ಪಕ್ಕಾ ಆಗೋಯ್ತು...ಕಾಂಗ್ರೆಸ್ ಯೋಚನೆಯಲ್ಲೂ ಔಟ್ಡೇಟ್! ರಾಜ್ಯಸಭೆಯಲ್ಲಿ ಮೋದಿ ಲೇವಡಿ
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಬಜೆಟ್ ಅಧಿವೇಶನದ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ವೇಳೆ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಾತನಾಡಿದರು. ''ಕಾಂಗ್ರೆಸ್ ದೇಶದ ಬಹಳಷ್ಟು ಭೂ ಭಾಗವನ್ನು ನಮ್ಮ ಶತ್ರುಗಳಿಗೆ ಬಿಟ್ಟುಕೊಟ್ಟರು, ರಾಷ್ಟ್ರದ ಸೇನೆಯ ಆಧುನೀಕರಣವನ್ನು ಕಾಂಗ್ರೆಸ್ ತಡೆಯಿತು, ಇಂದು ನಮಗೆ ರಾಷ್ಟ್ರೀಯ ಭದ್ರತೆ ಮತ್ತು ಆಂತರಿಕ ಭದ್ರತೆಯ ಬಗ್ಗೆ ಭಾಷಣ ಮಾಡುತ್ತಿದೆ. ಕಾಂಗ್ರೆಸ್ ಯಾವಾಗಲೂ ಗೊಂದಲದಲ್ಲಿಯೇ ಉಳಿಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಲಿಂದಲೂ ಗೊಂದಲದಲ್ಲಿಯೇ ಸಾಗಿದೆ. ಕೈಗಾರಿಕೆಗಳು ಬೇಕಿದೆಯೋ ಅಥವಾ ಕೃಷಿ. ರಾಷ್ಟ್ರೀಕರಣ ಮುಖ್ಯವೋ ಅಥವಾ ಖಾಸಗೀಕರಣವೋ...ಎಂಬ ಗೊಂದಲ್ಲೇ ಇದೆ ಕಾಂಗ್ರಸ್. ಭಾರತದ ಆರ್ಥಿಕತೆಯ ಸಂಖ್ಯೆಯನ್ನು ಹತ್ತು ವರ್ಷಗಳಲ್ಲಿ ಕಾಂಗ್ರೆಸ್ 12ರಿಂದ 11ಕ್ಕೆ ತಂದಿತು. ನಾವು ಹತ್ತು ವರ್ಷಗಳಲ್ಲಿ ಐದನೇ ಸ್ಥಾನಕ್ಕೆ ತಂದಿದ್ದೇವೆ'' ಎಂದು ಪ್ರಧಾನಿ ಮೋದಿ ಹೇಳಿದರು.
''ರಾಜ್ಯಸಭೆ ಮತ್ತು ಲೋಕಸಭೆ ಎರಡೂ ಕಡೆ ಕಾಂಗ್ರೆಸ್ ಪಕ್ಷದ ನಾಯಕರ ಮಾತುಗಳನ್ನು ಕೇಳಿದ ಬಳಿಕ ನನಗೆ ಪಕ್ಕಾ ಆಗೋಯ್ತು, ಅವರು ಯೋಚನೆಯಲ್ಲೂ ಔಟ್ಡೇಟ್ ಆಗಿದ್ದಾರೆ. ಅವರ ಯೋಚನೆಗಳು ಔಟ್ಡೇಟ್ ಆಗುತ್ತಿದ್ದಂತೆ ಕೆಲಸಗಳಿಗೆ ಔಟ್ಸೋರ್ಸ್ ಮಾಡುತ್ತಿದ್ದಾರೆ. ಹತ್ತಾರು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಬೃಹತ್ ಪಕ್ಷವು ಈಗ ಕೆಳಕ್ಕೆ ಕುಸಿದಿದೆ'' ಎಂದು ಮೋದಿ ಟೀಕಿಸಿದರು.
ಪ್ರಧಾನಿ ಮೋದಿ, ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಐಎನ್ಡಿಐಎ ಮೈತ್ರಿಕೂಟವನ್ನು ಟೀಕಿಸಿದರು. "ಖರ್ಗೆ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಖರ್ಗೆ ಅವರು ಎನ್ಡಿಎಗೆ 400 ಸೀಟುಗಳ ಆಶೀರ್ವಾದ ಮಾಡಿದ್ದಾರೆ. ಖರ್ಗೆ ಅವರಿಗೆ ಮಾತನಾಡಲು ಹೇಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ನನಗೆ ಅಚ್ಚರಿಯಾಗಿತ್ತು. ಬಳಿಕ ನನಗೆ ಗೊತ್ತಾಯಿತು, ಅಂದು ಇಬ್ಬರು ವಿಶೇಷ ಕಮಾಂಡರ್ಗಳು ಹಾಜರಿರಲಿಲ್ಲ. ಹೀಗಾಗಿ ಅವರು ತಮ್ಮ ಸ್ವಾತಂತ್ರ್ಯದ ಪೂರ್ಣ ಲಾಭ ಪಡೆದುಕೊಂಡರು" ಎಂದು ವ್ಯಂಗ್ಯವಾಡಿದರು.
''ರಾಜ್ಯಸಭೆ ಮತ್ತು ಲೋಕಸಭೆ ಎರಡೂ ಕಡೆ ಕಾಂಗ್ರೆಸ್ ಪಕ್ಷದ ನಾಯಕರ ಮಾತುಗಳನ್ನು ಕೇಳಿದ ಬಳಿಕ ನನಗೆ ಪಕ್ಕಾ ಆಗೋಯ್ತು, ಅವರು ಯೋಚನೆಯಲ್ಲೂ ಔಟ್ಡೇಟ್ ಆಗಿದ್ದಾರೆ. ಅವರ ಯೋಚನೆಗಳು ಔಟ್ಡೇಟ್ ಆಗುತ್ತಿದ್ದಂತೆ ಕೆಲಸಗಳಿಗೆ ಔಟ್ಸೋರ್ಸ್ ಮಾಡುತ್ತಿದ್ದಾರೆ. ಹತ್ತಾರು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಬೃಹತ್ ಪಕ್ಷವು ಈಗ ಕೆಳಕ್ಕೆ ಕುಸಿದಿದೆ'' ಎಂದು ಮೋದಿ ಟೀಕಿಸಿದರು.
ಪ್ರಧಾನಿ ಮೋದಿ, ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಐಎನ್ಡಿಐಎ ಮೈತ್ರಿಕೂಟವನ್ನು ಟೀಕಿಸಿದರು. "ಖರ್ಗೆ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಖರ್ಗೆ ಅವರು ಎನ್ಡಿಎಗೆ 400 ಸೀಟುಗಳ ಆಶೀರ್ವಾದ ಮಾಡಿದ್ದಾರೆ. ಖರ್ಗೆ ಅವರಿಗೆ ಮಾತನಾಡಲು ಹೇಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ನನಗೆ ಅಚ್ಚರಿಯಾಗಿತ್ತು. ಬಳಿಕ ನನಗೆ ಗೊತ್ತಾಯಿತು, ಅಂದು ಇಬ್ಬರು ವಿಶೇಷ ಕಮಾಂಡರ್ಗಳು ಹಾಜರಿರಲಿಲ್ಲ. ಹೀಗಾಗಿ ಅವರು ತಮ್ಮ ಸ್ವಾತಂತ್ರ್ಯದ ಪೂರ್ಣ ಲಾಭ ಪಡೆದುಕೊಂಡರು" ಎಂದು ವ್ಯಂಗ್ಯವಾಡಿದರು.