Explainer Video:ವಿಪಕ್ಷಗಳ ಮೈತ್ರಿ ಕಾಂಗ್ರೆಸ್ಗೆ ಲಾಭವೋ? ನಷ್ಟವೋ?
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆಯಾ? ಈ ವಿಚಾರದಲ್ಲಿ ರಾಜ್ಯ ಬಿಜೆಪಿಯಲ್ಲಿ ಗೊಂದಲ ಇದೆಯಾ ಅನ್ನೋ ಪ್ರಶ್ನೆಗಳಿವೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ವಿಪಕ್ಷಗಳ ಮೈತ್ರಿಯಿಂದ ಆಡಳಿತಾರೂಢ ಕಾಂಗ್ರೆಸ್ಗೆ ಲಾಭವೋ? ನಷ್ಟವೋ? ಎಂಬ ಚರ್ಚೆಗಳು ನಡೆಯುತ್ತಿವೆ. ಈ ರಾಜಕೀಯ ಬೆಳವಣಿಗೆಗಳೇನೇ ಇರಲಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸಾಧಿಸಿದ ದಿಗ್ವಿಜಯ ಮುಂಬರುವ ಚುನಾವಣೆಯಲ್ಲೂ ಪುನರಾವರ್ತನೆ ಆಗಲು ಸಾಧ್ಯವೇ ಎಂಬ ಪ್ರಶ್ನೆಗಳಿವೆ.
ಜೆಡಿಎಸ್ ಪಕ್ಷದ ಪ್ರಾಬಲ್ಯ ಇರೋದೇ ಹಳೇ ಮೈಸೂರು ಭಾಗದಲ್ಲಿ.. ಆದ್ರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲೂ ಅಬ್ಬರಿಸಿದ್ದ ಕಾಂಗ್ರೆಸ್, ಜೆಡಿಎಸ್ನ ಪ್ರಾಬಲ್ಯಕ್ಕೆ ಭಾರೀ ಪೆಟ್ಟು ನೀಡಿತ್ತು. ಹಳೆ ಮೈಸೂರು ಹಾಗೂ ಬೆಂಗಳೂರು ಭಾಗದ 11 ಜಿಲ್ಲೆಗಳ ಪೈಕಿ ಬಹುತೇಕ ಕಡೆ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪ್ರಾಬಲ್ಯ ಮೆರೆದಿತ್ತು. 2018ರ ಚುನಾವಣೆಗೆ ಹೋಲಿಸಿದರೆ, 2023ರ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ 14 ಸ್ಥಾನಗಳನ್ನ ಹೆಚ್ಚುವರಿಯಾಗಿ ಗಳಿಸಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತೆ ತನ್ನ ಪ್ರಾಬಲ್ಯವನ್ನು ಮರಳಿ ಸಾಧಿಸಲು ಪ್ರಯತ್ನ ನಡೆಸಲಿದೆ. ಬಿಜೆಪಿ ಹಾಗೂ ಜೆಡಿಎಸ್ನ ದೋಸ್ತಿಯಿಂದಾಗಿ ಬಿಜೆಪಿಯ ಸಾಂಪ್ರದಾಯಿಕ ಮತಗಳು ಜೆಡಿಎಸ್ ಪಾಲಾದರೆ ಕಾಂಗ್ರೆಸ್ ವಿರುದ್ಧ ಮೇಲುಗೈ ಸಾಧಿಸಲು ನೆರವಾಗಬಹುದು. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೇ ಪ್ರಮುಖ ಎದುರಾಳಿಗಳು. ಆದರೆ, ಅಲ್ಲಲ್ಲಿ ಬಿಜೆಪಿಯ ಮತ ಬುಟ್ಟಿಯೂ ಇದೆ. ಬಿಜೆಪಿಯ ಈ ಮತಗಳು ಜೆಡಿಎಸ್ ಪಾಲಾದರೆ, ಕಾಂಗ್ರೆಸ್ ವಿರುದ್ಧದ ಗೆಲುವಿಗೆ ನಿರ್ಣಾಯಕವಾಗಲಿದೆ. ಈ ಮೂಲಕ ಶತ್ರುವಿನ ಶತ್ರು ಮಿತ್ರ ಅನ್ನೋ ತಂತ್ರಗಾರಿಕೆ ಬಿಜೆಪಿ - ಜೆಡಿಎಸ್ಗೆ ಫಲ ಕೊಡುವ ನಿರೀಕ್ಷೆ ಇದೆ. ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರಂತೂ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲು ಈ ಮೈತ್ರಿ ಎಂದು ನೇರವಾಗಿಯೇ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬರೋಬ್ಬರಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ತಲಾ ಒಂದು ಸ್ಥಾನಗಳು ಕಾಂಗ್ರೆಸ್, ಜೆಡಿಎಸ್ ಪಾಲಾಗಿದ್ದರೆ, ಮತ್ತೊಂದು ಸ್ಥಾನದಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಮತದಾರರ ಮನಗೆಲ್ಲಲು ಹೊರಟಿದೆ. ಇತ್ತ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕ್ಷೇತ್ರಗಳನ್ನ ಈ ಬಾರಿಯೂ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಆದರೆ, ಮೋದಿ - ಯಡಿಯೂರಪ್ಪ ಪ್ರಭಾವ ರಾಜ್ಯದ ಮಟ್ಟಿಗೆ ಕಳೆದ ಚುನಾವಣೆಯಷ್ಟೇ ಪ್ರಬಲವಾಗಿದೆ ಎನ್ನಲು ಸಾಧ್ಯವಿಲ್ಲ. ಜೊತೆಯಲ್ಲೇ ರಾಜ್ಯ ಬಿಜೆಪಿಯ ದಂಡ ನಾಯಕ ಸ್ಥಾನದಲ್ಲೂ ಸಮರ್ಥ ನಾಯಕತ್ವ ಎದ್ದು ಕಾಣುತ್ತಿಲ್ಲ. ಈ ಹಂತದಲ್ಲಿ ರಾಜ್ಯ ಬಿಜೆಪಿಯ ಚುಕ್ಕಾಣಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪಾಲಾಗುತ್ತಾ ಅನ್ನೋ ಕುತೂಹಲವೂ ಇದೆ.
ಜೆಡಿಎಸ್ ಪಕ್ಷದ ಪ್ರಾಬಲ್ಯ ಇರೋದೇ ಹಳೇ ಮೈಸೂರು ಭಾಗದಲ್ಲಿ.. ಆದ್ರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲೂ ಅಬ್ಬರಿಸಿದ್ದ ಕಾಂಗ್ರೆಸ್, ಜೆಡಿಎಸ್ನ ಪ್ರಾಬಲ್ಯಕ್ಕೆ ಭಾರೀ ಪೆಟ್ಟು ನೀಡಿತ್ತು. ಹಳೆ ಮೈಸೂರು ಹಾಗೂ ಬೆಂಗಳೂರು ಭಾಗದ 11 ಜಿಲ್ಲೆಗಳ ಪೈಕಿ ಬಹುತೇಕ ಕಡೆ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪ್ರಾಬಲ್ಯ ಮೆರೆದಿತ್ತು. 2018ರ ಚುನಾವಣೆಗೆ ಹೋಲಿಸಿದರೆ, 2023ರ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ 14 ಸ್ಥಾನಗಳನ್ನ ಹೆಚ್ಚುವರಿಯಾಗಿ ಗಳಿಸಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತೆ ತನ್ನ ಪ್ರಾಬಲ್ಯವನ್ನು ಮರಳಿ ಸಾಧಿಸಲು ಪ್ರಯತ್ನ ನಡೆಸಲಿದೆ. ಬಿಜೆಪಿ ಹಾಗೂ ಜೆಡಿಎಸ್ನ ದೋಸ್ತಿಯಿಂದಾಗಿ ಬಿಜೆಪಿಯ ಸಾಂಪ್ರದಾಯಿಕ ಮತಗಳು ಜೆಡಿಎಸ್ ಪಾಲಾದರೆ ಕಾಂಗ್ರೆಸ್ ವಿರುದ್ಧ ಮೇಲುಗೈ ಸಾಧಿಸಲು ನೆರವಾಗಬಹುದು. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೇ ಪ್ರಮುಖ ಎದುರಾಳಿಗಳು. ಆದರೆ, ಅಲ್ಲಲ್ಲಿ ಬಿಜೆಪಿಯ ಮತ ಬುಟ್ಟಿಯೂ ಇದೆ. ಬಿಜೆಪಿಯ ಈ ಮತಗಳು ಜೆಡಿಎಸ್ ಪಾಲಾದರೆ, ಕಾಂಗ್ರೆಸ್ ವಿರುದ್ಧದ ಗೆಲುವಿಗೆ ನಿರ್ಣಾಯಕವಾಗಲಿದೆ. ಈ ಮೂಲಕ ಶತ್ರುವಿನ ಶತ್ರು ಮಿತ್ರ ಅನ್ನೋ ತಂತ್ರಗಾರಿಕೆ ಬಿಜೆಪಿ - ಜೆಡಿಎಸ್ಗೆ ಫಲ ಕೊಡುವ ನಿರೀಕ್ಷೆ ಇದೆ. ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರಂತೂ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲು ಈ ಮೈತ್ರಿ ಎಂದು ನೇರವಾಗಿಯೇ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬರೋಬ್ಬರಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ತಲಾ ಒಂದು ಸ್ಥಾನಗಳು ಕಾಂಗ್ರೆಸ್, ಜೆಡಿಎಸ್ ಪಾಲಾಗಿದ್ದರೆ, ಮತ್ತೊಂದು ಸ್ಥಾನದಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಮತದಾರರ ಮನಗೆಲ್ಲಲು ಹೊರಟಿದೆ. ಇತ್ತ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕ್ಷೇತ್ರಗಳನ್ನ ಈ ಬಾರಿಯೂ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಆದರೆ, ಮೋದಿ - ಯಡಿಯೂರಪ್ಪ ಪ್ರಭಾವ ರಾಜ್ಯದ ಮಟ್ಟಿಗೆ ಕಳೆದ ಚುನಾವಣೆಯಷ್ಟೇ ಪ್ರಬಲವಾಗಿದೆ ಎನ್ನಲು ಸಾಧ್ಯವಿಲ್ಲ. ಜೊತೆಯಲ್ಲೇ ರಾಜ್ಯ ಬಿಜೆಪಿಯ ದಂಡ ನಾಯಕ ಸ್ಥಾನದಲ್ಲೂ ಸಮರ್ಥ ನಾಯಕತ್ವ ಎದ್ದು ಕಾಣುತ್ತಿಲ್ಲ. ಈ ಹಂತದಲ್ಲಿ ರಾಜ್ಯ ಬಿಜೆಪಿಯ ಚುಕ್ಕಾಣಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪಾಲಾಗುತ್ತಾ ಅನ್ನೋ ಕುತೂಹಲವೂ ಇದೆ.
Curated by Shivamoorthi M|TimesXP Kannada|11 Sept 2023