Bengaluru Rural : ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್! ಡಿಕೆ ಬ್ರದರ್ಸ್ ಕೋಟೆಯಲ್ಲಿ ಕಮಲ ಬಾವುಟ ಹಾರಿಸ್ತಾರಾ ಮಂಜುನಾಥ್?
2679 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ, ಘಟಾನುಘಟಿಗಳನ್ನು ಸಂಸತ್ಗೆ ಕಳುಹಿಸಿರುವ ಕ್ಷೇತ್ರ.. ಅದರ ಜೊತೆ ದೇಶದ ಮಾಜಿ ಪ್ರಧಾನಿಗೆ ಸೋಲಿನ ರುಚಿ ಕಾಣಿಸಿದ ಹಿನ್ನೆಲೆಯೂ ಈ ಕ್ಷೇತ್ರಕ್ಕಿದೆ. ಇದೀಗ ವಜ್ರದಷ್ಟು ಕಠಿಣವಾದ ಬಂಡೆ ಒಡೆಯುವ ಸಾಹಸಕ್ಕೆ ಮೃದು ವ್ಯಕ್ತಿತ್ವದವರನ್ನು ಮುಂದೆ ತಂದು ನಿಲ್ಲಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಅಂದ್ರೇ ಅದು ಡಿಕೆ ಸಹೋದರರ ಭದ್ರಕೋಟೆ. ಈ ಕೋಟೆಗೆ ನುಗ್ಗಲು ಅನೇಕ ಬಾರಿ ಬಿಜೆಪಿ - ಜೆಡಿಎಸ್ ಪ್ರಯತ್ನ ಪಟ್ಟಿವೆ. ಆದ್ರೆ, ಸಾಧ್ಯ ಆಗಿಲ್ಲ.. ಈ ಬಾರಿ ಹಾಲಿ ಸಂಸದ ಡಿಕೆ ಸುರೇಶ್ ಎದುರು ಹೃದಯ ತಜ್ಞ ಡಾ ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಿವೆ. ಇವತ್ತು ರಾಜ್ಯದಲ್ಲೇ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಅಲ್ಲಿ ಯಾರು ಅಭ್ಯರ್ಥಿಗಳು ಇದಾರೆ? ಯಾರು ಗೆಲ್ಲಬಹುದು? ಜಾತಿ ಲೆಕ್ಕಾಚಾರ ಏನು? ಮೈತ್ರಿ ಲೆಕ್ಕಾಚಾರ ಏನು? ಅಭ್ಯರ್ಥಿಗಳ ಪ್ಲಸ್ ಮೈನಸ್ ಏನು ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ.