ಹಾಡು ಹಳತು, ಭಾವ ನವೀನ ಸರಣಿಯಲ್ಲಿ ಕನಕದಾಸರ ʻಮುಂಡಿಗೆʼ ಸಾಹಿತ್ಯದ ವಿವರಣೆ
1241 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಎಲ್ಲರಿಗೂ ನಮಸ್ಕಾರಗಳು. ʻಹಾಡು ಹಳತು, ಭಾವ ನವೀನʼ ಸರಣಿಗೆ ನಿಮ್ಮೆಲ್ಲರಿಗೂ ಸ್ವಾಗತ. ಇಂದಿನ ವಿಷಯ 'ಮುಂಡಿಗೆ'. ದಾಸ ಸಾಹಿತ್ಯದಲ್ಲಿ ಕಂಡು ಬರುವ 'ಮುಂಡಿಗೆ' ಒಂದು ವಿಶಿಷ್ಟವಾದ ಸಾಹಿತ್ಯದ ಪರಿ. ಒಂದು ವಿಷಯವನ್ನು ಹೇಗೆ ನೇರವಾಗಿ ಹೇಳಬಹುದೋ ಅಷ್ಟೇ ವಿಭಿನ್ನವಾಗಿ ಮತ್ತು ಗೂಢವಾಗಿಯೇ ಹೇಳಬಹುದು. ಮುಂಡಿಗೆ ಎಂಬುದಕ್ಕೆ 'ಮುಂಡಾಸು' ಎಂಬ ಅರ್ಥವೂ ಇದೆ. ಒಂದು ಬಟ್ಟೆಯನ್ನು ಬಿಡಿಸಿ ಇಟ್ಟಾಗ ನೇರ ಮತ್ತು ನಿರ್ದಿಷ್ಟ. ಅದೇ ಬಟ್ಟೆಯನ್ನು ವಿಭಿನ್ನವಾಗಿ ಸುತ್ತಿ ತಲೆಗೆ ಕಟ್ಟಿಕೊಂಡಾಗ ಆ ಬಟ್ಟೆಗೆ ಒಂದು ವಿಭಿನ್ನ ಮರ್ಯಾದೆ ಮತ್ತು ಕ್ಲಿಷ್ಟತೆಯೂ ಕಾಣುತ್ತದೆ.
ಮುಂಡಿಗೆ ಎಂಬ ಶಬ್ದಕ್ಕೆ ಅರ್ಥ ತೊಲೆ ಅಥವಾ ಮರದ ದಿಮ್ಮಿ ಎಂದೂ ಅರ್ಥವಿದೆ. ಹೇಗೆ ಒಬ್ಬ ಸಾಹಸಿಯು ತೊಲೆಯನ್ನೋ ಅಥವಾ ದಿಮ್ಮಿಯನ್ನೋ ಎತ್ತಿ ಎಸೆದು ಶಕ್ತಿ ಪ್ರದರ್ಶನ ಮಾಡುವನೋ ಅದರಂತೆಯೇ ಒಬ್ಬ ಪಂಡಿತನು ಸಾಹಿತ್ಯದ ಮುಂಡಿಗೆಯನ್ನು ಸವಾಲಿನ ರೂಪದಲ್ಲಿ ಎಸೆಯುತ್ತಾನೆ ಎಂಬರ್ಥದಲ್ಲಿ ಹೇಳಬಹುದು. ಮುಂಡಿಗೆಯು ಬುದ್ಧಿಶಕ್ತಿಯ ಸ್ವರೂಪವಾಗಿ ತಿಣುಕುವಂಥಾ ಮನೋರಂಜನೆಯನ್ನು ಉದ್ದೇಶ್ಯವಾಗಿಟ್ಟುಕೊಂಡು ರಚಿತವಾಗಿತ್ತು. ಇದರ ಮಹತ್ವವನ್ನು ಅರಿತವರಾದ ಆಳುವ ದೊರೆಗಳು ಶತ್ರುಗಳಿಂದ ಸುರಕ್ಷಿತವಾಗಿ ಇರುವುದಕ್ಕಾಗಿ ತಮ್ಮ ಸಂದೇಶಗಳನ್ನು ಮುಂಡಿಗೆಯ ರೂಪದ ಗುಪ್ತ ಭಾಷೆಯ ಮುಖಾಂತರ ಬರೆದು ಗೂಢಚಾರಿಗಳಿಗೆ ಕಳಿಸುತ್ತಿದ್ದರಂತೆ. ಒಟ್ಟಾರೆಯಾಗಿ ಹೇಳಿದರೆ ಮುಂಡಿಗೆಯು ತಲೆಗೆ ಕೆಲಸ ಕೊಡುವ ಸಾಧನ. ಅದನ್ನು ರಚಿಸುವವರು ಮಹಾ ಬುದ್ದಿವಂತರೇ ಸರಿ ಅಲ್ಲವೇ? ಕನಕದಾಸರು ಅಂಥಾ ಮೇಧಾವಿಗಳಲ್ಲಿ ಒಬ್ಬರು. ಮೊದಲಿಗೆ ಒಂದು ಚಿಕ್ಕ ಉದಾಹರಣೆಯನ್ನು ನೋಡೋಣ. ಹರನ ಹಾರನ ಆಹಾರನ ಸುತನ ಒಡೆಯನ ವೈರಿಯ ಅನುಜನ ಮಡದಿಯು ಬರುತಲಿಹಳು" ಎಂಬುದು ಕನಕದಾಸರ ಒಂದು ಮುಂಡಿಗೆ. ಮುಂಡಾಸಿನಂಥಾ ಮುಂಡಿಗೆಯನ್ನು ಬಿಡಿಸಿದಾಗ ಅದರ ಅರ್ಥ ಹೀಗಿದೆ. ಹರನ ಎಂದರೆ ಶಿವನ ಹಾರವಾದುದು ಸರ್ಪ. ಆ ಸರ್ಪದ ಆಹಾರ ವಾಯು. ಈ ವಾಯುವಿನ ಸುತ ಆಂಜನೇಯ. ಅವನ ಒಡೆಯ ರಾಮ. ಅವನ ವೈರಿ ರಾವಣ. ಆ ರಾವಣನ ಅನುಜ ಎಂದರೆ ತಮ್ಮ ಕುಂಭಕರ್ಣ. ಅವನ ಮಡದಿ ನಿದ್ರಾದೇವಿ. ಹಲವು ಪದಗಳಲ್ಲಿ ಹೇಳಿದರೆ ನಿದ್ರಾದೇವಿ ಬರುತಿಹಳು ಎಂದು.
ಮುಂಡಿಗೆ ಎಂಬ ಶಬ್ದಕ್ಕೆ ಅರ್ಥ ತೊಲೆ ಅಥವಾ ಮರದ ದಿಮ್ಮಿ ಎಂದೂ ಅರ್ಥವಿದೆ. ಹೇಗೆ ಒಬ್ಬ ಸಾಹಸಿಯು ತೊಲೆಯನ್ನೋ ಅಥವಾ ದಿಮ್ಮಿಯನ್ನೋ ಎತ್ತಿ ಎಸೆದು ಶಕ್ತಿ ಪ್ರದರ್ಶನ ಮಾಡುವನೋ ಅದರಂತೆಯೇ ಒಬ್ಬ ಪಂಡಿತನು ಸಾಹಿತ್ಯದ ಮುಂಡಿಗೆಯನ್ನು ಸವಾಲಿನ ರೂಪದಲ್ಲಿ ಎಸೆಯುತ್ತಾನೆ ಎಂಬರ್ಥದಲ್ಲಿ ಹೇಳಬಹುದು. ಮುಂಡಿಗೆಯು ಬುದ್ಧಿಶಕ್ತಿಯ ಸ್ವರೂಪವಾಗಿ ತಿಣುಕುವಂಥಾ ಮನೋರಂಜನೆಯನ್ನು ಉದ್ದೇಶ್ಯವಾಗಿಟ್ಟುಕೊಂಡು ರಚಿತವಾಗಿತ್ತು. ಇದರ ಮಹತ್ವವನ್ನು ಅರಿತವರಾದ ಆಳುವ ದೊರೆಗಳು ಶತ್ರುಗಳಿಂದ ಸುರಕ್ಷಿತವಾಗಿ ಇರುವುದಕ್ಕಾಗಿ ತಮ್ಮ ಸಂದೇಶಗಳನ್ನು ಮುಂಡಿಗೆಯ ರೂಪದ ಗುಪ್ತ ಭಾಷೆಯ ಮುಖಾಂತರ ಬರೆದು ಗೂಢಚಾರಿಗಳಿಗೆ ಕಳಿಸುತ್ತಿದ್ದರಂತೆ. ಒಟ್ಟಾರೆಯಾಗಿ ಹೇಳಿದರೆ ಮುಂಡಿಗೆಯು ತಲೆಗೆ ಕೆಲಸ ಕೊಡುವ ಸಾಧನ. ಅದನ್ನು ರಚಿಸುವವರು ಮಹಾ ಬುದ್ದಿವಂತರೇ ಸರಿ ಅಲ್ಲವೇ? ಕನಕದಾಸರು ಅಂಥಾ ಮೇಧಾವಿಗಳಲ್ಲಿ ಒಬ್ಬರು. ಮೊದಲಿಗೆ ಒಂದು ಚಿಕ್ಕ ಉದಾಹರಣೆಯನ್ನು ನೋಡೋಣ. ಹರನ ಹಾರನ ಆಹಾರನ ಸುತನ ಒಡೆಯನ ವೈರಿಯ ಅನುಜನ ಮಡದಿಯು ಬರುತಲಿಹಳು" ಎಂಬುದು ಕನಕದಾಸರ ಒಂದು ಮುಂಡಿಗೆ. ಮುಂಡಾಸಿನಂಥಾ ಮುಂಡಿಗೆಯನ್ನು ಬಿಡಿಸಿದಾಗ ಅದರ ಅರ್ಥ ಹೀಗಿದೆ. ಹರನ ಎಂದರೆ ಶಿವನ ಹಾರವಾದುದು ಸರ್ಪ. ಆ ಸರ್ಪದ ಆಹಾರ ವಾಯು. ಈ ವಾಯುವಿನ ಸುತ ಆಂಜನೇಯ. ಅವನ ಒಡೆಯ ರಾಮ. ಅವನ ವೈರಿ ರಾವಣ. ಆ ರಾವಣನ ಅನುಜ ಎಂದರೆ ತಮ್ಮ ಕುಂಭಕರ್ಣ. ಅವನ ಮಡದಿ ನಿದ್ರಾದೇವಿ. ಹಲವು ಪದಗಳಲ್ಲಿ ಹೇಳಿದರೆ ನಿದ್ರಾದೇವಿ ಬರುತಿಹಳು ಎಂದು.