ಕೆಇಎ ಪರೀಕ್ಷಾ ಅಕ್ರಮದ ರೂವಾರಿ ಆರ್.ಡಿ. ಪಾಟೀಲ್ ಬಂಧನ
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಇತ್ತೀಚೆಗೆ ನಡೆದಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ ಪ್ರಕರಣದ ರೂವಾರಿಯಾಗಿರುವ ಆರ್ಡಿ ಪಾಟೀಲ್ ಕಡೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದಲ್ಲಿ ಅಡಗಿದ್ದ ಆತನನ್ನು ಪತ್ತೆ ಮಾಡಿ ಅವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಆತನನ್ನು ಮಹಾರಾಷ್ಟ್ರದಿಂದ ಕಲಬುರಗಿಗೆ ಕರೆತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಗೌಪ್ಯವಾದ ಜಾಗದಲ್ಲಿ ಅಡಗಿದ್ದುಕೊಂಡು ಅಲ್ಲಿಂದಲೇ ಕಲಬುರಗಿಯಲ್ಲಿರುವ ಕರ್ನಾಟಕ ಹೈಕೋರ್ಟ್ ಪೀಠಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಪಾಟೀಲ್ ಅರ್ಜಿ ಸಲ್ಲಿಸಿದ್ದ. ನವೆಂಬರ್ 10ರಂದು ಆತನ ಜಾಮೀನು ಅರ್ಜಿಯನ್ನು ವಿಚಾರಣೆಗೊಳಪಡಿಸಿದ್ದ ಪೀಠ, ವಿಚಾರಣೆಯನ್ನು ಮುಂದಕ್ಕೆ ಹಾಕಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ಅಕ್ಟೋಬರ್ 29ರಂದು ಕೆಇಎ ವತಿಯಿಂದ ನಡೆಸಲಾಗಿದ್ದ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಲಬುರಗಿಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ಉತ್ತರಗಳನ್ನು ಬರೆಯತ್ತಾ ಕೊಠಡಿ ಪರಿವೀಕ್ಷಕರಿಗೆ ಸಿಕ್ಕಿಬಿದ್ದಿದ್ದು ಅದು ದೊಡ್ಡದೊಂದು ಜಾಲವನ್ನು ಅನಾವರಣಗೊಳಿಸಿತು. ಈ ಜಾಲದ ರೂವಾರಿ ಆರ್ಡಿ ಪಾಟೀಲ್ ಎಂಬುದು ತಿಳಿದುಬಂದಿತ್ತು. ಆತ 2021ರಲ್ಲಿ ಹೊರಬಿದ್ದಿದ್ದ ಪಿಎಸ್ಐ ಹಗರಣದ ಆರೋಪಿಯೂ ಕೂಡ ಆಗಿದ್ದು, ಕೆಲವು ತಿಂಗಳುಗಳಿಂದ ಜಾಮೀನಿನ ಮೇಲೆ ಹೊರಗಿದ್ದ
ಕೆಇಎ ಪರೀಕ್ಷಾ ಅಕ್ರಮ ಹೊರಬೀಳುತ್ತಲೇ ತಲೆಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದರು. ಮೂರು ದಿನಗಳ ಹಿಂದೆ ಆತ ಕಲಬುರಗಿಯ ವಾರ್ದಾ ಅಪಾರ್ಟ್ ಮೆಂಟ್ ಒಂದರಿಂದ ಗೋಡೆ ಹಾರಿ ತಪ್ಪಿಸಿಕೊಂಡು ಹೋಗಿದ್ದ. ಆತ ಗೋಡೆ ಹಾರಿ ಹೋಗಿದ್ದು ಅಪಾರ್ಟ್ ಮೆಂಟ್ ಹಾಗೂ ಸುತ್ತಲಿನ ಮನೆಗಳ ಮುಂದಿನ ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು. ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
ಪ್ರಕರಣ ಬೆಳಕಿಗೆ ಬಂದಾಗಿನಿಂದ ಅವನು ಕಲಬುರಗಿಯಲ್ಲೇ ಇದ್ದರೂ ಆತನನ್ನು ಬಂಧಿಸುವಲ್ಲಿ ಕಲಬುರಗಿ ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ. ಉದ್ದೇಶಪೂರ್ವಕವಾಗಿಯೇ ಆತನನ್ನು ಬಂಧಿಸಲಾಗಿಲ್ಲ. ಕಾಂಗ್ರೆಸ್ ಸಚಿವರ ಕೈವಾಡ ಇದರ ಹಿಂದಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಬಿಜೆಪಿಯ ಕೆಲ ನಾಯಕರು ಕಲಬುರಗಿಯಲ್ಲಿ ಪ್ರಭಾವಿ ನಾಯಕರಾಗಿರುವ ಸಚಿವ ಪ್ರಿಯಾಂಕ್ ಖರ್ಗೆಯವರ ಪ್ರಭಾವವಿರುವುದರಿಂದಲೇ ಆರ್ಡಿ ಪಾಟೀಲನ ಬಂಧನವಾಗುತ್ತಿಲ್ಲ ಎಂದು ಆರೋಪಿಸಿದ್ದರು. ಈ ಎಲ್ಲಾ ಆರೋಪಗಳ ಬಗ್ಗೆ ಅಕ್ಟೋಬರ್ 9ರಂದು ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಜಿ ಪರಮೇಶ್ವರ್ ತಪ್ಪು ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ, ಆರ್ಡಿ ಪಾಟೀಲ್ನನ್ನು ಶೀಘ್ರವೇ ಬಂಧಿಸುತ್ತೇವೆ ಎಂದಿದ್ದರು. ಅದರ ಮರುದಿನವೇ ಪಾಟೀಲನ ಬಂಧನವಾಗಿದೆ.
ಮೂರು ದಿನಗಳ ಹಿಂದೆ ಆರ್ಡಿ ಪಾಟೀಲ್, ಕಲಬುರಗಿಯಲ್ಲಿ ತಾನು ವಾಸವಾಗಿದ್ದ ವಾರ್ದಾ ಅಪಾರ್ಟ್ಮೆಂಟ್ನಲ್ಲೇ ವಾಸವಾಗಿದ್ದ. ಹಾಗಾಗಿ ಆ ಅಪಾರ್ಟ್ಮೆಂಟ್ನಲ್ಲಿ ಆತ ಬಾಡಿಗೆ ಪಡೆದಿದ್ದ ಫ್ಲ್ಯಾಟ್ನ ಮಾಲೀಕರನ್ನು ಅಪಾರ್ಟ್ಮೆಂಟ್ನ ಮ್ಯಾನೇಜರ್ ಹಾಗೂ ಪಾಟೀಲನ ಸ್ನೇಹಿತನೊಬ್ಬನನ್ನು ಪೊಲೀಸರು ನವೆಂಬರ್ 10ರಂದು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆಯ ವೇಳೆ ಆರ್ಡಿ ಪಾಟೀಲನಿಂದ ಕೇವಲ 10 ಸಾವಿರ ರೂಪಾಯಿ ಅಡ್ವಾನ್ಸ್ ಪಡೆದು ಆತನಿಗೆ ಫ್ಲ್ಯಾಟ್ ಬಾಡಿಗೆಗೆ ನೀಡಲಾಗಿತ್ತೆಂದು ಹೇಳಲಾಗಿದೆ. ತನಿಖೆಯಲ್ಲಿ ಪರೀಕ್ಷಾ ಅಕ್ರಮ ಎಸಗಲೆಂದೇ ಆರ್ಡಿ ಪಾಟೀಲ್, ಹೊಸ ಮೊಬೈಲ್ ಖರೀದಿ ಮಾಡಿದ್ದ ಎನ್ನಲಾಗಿದೆ. ತಂತ್ರಜ್ಞಾನ ವಿಚಾರದಲ್ಲಿ ಸಾಕಷ್ಟು ಪರಿಣಿತಿ ಸಾಧಿಸಿರುವ ಆತ, ಸಿಮ್ ಕಾರ್ಡ್ ಹಾಕದೆಯೇ ಕೇವಲ ವೈಫೈ ಬಳಸಿಕೊಂಡು ಆತ ಪರೀಕ್ಷಾ ಅಕ್ರಮಗಳಿಗೆ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
ಗೌಪ್ಯವಾದ ಜಾಗದಲ್ಲಿ ಅಡಗಿದ್ದುಕೊಂಡು ಅಲ್ಲಿಂದಲೇ ಕಲಬುರಗಿಯಲ್ಲಿರುವ ಕರ್ನಾಟಕ ಹೈಕೋರ್ಟ್ ಪೀಠಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಪಾಟೀಲ್ ಅರ್ಜಿ ಸಲ್ಲಿಸಿದ್ದ. ನವೆಂಬರ್ 10ರಂದು ಆತನ ಜಾಮೀನು ಅರ್ಜಿಯನ್ನು ವಿಚಾರಣೆಗೊಳಪಡಿಸಿದ್ದ ಪೀಠ, ವಿಚಾರಣೆಯನ್ನು ಮುಂದಕ್ಕೆ ಹಾಕಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ಅಕ್ಟೋಬರ್ 29ರಂದು ಕೆಇಎ ವತಿಯಿಂದ ನಡೆಸಲಾಗಿದ್ದ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಲಬುರಗಿಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ಉತ್ತರಗಳನ್ನು ಬರೆಯತ್ತಾ ಕೊಠಡಿ ಪರಿವೀಕ್ಷಕರಿಗೆ ಸಿಕ್ಕಿಬಿದ್ದಿದ್ದು ಅದು ದೊಡ್ಡದೊಂದು ಜಾಲವನ್ನು ಅನಾವರಣಗೊಳಿಸಿತು. ಈ ಜಾಲದ ರೂವಾರಿ ಆರ್ಡಿ ಪಾಟೀಲ್ ಎಂಬುದು ತಿಳಿದುಬಂದಿತ್ತು. ಆತ 2021ರಲ್ಲಿ ಹೊರಬಿದ್ದಿದ್ದ ಪಿಎಸ್ಐ ಹಗರಣದ ಆರೋಪಿಯೂ ಕೂಡ ಆಗಿದ್ದು, ಕೆಲವು ತಿಂಗಳುಗಳಿಂದ ಜಾಮೀನಿನ ಮೇಲೆ ಹೊರಗಿದ್ದ
ಕೆಇಎ ಪರೀಕ್ಷಾ ಅಕ್ರಮ ಹೊರಬೀಳುತ್ತಲೇ ತಲೆಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದರು. ಮೂರು ದಿನಗಳ ಹಿಂದೆ ಆತ ಕಲಬುರಗಿಯ ವಾರ್ದಾ ಅಪಾರ್ಟ್ ಮೆಂಟ್ ಒಂದರಿಂದ ಗೋಡೆ ಹಾರಿ ತಪ್ಪಿಸಿಕೊಂಡು ಹೋಗಿದ್ದ. ಆತ ಗೋಡೆ ಹಾರಿ ಹೋಗಿದ್ದು ಅಪಾರ್ಟ್ ಮೆಂಟ್ ಹಾಗೂ ಸುತ್ತಲಿನ ಮನೆಗಳ ಮುಂದಿನ ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು. ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
ಪ್ರಕರಣ ಬೆಳಕಿಗೆ ಬಂದಾಗಿನಿಂದ ಅವನು ಕಲಬುರಗಿಯಲ್ಲೇ ಇದ್ದರೂ ಆತನನ್ನು ಬಂಧಿಸುವಲ್ಲಿ ಕಲಬುರಗಿ ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ. ಉದ್ದೇಶಪೂರ್ವಕವಾಗಿಯೇ ಆತನನ್ನು ಬಂಧಿಸಲಾಗಿಲ್ಲ. ಕಾಂಗ್ರೆಸ್ ಸಚಿವರ ಕೈವಾಡ ಇದರ ಹಿಂದಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಬಿಜೆಪಿಯ ಕೆಲ ನಾಯಕರು ಕಲಬುರಗಿಯಲ್ಲಿ ಪ್ರಭಾವಿ ನಾಯಕರಾಗಿರುವ ಸಚಿವ ಪ್ರಿಯಾಂಕ್ ಖರ್ಗೆಯವರ ಪ್ರಭಾವವಿರುವುದರಿಂದಲೇ ಆರ್ಡಿ ಪಾಟೀಲನ ಬಂಧನವಾಗುತ್ತಿಲ್ಲ ಎಂದು ಆರೋಪಿಸಿದ್ದರು. ಈ ಎಲ್ಲಾ ಆರೋಪಗಳ ಬಗ್ಗೆ ಅಕ್ಟೋಬರ್ 9ರಂದು ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಜಿ ಪರಮೇಶ್ವರ್ ತಪ್ಪು ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ, ಆರ್ಡಿ ಪಾಟೀಲ್ನನ್ನು ಶೀಘ್ರವೇ ಬಂಧಿಸುತ್ತೇವೆ ಎಂದಿದ್ದರು. ಅದರ ಮರುದಿನವೇ ಪಾಟೀಲನ ಬಂಧನವಾಗಿದೆ.
ಮೂರು ದಿನಗಳ ಹಿಂದೆ ಆರ್ಡಿ ಪಾಟೀಲ್, ಕಲಬುರಗಿಯಲ್ಲಿ ತಾನು ವಾಸವಾಗಿದ್ದ ವಾರ್ದಾ ಅಪಾರ್ಟ್ಮೆಂಟ್ನಲ್ಲೇ ವಾಸವಾಗಿದ್ದ. ಹಾಗಾಗಿ ಆ ಅಪಾರ್ಟ್ಮೆಂಟ್ನಲ್ಲಿ ಆತ ಬಾಡಿಗೆ ಪಡೆದಿದ್ದ ಫ್ಲ್ಯಾಟ್ನ ಮಾಲೀಕರನ್ನು ಅಪಾರ್ಟ್ಮೆಂಟ್ನ ಮ್ಯಾನೇಜರ್ ಹಾಗೂ ಪಾಟೀಲನ ಸ್ನೇಹಿತನೊಬ್ಬನನ್ನು ಪೊಲೀಸರು ನವೆಂಬರ್ 10ರಂದು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆಯ ವೇಳೆ ಆರ್ಡಿ ಪಾಟೀಲನಿಂದ ಕೇವಲ 10 ಸಾವಿರ ರೂಪಾಯಿ ಅಡ್ವಾನ್ಸ್ ಪಡೆದು ಆತನಿಗೆ ಫ್ಲ್ಯಾಟ್ ಬಾಡಿಗೆಗೆ ನೀಡಲಾಗಿತ್ತೆಂದು ಹೇಳಲಾಗಿದೆ. ತನಿಖೆಯಲ್ಲಿ ಪರೀಕ್ಷಾ ಅಕ್ರಮ ಎಸಗಲೆಂದೇ ಆರ್ಡಿ ಪಾಟೀಲ್, ಹೊಸ ಮೊಬೈಲ್ ಖರೀದಿ ಮಾಡಿದ್ದ ಎನ್ನಲಾಗಿದೆ. ತಂತ್ರಜ್ಞಾನ ವಿಚಾರದಲ್ಲಿ ಸಾಕಷ್ಟು ಪರಿಣಿತಿ ಸಾಧಿಸಿರುವ ಆತ, ಸಿಮ್ ಕಾರ್ಡ್ ಹಾಕದೆಯೇ ಕೇವಲ ವೈಫೈ ಬಳಸಿಕೊಂಡು ಆತ ಪರೀಕ್ಷಾ ಅಕ್ರಮಗಳಿಗೆ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ