ಕತಾರ್ನಲ್ಲಿ ಭಾರತದ ನಿವೃತ್ತ ನೌಕಾ ಸಿಬ್ಬಂದಿಗೆ ಗಲ್ಲು, ಉಳಿಸಿಕೊಳ್ಳಲು ನಿವೃತ್ತ ಯೋಧರ ಸಂಘದಿಂದ ಪ್ರಧಾನಿಗೆ ಪತ್ರ
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಕಳೆದ ವರ್ಷ ಗೂಢಚರ್ಯೆ ಆರೋಪದ ಮೇಲೆ ಬಂಧಿತರಾಗಿದ್ದ 8 ಭಾರತೀಯ ನೌಕಾಪಡೆ ಮಾಜಿ ಉದ್ಯೋಗಿಗಳಿಗೆ ಕತಾರ್ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಕತಾರ್ ನ್ಯಾಯಾಲಯದ ತೀರ್ಪಿನ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ತೀವ್ರ ಆಘಾತ ವ್ಯಕ್ತಪಡಿಸಿತ್ತು.
ಮೇಜರ್ ಜನರಲ್ ಸತಬಿರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದು, ''ಕತಾರ್ ನೌಕಾಪಡೆಗೆ ತರಬೇತಿ ನೀಡಲು ಹೋಗಿದ್ದ ನಮ್ಮ ದೇಶದ ನೌಕಾಪಡೆಯ ನಿವೃತ್ತ ಉದ್ಯೋಗಿಗಳನ್ನು ಅನಧಿಕೃತವಾಗಿ ಬಂಧಿಸಲಾಗಿತ್ತು. ಅವರಿಗೆ ಶಿಕ್ಷೆ ಘೋಷಣೆಯಾಗಿರುವುದನ್ನು ತಿಳಿದು ಅವರ ಮನೆಯವರಿಗೆ ಆತಂಕಗೊಂಡಿದ್ದಾರೆ. ಇದೆಲ್ಲ ಹೇಗೆ ನಡೆಯಲು ಸಾಧ್ಯ ಎಂದು ತಿಳಿಯದಾಗಿದ್ದಾರೆ. ಈ ನಾಡು, ನೆಲವನ್ನು ರಕ್ಷಿಸುವವರು ಯೋಧರು. ಯೋಧರ ರಕ್ಷಣೆಗೆ ಸರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಬೇಕು'' ಎಂದು ಒತ್ತಾಯಿಸಿದ್ದಾರೆ.
''ಯಾವುದೇ ಯೋಧರ ಪ್ರಾಣವು ಈ ರೀತಿಯಾಗಿ ಕಳೆದು ಹೋಗಬಾರದು. ನಮ್ಮ ಎಲ್ಲ ನಿವೃತ್ತ ಯೋಧರೂ ಸುರಕ್ಷಿತವಾಗಿ ವಾಪಸ್ ಆಗುವುದನ್ನು ಖಾತ್ರಿ ಪಡಿಸಬೇಕು. ಕತಾರ್ ಸರಕಾರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು'' ಎಂದು ಮನವಿ ಮಾಡಿದ್ದಾರೆ.
ಕಳೆದ ವರ್ಷ ಆಗಸ್ಟ್ 30ರಂದು ಭಾರತೀಯ ನೌಕಾ ದಳದ 8 ನಿವೃತ್ತ ಅಧಿಕಾರಿಗಳನ್ನು ಕತಾರ್ನಲ್ಲಿ ಬಂಧಿಸಲಾಗಿತ್ತು. ಕತಾರ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಇಸ್ರೇಲ್ಗಾಗಿ ಗೂಢಚರ್ಯೆ ಮಾಡುತ್ತಿದ್ದರು ಎಂದು ಕತಾರ್ ಕತಾರ್ ಗುಪ್ತಚರ ಇಲಾಖೆ ಆರೋಪಿಸಿತ್ತು. ಇವರ ಜಾಮೀನು ಅರ್ಜಿಗಳನ್ನು ಹಲವು ಬಾರಿ ಕತಾರ್ ಕೋರ್ಟ್ ತಿರಸ್ಕರಿಸಿತ್ತು.
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬಿರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಶಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪುರೇಂದು ತಿವಾರಿ, ಕಮಾಂಡರ್ ಸುಗುಣಾಕಾರ ಪಾಕಾಲ, ಕಮಾಂಡರ್ ಸಂಜೀವ್ ಗುಪ್ತ ಮತ್ತು ನಾವಿಕ ರಾಗೇಶ್. ಇಸ್ರೇಲ್ ಪರವಾಗಿ ಜಲಾಂತರ್ಗಾಮಿ ಯೋಜನೆಯೊಂದರಲ್ಲಿ ಇವರು ಗೂಢಚರ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಆರೋಪದ ಸಂಬಂಧ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳು ಲಭ್ಯವಿವೆ ಎಂದು ಕತಾರ್ ಹೇಳಿದೆ.
ಮೇಜರ್ ಜನರಲ್ ಸತಬಿರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದು, ''ಕತಾರ್ ನೌಕಾಪಡೆಗೆ ತರಬೇತಿ ನೀಡಲು ಹೋಗಿದ್ದ ನಮ್ಮ ದೇಶದ ನೌಕಾಪಡೆಯ ನಿವೃತ್ತ ಉದ್ಯೋಗಿಗಳನ್ನು ಅನಧಿಕೃತವಾಗಿ ಬಂಧಿಸಲಾಗಿತ್ತು. ಅವರಿಗೆ ಶಿಕ್ಷೆ ಘೋಷಣೆಯಾಗಿರುವುದನ್ನು ತಿಳಿದು ಅವರ ಮನೆಯವರಿಗೆ ಆತಂಕಗೊಂಡಿದ್ದಾರೆ. ಇದೆಲ್ಲ ಹೇಗೆ ನಡೆಯಲು ಸಾಧ್ಯ ಎಂದು ತಿಳಿಯದಾಗಿದ್ದಾರೆ. ಈ ನಾಡು, ನೆಲವನ್ನು ರಕ್ಷಿಸುವವರು ಯೋಧರು. ಯೋಧರ ರಕ್ಷಣೆಗೆ ಸರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಬೇಕು'' ಎಂದು ಒತ್ತಾಯಿಸಿದ್ದಾರೆ.
''ಯಾವುದೇ ಯೋಧರ ಪ್ರಾಣವು ಈ ರೀತಿಯಾಗಿ ಕಳೆದು ಹೋಗಬಾರದು. ನಮ್ಮ ಎಲ್ಲ ನಿವೃತ್ತ ಯೋಧರೂ ಸುರಕ್ಷಿತವಾಗಿ ವಾಪಸ್ ಆಗುವುದನ್ನು ಖಾತ್ರಿ ಪಡಿಸಬೇಕು. ಕತಾರ್ ಸರಕಾರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು'' ಎಂದು ಮನವಿ ಮಾಡಿದ್ದಾರೆ.
ಕಳೆದ ವರ್ಷ ಆಗಸ್ಟ್ 30ರಂದು ಭಾರತೀಯ ನೌಕಾ ದಳದ 8 ನಿವೃತ್ತ ಅಧಿಕಾರಿಗಳನ್ನು ಕತಾರ್ನಲ್ಲಿ ಬಂಧಿಸಲಾಗಿತ್ತು. ಕತಾರ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಇಸ್ರೇಲ್ಗಾಗಿ ಗೂಢಚರ್ಯೆ ಮಾಡುತ್ತಿದ್ದರು ಎಂದು ಕತಾರ್ ಕತಾರ್ ಗುಪ್ತಚರ ಇಲಾಖೆ ಆರೋಪಿಸಿತ್ತು. ಇವರ ಜಾಮೀನು ಅರ್ಜಿಗಳನ್ನು ಹಲವು ಬಾರಿ ಕತಾರ್ ಕೋರ್ಟ್ ತಿರಸ್ಕರಿಸಿತ್ತು.
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬಿರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಶಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪುರೇಂದು ತಿವಾರಿ, ಕಮಾಂಡರ್ ಸುಗುಣಾಕಾರ ಪಾಕಾಲ, ಕಮಾಂಡರ್ ಸಂಜೀವ್ ಗುಪ್ತ ಮತ್ತು ನಾವಿಕ ರಾಗೇಶ್. ಇಸ್ರೇಲ್ ಪರವಾಗಿ ಜಲಾಂತರ್ಗಾಮಿ ಯೋಜನೆಯೊಂದರಲ್ಲಿ ಇವರು ಗೂಢಚರ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಆರೋಪದ ಸಂಬಂಧ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳು ಲಭ್ಯವಿವೆ ಎಂದು ಕತಾರ್ ಹೇಳಿದೆ.