ವಿಧಾನಸಭೆಯೊಳಗೆ ಕೊಬ್ಬರಿ ತಂದು ಸ್ಪೀಕರ್ಗೆ ಕಳಿಸಿದ ಎಚ್ಡಿ ರೇವಣ್ಣ
1101 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ''ಏ ರೇವಣ್ಣ ನಿಂಬೆ ಹಣ್ಣು ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ ಹಿಡಿದುಕೊಂಡಿದ್ಯಾ?'' ಎಂದ ಸಿಎಂ ಸಿದ್ದರಾಮಯ್ಯ ಮಾತಿಗೆ ಸದನ ನಗುಕಡಲಿನಲ್ಲಿ ತೇಲಿತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಲು ಸಿಎಂ ಸಿದ್ದರಾಮಯ್ಯ ಮುಂದಾದಾಗ ಎದ್ದು ನಿಂತಾಗ ಕೊಬ್ಬರಿ ಬೆಳೆಗೆ ಬೆಲೆ ಏರಿಕೆ ಮಾಡಬೇಕು ಎಂಬ ವಿಚಾರವಾಗಿ ಪ್ರಸ್ತಾಪ ಮಾಡಿದ ರೇವಣ್ಣ, ಕೊಬ್ಬರಿ ಬೆಲೆ ಏರಿಕೆ ಮಾಡುವುದಾಗಿ ಡಿಸಿಎಂ ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಮಾಡಬೇಕು ಎಂದರು. 15,000 ರೂಪಾಯಿ ಕೊಡುತ್ತೇನೆ ಎಂದು ಡಿಸಿಎಂ ಭರವಸೆ ಕೊಟ್ಟಿದ್ದರು. ಅದರಂತೆ ದರ ಏರಿಕೆ ಮಾಡಬೇಕು ಎಂದು ರೇವಣ್ಣ ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕನಿಷ್ಠ ರೇವಣ್ಣಗಾಗಿ ಕೊಬ್ಬರಿ ದರ ಏರಿಕೆ ಮಾಡಬೇಕು ಎಂದು ಹಾಸ್ಯ ಭರಿತವಾಗಿ ಹೇಳಿದರು. ಈ ವೇಳೆ ಎದ್ದು ನಿಂದ ಆರ್ ಅಶೋಕ್, ರೇವಣ್ಣ ನಿಮ್ಮನ್ನು ಹೊಗಳೋದಕ್ಕೆ ಇರುವುದು ಎಂದು ಕಿಚಾಯಿಸಿದರು. ರೇವಣ್ಣ ಈವರೆಗೆ ನಿಮ್ಮ ವಿರುದ್ಧ ಒಂದು ಮಾತು ಆಡಿಲ್ಲ. ಅದಕ್ಕೆ ನೀವು ಸ್ವಲ್ಪ ಅವರಿಗೆ ಬೆಂಬಲ ಮಾಡಿ ಎಂದರು.
ರೇವಣ್ಣ ಪ್ರತಿಕ್ರಿಯಿಸಿ, ನಾನು ಯಾವತ್ತೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿಲ್ಲ. ಯಾವುದೇ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, ನಾನು ಸತ್ಯ ಹೇಳಿದ್ದೇನೆ. ಕಳೆದ 15 ವರ್ಷದಿಂದ ನೋಡುತ್ತಿದ್ದೇನೆ. ಚುನಾವಣೆಯಲ್ಲೂ ಅಷ್ಟೇ, ಇಂಚಾರ್ಜ್ ಇದ್ದರೂ ಪ್ರಚಾರಕ್ಕೆ ಬಂದಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಬಸವರಾಜ ಬೊಮ್ಮಾಯಿ, ಈ ಬಾರಿ ಸಿದ್ದರಾಮಯ್ಯ ಹೊಳೆ ನರಸೀಪುರ ಕಡೆ ಹೋಗಿಲ್ಲ ಎಂದರು. ಈ ವೇಳೆ ರೇವಣ್ಣ ಬೆಂಬಲಕ್ಕೆ ಬಂದ ಜಿಟಿ ದೇವೇಗೌಡ ರೇವಣ್ಣ ಮತ್ತು ಸಿದ್ದರಾಮಯ್ಯ ಅವರದ್ದು 35 ವರ್ಷಗಳ ಸ್ನೇಹ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕನಿಷ್ಠ ರೇವಣ್ಣಗಾಗಿ ಕೊಬ್ಬರಿ ದರ ಏರಿಕೆ ಮಾಡಬೇಕು ಎಂದು ಹಾಸ್ಯ ಭರಿತವಾಗಿ ಹೇಳಿದರು. ಈ ವೇಳೆ ಎದ್ದು ನಿಂದ ಆರ್ ಅಶೋಕ್, ರೇವಣ್ಣ ನಿಮ್ಮನ್ನು ಹೊಗಳೋದಕ್ಕೆ ಇರುವುದು ಎಂದು ಕಿಚಾಯಿಸಿದರು. ರೇವಣ್ಣ ಈವರೆಗೆ ನಿಮ್ಮ ವಿರುದ್ಧ ಒಂದು ಮಾತು ಆಡಿಲ್ಲ. ಅದಕ್ಕೆ ನೀವು ಸ್ವಲ್ಪ ಅವರಿಗೆ ಬೆಂಬಲ ಮಾಡಿ ಎಂದರು.
ರೇವಣ್ಣ ಪ್ರತಿಕ್ರಿಯಿಸಿ, ನಾನು ಯಾವತ್ತೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿಲ್ಲ. ಯಾವುದೇ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, ನಾನು ಸತ್ಯ ಹೇಳಿದ್ದೇನೆ. ಕಳೆದ 15 ವರ್ಷದಿಂದ ನೋಡುತ್ತಿದ್ದೇನೆ. ಚುನಾವಣೆಯಲ್ಲೂ ಅಷ್ಟೇ, ಇಂಚಾರ್ಜ್ ಇದ್ದರೂ ಪ್ರಚಾರಕ್ಕೆ ಬಂದಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಬಸವರಾಜ ಬೊಮ್ಮಾಯಿ, ಈ ಬಾರಿ ಸಿದ್ದರಾಮಯ್ಯ ಹೊಳೆ ನರಸೀಪುರ ಕಡೆ ಹೋಗಿಲ್ಲ ಎಂದರು. ಈ ವೇಳೆ ರೇವಣ್ಣ ಬೆಂಬಲಕ್ಕೆ ಬಂದ ಜಿಟಿ ದೇವೇಗೌಡ ರೇವಣ್ಣ ಮತ್ತು ಸಿದ್ದರಾಮಯ್ಯ ಅವರದ್ದು 35 ವರ್ಷಗಳ ಸ್ನೇಹ ಎಂದರು.