3 ಕೋಟಿ 'ಲಖ್ಪತಿ ದೀದಿಯರು', ಬಡವರಿಗೆ 2 ಕೋಟಿ ಮನೆಗಳು: ಮಧ್ಯಂತರ ಬಜೆಟ್ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
2024ರ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿದ ಭಾಷಣವು ಈವರೆಗಿನ ಅತಿ ಚಿಕ್ಕ ಬಜೆಟ್ ಭಾಷಣವಾಗಿದೆ. ಒಂದು ತಾಸಿಗೂ ಮುನ್ನವೇ ಭಾಷಣವು ಮುಕ್ತಾಯಗೊಂಡಿತು. ಅವರ ಭಾಷಣವು 58 ನಿಮಿಷಗಳಲ್ಲಿ ಕೊನೆಗೊಂಡಿತು. ಈ ಬಾರಿಯ ಮಧ್ಯಂತರ ಬಜೆಟ್ಗೆ ಸಂಬಂಧಿಸಿದಂತೆ ಆಡಳಿತಾರೂಢ ಹಾಗೂ ವಿಪಕ್ಷ ನಾಯಕರ ಪ್ರತಿಕ್ರಿಯೆಗಳು ಇಲ್ಲಿವೆ.
'ಲಖ್ಪತಿ ದೀದಿ' ಯೋಜನೆಯ ಅಡಿಯಲ್ಲಿ ಈ ಹಿಂದೆ 2 ಕೋಟಿ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಇದನ್ನು 3 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 2024-25ನೇ ಸಾಲಿನ ಮಧ್ಯಂತರ ಬಜೆಟ್ನಲ್ಲಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೂ ಆಯುಷ್ಮಾನ್ ಭಾರತ್ ಯೋಜನೆ ಅನ್ವಯವಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 6ನೇ ಬಜೆಟ್ ಇದು. ನೂತನ ಸಂಸತ್ನಲ್ಲಿ ಮೊದಲ ಬಾರಿಗೆ ಮಂಡನೆಯಾದ ಕೇಂದ್ರ ಬಜೆಟ್ ಇದಾಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿ, ''ಬಜೆಟ್ ಭಾಷಣಗಳ ಪೈಕಿ ಇದು ಚುಟುಕು ಭಾಷಣವಾಗಿತ್ತು. ಇದರಿಂದ ಹೆಚ್ಚಿನದೇನೂ ಹೊರ ಬರಲಿಲ್ಲ. ವಿದೇಶಿ ಬಂಡವಾಳ ಹೂಡಿಕೆಯು ಇಳಿಮುಖವಾಗಿರುವುದನ್ನು ಪ್ರಸ್ತಾಪಿಸಿದೆಯೇ ಅದರ ಬಗ್ಗೆ ಮಾತನಾಡಿದರು. ಇದೊಂದು ನಿರಾಶಾದಾಯಕ ಬಜೆಟ್'' ಎಂದರು. ಶಿರೋಮಣಿ ಅಕಾಲಿ ದಳ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಮಾತನಾಡಿ, ''ಇದೊಂದು ಖಾಲಿ ಬಜೆಟ್. ಯುವಜನತೆ, ಮಹಿಳೆ ಹಾಗೂ ರೈತರಿಗೆ ಇದರಲ್ಲಿ ಏನೊಂದೂ ಇಲ್ಲ. ಜುಲೈನಲ್ಲಿ ಪೂರ್ಣ ಬಜೆಟ್ ಮಂಡಿಸುವುದಾಗಿ ಹೇಳುವಾಗ ಅಹಂಕಾರ ಕಾಣುತ್ತಿತ್ತು'' ಎಂದರು.
'ಲಖ್ಪತಿ ದೀದಿ' ಯೋಜನೆಯ ಅಡಿಯಲ್ಲಿ ಈ ಹಿಂದೆ 2 ಕೋಟಿ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಇದನ್ನು 3 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 2024-25ನೇ ಸಾಲಿನ ಮಧ್ಯಂತರ ಬಜೆಟ್ನಲ್ಲಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೂ ಆಯುಷ್ಮಾನ್ ಭಾರತ್ ಯೋಜನೆ ಅನ್ವಯವಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 6ನೇ ಬಜೆಟ್ ಇದು. ನೂತನ ಸಂಸತ್ನಲ್ಲಿ ಮೊದಲ ಬಾರಿಗೆ ಮಂಡನೆಯಾದ ಕೇಂದ್ರ ಬಜೆಟ್ ಇದಾಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿ, ''ಬಜೆಟ್ ಭಾಷಣಗಳ ಪೈಕಿ ಇದು ಚುಟುಕು ಭಾಷಣವಾಗಿತ್ತು. ಇದರಿಂದ ಹೆಚ್ಚಿನದೇನೂ ಹೊರ ಬರಲಿಲ್ಲ. ವಿದೇಶಿ ಬಂಡವಾಳ ಹೂಡಿಕೆಯು ಇಳಿಮುಖವಾಗಿರುವುದನ್ನು ಪ್ರಸ್ತಾಪಿಸಿದೆಯೇ ಅದರ ಬಗ್ಗೆ ಮಾತನಾಡಿದರು. ಇದೊಂದು ನಿರಾಶಾದಾಯಕ ಬಜೆಟ್'' ಎಂದರು. ಶಿರೋಮಣಿ ಅಕಾಲಿ ದಳ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಮಾತನಾಡಿ, ''ಇದೊಂದು ಖಾಲಿ ಬಜೆಟ್. ಯುವಜನತೆ, ಮಹಿಳೆ ಹಾಗೂ ರೈತರಿಗೆ ಇದರಲ್ಲಿ ಏನೊಂದೂ ಇಲ್ಲ. ಜುಲೈನಲ್ಲಿ ಪೂರ್ಣ ಬಜೆಟ್ ಮಂಡಿಸುವುದಾಗಿ ಹೇಳುವಾಗ ಅಹಂಕಾರ ಕಾಣುತ್ತಿತ್ತು'' ಎಂದರು.