ದೇಶದ್ರೋಹ ಕಾನೂನು ಬದಲಾವಣೆ, ಅಪರಾಧ ನ್ಯಾಯ ವ್ಯವಸ್ಥೆಗೆ 3 ಹೊಸ ಮಸೂದೆಗಳು
1356 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಅಧಿವೇಶನದಿಂದ ಅಮಾನತು ಮಾಡಿರುವುದಕ್ಕೆ INDIA ಮೈತ್ರಿಕೂಟದ ಸಂಸದರು ಕಲಾಪದಲ್ಲಿ ಭಾಗಿಯಾಗದೆ ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಮುಂಗಾರು ಅಧಿವೇಶನದ ಕೊನೆಯ ದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿದ್ದಾರೆ.
ಅಮಿತ್ ಶಾ ಅವರು ಮಂಡಿಸಿರುವ ಮೂರು ಮಸೂದೆಗಳು ಈಗಿನ ಐಪಿಸಿ ಅಂದರೆ ಭಾರತೀಯ ದಂಡ ಸಂಹಿತೆ, ಸಿಆರ್ಪಿಸಿ ಅಂದರೆ, ಅಪರಾಧ ದಂಡ ಸಂಹಿತೆ ಹಾಗೂ ಭಾರತ ಸಾಕ್ಷ್ಯ ಅಧಿನಿಯಮಕ್ಕೆ ಬದಲಾವಣೆ ತರಲಿದೆ. ಈ ಹೊಸ ಮಸೂದೆಗಳ ಮೂಲಕ 'ದೇಶದ್ರೋಹ'ದ ರೀತಿಯ ಕಾನೂನುಗಳನ್ನು ತೆಗೆದುಹಾಕಲಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಅಮಿತ್ ಶಾ ಅವರು ಭಾರತೀಯ ನ್ಯಾಯ ಸಂಹಿತೆ ಮಸೂದೆ, ಭಾರತೀಯ ಸಾಕ್ಷ್ಯ ಮಸೂದೆ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
1860ರಿಂದ 2023ರವರೆಗೂ ಬ್ರಿಟಿಷರು ರೂಪಿಸಿದ್ದ ಕಾನೂನಿನಂತೆಯೇ ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯು ಕಾರ್ಯಾಚರಿಸಿದೆ. ಈ ಮೂರು ಹೊಸ ಕಾನೂನುಗಳು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ತರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಮಸೂದೆಯ ಮೂಲಕ ಅಪರಾಧ ನಿರ್ಣಯದ ಪ್ರಮಾಣವನ್ನು ಶೇಕಡ 90ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಏಳು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ಹೊಂದಿರುವ ಪ್ರಕರಣಗಳಲ್ಲಿ ಅಪರಾಧ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.
ಗುಂಪು ಥಳಿತ, ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ಹಾಗೂ ಸರಕಾರಿ ಉದ್ಯೋಗಿಗಳ ಮೇಲೆ ಮೊಕದ್ದಮೆ ಹೂಡಲು ಕಾಲಮಿತಿಯ ಅನುಮೋದನೆಗಳಿಗೆ ಸಂಬಂಧಿಸಿದಂತೆ ಹೊಸ ದಂಡ ಸಂಹಿತೆಯನ್ನು ಈ ಪ್ರಮುಖ ಮಸೂದೆಗಳು ಒಳಗೊಂಡಿವೆ. ದೇಶದ ವಿರುದ್ಧ ಸಮರ ಸಾರುವುದು ಸೇರಿದಂತೆ ಪ್ರತ್ಯೇಕವಾದದ ಅಪರಾಧಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ದೇಶದ್ರೋಹ ಪ್ರಕರಣವನ್ನು ಈವರೆಗೂ ಐಪಿಸಿ ಸೆಕ್ಷನ್ 124ಎ ಅಡಿಯಲ್ಲಿ ದಾಖಲಿಸಲಾಗುತ್ತಿದೆ.
ಅಮಿತ್ ಶಾ ಅವರು ಮಂಡಿಸಿರುವ ಮೂರು ಮಸೂದೆಗಳು ಈಗಿನ ಐಪಿಸಿ ಅಂದರೆ ಭಾರತೀಯ ದಂಡ ಸಂಹಿತೆ, ಸಿಆರ್ಪಿಸಿ ಅಂದರೆ, ಅಪರಾಧ ದಂಡ ಸಂಹಿತೆ ಹಾಗೂ ಭಾರತ ಸಾಕ್ಷ್ಯ ಅಧಿನಿಯಮಕ್ಕೆ ಬದಲಾವಣೆ ತರಲಿದೆ. ಈ ಹೊಸ ಮಸೂದೆಗಳ ಮೂಲಕ 'ದೇಶದ್ರೋಹ'ದ ರೀತಿಯ ಕಾನೂನುಗಳನ್ನು ತೆಗೆದುಹಾಕಲಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಅಮಿತ್ ಶಾ ಅವರು ಭಾರತೀಯ ನ್ಯಾಯ ಸಂಹಿತೆ ಮಸೂದೆ, ಭಾರತೀಯ ಸಾಕ್ಷ್ಯ ಮಸೂದೆ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
1860ರಿಂದ 2023ರವರೆಗೂ ಬ್ರಿಟಿಷರು ರೂಪಿಸಿದ್ದ ಕಾನೂನಿನಂತೆಯೇ ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯು ಕಾರ್ಯಾಚರಿಸಿದೆ. ಈ ಮೂರು ಹೊಸ ಕಾನೂನುಗಳು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ತರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಮಸೂದೆಯ ಮೂಲಕ ಅಪರಾಧ ನಿರ್ಣಯದ ಪ್ರಮಾಣವನ್ನು ಶೇಕಡ 90ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಏಳು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ಹೊಂದಿರುವ ಪ್ರಕರಣಗಳಲ್ಲಿ ಅಪರಾಧ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.
ಗುಂಪು ಥಳಿತ, ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ಹಾಗೂ ಸರಕಾರಿ ಉದ್ಯೋಗಿಗಳ ಮೇಲೆ ಮೊಕದ್ದಮೆ ಹೂಡಲು ಕಾಲಮಿತಿಯ ಅನುಮೋದನೆಗಳಿಗೆ ಸಂಬಂಧಿಸಿದಂತೆ ಹೊಸ ದಂಡ ಸಂಹಿತೆಯನ್ನು ಈ ಪ್ರಮುಖ ಮಸೂದೆಗಳು ಒಳಗೊಂಡಿವೆ. ದೇಶದ ವಿರುದ್ಧ ಸಮರ ಸಾರುವುದು ಸೇರಿದಂತೆ ಪ್ರತ್ಯೇಕವಾದದ ಅಪರಾಧಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ದೇಶದ್ರೋಹ ಪ್ರಕರಣವನ್ನು ಈವರೆಗೂ ಐಪಿಸಿ ಸೆಕ್ಷನ್ 124ಎ ಅಡಿಯಲ್ಲಿ ದಾಖಲಿಸಲಾಗುತ್ತಿದೆ.