ಸೆಂಚುರಿ ದಾಟಿದೆ ತರಕಾರಿ ಬೆಲೆ: ಅಕ್ಕಿ, ಬೇಳೆ ರೇಟು ಗಗನಕ್ಕೆ!
1170 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿರಾಜ್ಯದಲ್ಲಿ ಮಳೆ ಕೊರತೆ ಕಾಡ್ತಿದೆ. ಹೀಗಾಗಿ, ಬಿತ್ತನೆ ಕುಂಠಿತವಾಗಿದೆ. ಇದರ ನೇರ ಪರಿಣಾಮವನ್ನು ಜನತೆ ಎದುರಿಸುವಂತಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ದಿನಸಿ ವಸ್ತುಗಳಾದ ಅಕ್ಕಿ, ಬೇಳೆ ಹಾಗೂ ತರಕಾರಿಗಳ ಬೆಲೆ ದಿನೇ ದಿನೇ ಏರುತ್ತಿದೆ. ಹೊರ ರಾಜ್ಯಗಳಿಂದಲೂ ಆಮದು ಕಡಿಮೆ ಆಗಿದೆ. ವಿದೇಶಗಳತ್ತ ನೋಡುವ ಪರಿಸ್ಥಿತಿ ಎದುರಾಗಿದೆ. ತರಕಾರಿ ಬೆಲೆಯಂತೂ ಸೆಂಚುರಿ ದಾಟಿದೆ. ಅಕ್ಕಿ, ಬೇಳೆ ರೇಟು ಕೂಡಾ ಜನ ಸಾಮಾನ್ಯರ ಕೈಗೆಟುಕದಷ್ಟಾಗಿದೆ.
ಆರ್ಎನ್ಆರ್ ಸ್ಟೀಮ್ ಅಕ್ಕಿ ಪ್ರತಿ ಕೆಜಿಗೆ 40 ರೂಪಾಯಿಯಿಂದ 50 ರೂಪಾಯಿಗೆ ಏರಿಕೆ ಆಗಿದೆ. ರಾ ರೈಸ್ ಪ್ರತಿ ಕೆಜಿಗೆ 55 ರೂಪಾಯಿಯಿಂದ 58 ರೂಪಾಯಿಗೆ ಏರಿಕೆ ಆಗಿದೆ. ಸೋನಾ ಮಸೂರಿ ಸ್ಟೀಮ್ ಅಕ್ಕಿ ಪ್ರತಿ ಕೆಜಿಗೆ 55 ರೂಪಾಯಿಯಿಂದ 56 ರೂಪಾಯಿಗೆ ಏರಿಕೆ ಆಗಿದೆ. ಬುಲೆಟ್ ರೈಸ್ ಎನ್ನಲಾಗುವ ಕೋಲಂ ಅಕ್ಕಿ 55 ರೂಪಾಯಿಯಿಂದ 72 ರೂಪಾಯಿಗೆ ಏರಿಕೆ ಕಂಡಿದೆ.
ಟೊಮೇಟೋ ದರ ಪ್ರತಿ ಕೆಜಿಗೆ 80 ರಿಂದ 100 ರೂ. ಇದೆ. ಶುಂಠಿ ಪ್ರತಿ ಕೆಜಿಗೆ 310 ರೂ. ಇದೆ. ಬದನೆಕಾಯಿ 80 ರೂಪಾಯಿ, ಕ್ಯಾರೆಟ್ 100 ರೂಪಾಯಿ, ನುಗ್ಗೇಕಾಯಿ 120 ರೂಪಾಯಿ, ಹುರುಳಿಕಾಯಿ 110 ರೂಪಾಯಿ, ಹಸಿ ಮೆಣಸಿನ ಕಾಯಿ 100 ರೂಪಾಯಿ, ಗೆಡ್ಡೆ ಕೋಸು 100 ರೂಪಾಯಿ, ಈರುಳ್ಳಿ 100 ರೂಪಾಯಿ, ಬೆಳ್ಳುಳ್ಳಿ 140 ರೂಪಾಯಿ, ಆಲೂಗಡ್ಡೆ 50 ರೂಪಾಯಿ, ಹೀರೇಕಾಯಿ 60 ರೂಪಾಯಿ ಇದೆ.
ಮಳೆ, ಬೆಳೆ ಇಲ್ಲವಾದ್ರೆ ಜನ ಸಾಮಾನ್ಯರು ಬೆಲೆ ಏರಿಕೆ ಬಿಸಿ ಅನುಭವಿಸುತ್ತಾರೆ. ಆದರೆ, ರೈತರು ತುಂಬಾನೇ ಸಂಕಷ್ಟಕ್ಕೆ ಸಿಲುಕುತ್ತಾರೆ. ಈಗಾಗಲೇ ರಾಜ್ಯದಲ್ಲಿ ಮಳೆ ಕೊರತೆಯಿಂದ ಶೇ. 10ರಷ್ಟು ಮಾತ್ರ ಬಿತ್ತನೆ ಆಗಿದೆ. ರೈತರು ಖರೀದಿಸಿದ್ದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಹಾಗೆಯೇ ಬಿದ್ದಿವೆ. ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಸದ್ಯದ ಮಟ್ಟಿಗೆ ಈ ಎಲ್ಲಾ ಸಮಸ್ಯೆಗಳಿಗೆ ಉತ್ತಮ ಮಳೆಯೊಂದೇ ಉತ್ತರ.
ಆರ್ಎನ್ಆರ್ ಸ್ಟೀಮ್ ಅಕ್ಕಿ ಪ್ರತಿ ಕೆಜಿಗೆ 40 ರೂಪಾಯಿಯಿಂದ 50 ರೂಪಾಯಿಗೆ ಏರಿಕೆ ಆಗಿದೆ. ರಾ ರೈಸ್ ಪ್ರತಿ ಕೆಜಿಗೆ 55 ರೂಪಾಯಿಯಿಂದ 58 ರೂಪಾಯಿಗೆ ಏರಿಕೆ ಆಗಿದೆ. ಸೋನಾ ಮಸೂರಿ ಸ್ಟೀಮ್ ಅಕ್ಕಿ ಪ್ರತಿ ಕೆಜಿಗೆ 55 ರೂಪಾಯಿಯಿಂದ 56 ರೂಪಾಯಿಗೆ ಏರಿಕೆ ಆಗಿದೆ. ಬುಲೆಟ್ ರೈಸ್ ಎನ್ನಲಾಗುವ ಕೋಲಂ ಅಕ್ಕಿ 55 ರೂಪಾಯಿಯಿಂದ 72 ರೂಪಾಯಿಗೆ ಏರಿಕೆ ಕಂಡಿದೆ.
ಟೊಮೇಟೋ ದರ ಪ್ರತಿ ಕೆಜಿಗೆ 80 ರಿಂದ 100 ರೂ. ಇದೆ. ಶುಂಠಿ ಪ್ರತಿ ಕೆಜಿಗೆ 310 ರೂ. ಇದೆ. ಬದನೆಕಾಯಿ 80 ರೂಪಾಯಿ, ಕ್ಯಾರೆಟ್ 100 ರೂಪಾಯಿ, ನುಗ್ಗೇಕಾಯಿ 120 ರೂಪಾಯಿ, ಹುರುಳಿಕಾಯಿ 110 ರೂಪಾಯಿ, ಹಸಿ ಮೆಣಸಿನ ಕಾಯಿ 100 ರೂಪಾಯಿ, ಗೆಡ್ಡೆ ಕೋಸು 100 ರೂಪಾಯಿ, ಈರುಳ್ಳಿ 100 ರೂಪಾಯಿ, ಬೆಳ್ಳುಳ್ಳಿ 140 ರೂಪಾಯಿ, ಆಲೂಗಡ್ಡೆ 50 ರೂಪಾಯಿ, ಹೀರೇಕಾಯಿ 60 ರೂಪಾಯಿ ಇದೆ.
ಮಳೆ, ಬೆಳೆ ಇಲ್ಲವಾದ್ರೆ ಜನ ಸಾಮಾನ್ಯರು ಬೆಲೆ ಏರಿಕೆ ಬಿಸಿ ಅನುಭವಿಸುತ್ತಾರೆ. ಆದರೆ, ರೈತರು ತುಂಬಾನೇ ಸಂಕಷ್ಟಕ್ಕೆ ಸಿಲುಕುತ್ತಾರೆ. ಈಗಾಗಲೇ ರಾಜ್ಯದಲ್ಲಿ ಮಳೆ ಕೊರತೆಯಿಂದ ಶೇ. 10ರಷ್ಟು ಮಾತ್ರ ಬಿತ್ತನೆ ಆಗಿದೆ. ರೈತರು ಖರೀದಿಸಿದ್ದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಹಾಗೆಯೇ ಬಿದ್ದಿವೆ. ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಸದ್ಯದ ಮಟ್ಟಿಗೆ ಈ ಎಲ್ಲಾ ಸಮಸ್ಯೆಗಳಿಗೆ ಉತ್ತಮ ಮಳೆಯೊಂದೇ ಉತ್ತರ.