ತಿರುವನಂತಪುರದ ಸೆಂಟ್ರಲ್ ರೈಲು ನಿಲ್ದಾಣದಿಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
1191 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿತಿರುವನಂತಪುರಂ: ಕೇರಳದ ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು. ಪ್ರಧಾನಿ ಮೋದಿ ಅವರು ತಿರುವನಂತಪುರದ ಸೆಂಟ್ರಲ್ ರೈಲು ನಿಲ್ದಾಣದಿಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಭಾರತ್ ಎಕ್ಸ್ಪ್ರೆಸ್ನ ಟಿಕೆಟ್ಗಾಗಿ ಭಾನುವಾರ ಬೆಳಗ್ಗೆ 8ರಿಂದ ಬುಕ್ಕಿಂಗ್ ಆರಂಭವಾಗಿದೆ.
ಹಸಿರು ಬಣ್ಣದ ಬಾವುಟ ತೋರಿಸುವ ಮೂಲಕ ಪ್ರಧಾನಿ ಮೋದಿ ರೈಲಿಗೆ ಚಾಲನೆ ಕೊಟ್ಟರು. ಏ. 26ರಿಂದ ರೈಲು ಸಂಚಾರ ನಡೆಸಲಿದೆ. ಬೆಳಗ್ಗೆ 5.20ಕ್ಕೆ ತಿರುವನಂತಪುರದಿಂದ ಹೊರಟು ಮಧ್ಯಾಹ್ನ 1.25ಕ್ಕೆ ಕಾಸರಗೋಡು ತಲುಪಲಿದೆ. ಮತ್ತೆ ಕಾಸರಗೋಡಿನಿಂದ ಮಧ್ಯಾಹ್ನ 2.30 ಗಂಟೆಗೆ ಹಿಂತಿರುಗಿ ರಾತ್ರಿ 10.35 ಕ್ಕೆ ತಿರುವನಂತಪುರ ತಲುಪುಪಲಿದೆ. ತಿರುವನಂತಪುರ ಕಾಸರಗೋಡು ಚೇರ್ಕಾರ್ ದರ 1590 ರೂ., ಎಕ್ಸಿಕ್ಯೂಟಿವ್ ಕೋಚ್ 2880 ರೂ. ಆಗಿದೆ. ತಿರುವನಂತಪುರ ಸೆಂಟ್ರಲ್-ಕಾಸರಗೋಡು ವಂದೇ ಭಾರತ್ ಎಕ್ಸ್ಪ್ರೆಸ್ನ ಉದ್ಘಾಟನೆಯ ವಿಶೇಷತೆಯಾಗಿ 14 ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಹಸಿರು ಬಣ್ಣದ ಬಾವುಟ ತೋರಿಸುವ ಮೂಲಕ ಪ್ರಧಾನಿ ಮೋದಿ ರೈಲಿಗೆ ಚಾಲನೆ ಕೊಟ್ಟರು. ಏ. 26ರಿಂದ ರೈಲು ಸಂಚಾರ ನಡೆಸಲಿದೆ. ಬೆಳಗ್ಗೆ 5.20ಕ್ಕೆ ತಿರುವನಂತಪುರದಿಂದ ಹೊರಟು ಮಧ್ಯಾಹ್ನ 1.25ಕ್ಕೆ ಕಾಸರಗೋಡು ತಲುಪಲಿದೆ. ಮತ್ತೆ ಕಾಸರಗೋಡಿನಿಂದ ಮಧ್ಯಾಹ್ನ 2.30 ಗಂಟೆಗೆ ಹಿಂತಿರುಗಿ ರಾತ್ರಿ 10.35 ಕ್ಕೆ ತಿರುವನಂತಪುರ ತಲುಪುಪಲಿದೆ. ತಿರುವನಂತಪುರ ಕಾಸರಗೋಡು ಚೇರ್ಕಾರ್ ದರ 1590 ರೂ., ಎಕ್ಸಿಕ್ಯೂಟಿವ್ ಕೋಚ್ 2880 ರೂ. ಆಗಿದೆ. ತಿರುವನಂತಪುರ ಸೆಂಟ್ರಲ್-ಕಾಸರಗೋಡು ವಂದೇ ಭಾರತ್ ಎಕ್ಸ್ಪ್ರೆಸ್ನ ಉದ್ಘಾಟನೆಯ ವಿಶೇಷತೆಯಾಗಿ 14 ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.