Explainer Video: ಬಾಯ್ಕಾಟ್ ಮಾಲ್ಡೀವ್ಸ್: ಭಾರತದಿಂದ ಲಕ್ಷದ್ವೀಪ ಅಸ್ತ್ರ!
1215 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಲಕ್ಷದ್ವೀಪ ಸುತ್ತಾಟ ನಡೆಸಿದ್ದು ಮಾಲ್ಡೀವ್ಸ್ಗೆ ಸಖತ್ತಾಗೇ ಬಿಸಿ ಮುಟ್ಟಿಸಿದೆ. ಚೀನಾ ಕುಮ್ಮುಕ್ಕಿನಿಂದ ಭಾರತ ವಿರೋಧಿ ನೀತಿ ಅನುಸರಿಸುತ್ತಿರುವ ಮಾಲ್ಡೀವ್ಸ್ ವಿರುದ್ಧ ಭಾರತ ಲಕ್ಷದ್ವೀಪದ ಅಸ್ತ್ರ ಪ್ರಯೋಗಿಸಿದೆ. ಮಾಲ್ಡೀವ್ಸ್ ಬದಲು ಲಕ್ಷದ್ವೀಪ ಪ್ರವಾಸ ಮಾಡಿ ಅನ್ನೋ ಅಭಿಯಾನ ಭಾರತದಲ್ಲಿ ಶುರುವಾಗಿದೆ. ಆದರೆ, ಮಾಲ್ಡೀವ್ಸ್ಗೆ ಹೋಲಿಸಿದರೆ ಲಕ್ಷದ್ವೀಪದಲ್ಲಿ ಸೌಲಭ್ಯಗಳು ಎಷ್ಟಿವೆ? ಇಷ್ಟು ವರ್ಷಗಳಲ್ಲಿ ಲಕ್ಷದ್ವೀಪ ವಿಶ್ವ ಮಟ್ಟದ ಪ್ರವಾಸಿ ತಾಣವಾಗಿ ಏಕೆ ಅಭಿವೃದ್ಧಿ ಕಂಡಿಲ್ಲ? ಇಲ್ಲಿದೆ ವಿವರ.
ಭಾರತ ಹಾಗೂ ಮಾಲ್ಡೀವ್ಸ್ ದೇಶಗಳ ನಡುವೆ ಹಲವು ದಶಕಗಳಿಂದ ಸುಮಧುರ ಬಾಂಧವ್ಯ ಇದೆ. ಮಾಲ್ಡೀವ್ಸ್ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಭಾರತ ಕೈ ಹಿಡಿದಿದೆ. ಮಿಲಿಟರಿ ನೆರವು ಮಾತ್ರವಲ್ಲ, ಕುಡಿಯುವ ನೀರಿನಿಂದ ಹಿಡಿದು ಹಲವು ಮೂಲ ಸೌಕರ್ಯಗಳನ್ನೂ ಮಾಲ್ಡೀವ್ಸ್ ದೇಶಕ್ಕೆ ಭಾರತ ನೀಡಿದೆ. ತುರ್ತು ವೈದ್ಯಕೀಯ ನೆರವು ಸೇರಿದಂತೆ ಹಲವು ಕಾರಣಗಳಿಗಾಗಿ ಭಾರತ ಸೇನೆಯ ಹೆಲಿಕಾಪ್ಟರ್ಗಳು ಹಾಗೂ ಡಾರ್ನಿಯರ್ ಯುದ್ಧ ವಿಮಾನ ಕೂಡಾ ಮಾಲ್ಡೀವ್ಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಶಾಲ ಹಿಂದೂ ಮಹಾ ಸಾಗರದ ಪುಟ್ಟ ದ್ವೀಪ ಸಮೂಹವಾದ ಮಾಲ್ಡೀವ್ಸ್ನಲ್ಲಿ ಯಾರಿಗಾದರೂ ತುರ್ತಾಗಿ ವೈದ್ಯಕೀಯ ನೆರವು ಬೇಕಾದರೆ ಹೆಲಿಕಾಪ್ಟರ್, ವಿಮಾನದ ಮೂಲಕ ಭಾರತದ ಮುಖ್ಯ ಭೂಮಿಗೆ ಕರೆ ತರುವ ಕೆಲಸವನ್ನ ಭಾರತೀಯ ಸೇನೆಯ ಯೋಧರು ಮಾಡ್ತಿದ್ದರು. ಆದರೆ, ಮಾಲ್ಡೀವ್ಸ್ ದೇಶಕ್ಕೆ ಹೊಸ ಅಧ್ಯಕ್ಷರು ಬಂದ ನಂತರ ಚಿತ್ರಣ ಬದಲಾಯ್ತು.
ಮಾಲ್ಡೀವ್ಸ್ ದೇಶದ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಭಾರತ ಮೊದಲು ಅನ್ನೋ ನೀತಿಯನ್ನ ಅನುಸರಿಸುತ್ತಿದ್ದರು. ಆದರೆ, ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರಿಗೆ ಚೀನಾ ದೇಶ ಬಹಳ ಪ್ರಿಯವಾಗಿ ಕಂಡಿದೆ. ಜೊತೆಗೆ ಚೀನಾದಿಂದ ಭಾರೀ ಪ್ರಮಾಣದಲ್ಲಿ ಸಾಲ ಪಡೆದಿರುವ ಮಾಲ್ಡೀವ್ಸ್ ದೇಶ, ಡ್ರ್ಯಾಗನ್ನ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕಾದ ಅನಿವಾರ್ಯತೆ ಸಿಲುಕಿದೆ. ಹೀಗಾಗಿ, ಮಾಲ್ಡೀವ್ಸ್ ಸರ್ಕಾರ ಆಂತರಿಕ ಭದ್ರತೆ ನೆಪವೊಡ್ಡಿ ಮಾಲ್ಡೀವ್ಸ್ ರಾಜಧಾನಿ ಮಾಲೆ ಸೇರಿದಂತೆ ಹಲವೆಡೆ ಇದ್ದ ಭಾರತೀಯ ಸೇನೆಯ 77 ಸಿಬ್ಬಂದಿಯನ್ನು ವಾಪಸ್ ಹೋಗುವಂತೆ ತಾಕೀತು ಮಾಡಿದರು. ಮಾಲ್ಡೀವ್ಸ್ ನೂತನ ಅಧ್ಯಕ್ಷರ ಈ ಭಾರತ ವಿರೋಧಿ ನೀತಿಯೇ ಎಲ್ಲ ಸಂಘರ್ಷಕ್ಕೂ ಮೂಲ ಕಾರಣ.
ಲಕ್ಷ ದ್ವೀಪ ಖಂಡಿತವಾಗಿಯೂ ವಿಶ್ವ ಮಟ್ಟದ ಅತ್ಯುತ್ತಮ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಹೊಂದಿದೆ. ಆದರೆ, ಹಲವು ಕಾರಣಗಳಿಂದಾಗಿ ಲಕ್ಷ ದ್ವೀಪ ಇನ್ನೂ ಎಲೆ ಮರೆ ಕಾಯಿಯಂತೆ ಉಳಿದು ಹೋಗಿದೆ. ಇದಕ್ಕೆ ಪ್ರಮುಖ ಕಾರಣ ದೇಶದ ಭದ್ರತೆ.
ಅರಬ್ಬಿ ಸಮುದ್ರದಲ್ಲಿ ಹರಡಿಕೊಂಡಿರುವ 36 ದ್ವೀಪಗಳ ಸಮೂಹವಾದ ಲಕ್ಷ ದ್ವೀಪದಲ್ಲಿ ಬರೋಬ್ಬರಿ 17 ದ್ವೀಪಗಳು ನಿರ್ಮಾನುಷ.. ಇಲ್ಲಿ ಯಾರಿಗೂ ಪ್ರವೇಶ ಇಲ್ಲ. ಸ್ಥಳೀಯರೂ ಹೋಗುವಂತಿಲ್ಲ. ಭಯೋತ್ಪಾದಕರ ಹಾವಳಿ, ಕಳ್ಳ ಸಾಗಣೆದಾರ ಕಾಟ ಸೇರಿದಂತೆ ಹಲವು ಭದ್ರತಾ ಕಾರಣಗಳಿಂದಾಗಿ ಈ ದ್ವೀಪಗಳನ್ನು ನಿರ್ಬಂಧಿಸಲಾಗಿದೆ. ದೇಶ ವಿರೋಧಿ, ಸಮಾಜ ವಿರೋಧಿ ಕೃತ್ಯಗಳಿಗೆ ಲಕ್ಷ ದ್ವೀಪಗಳು ಆಶ್ರಯ ತಾಣ ಆಗಬಾರದು ಅನ್ನೋ ಕಾರಣಕ್ಕೆ ಮೊದಲಿನಿಂದಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೀಗಾಗಿ, ಪ್ರವಾಸೋದ್ಯಮ ಸೇರಿದಂತೆ ಹೆಚ್ಚಿನ ಮೂಲ ಸೌಕರ್ಯ ಅಭಿವೃದ್ಧಿ ಆಗಿಲ್ಲ.
ಭಾರತ ಹಾಗೂ ಮಾಲ್ಡೀವ್ಸ್ ದೇಶಗಳ ನಡುವೆ ಹಲವು ದಶಕಗಳಿಂದ ಸುಮಧುರ ಬಾಂಧವ್ಯ ಇದೆ. ಮಾಲ್ಡೀವ್ಸ್ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಭಾರತ ಕೈ ಹಿಡಿದಿದೆ. ಮಿಲಿಟರಿ ನೆರವು ಮಾತ್ರವಲ್ಲ, ಕುಡಿಯುವ ನೀರಿನಿಂದ ಹಿಡಿದು ಹಲವು ಮೂಲ ಸೌಕರ್ಯಗಳನ್ನೂ ಮಾಲ್ಡೀವ್ಸ್ ದೇಶಕ್ಕೆ ಭಾರತ ನೀಡಿದೆ. ತುರ್ತು ವೈದ್ಯಕೀಯ ನೆರವು ಸೇರಿದಂತೆ ಹಲವು ಕಾರಣಗಳಿಗಾಗಿ ಭಾರತ ಸೇನೆಯ ಹೆಲಿಕಾಪ್ಟರ್ಗಳು ಹಾಗೂ ಡಾರ್ನಿಯರ್ ಯುದ್ಧ ವಿಮಾನ ಕೂಡಾ ಮಾಲ್ಡೀವ್ಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಶಾಲ ಹಿಂದೂ ಮಹಾ ಸಾಗರದ ಪುಟ್ಟ ದ್ವೀಪ ಸಮೂಹವಾದ ಮಾಲ್ಡೀವ್ಸ್ನಲ್ಲಿ ಯಾರಿಗಾದರೂ ತುರ್ತಾಗಿ ವೈದ್ಯಕೀಯ ನೆರವು ಬೇಕಾದರೆ ಹೆಲಿಕಾಪ್ಟರ್, ವಿಮಾನದ ಮೂಲಕ ಭಾರತದ ಮುಖ್ಯ ಭೂಮಿಗೆ ಕರೆ ತರುವ ಕೆಲಸವನ್ನ ಭಾರತೀಯ ಸೇನೆಯ ಯೋಧರು ಮಾಡ್ತಿದ್ದರು. ಆದರೆ, ಮಾಲ್ಡೀವ್ಸ್ ದೇಶಕ್ಕೆ ಹೊಸ ಅಧ್ಯಕ್ಷರು ಬಂದ ನಂತರ ಚಿತ್ರಣ ಬದಲಾಯ್ತು.
ಮಾಲ್ಡೀವ್ಸ್ ದೇಶದ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಭಾರತ ಮೊದಲು ಅನ್ನೋ ನೀತಿಯನ್ನ ಅನುಸರಿಸುತ್ತಿದ್ದರು. ಆದರೆ, ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರಿಗೆ ಚೀನಾ ದೇಶ ಬಹಳ ಪ್ರಿಯವಾಗಿ ಕಂಡಿದೆ. ಜೊತೆಗೆ ಚೀನಾದಿಂದ ಭಾರೀ ಪ್ರಮಾಣದಲ್ಲಿ ಸಾಲ ಪಡೆದಿರುವ ಮಾಲ್ಡೀವ್ಸ್ ದೇಶ, ಡ್ರ್ಯಾಗನ್ನ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕಾದ ಅನಿವಾರ್ಯತೆ ಸಿಲುಕಿದೆ. ಹೀಗಾಗಿ, ಮಾಲ್ಡೀವ್ಸ್ ಸರ್ಕಾರ ಆಂತರಿಕ ಭದ್ರತೆ ನೆಪವೊಡ್ಡಿ ಮಾಲ್ಡೀವ್ಸ್ ರಾಜಧಾನಿ ಮಾಲೆ ಸೇರಿದಂತೆ ಹಲವೆಡೆ ಇದ್ದ ಭಾರತೀಯ ಸೇನೆಯ 77 ಸಿಬ್ಬಂದಿಯನ್ನು ವಾಪಸ್ ಹೋಗುವಂತೆ ತಾಕೀತು ಮಾಡಿದರು. ಮಾಲ್ಡೀವ್ಸ್ ನೂತನ ಅಧ್ಯಕ್ಷರ ಈ ಭಾರತ ವಿರೋಧಿ ನೀತಿಯೇ ಎಲ್ಲ ಸಂಘರ್ಷಕ್ಕೂ ಮೂಲ ಕಾರಣ.
ಲಕ್ಷ ದ್ವೀಪ ಖಂಡಿತವಾಗಿಯೂ ವಿಶ್ವ ಮಟ್ಟದ ಅತ್ಯುತ್ತಮ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಹೊಂದಿದೆ. ಆದರೆ, ಹಲವು ಕಾರಣಗಳಿಂದಾಗಿ ಲಕ್ಷ ದ್ವೀಪ ಇನ್ನೂ ಎಲೆ ಮರೆ ಕಾಯಿಯಂತೆ ಉಳಿದು ಹೋಗಿದೆ. ಇದಕ್ಕೆ ಪ್ರಮುಖ ಕಾರಣ ದೇಶದ ಭದ್ರತೆ.
ಅರಬ್ಬಿ ಸಮುದ್ರದಲ್ಲಿ ಹರಡಿಕೊಂಡಿರುವ 36 ದ್ವೀಪಗಳ ಸಮೂಹವಾದ ಲಕ್ಷ ದ್ವೀಪದಲ್ಲಿ ಬರೋಬ್ಬರಿ 17 ದ್ವೀಪಗಳು ನಿರ್ಮಾನುಷ.. ಇಲ್ಲಿ ಯಾರಿಗೂ ಪ್ರವೇಶ ಇಲ್ಲ. ಸ್ಥಳೀಯರೂ ಹೋಗುವಂತಿಲ್ಲ. ಭಯೋತ್ಪಾದಕರ ಹಾವಳಿ, ಕಳ್ಳ ಸಾಗಣೆದಾರ ಕಾಟ ಸೇರಿದಂತೆ ಹಲವು ಭದ್ರತಾ ಕಾರಣಗಳಿಂದಾಗಿ ಈ ದ್ವೀಪಗಳನ್ನು ನಿರ್ಬಂಧಿಸಲಾಗಿದೆ. ದೇಶ ವಿರೋಧಿ, ಸಮಾಜ ವಿರೋಧಿ ಕೃತ್ಯಗಳಿಗೆ ಲಕ್ಷ ದ್ವೀಪಗಳು ಆಶ್ರಯ ತಾಣ ಆಗಬಾರದು ಅನ್ನೋ ಕಾರಣಕ್ಕೆ ಮೊದಲಿನಿಂದಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೀಗಾಗಿ, ಪ್ರವಾಸೋದ್ಯಮ ಸೇರಿದಂತೆ ಹೆಚ್ಚಿನ ಮೂಲ ಸೌಕರ್ಯ ಅಭಿವೃದ್ಧಿ ಆಗಿಲ್ಲ.