ಹಾಡು ಹಳತು, ಭಾವ ನವೀನ ಸರಣಿಯಲ್ಲಿ ಶಿಶುನಾಳ ಶರೀಫರ ತತ್ವಪದಗಳ ವಿವರಣೆ
1458 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ"ಹಾಡು ಹಳತು, ಭಾವ ನವೀನ" ಸರಣಿಗೆ ನಿಮ್ಮೆಲ್ಲರಿಗೂ ಸ್ವಾಗತ. ಇಂದಿನ ಆಯ್ಕೆ ಸಂತನಾದ ಶಿಶುನಾಳ ಶರೀಫರ ಒಂದು ತತ್ವಪದ "ತರವಲ್ಲ ತಗಿ ನಿನ್ನ ತಂಬೂರಿ"
ತಂಬೂರಿ ಎಂಬುದು ಒಂದು ಶೃತಿಗೆ ಬಳಸುವ ತಂತಿ ವಾದ್ಯ. ಶ್ರುತಿಬದ್ದವಾಗಿ ಸಂಗೀತಗಾರನ ಗಾನಸುಧೆಯ ಹಿಂಬದಿಯಲ್ಲಿ ಸಾಗುವ ನಿರಂತರ ನಾದ. "ತಂಬೂರಿ ಮೀಟಿದವ ಭವಾಬ್ದಿ ದಾಟಿದವ " ಎಂದಿದ್ದಾರೆ ದಾಸರು. ಈ ದೇಹವೇ ಒಂದು ತಂಬೂರಿ ಎಂದಾದರೆ, ಅದನ್ನು ಶ್ರುತಿಬದ್ದವಾಗಿ ನುಡಿಸುವುದು ಎಂದರೆ ಅಲ್ಲೊಂದು ಕ್ರಮ ಇರಬೇಕು ಅದು ಸರಾಗವಾಗಿರಬೇಕು, ನಿರಂತರವಾಗಿರಬೇಕು. ಅದು ವೃತ್ತಿಗೂ ಅನ್ವಯ, ಪ್ರವೃತ್ತಿಗೂ ಅನ್ವಯ. ನಿತ್ಯಕರ್ಮಗಳಿಗೂ, ಊಟೋಪಚಾರಗಳಿಗೂ, ಧ್ಯಾನಾದಿಗಳಿಗೂ, ಇಂದಿನ ವ್ಯಾಯಾಮಕ್ಕೂ ಅನ್ವಯ. ಶಿಸ್ತುಬದ್ಧ ಜೀವನವೇ ಶ್ರುತಿಬದ್ದ ಜೀವನ. ಇಂಥಾ ತಂಬೂರಿಯೇ ದೇಹ, ಇಂಥಾ ತಂಬೂರಿಯೇ ಜೀವನವೂ ಹೌದು. ಶರೀಫರು ಈ ತಂಬೂರಿಯ ಬಗ್ಗೆ ಏನ ಹೇಳಿದ್ದಾರೆ ಎಂದು ನೋಡುವ ಬನ್ನಿ.
ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||
ಕೆಲವೊಮ್ಮೆ 'ಬರದೇ ಬಾರಿಸದಿರು' ಎನ್ನುತ್ತಾರೆ, ಕೆಲವೆಡೆ "ಬರಿದೇ ಬಾರಿಸದಿರು' ಎಂದೂ ಹೇಳುತ್ತಾರೆ. ಎರಡೂ ಸರಿಯೇ. ತಂಬೂರಿಯನ್ನು ನುಡಿಸಲು ಬಾರದೇ ತನಗೆಲ್ಲಾ ಗೊತ್ತು ಎಂದು ನುಡಿಯದಿರು ಎಂಬುದು ನೇರವಾದ ಅರ್ಥ. ಸಾರವಿಲ್ಲದ ಪೊಳ್ಳು ಜೀವನ ಸಾಗಿಸುತ್ತ, ನನಗೆಲ್ಲಾ ಗೊತ್ತು ಎಂದು ಹೇಳದಿರು ಎಂಬುದೂ ಅರ್ಥ.
ತಂಬೂರಿ ಎಂಬುದು ಒಂದು ಶೃತಿಗೆ ಬಳಸುವ ತಂತಿ ವಾದ್ಯ. ಶ್ರುತಿಬದ್ದವಾಗಿ ಸಂಗೀತಗಾರನ ಗಾನಸುಧೆಯ ಹಿಂಬದಿಯಲ್ಲಿ ಸಾಗುವ ನಿರಂತರ ನಾದ. "ತಂಬೂರಿ ಮೀಟಿದವ ಭವಾಬ್ದಿ ದಾಟಿದವ " ಎಂದಿದ್ದಾರೆ ದಾಸರು. ಈ ದೇಹವೇ ಒಂದು ತಂಬೂರಿ ಎಂದಾದರೆ, ಅದನ್ನು ಶ್ರುತಿಬದ್ದವಾಗಿ ನುಡಿಸುವುದು ಎಂದರೆ ಅಲ್ಲೊಂದು ಕ್ರಮ ಇರಬೇಕು ಅದು ಸರಾಗವಾಗಿರಬೇಕು, ನಿರಂತರವಾಗಿರಬೇಕು. ಅದು ವೃತ್ತಿಗೂ ಅನ್ವಯ, ಪ್ರವೃತ್ತಿಗೂ ಅನ್ವಯ. ನಿತ್ಯಕರ್ಮಗಳಿಗೂ, ಊಟೋಪಚಾರಗಳಿಗೂ, ಧ್ಯಾನಾದಿಗಳಿಗೂ, ಇಂದಿನ ವ್ಯಾಯಾಮಕ್ಕೂ ಅನ್ವಯ. ಶಿಸ್ತುಬದ್ಧ ಜೀವನವೇ ಶ್ರುತಿಬದ್ದ ಜೀವನ. ಇಂಥಾ ತಂಬೂರಿಯೇ ದೇಹ, ಇಂಥಾ ತಂಬೂರಿಯೇ ಜೀವನವೂ ಹೌದು. ಶರೀಫರು ಈ ತಂಬೂರಿಯ ಬಗ್ಗೆ ಏನ ಹೇಳಿದ್ದಾರೆ ಎಂದು ನೋಡುವ ಬನ್ನಿ.
ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||
ಕೆಲವೊಮ್ಮೆ 'ಬರದೇ ಬಾರಿಸದಿರು' ಎನ್ನುತ್ತಾರೆ, ಕೆಲವೆಡೆ "ಬರಿದೇ ಬಾರಿಸದಿರು' ಎಂದೂ ಹೇಳುತ್ತಾರೆ. ಎರಡೂ ಸರಿಯೇ. ತಂಬೂರಿಯನ್ನು ನುಡಿಸಲು ಬಾರದೇ ತನಗೆಲ್ಲಾ ಗೊತ್ತು ಎಂದು ನುಡಿಯದಿರು ಎಂಬುದು ನೇರವಾದ ಅರ್ಥ. ಸಾರವಿಲ್ಲದ ಪೊಳ್ಳು ಜೀವನ ಸಾಗಿಸುತ್ತ, ನನಗೆಲ್ಲಾ ಗೊತ್ತು ಎಂದು ಹೇಳದಿರು ಎಂಬುದೂ ಅರ್ಥ.