Explainer Video: ಹುಲಿ ಉಗುರಿನ ತಂಟೆಗೆ ಹೋದ್ರೆ ಡೇಂಜರ್! ಕಾನೂನು ಏನಿದೆ?
1315 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಹುಲಿ ಉಗುರು, ಚಿಂಕೆ ಚರ್ಮ, ನವಿಲು ಗರಿ ಸೇರಿದಂತೆ ವನ್ಯ ಜೀವಿಗಳ ದೇಹದ ಯಾವುದೇ ಭಾಗದ ತಂಟೆಗೆ ಹೋದ್ರೂ ಏಟು ಬೀಳೋದು ಗ್ಯಾರಂಟಿ! ಯಾಕಂದ್ರೆ ವನ್ಯ ಜೀವಿಗಳ ದೇಹದ ಭಾಗಗಳನ್ನು ಬಳಕೆ ಮಾಡೋದು ಅಪರಾಧ! ಈ ಕುರಿತಾಗಿ ಪ್ರಬಲ ಕಾನೂನುಗಳಿವೆ. ಕಾಲ ಕಾಲಕ್ಕೆ ಈ ಕಾನೂನುಗಳಲ್ಲಿ ಬದಲಾವಣೆ ಮಾಡಿ ಲೋಪ ದೋಷಗಳನ್ನು ತಿದ್ದಲಾಗುತ್ತಿದೆ. ಆದರೆ, ಜನರ ಲೋಭ, ಧನದಾಹ ಹಾಗೂ ದರಾಸೆಗೆ ಪರಿಹಾರ ಎಲ್ಲಿದೆ? ಜನರ ನಂಬಿಕೆಗಳು ಬದಲಾಗೋಕೆ ಸಾಧ್ಯವೇ?
1972ರಿಂದ ದೇಶದಲ್ಲಿ ವನ್ಯಜೀವಿ ರಕ್ಷಣಾ ಅಧಿನಿಯಮ ಜಾರಿಯಲ್ಲಿದೆ. ಈ ಕಾನೂನು ಕಾಡಿನ ಪ್ರಾಣಿಗಳ ರಕ್ಷಣೆಗೆ ಬದ್ಧವಾಗಿದೆ. ಕಾಡು ಪ್ರಾಣಿಗಳ ಬೇಟೆ, ಮಾಂಸ ಭಕ್ಷಣೆ ಹಾಗೂ ಅವುಗಳ ದೇಹದ ಬಿಡಿ ಭಾಗಗಳ ಮಾರಾಟವನ್ನ ತಡೆಯೋದಕ್ಕಾಗಿ ಈ ಕಾನೂನು ರೂಪಿಸಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ಸರ್ಕಾರ ಇನ್ನಷ್ಟು ಬಲ ತುಂಬಿದೆ. 2022ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಹಲವು ಲೋಪದೋಷಗಳನ್ನ ಸರಿಪಡಿಸಲಾಗಿದೆ. ಆದರೆ, ಬಡತನ ಹಾಗೂ ದುರಾಸೆಯ ಲೋಪವನ್ನ ಸರಿಪಡಿಸೋಕೆ ಯಾರಿಂದ ತಾನೇ ಸಾಧ್ಯವಿದೆ? ಕಾಡಂಚಿನ ಹಾಗೂ ಅರಣ್ಯ ವಾಸಿಗಳ ಬಡತನವನ್ನೇ ಕೆಲವು ದುಷ್ಟರು ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ತಿದ್ದಾರೆ. ಬುಡಕಟ್ಟು ಜನರಿಗೆ ಹಣದ ಆಮಿಷ ತೋರಿಸಿ ವನ್ಯ ಜೀವಿಗಳ ಹತ್ಯೆ ಮಾಡಿಸಿ ಅವುಗಳ ದೇಹದ ಬಿಡಿ ಭಾಗಗಳನ್ನು ಖರೀದಿ ಮಾಡುತ್ತಿದ್ದಾರೆ. ಜಿಂಕೆ ಮಾಂಸದ ದಂಧೆ ಕೂಡಾ ಇದೇ ರೀತಿ ನಡೆಯುತ್ತಿದೆ. ಹುಲಿಗಳ ಬೇಟೆ ವಿಚಾರಕ್ಕೆ ಬಂದರೆ ಕರ್ನಾಟಕಕ್ಕಿಂತಲೂ ಮಹಾರಾಷ್ಟ್ರ ಹಾಗೂ ಮಧ್ಯ ಪ್ರದೇಶ ಭಾಗದಲ್ಲಿ ವಿಪರೀತವಾಗಿದೆ. ಭಾರತದಲ್ಲಿ ಸಂಗ್ರಹಿಸಲಾದ ವನ್ಯಜೀವಿಗಳ ದೇಹದ ಬಿಡಿ ಭಾಗಗಳನ್ನ ನೇಪಾಳ, ಭೂತಾನ್, ಚೀನಾ ಮಾರ್ಗವಾಗಿ ವಿಶ್ವಾದ್ಯಂತ ರವಾನೆ ಮಾಡಲಾಗ್ತಿದೆ. ಒಟ್ಟಿನಲ್ಲಿ ಮಾನವನ ಧನದಾಹಕ್ಕೆ ಅಮಾಯಕ ವನ್ಯ ಜೀವಿಗಳು ಬಲಿಯಾಗುತ್ತಲೇ ಇವೆ.
1972ರಿಂದ ದೇಶದಲ್ಲಿ ವನ್ಯಜೀವಿ ರಕ್ಷಣಾ ಅಧಿನಿಯಮ ಜಾರಿಯಲ್ಲಿದೆ. ಈ ಕಾನೂನು ಕಾಡಿನ ಪ್ರಾಣಿಗಳ ರಕ್ಷಣೆಗೆ ಬದ್ಧವಾಗಿದೆ. ಕಾಡು ಪ್ರಾಣಿಗಳ ಬೇಟೆ, ಮಾಂಸ ಭಕ್ಷಣೆ ಹಾಗೂ ಅವುಗಳ ದೇಹದ ಬಿಡಿ ಭಾಗಗಳ ಮಾರಾಟವನ್ನ ತಡೆಯೋದಕ್ಕಾಗಿ ಈ ಕಾನೂನು ರೂಪಿಸಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ಸರ್ಕಾರ ಇನ್ನಷ್ಟು ಬಲ ತುಂಬಿದೆ. 2022ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಹಲವು ಲೋಪದೋಷಗಳನ್ನ ಸರಿಪಡಿಸಲಾಗಿದೆ. ಆದರೆ, ಬಡತನ ಹಾಗೂ ದುರಾಸೆಯ ಲೋಪವನ್ನ ಸರಿಪಡಿಸೋಕೆ ಯಾರಿಂದ ತಾನೇ ಸಾಧ್ಯವಿದೆ? ಕಾಡಂಚಿನ ಹಾಗೂ ಅರಣ್ಯ ವಾಸಿಗಳ ಬಡತನವನ್ನೇ ಕೆಲವು ದುಷ್ಟರು ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ತಿದ್ದಾರೆ. ಬುಡಕಟ್ಟು ಜನರಿಗೆ ಹಣದ ಆಮಿಷ ತೋರಿಸಿ ವನ್ಯ ಜೀವಿಗಳ ಹತ್ಯೆ ಮಾಡಿಸಿ ಅವುಗಳ ದೇಹದ ಬಿಡಿ ಭಾಗಗಳನ್ನು ಖರೀದಿ ಮಾಡುತ್ತಿದ್ದಾರೆ. ಜಿಂಕೆ ಮಾಂಸದ ದಂಧೆ ಕೂಡಾ ಇದೇ ರೀತಿ ನಡೆಯುತ್ತಿದೆ. ಹುಲಿಗಳ ಬೇಟೆ ವಿಚಾರಕ್ಕೆ ಬಂದರೆ ಕರ್ನಾಟಕಕ್ಕಿಂತಲೂ ಮಹಾರಾಷ್ಟ್ರ ಹಾಗೂ ಮಧ್ಯ ಪ್ರದೇಶ ಭಾಗದಲ್ಲಿ ವಿಪರೀತವಾಗಿದೆ. ಭಾರತದಲ್ಲಿ ಸಂಗ್ರಹಿಸಲಾದ ವನ್ಯಜೀವಿಗಳ ದೇಹದ ಬಿಡಿ ಭಾಗಗಳನ್ನ ನೇಪಾಳ, ಭೂತಾನ್, ಚೀನಾ ಮಾರ್ಗವಾಗಿ ವಿಶ್ವಾದ್ಯಂತ ರವಾನೆ ಮಾಡಲಾಗ್ತಿದೆ. ಒಟ್ಟಿನಲ್ಲಿ ಮಾನವನ ಧನದಾಹಕ್ಕೆ ಅಮಾಯಕ ವನ್ಯ ಜೀವಿಗಳು ಬಲಿಯಾಗುತ್ತಲೇ ಇವೆ.