'ಈತನೀಗ ವಾಸುದೇವನು ಲೋಕದೊಡೆಯ': ಕನಕದಾಸರ ಕೀರ್ತನೆಗಳ ಸಾರ ಇಲ್ಲಿದೆ
1172 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಕನಕದಾಸರ " ಈತನೀಗ ವಾಸುದೇವನು ಲೋಕದೊಡೆಯ " ಎಂಬ ಅದ್ಭುತವಾದ ಕೀರ್ತನೆಯನ್ನು ಅರ್ಥೈಸಿಕೊಳ್ಳುವ ಯತ್ನ ಇಲ್ಲಿದೆ. ಈ ಕೀರ್ತನೆಯ ರಚನೆಯ ಹಿಂದೆ ಹಲವಾರು ಕಥೆಗಳಿವೆ. ಅದೇನೇ ಇರಲಿ, ಎಲ್ಲ ಕಥೆಗಳನ್ನೂ ಸೂಕ್ಷ್ಮವಾಗಿ ನೋಡಿದಾಗ ತಲೆಗೆ ಬಂದ ವಿಚಾರ ಎಂದರೆ, ಕನಕರು ಈ ಕೀರ್ತನೆಯನ್ನು ಆರಾಮವಾಗಿ ಕೂತು ರಚಿಸಿದ್ದಲ್ಲ. ಯಾವುದೋ ಒಂದು ಪರೀಕ್ಷೆಗೆ ಸಿಲುಕಿ, ಸಮಸ್ಯೆಯನ್ನು ದಾಸರತ್ತ ಒಡ್ಡಿದಾಗ ಮೂಡಿ ಬಂದ ಕೀರ್ತನೆಯಿದು. ಮನಕ್ಕೆ ಒತ್ತಡ ಹೇರಿದಾಗ ಆಗುವ ಅರ್ಧ ಘಂಟೆಯ ಕೆಲಸವೇ ಹಲವಾರು ಘಂಟೆಗಳು ಹಿಡಿಯುವಾಗ, ಮುನ್ಸೂಚನೆಯೂ ಇಲ್ಲದೇ ಪರೀಕ್ಷೆಗೆ ಒಡ್ಡಿದಾಗ ಇಂಥಾ ಕ್ಲಿಷ್ಟ ಕೀರ್ತನೆಯು ರಚನೆಯಾಗಿದೆ ಎಂದರೆ, ದಾಸರು ದೈವಾಂಶರೇ ಸರಿ. ಇಂಥಾ ಕಬ್ಬಿಣದ ಕಡಲೆಯನ್ನು ಕೊಂಚ ಜೀರ್ಣಿಸಿಕೊಳ್ಳುವ ದಿಶೆಯತ್ತ ಸಾಗುವ.
ವಿಷಯವನ್ನು ನೇರವಾಗಿ ಹೇಳದೇ, ಒಗಟಿನ ರೂಪದಲ್ಲೇ ಹೇಳುತ್ತಾ, ಕೇವಲ ಕೀರ್ತನೆಯನ್ನು ಆಲಿಸುವ ಪರಿಯನ್ನು ಬೆಳೆಸದೇ, ಬುದ್ದಿಗೂ ಕೆಲಸ ಕೊಡುವ ದಾಸರು ಈ ಕನಕರು. ಒಂದೊಂದೂ ಪದವನ್ನು ಬಿಡಿಸುತ್ತಾ ಸಾಗಿದಂತೆ ಉತ್ತರವೂ ಅರ್ಥವೂ ಒಟ್ಟಾಗಿ ಕಾಣುತ್ತದೆ. ಮಧ್ವರ ಗೋಪಿಚಂದನದಿಂದ ಹೊರಬಂದ ಆ ಕೃಷ್ಣನಂತೆ.
ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ
ವಾಸುದೇವನ ಸುತನಾದ ಇವನು ಸಕಲ ಲೋಕದ ಒಡೆಯನು. ನಿಷ್ಠೆಯಿಂದ ಸ್ತುತಿಪ ದಾಸರಿಗೆ ಒಲಿಯುವ ಇವನು ತನ್ನ ಪ್ರಿಯ ಸಖನಿಗೆ ಸಾರಥಿಯಾಗಿ ಅವನ ರಥವನ್ನು ನಡೆಸಿದವನು. ಸಾರಥಿ ಎಂದರೆ ಕೇವಲ ಒಂದು ರಥವನ್ನು ಓಡಿಸುವವನಾಗದೇ, ಭಗವದ್ಗೀತೆಯನ್ನು ಬೋಧಿಸಿ ಧರ್ಮ ರಕ್ಷಣೆಗೆ ಅರ್ಜುನನ ಮನಸ್ಸನ್ನು ತಿರುಗಿಸಿದ ನಡೆಸಿದಾತ. ಅಧರ್ಮವನ್ನು ತುಳಿದು ಧರ್ಮವನ್ನು ಸ್ಥಾಪಿಸುವ ದಿಶೆಯಲ್ಲಿ ರಥವನ್ನು ನಡೆಸಿದಾತ.
ವಿಷಯವನ್ನು ನೇರವಾಗಿ ಹೇಳದೇ, ಒಗಟಿನ ರೂಪದಲ್ಲೇ ಹೇಳುತ್ತಾ, ಕೇವಲ ಕೀರ್ತನೆಯನ್ನು ಆಲಿಸುವ ಪರಿಯನ್ನು ಬೆಳೆಸದೇ, ಬುದ್ದಿಗೂ ಕೆಲಸ ಕೊಡುವ ದಾಸರು ಈ ಕನಕರು. ಒಂದೊಂದೂ ಪದವನ್ನು ಬಿಡಿಸುತ್ತಾ ಸಾಗಿದಂತೆ ಉತ್ತರವೂ ಅರ್ಥವೂ ಒಟ್ಟಾಗಿ ಕಾಣುತ್ತದೆ. ಮಧ್ವರ ಗೋಪಿಚಂದನದಿಂದ ಹೊರಬಂದ ಆ ಕೃಷ್ಣನಂತೆ.
ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ
ವಾಸುದೇವನ ಸುತನಾದ ಇವನು ಸಕಲ ಲೋಕದ ಒಡೆಯನು. ನಿಷ್ಠೆಯಿಂದ ಸ್ತುತಿಪ ದಾಸರಿಗೆ ಒಲಿಯುವ ಇವನು ತನ್ನ ಪ್ರಿಯ ಸಖನಿಗೆ ಸಾರಥಿಯಾಗಿ ಅವನ ರಥವನ್ನು ನಡೆಸಿದವನು. ಸಾರಥಿ ಎಂದರೆ ಕೇವಲ ಒಂದು ರಥವನ್ನು ಓಡಿಸುವವನಾಗದೇ, ಭಗವದ್ಗೀತೆಯನ್ನು ಬೋಧಿಸಿ ಧರ್ಮ ರಕ್ಷಣೆಗೆ ಅರ್ಜುನನ ಮನಸ್ಸನ್ನು ತಿರುಗಿಸಿದ ನಡೆಸಿದಾತ. ಅಧರ್ಮವನ್ನು ತುಳಿದು ಧರ್ಮವನ್ನು ಸ್ಥಾಪಿಸುವ ದಿಶೆಯಲ್ಲಿ ರಥವನ್ನು ನಡೆಸಿದಾತ.