ವಿಡಿಯೋ | ಸಿಂಧಿಯಾರನ್ನು ನಾಯಿ ಅಂತ ಕರೆದೇ ಇಲ್ಲ ಎಂದ ಕಮಲ್ನಾಥ್
1006 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಭೂಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ನನನ್ನು ನಾಯಿ ಎಂದು ಕರೆದಿದ್ದಾರೆ ಎಂದು ಬಿಜೆಪಿ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್ ಮುಖಂಡ ಕಮಲ್ ನಾಥ್, ತಾವು ಆ ರೀತಿಯಲ್ಲಿ ಹೇಳಿಕೆ ನೀಡಿಲ್ಲ. ಅಶೋಕ್ ನಗರ ಕ್ಷೇತ್ರದ ಜನರು ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಇತ್ತೀಚಿಗೆ ವಿವಾದಕ್ಕೆ ಕಾರಣವಾಗಿದ್ದ ಐಟಂ ಹೇಳಿಕೆಯ ಕುರಿತಂತೆಯೂ ಕಮಲ್ ನಾಥ್ ವಿವರಣೆ ನೀಡಿದ್ದಾರೆ. ಅಶೋಕ್ ನಗರದಲ್ಲಿ ನನ್ನನ್ನು ಕಮಲ್ ನಾಥ್ ನಾಯಿ ಎಂದು ಕರೆದಿದ್ದಾರೆ ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಆರೋಪಿಸಿದ್ದರು. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್ ನಾಥ್, ಆ ರೀತಿಯ ಹೇಳಿಕೆಯನ್ನು ನೀಡಿಯೇ ಇಲ್ಲ ಎಂದರು.