ಕಾಲ್ನಡಿಗೆಯಲ್ಲೇ ಹುಬ್ಬಳ್ಳಿಯಿಂದ ಅಯೋಧ್ಯೆಗೆ ಬಂದ ಯುವಕ ; 1800 ಕಿ.ಮೀ ಕಾಲ್ನಡಿಗೆ
1234 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ : ಅಯೋಧ್ಯೆಯ ಶ್ರೀ ರಾಮಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಇನ್ನೊಂದು ಕಡೆ ಶ್ರೀ ರಾಮನ ದರ್ಶನಕ್ಕೆ ಕೋಟ್ಯಾಂತರ ಭಕ್ತರು ಕಾತರದಿಂದ ಕಾಯುತಿದ್ದರೆ, ಇತ್ತ ಹುಬ್ಬಳ್ಳಿಯ ಯುವಕನೊಬ್ಬ ಹುಬ್ಬಳ್ಳಿಯಿಂದ ಅಯೋಧ್ಯೆಯವರೆಗೆ ಸುಮಾರು1800 ಕೀಲೋ ಮೀಟರ್ ನಡೆದುಕೊಂಡು ಅಯೋಧ್ಯೆ ತಲುಪಿದ್ದಾನೆ.
ಹುಬ್ಬಳ್ಳಿಯ ಮನೋಜ್ ಅರ್ಕಾಟ್ ಎಂಬ ಯುವಕ ಶ್ರೀರಾಮನ ಮಂದಿರಕ್ಕೆ ನಡೆದುಕೊಂಡೇ ಹೋಗಬೇಕು ಎಂಬ ಸಂಕಲ್ಪ ಹೊಂದಿದ್ದ ಹೀಗಾಗಿ ಡಿದೆಂಬರ್ 22ರಂದು ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ದರ್ಶನ ಪಡೆದು ಮಠದಿಂದ ಈ ಯಾತ್ರೆ ಪ್ರಾರಂಭಿಸಿ, ಜನವರಿ 22 ರಂದು ಬರೋಬ್ಬರಿ ಒಂದು ತಿಂಗಳ ಕಾಲ ನಡೆದುಕೊಂಡೇ ಅಯೋಧ್ಯೆ ತಲುಪಿದ್ದಾರೆ.
ಹುಬ್ಬಳ್ಳಿಯ ಆನಂದ ನಗರದ ಸಮೀಪ ಘೋಡಕೆ ಪ್ಲಾಟ್ನ ಮಲ್ಲೇಶ್ವರ ನಗರದಲ್ಲಿ ನಿವಾಸಿ ಮನೋಜ್ ಅರ್ಕಾಟ್ ಶ್ರೀರಾಮ ದರ್ಶನಕ್ಕೆ ಅಯೋಧ್ಯೆಗೆ ಬಂದಿದ್ದಾರೆ, ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದು, ಅಯೋಧ್ಯೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ವಿವರಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮನೋಜ್ ಶ್ರೀರಾಮನ ಪರಮಭಕ್ತ. ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗುವುದಾಗಿ ತಿಳಿಸಿದಾಗ ಮನೆಯಲ್ಲಿ ಅಷ್ಟು ದೂರ ಒಬ್ಬನೇ ಹೋಗುವುದು ಬೇಡ ಎಂದು ತಿಳಿಸಿದ್ದರು, ಆದರೂ ತನ್ನ ಛಲ ಬಿಡದ ಯುವಕ ಕೊನೆಗೂ ಅಯೋಧ್ಯೆ ತಲುಪಿದ್ದಾನೆ. ರಾಮನ ಪರಮ ಭಕ್ತ ತಾನು ಹೊತ್ತ ಹರೆಕೆಯಂತೆ ಅಯೋಧ್ಯೆಯ ಶ್ರೀ ರಾಮನ ನಾಡು ಸೇರಿದ್ದಾನೆ. ಒಂದು ದಿನಕ್ಕೆ 40 ರಿಂದ 50 ಕಿಲೋ ಮೀಟರ್ ನಡೆದರೇ ಇನ್ನು ಒಂದು ದಿನ ದಾರಿಯ ನಡುವಿನ ಪುಣ್ಯ ಕ್ಷೇತ್ರಗಳ ದರ್ಶನ ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಮನೋಜ್ ಅರ್ಕಾಟ್ ಎಂಬ ಯುವಕ ಶ್ರೀರಾಮನ ಮಂದಿರಕ್ಕೆ ನಡೆದುಕೊಂಡೇ ಹೋಗಬೇಕು ಎಂಬ ಸಂಕಲ್ಪ ಹೊಂದಿದ್ದ ಹೀಗಾಗಿ ಡಿದೆಂಬರ್ 22ರಂದು ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ದರ್ಶನ ಪಡೆದು ಮಠದಿಂದ ಈ ಯಾತ್ರೆ ಪ್ರಾರಂಭಿಸಿ, ಜನವರಿ 22 ರಂದು ಬರೋಬ್ಬರಿ ಒಂದು ತಿಂಗಳ ಕಾಲ ನಡೆದುಕೊಂಡೇ ಅಯೋಧ್ಯೆ ತಲುಪಿದ್ದಾರೆ.
ಹುಬ್ಬಳ್ಳಿಯ ಆನಂದ ನಗರದ ಸಮೀಪ ಘೋಡಕೆ ಪ್ಲಾಟ್ನ ಮಲ್ಲೇಶ್ವರ ನಗರದಲ್ಲಿ ನಿವಾಸಿ ಮನೋಜ್ ಅರ್ಕಾಟ್ ಶ್ರೀರಾಮ ದರ್ಶನಕ್ಕೆ ಅಯೋಧ್ಯೆಗೆ ಬಂದಿದ್ದಾರೆ, ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದು, ಅಯೋಧ್ಯೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ವಿವರಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮನೋಜ್ ಶ್ರೀರಾಮನ ಪರಮಭಕ್ತ. ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗುವುದಾಗಿ ತಿಳಿಸಿದಾಗ ಮನೆಯಲ್ಲಿ ಅಷ್ಟು ದೂರ ಒಬ್ಬನೇ ಹೋಗುವುದು ಬೇಡ ಎಂದು ತಿಳಿಸಿದ್ದರು, ಆದರೂ ತನ್ನ ಛಲ ಬಿಡದ ಯುವಕ ಕೊನೆಗೂ ಅಯೋಧ್ಯೆ ತಲುಪಿದ್ದಾನೆ. ರಾಮನ ಪರಮ ಭಕ್ತ ತಾನು ಹೊತ್ತ ಹರೆಕೆಯಂತೆ ಅಯೋಧ್ಯೆಯ ಶ್ರೀ ರಾಮನ ನಾಡು ಸೇರಿದ್ದಾನೆ. ಒಂದು ದಿನಕ್ಕೆ 40 ರಿಂದ 50 ಕಿಲೋ ಮೀಟರ್ ನಡೆದರೇ ಇನ್ನು ಒಂದು ದಿನ ದಾರಿಯ ನಡುವಿನ ಪುಣ್ಯ ಕ್ಷೇತ್ರಗಳ ದರ್ಶನ ಪಡೆದುಕೊಂಡಿದ್ದಾರೆ.