ಈಶ್ವರಪ್ಪ ಪುತ್ರನಿಗೆ ಹಾವೇರಿ ಟಿಕೆಟ್ ಮಿಸ್: ಬಿಜೆಪಿ ಹೈಕಮಾಂಡ್ ಕೊಟ್ಟ ಆಫರ್ ಏನು ಗೊತ್ತಾ?
1767 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಹಾವೇರಿ ಲೋಕಸಭೆ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಪುತ್ರ ಕಾಂತೇಶ್ಗೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಕಾಂತೇಶ್ಗೆ ಟಿಕೆಟ್ ನೀಡದೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೈಕಮಾಂಡ್ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.. ಸ್ವತಃ ಬಿಎಸ್ವೈ ಅವರೇ ನನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇನೆ.. ಹೈಕಮಾಂಡ್ ವರಿಷ್ಠರ ಜತೆ ಮಾತನಾಡಿ ನಿನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದರು, ಆದ್ರೆ ಇದೀಗ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಿಸಿ ಮಾತು ತಪ್ಪಿದ್ದಾರೆ ಎಂದು ಈಶ್ವರಪ್ಪ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ..
ಹೇಳಿ ಕೇಳಿ ಈಶ್ವರಪ್ಪ ಹಿರಿತಲೆ, ಪಕ್ಷವನ್ನು ಸಂಘಟನೆ ಮಾಡಿ ಕಟ್ಟಿದ್ದಾರೆ, ರಾಜಕೀಯ ನಿವೃತ್ತಿ ಪಡೆದ ಈಶ್ವರಪ್ಪ ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡಿದ್ದಾರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಟಿಕೆಟ್ ಕೊಡಿಸಲು ಸಾಕಷ್ಟು ಪ್ರಯತ್ನ ಮಾಡಿದರು, ಅದು ಕೂಡ ಆಗಲಿಲ್ಲ, ಇಷ್ಟಾದ್ರೂ ಪಕ್ಷಕ್ಕೆ ಕಟು ಬಿದ್ದು ಸುಮ್ಮನಿದ್ದರು.. ಆದಾದ್ಮೇಲೆ ಹಾವೇರಿ ಕ್ಷೇತ್ರದ ಮೇಲೆ ಕಣ್ಣಿಟ್ಟ ಈಶ್ವರಪ್ಪ ಅಲ್ಲಿ ಮಗನಿಗೆ ಟಿಕೆಟ್ ಕೊಡಿಸಬೇಕು ಎಂದು ಶತಾಯಗತಾಯ ಪ್ರಯತ್ನ ಮಾಡಿದ್ರು ಆಗಲಿಲ್ಲ, ಇದೀಗ ಮಗನಿಗೆ ಟಿಕೆಟ್ ಮಿಸ್ ಆಗಿದೆ ಸಹಜವಾಗಿಯೇ ಈಶ್ವರಪ್ಪ ಬಂಡಾಯದ ಕಹಳೆ ಮೊಳಗಿಸಿದ್ದಾರೆ.
ಮಗನಿಗೆ ಟಿಕೆಟ್ ಕೈ ತಪ್ಪಿದ್ರೆ ಈಶ್ವರಪ್ಪ ಸುಮ್ಮನಿರಲ್ಲ ಎಂದು ಹೈಕಮಾಂಡ್ ಹಾಗೂ ಬಿಎಸ್ವೈ ಗೊತ್ತು ಹೀಗಾಗಿಯೇ ಈಶ್ವರಪ್ಪ ಪುತ್ರನಿಗೆ ಹೈಕಮಾಂಡ್ ಆಫರ್ ಕೊಟ್ಟಿದೆ ಎನ್ನಲಾಗ್ತಿದೆ. ಕಾಂತೇಶ್ಗೆ ಎಂಎಲ್ಸಿ ಸ್ಥಾನ ಕೊಡುತ್ತೇವೆ ಎಂದು ಆಫರ್ ನೀಡಿದೆ ಎಂದು ಹೇಳಲಾಗಿದೆ. ಹೀಗಾಗಿ ಕಾಂತೇಶ್ಗೆ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಲಾಗ್ತಿದೆ. ಒಂದು ವೇಳೆ ಕಾಂತೇಶ್ಗೆ ಟಿಕೆಟ್ ಕೊಟ್ಟರೆ ಹಾವೇರಿಯಲ್ಲಿ ಸೋಲುವ ಸಾಧ್ಯತೆ ಹೆಚ್ಚಿತ್ತು ಎನ್ನಲಾಗ್ತಿದೆ ಹೀಗಾಗಿ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ. ಕಾಂತೇಶ್ಗೆ ಎಂಎಲ್ಸಿ ಮಾಡುವ ಪ್ಲಾನ್ ಹೈಕಮಾಂಡ್ ಮುಂದಿದೆ.. ಇದೆಲ್ಲದಕ್ಕೂ ಈಶ್ವರಪ್ಪ ಒಪ್ಪಿಕೊಳ್ತಾರಾ ಅಥವಾ ಬಂಡಾಯದ ಭಾವುಟ ಹಾರಿಸುತ್ಥಾರಾ ನೋಡಬೇಕು
ಹೇಳಿ ಕೇಳಿ ಈಶ್ವರಪ್ಪ ಹಿರಿತಲೆ, ಪಕ್ಷವನ್ನು ಸಂಘಟನೆ ಮಾಡಿ ಕಟ್ಟಿದ್ದಾರೆ, ರಾಜಕೀಯ ನಿವೃತ್ತಿ ಪಡೆದ ಈಶ್ವರಪ್ಪ ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡಿದ್ದಾರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಟಿಕೆಟ್ ಕೊಡಿಸಲು ಸಾಕಷ್ಟು ಪ್ರಯತ್ನ ಮಾಡಿದರು, ಅದು ಕೂಡ ಆಗಲಿಲ್ಲ, ಇಷ್ಟಾದ್ರೂ ಪಕ್ಷಕ್ಕೆ ಕಟು ಬಿದ್ದು ಸುಮ್ಮನಿದ್ದರು.. ಆದಾದ್ಮೇಲೆ ಹಾವೇರಿ ಕ್ಷೇತ್ರದ ಮೇಲೆ ಕಣ್ಣಿಟ್ಟ ಈಶ್ವರಪ್ಪ ಅಲ್ಲಿ ಮಗನಿಗೆ ಟಿಕೆಟ್ ಕೊಡಿಸಬೇಕು ಎಂದು ಶತಾಯಗತಾಯ ಪ್ರಯತ್ನ ಮಾಡಿದ್ರು ಆಗಲಿಲ್ಲ, ಇದೀಗ ಮಗನಿಗೆ ಟಿಕೆಟ್ ಮಿಸ್ ಆಗಿದೆ ಸಹಜವಾಗಿಯೇ ಈಶ್ವರಪ್ಪ ಬಂಡಾಯದ ಕಹಳೆ ಮೊಳಗಿಸಿದ್ದಾರೆ.
ಮಗನಿಗೆ ಟಿಕೆಟ್ ಕೈ ತಪ್ಪಿದ್ರೆ ಈಶ್ವರಪ್ಪ ಸುಮ್ಮನಿರಲ್ಲ ಎಂದು ಹೈಕಮಾಂಡ್ ಹಾಗೂ ಬಿಎಸ್ವೈ ಗೊತ್ತು ಹೀಗಾಗಿಯೇ ಈಶ್ವರಪ್ಪ ಪುತ್ರನಿಗೆ ಹೈಕಮಾಂಡ್ ಆಫರ್ ಕೊಟ್ಟಿದೆ ಎನ್ನಲಾಗ್ತಿದೆ. ಕಾಂತೇಶ್ಗೆ ಎಂಎಲ್ಸಿ ಸ್ಥಾನ ಕೊಡುತ್ತೇವೆ ಎಂದು ಆಫರ್ ನೀಡಿದೆ ಎಂದು ಹೇಳಲಾಗಿದೆ. ಹೀಗಾಗಿ ಕಾಂತೇಶ್ಗೆ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಲಾಗ್ತಿದೆ. ಒಂದು ವೇಳೆ ಕಾಂತೇಶ್ಗೆ ಟಿಕೆಟ್ ಕೊಟ್ಟರೆ ಹಾವೇರಿಯಲ್ಲಿ ಸೋಲುವ ಸಾಧ್ಯತೆ ಹೆಚ್ಚಿತ್ತು ಎನ್ನಲಾಗ್ತಿದೆ ಹೀಗಾಗಿ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ. ಕಾಂತೇಶ್ಗೆ ಎಂಎಲ್ಸಿ ಮಾಡುವ ಪ್ಲಾನ್ ಹೈಕಮಾಂಡ್ ಮುಂದಿದೆ.. ಇದೆಲ್ಲದಕ್ಕೂ ಈಶ್ವರಪ್ಪ ಒಪ್ಪಿಕೊಳ್ತಾರಾ ಅಥವಾ ಬಂಡಾಯದ ಭಾವುಟ ಹಾರಿಸುತ್ಥಾರಾ ನೋಡಬೇಕು