ತಡವಾಗಿ ಬಂದ್ರೂ ಆರ್ಭಟಿಸುತ್ತಾ ಈ ಬಾರಿಯ ಮುಂಗಾರು?
1125 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮಾನ್ಸೂನ್ ಮಾರುತಗಳು ಭಾರತ ಪ್ರವೇಶ ಮಾಡೋದಕ್ಕೆ ಅಡ್ಡಿ ಎದುರಾಗಿದೆ. ಆದ್ರೆ, ನಾಲ್ಕು ದಿನ ತಡವಾಗಿಯಾದ್ರೂ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದ್ದು, ಅದಾದ ಎರಡು ದಿನಕ್ಕೆ ರಾಜ್ಯಕ್ಕೂ ಮುಂಗಾರು ಕಾಲಿಡಲಿದೆ. ಈ ಮೂಲಕ ಮುಂದಿನ ವಾರವೇ ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗುವ ಸಾಧ್ಯತೆ ಇದೆ. ಮುಂಗಾರು ಮಳೆ ತಡವಾದ ಕಾರಣ ರಾಜ್ಯದಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗುವ ಭೀತಿಯಿದೆ.