Explainer Video: ವಿಎಚ್ಪಿ ಯಾತ್ರೆ ಮೇಲಿನ ದಾಳಿಗೆ ಸಂಚು? ಗಲಭೆಗೆ ಇದೇ ಕಾರಣ?
1199 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಹರ್ಯಾಣದ ನೂಹ್ ಜಿಲ್ಲೆಯಲ್ಲಿ ನಿಜಕ್ಕೂ ಏನಾಗ್ತಿದೆ? ಮೇವತ್ ಮುಸ್ಲಿಮರು ಹಾಗೂ ರೋಹಿಂಗ್ಯಾ ಮುಸ್ಲಿಮರು ಗೋ ರಕ್ಷಕರ ವಿರುದ್ಧ ಸಮರ ಸಾರಿರೋದು ಏಕೆ? ಮುಸ್ಲಿಂ ಯುವಕರ ಹತ್ಯೆ ಬಳಿಕ ಕೋಮು ಗಲಭೆ ಶುರು ಆಗಿದ್ದು ಏಕೆ? ಇದೀಗ ಮಂದಿರ ಹಾಗೂ ಮಸೀದಿಗಳನ್ನೇ ಗುರಿಯಾಗಿಸಿ ನಿರಂತರ ದಾಳಿ ನಡೆಯುತ್ತಿರೋದು ಏಕೆ? ಈ ಗಲಭೆ ಹಿಂದೆ ಯಾರ ಕೈವಾಡ ಇದೆ? ಕೋಮು ಹಿಂಸಾಚಾರ ತಡೆಯೋಕೆ ಹರ್ಯಾಣ ಸರ್ಕಾರ ಏನು ಮಾಡ್ತಿದೆ?
ಮುಸ್ಲಿಮರೇ ಬಹುಸಂಖ್ಯಾತರಾಗಿರುವ ನೂಹ್ನಲ್ಲಿ ರೋಹಿಂಗ್ಯಾ ವಲಸಿಗರೂ ಇದ್ದಾರೆ. ಗೋವುಗಳ ಕಳ್ಳತನ, ಅಕ್ರಮ ಗೋ ಸಾಗಾಟ ಇಲ್ಲಿ ಅತ್ಯಧಿಕ. ಹೀಗಾಗಿ, ಈ ಭಾಗದಲ್ಲಿ ಗೋ ರಕ್ಷಕರ ದಾಳಿಗಳೂ ಹೆಚ್ಚು. ನೂಹ್ನಲ್ಲಿ ಗಲಭೆ ಶುರುವಾಗೋಕೆ ಮೂಲ ಕಾರಣ, ಮೋನು ಮುನೇಸರ್.. ಈತ ಸ್ವಯಂ ಘೋಷಿತ ಗೋ ರಕ್ಷಕ.. ಅಕ್ರಮವಾಗಿ ಗೋವುಗಳ ಸಾಗಾಟ ನಡೆಯುತ್ತಿದ್ದರೆ ಅದನ್ನು ಪತ್ತೆ ಹಚ್ಚಿ ಈತನಿಗೆ ಮಾಹಿತಿ ನೀಡುವ ತಂಡವೇ ನೂಹ್ನಲ್ಲಿ ಇದೆ. ತನ್ನ ತಂಡದಿಂದ ಅಕ್ರಮ ಗೋ ಸಾಗಾಟದ ಮಾಹಿತಿ ಸಿಕ್ಕಿದ್ದೇ ತಡ, ಮೋನು ಮುನೇಸರ್ ರಂಗ ಪ್ರವೇಶ ಮಾಡ್ತಾನೆ. ಮೊದಲಿಗೆ ಪೊಲೀಸರಿಗೆ ಮಾಹಿತಿ ನೀಡುವ ಆತ, ಅಕ್ರಮ ಗೋ ಸಾಗಾಟ ತಡೆಯುವಂತೆ ಕೇಳಿಕೊಳ್ಳುತ್ತಾನೆ. ಒಂದು ವೇಳೆ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ತಾನೇ ಅಖಾಡಕ್ಕೆ ಇಳಿಯುತ್ತಾನೆ. ಇದು ಈತನ ಕಾರ್ಯ ವೈಖರಿ. ಕಳೆದ ಫೆಬ್ರವರಿಯಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಇಬ್ಬರು ಮುಸ್ಲಿಂ ಯುವಕರನ್ನ ಹತ್ಯೆ ಮಾಡಿದ ಆರೋಪ ಮೋನು ಮುನೇಸರ್ ವಿರುದ್ಧ ಕೇಳಿ ಬಂದಿತ್ತು. ಈ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಮೋನು ಮುನೇಸರ್, ಸೋಷಿಯಲ್ ಮೀಡಿಯಾದಲ್ಲಿ ತನ್ನ ಬಾಲ ಬಿಚ್ಚಿದ್ದ!
ಅಕ್ರಮ ಗೋ ಸಾಗಣೆ ವಿರುದ್ಧ ಕಾರ್ಯಾಚರಣೆ ನಡೆಸುವ ವೇಳೆ ಮೋನು ಮುನೇಸರ್ ತಂಡವು ಆ ಘಟನೆಯ ವಿಡಿಯೋ ಮಾಡುತ್ತಿತ್ತು. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಯೂಟ್ಯೂಬ್ಗಳಲ್ಲಿ ಗೋ ರಕ್ಷಣೆಯ ವಿಡಿಯೋ ಹರಿಬಿಡುತ್ತಿದ್ದರು. ಮೋನು ಮುನೇಸರ್ನ ಯೂಟ್ಯೂಬ್ ಪೇಜ್ಗೆ 1 ಲಕ್ಷ ಸಬ್ಸ್ಕ್ರೈಬರ್ಸ್ ಇದ್ದಾರೆ. ಇನ್ನು ಫೇಸ್ಬುಕ್ ಪೇಜ್ಗೆ 83 ಸಾವಿರ ಹಿಂಬಾಲರು ಇದ್ದಾರೆ. ಇದೇ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಬಾಲ ಬಿಚ್ಚಿದ್ದ ಮೋನು ಮುನೇಸರ್, ವಿಶ್ವ ಹಿಂದೂ ಪರಿಷತ್ ಯಾತ್ರೆಯಲ್ಲಿ ನಾನು ಭಾಗಿಯಾಗ್ತೇನೆ ಅಂತಾ ಮಾಹಿತಿ ನೀಡಿದ್ದ! ಕೂಡಲೇ ಎಚ್ಚೆತ್ತ ಪೊಲೀಸರು ಆತ ಯಾತ್ರೆಯಲ್ಲಿ ಭಾಗಿ ಆಗದಂತೆ ತಡೆದಿದ್ದರು. ಆದರೆ, ಗಲಭೆ ತಡೆಯೋಕೆ ಮಾತ್ರ ಆಗಲೇ ಇಲ್ಲ! ಏಕೆಂದರೆ, ಗಲಭೆ ನಡೆಸೋದಕ್ಕಾಗಿಯೇ ದೊಡ್ಡ ಷಡ್ಯಂತ್ರವೊಂದು ಸಿದ್ಧವಾಗಿತ್ತು ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಮುಸ್ಲಿಮರೇ ಬಹುಸಂಖ್ಯಾತರಾಗಿರುವ ನೂಹ್ನಲ್ಲಿ ರೋಹಿಂಗ್ಯಾ ವಲಸಿಗರೂ ಇದ್ದಾರೆ. ಗೋವುಗಳ ಕಳ್ಳತನ, ಅಕ್ರಮ ಗೋ ಸಾಗಾಟ ಇಲ್ಲಿ ಅತ್ಯಧಿಕ. ಹೀಗಾಗಿ, ಈ ಭಾಗದಲ್ಲಿ ಗೋ ರಕ್ಷಕರ ದಾಳಿಗಳೂ ಹೆಚ್ಚು. ನೂಹ್ನಲ್ಲಿ ಗಲಭೆ ಶುರುವಾಗೋಕೆ ಮೂಲ ಕಾರಣ, ಮೋನು ಮುನೇಸರ್.. ಈತ ಸ್ವಯಂ ಘೋಷಿತ ಗೋ ರಕ್ಷಕ.. ಅಕ್ರಮವಾಗಿ ಗೋವುಗಳ ಸಾಗಾಟ ನಡೆಯುತ್ತಿದ್ದರೆ ಅದನ್ನು ಪತ್ತೆ ಹಚ್ಚಿ ಈತನಿಗೆ ಮಾಹಿತಿ ನೀಡುವ ತಂಡವೇ ನೂಹ್ನಲ್ಲಿ ಇದೆ. ತನ್ನ ತಂಡದಿಂದ ಅಕ್ರಮ ಗೋ ಸಾಗಾಟದ ಮಾಹಿತಿ ಸಿಕ್ಕಿದ್ದೇ ತಡ, ಮೋನು ಮುನೇಸರ್ ರಂಗ ಪ್ರವೇಶ ಮಾಡ್ತಾನೆ. ಮೊದಲಿಗೆ ಪೊಲೀಸರಿಗೆ ಮಾಹಿತಿ ನೀಡುವ ಆತ, ಅಕ್ರಮ ಗೋ ಸಾಗಾಟ ತಡೆಯುವಂತೆ ಕೇಳಿಕೊಳ್ಳುತ್ತಾನೆ. ಒಂದು ವೇಳೆ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ತಾನೇ ಅಖಾಡಕ್ಕೆ ಇಳಿಯುತ್ತಾನೆ. ಇದು ಈತನ ಕಾರ್ಯ ವೈಖರಿ. ಕಳೆದ ಫೆಬ್ರವರಿಯಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಇಬ್ಬರು ಮುಸ್ಲಿಂ ಯುವಕರನ್ನ ಹತ್ಯೆ ಮಾಡಿದ ಆರೋಪ ಮೋನು ಮುನೇಸರ್ ವಿರುದ್ಧ ಕೇಳಿ ಬಂದಿತ್ತು. ಈ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಮೋನು ಮುನೇಸರ್, ಸೋಷಿಯಲ್ ಮೀಡಿಯಾದಲ್ಲಿ ತನ್ನ ಬಾಲ ಬಿಚ್ಚಿದ್ದ!
ಅಕ್ರಮ ಗೋ ಸಾಗಣೆ ವಿರುದ್ಧ ಕಾರ್ಯಾಚರಣೆ ನಡೆಸುವ ವೇಳೆ ಮೋನು ಮುನೇಸರ್ ತಂಡವು ಆ ಘಟನೆಯ ವಿಡಿಯೋ ಮಾಡುತ್ತಿತ್ತು. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಯೂಟ್ಯೂಬ್ಗಳಲ್ಲಿ ಗೋ ರಕ್ಷಣೆಯ ವಿಡಿಯೋ ಹರಿಬಿಡುತ್ತಿದ್ದರು. ಮೋನು ಮುನೇಸರ್ನ ಯೂಟ್ಯೂಬ್ ಪೇಜ್ಗೆ 1 ಲಕ್ಷ ಸಬ್ಸ್ಕ್ರೈಬರ್ಸ್ ಇದ್ದಾರೆ. ಇನ್ನು ಫೇಸ್ಬುಕ್ ಪೇಜ್ಗೆ 83 ಸಾವಿರ ಹಿಂಬಾಲರು ಇದ್ದಾರೆ. ಇದೇ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಬಾಲ ಬಿಚ್ಚಿದ್ದ ಮೋನು ಮುನೇಸರ್, ವಿಶ್ವ ಹಿಂದೂ ಪರಿಷತ್ ಯಾತ್ರೆಯಲ್ಲಿ ನಾನು ಭಾಗಿಯಾಗ್ತೇನೆ ಅಂತಾ ಮಾಹಿತಿ ನೀಡಿದ್ದ! ಕೂಡಲೇ ಎಚ್ಚೆತ್ತ ಪೊಲೀಸರು ಆತ ಯಾತ್ರೆಯಲ್ಲಿ ಭಾಗಿ ಆಗದಂತೆ ತಡೆದಿದ್ದರು. ಆದರೆ, ಗಲಭೆ ತಡೆಯೋಕೆ ಮಾತ್ರ ಆಗಲೇ ಇಲ್ಲ! ಏಕೆಂದರೆ, ಗಲಭೆ ನಡೆಸೋದಕ್ಕಾಗಿಯೇ ದೊಡ್ಡ ಷಡ್ಯಂತ್ರವೊಂದು ಸಿದ್ಧವಾಗಿತ್ತು ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.