ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಭಾರತೀಯರ ಕೊಡುಗೆ, ಮಾಜಿ ಉಪಾಧ್ಯಕ್ಷ ತೆರೆದಿಟ್ಟ ವಾಸ್ತವದ ಸಂಗತಿ ಏನು?
1319 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಭಾರತದ ಕೇಂದ್ರಾಡಳಿ ಪ್ರದೇಶವಾಗಿರುವ ಲಕ್ಷದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ಅಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಅದರೊಂದಿಗೆ ನೀಲಿ ಸಮುದ್ರದಲ್ಲಿ ಸ್ನಾರ್ಕೆಲಿಂಗ್ ಮಾಡಿದ್ದರು. ಪ್ರಶಾಂತ ತೀರದಲ್ಲಿ ಕುಳಿತು ಮುಂಜಾನೆಯ ಸಮಯವನ್ನು ಕಳೆದಿದ್ದರು. ಬೇರೆ ದ್ವೀಪಗಳನ್ನು ಹುಡುಕಿಕೊಂಡು ಹೋಗುವ ನಮ್ಮ ದೇಶದ ಪ್ರವಾಸಿಗರು ಮೊದಲು ಲಕ್ಷದ್ವೀಪಕ್ಕೆ ಭೇಟಿ ನೀಡಬೇಕು ಎಂದು ಆಗ್ರಹಿಸಿದ್ದರು. ಅದರ ಬೆನ್ನಲ್ಲೇ 'ಮಾಲ್ಡೀವ್ಸ್' ಪ್ರವಾಸೋದ್ಯಮದ ಚರ್ಚೆ ಶುರುವಾಗಿತ್ತು. ಮಾಲ್ಡೀವ್ಸ್ನ ರಾಜಕಾರಣಿಗಳು ಪ್ರಧಾನಿ ಮೋದಿ ಹಾಗೂ ಭಾರತದ ಬಗ್ಗೆ ಹಗುರವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಇದು ದೇಶ ಸ್ಟಾರ್ಗಳನ್ನೂ ಕೆರಳಿಸಿದೆ. ಕ್ರಿಕೆಟಿಗರು, ನಟ-ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್ಗೆ ಪ್ರವಾಸ ಕೈಗೊಂಡು ಆ ಜಾಗವನ್ನು ಪ್ರಚಾರ ಮಾಡಿದ್ದಾರೆ. ಅವರಿಂದಾಗಿಯೇ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿರುವ ಮಾಲ್ಡೀವ್ಸ್ ಈಗ ತೋರಿರುವ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಮಾಲ್ಡೀವ್ಸ್ನ ಹೈಕಮಿಷನರ್ ಇಬ್ರಾಹಿಂ ಶಾಹೀಬ್ ಅವರನ್ನು ಹೊಸದಿಲ್ಲಿಯಲ್ಲಿರುವ ಭಾರತದ ವಿದೇಶಾಂಗ ಸಚಿವಾಲಯವು ಕರೆಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಆಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಮಾಲ್ಡೀವ್ಸ್ ನಾಯಕರ ಹೇಳಿಕೆಗಳಿಗೆ ಅಲ್ಲಿ ಪ್ರವಾಸೋದ್ಯಮ ಖಾತೆ ಮಾಜಿ ಸಚಿವ ಹಾಗೂ ಮಾಜಿ ಉಪಾಧ್ಯಕ್ಷ ಅಹಮದ್ ಅದೀಬ್ ಅವರು ವಾಸ್ತವದ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ''ಕೋವಿಡ್ ನಂತರದ ದಿನಗಳಲ್ಲಿ ಮಾಲ್ಡೀವ್ಸ್ನಲ್ಲಿ ಪ್ರವಾಸೋದ್ಯಮವು ಪುನಶ್ಚೇತನಗೊಳ್ಳಲು ಬಾಲಿವುಡ್ನ ಸ್ಟಾರ್ಗಳು ಸಹಾಯ ಮಾಡಿದೆ. ಪ್ರಧಾನಿ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿರುವುದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ನಾವು ಸೌಹಾರ್ದತೆ, ಶಾಂತೆ, ಸ್ನೇಹ ಹಾಗೂ ಆತಿಥ್ಯದ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಿದ್ದೇವೆ'' ಎಂದಿದ್ದಾರೆ.
ಈಗಾಗಲೇ 'ಬಾಯ್ಕಾಟ್ ಮಾಲ್ಡೀವ್ಸ್' ಅಭಿಯಾನಕ್ಕೆ ಬಾಲಿವುಡ್ ನಟರು, ಕ್ರಿಕೆಟಿಗರು ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಕಂಗನಾ ರಣಾವತ್, ಸುರೇಶ್ ರೈನಾ ಸೇರಿದಂತೆ ಹಲವು ಸ್ಟಾರ್ಗಳು ಭಾರತ ಮತ್ತು ಪ್ರಧಾನಿ ಮೋದಿ ಪರವಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ದೇಶದ ದ್ವೀಪ ಪ್ರದೇಶದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಇಂಥ ದ್ವೇಷದ ಮಾತನಾಡುವ ಜನರಿರುವ ಊರಿಗೆ ಹೋಗುವುದೇ ಬೇಡ. ನಮ್ಮ ಬೀಚ್ಗಳನ್ನೇ ಪ್ರವಾಸೋದ್ಯಮವಾಗಿ ಬೆಳಸೋಣ. ಲಕ್ಷದ್ವೀಪ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳೋಣ,’’ ಎಂದು ನಟ, ನಟಿಯರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಲ್ಡೀವ್ಸ್ನ ಹೈಕಮಿಷನರ್ ಇಬ್ರಾಹಿಂ ಶಾಹೀಬ್ ಅವರನ್ನು ಹೊಸದಿಲ್ಲಿಯಲ್ಲಿರುವ ಭಾರತದ ವಿದೇಶಾಂಗ ಸಚಿವಾಲಯವು ಕರೆಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಆಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಮಾಲ್ಡೀವ್ಸ್ ನಾಯಕರ ಹೇಳಿಕೆಗಳಿಗೆ ಅಲ್ಲಿ ಪ್ರವಾಸೋದ್ಯಮ ಖಾತೆ ಮಾಜಿ ಸಚಿವ ಹಾಗೂ ಮಾಜಿ ಉಪಾಧ್ಯಕ್ಷ ಅಹಮದ್ ಅದೀಬ್ ಅವರು ವಾಸ್ತವದ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ''ಕೋವಿಡ್ ನಂತರದ ದಿನಗಳಲ್ಲಿ ಮಾಲ್ಡೀವ್ಸ್ನಲ್ಲಿ ಪ್ರವಾಸೋದ್ಯಮವು ಪುನಶ್ಚೇತನಗೊಳ್ಳಲು ಬಾಲಿವುಡ್ನ ಸ್ಟಾರ್ಗಳು ಸಹಾಯ ಮಾಡಿದೆ. ಪ್ರಧಾನಿ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿರುವುದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ನಾವು ಸೌಹಾರ್ದತೆ, ಶಾಂತೆ, ಸ್ನೇಹ ಹಾಗೂ ಆತಿಥ್ಯದ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಿದ್ದೇವೆ'' ಎಂದಿದ್ದಾರೆ.
ಈಗಾಗಲೇ 'ಬಾಯ್ಕಾಟ್ ಮಾಲ್ಡೀವ್ಸ್' ಅಭಿಯಾನಕ್ಕೆ ಬಾಲಿವುಡ್ ನಟರು, ಕ್ರಿಕೆಟಿಗರು ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಕಂಗನಾ ರಣಾವತ್, ಸುರೇಶ್ ರೈನಾ ಸೇರಿದಂತೆ ಹಲವು ಸ್ಟಾರ್ಗಳು ಭಾರತ ಮತ್ತು ಪ್ರಧಾನಿ ಮೋದಿ ಪರವಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ದೇಶದ ದ್ವೀಪ ಪ್ರದೇಶದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಇಂಥ ದ್ವೇಷದ ಮಾತನಾಡುವ ಜನರಿರುವ ಊರಿಗೆ ಹೋಗುವುದೇ ಬೇಡ. ನಮ್ಮ ಬೀಚ್ಗಳನ್ನೇ ಪ್ರವಾಸೋದ್ಯಮವಾಗಿ ಬೆಳಸೋಣ. ಲಕ್ಷದ್ವೀಪ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳೋಣ,’’ ಎಂದು ನಟ, ನಟಿಯರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.