರವರೆಗೆ ಕಾಲಾವಕಾಶ ನೀಡುವಂತೆ ಎಸ್ಬಿಐ ಅರ್ಜಿ ಸಲ್ಲಿಸಿತ್ತು. ಇದರಿಂದ ಸಿಟ್ಟಿಗೆದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ, ಮಾರ್ಚ್ 12ರ ಸಂಜೆ ಒಳಗೆ ಮಾಹಿತಿ ನೀಡುವಂತೆ ತಾಕೀತು ಮಾಡಿತ್ತು. ಅಷ್ಟೇ ಅಲ್ಲ, ಎಸ್ಬಿಐ ನೀಡುವ ವಿವರಗಳನ್ನು ಚುನಾವಣಾ ಆಯೋಗವು ಮಾರ್ಚ್ 15ರ ಶುಕ್ರವಾರ ಸಂಜೆ ಒಳಗೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟ ಮಾಡಬೇಕು ಎಂದು ತಾಕೀತು ಮಾಡಿತ್ತು.
ಇದೀಗ ಸುಪ್ರೀಂ ಕೋರ್ಟ್ ಸೂಚನೆ ಅನ್ವಯ ಎಲೆಕ್ಟೋರಲ್ ಬಾಂಡ್ಗಳ ವಿವರಗಳನ್ನ 'ಮುಚ್ಚಿದ ಲಕೋಟೆ'ಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ್ದಾರೆ. ಶುಕ್ರವಾರ ಸಂಜೆ ಒಳಗೆ ಈ ವಿವರಗಳನ್ನು ಆಯೋಗ ತನ್ನ ವೆಬ್ಸೈಟ್ಗೆ ಅಪ್ಡೇಟ್ ಮಾಡಬೇಕಿದೆ. ಹೀಗಾಗಿ, ಯಾವ ಪಕ್ಷಕ್ಕೆ ಎಷ್ಟು ಹಣ ಸಿಕ್ಕಿದೆ? ಯಾರು, ಯಾವ ಪಕ್ಷಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಅನ್ನುವ ಮಾಹಿತಿ ಬಹಿರಂಗ ಆಗುವ ಸಾಧ್ಯತೆ ಇದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವಿಧಾನವನ್ನು ಚುನಾವಣಾ ಬಾಂಡ್ ಎಂದು ಕರೆಯಬಹುದು. 2017-18ರ ಕೇಂದ್ರ ಬಜೆಟ್ನಲ್ಲಿ ಈ ಬಾಂಡ್ ಪರಿಚಯಿಸಲಾಯ್ತು. ಬಾಂಡ್ ಎಂದರೆ ಪ್ರಾಮಿಸರಿ ನೋಟ್. ಇದರಲ್ಲಿ ಖರೀದಿ ಮಾಡುವ ವ್ಯಕ್ತಿ ಹಾಗೂ ಪಾವತಿ ಮಾಡಿದ ವ್ಯಕ್ತಿಯ ಹೆಸರು ಇರೋದಿಲ್ಲ. ಮಾಲೀಕತ್ವವೂ ದಾಖಲಾಗಿರೋದಿಲ್ಲ. ಆದರೆ ಈ ಬಾಂಡ್ ಹೊಂದಿರುವ ರಾಜಕೀಯ ಪಕ್ಷವನ್ನೇ ಇದರ ಮಾಲೀಕರು ಎಂದು ಪರಿಗಣಿಸಲಾಗುತ್ತದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡಲು ಚುನಾವಣಾ ಬಾಂಡ್ ಪರಿಚಯಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ಆಪಾದನೆಗಳು ಕೇಳಿ ಬಂದಿದ್ದವು. ಚುನಾವಣಾ ಬಾಂಡ್ನಿಂದ ಬಿಜೆಪಿಗೆ ಹೆಚ್ಚು ಲಾಭವಾಗಿದೆ ಎಂದು ಆರೋಪ ಮಾಡಲಾಗಿತ್ತು. ಈ ಕುರಿತ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪಾರದರ್ಶಕತೆ ಇಲ್ಲದ ಕಾರಣ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದಿತ್ತು. ಅಷ್ಟೇ ಅಲ್ಲ, ವಿವರ ಕೊಡಲು ಸಮಯ ಕೇಳಿದ ಎಸ್ಬಿಐಗೂ ಚಾಟಿ ಬೀಸಿತ್ತು. ಇದೀಗ ಚುನಾವಣಾ ಬಾಂಡ್ ಕುರಿತಾದ ಸಮಗ್ರ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.
ಚುನಾವಣಾ ಬಾಂಡ್ಗಳನ್ನು ಅಸಂವಿಧಾನಿಕ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಮೂರು ವಾರಗಳ ಒಳಗೆ ಚುನಾವಣಾ ಆಯೋಗಕ್ಕೆ ಎಲೆಕ್ಟೊರಲ್ ಬಾಂಡ್ ವಿವರಗಳನ್ನು ನೀಡಬೇಕು ಎಂದು ಎಸ್ಬಿಐಗೆ ತಾಕೀತು ಮಾಡಿತ್ತು. ಆದರೆ, ವಿವರ ನೀಡಲು ಜೂನ್ 30ರವರೆಗೆ ಕಾಲಾವಕಾಶ ನೀಡುವಂತೆ ಎಸ್ಬಿಐ ಅರ್ಜಿ ಸಲ್ಲಿಸಿತ್ತು. ಇದರಿಂದ ಸಿಟ್ಟಿಗೆದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ, ಮಾರ್ಚ್ 12ರ ಸಂಜೆ ಒಳಗೆ ಮಾಹಿತಿ ನೀಡುವಂತೆ ತಾಕೀತು ಮಾಡಿತ್ತು. ಅಷ್ಟೇ ಅಲ್ಲ, ಎಸ್ಬಿಐ ನೀಡುವ ವಿವರಗಳನ್ನು ಚುನಾವಣಾ ಆಯೋಗವು ಮಾರ್ಚ್ 15ರ ಶುಕ್ರವಾರ ಸಂಜೆ ಒಳಗೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟ ಮಾಡಬೇಕು ಎಂದು ತಾಕೀತು ಮಾಡಿತ್ತು.
ಇದೀಗ ಸುಪ್ರೀಂ ಕೋರ್ಟ್ ಸೂಚನೆ ಅನ್ವಯ ಎಲೆಕ್ಟೋರಲ್ ಬಾಂಡ್ಗಳ ವಿವರಗಳನ್ನ 'ಮುಚ್ಚಿದ ಲಕೋಟೆ'ಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ್ದಾರೆ. ಶುಕ್ರವಾರ ಸಂಜೆ ಒಳಗೆ ಈ ವಿವರಗಳನ್ನು ಆಯೋಗ ತನ್ನ ವೆಬ್ಸೈಟ್ಗೆ ಅಪ್ಡೇಟ್ ಮಾಡಬೇಕಿದೆ. ಹೀಗಾಗಿ, ಯಾವ ಪಕ್ಷಕ್ಕೆ ಎಷ್ಟು ಹಣ ಸಿಕ್ಕಿದೆ? ಯಾರು, ಯಾವ ಪಕ್ಷಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಅನ್ನುವ ಮಾಹಿತಿ ಬಹಿರಂಗ ಆಗುವ ಸಾಧ್ಯತೆ ಇದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವಿಧಾನವನ್ನು ಚುನಾವಣಾ ಬಾಂಡ್ ಎಂದು ಕರೆಯಬಹುದು. 2017-18ರ ಕೇಂದ್ರ ಬಜೆಟ್ನಲ್ಲಿ ಈ ಬಾಂಡ್ ಪರಿಚಯಿಸಲಾಯ್ತು. ಬಾಂಡ್ ಎಂದರೆ ಪ್ರಾಮಿಸರಿ ನೋಟ್. ಇದರಲ್ಲಿ ಖರೀದಿ ಮಾಡುವ ವ್ಯಕ್ತಿ ಹಾಗೂ ಪಾವತಿ ಮಾಡಿದ ವ್ಯಕ್ತಿಯ ಹೆಸರು ಇರೋದಿಲ್ಲ. ಮಾಲೀಕತ್ವವೂ ದಾಖಲಾಗಿರೋದಿಲ್ಲ. ಆದರೆ ಈ ಬಾಂಡ್ ಹೊಂದಿರುವ ರಾಜಕೀಯ ಪಕ್ಷವನ್ನೇ ಇದರ ಮಾಲೀಕರು ಎಂದು ಪರಿಗಣಿಸಲಾಗುತ್ತದೆ.