ಅಬುದಾಬಿಯಲ್ಲಿ ಹಿಂದೂ ಭವ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ..!
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಬುಧಾಬಿಯಲ್ಲಿ ಮೊಟ್ಟ ಮೊದಲ ಹಿಂದೂ ಮಂದಿರವನ್ನು ಉದ್ಘಾಟನೆ ಮಾಡಿದರು. ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಂದಿರವನ್ನು ನಿರ್ಮಿಸಲಾಗಿದೆ. ಇಲ್ಲಿ 'ಥ್ರೀಡಿ ಪ್ರಿಂಟಿಂಗ್' ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ ವಾಲ್ ಆಫ್ ಹಾರ್ಮೊನಿಯು ಮತ್ತೊಂದು ವಿಶೇಷವಾಗಿದೆ.
ಎರಡು ದಿನಗಳ ಯುಎಇ ಪ್ರವಾಸದಲ್ಲಿರುವ ಮೋದಿ ಅವರು ಮಂಗಳವಾರ ಯುಎಇ ಅಧ್ಯಕ್ಷ ಶೇಖ್ ಮೊಹಮದ್ ಬಿನ್ ಜಯೇದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಮುಖ ಸಭೆಗಳನ್ನು ಕೈಗೊಂಡರು. ರುಪೇ ಕಾರ್ಡ್ ಗಿಫ್ಟ್ ಕೊಡುವ ಮೂಲಕ ದೇಶದ ಫಿನ್ಟೆಕ್ ತಂತ್ರಜ್ಞಾನವನ್ನು ಯುಎಇಗೆ ಹಸ್ತಾಂತರಿಸಿದರು. ಇದರೊಂದಿಗೆ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ 'ಅಹ್ಲಾನ್ ಮೋದಿ ಕಾರ್ಯಕ್ರಮದಲ್ಲಿ' ಮಾತನಾಡಿದರು. ಬುಧವಾರ ಸ್ವಾಮಿ ನಾರಾಯಣ ಮಂದಿರವನ್ನು ಉದ್ಘಾಟಿಸಿದ್ದಾರೆ.
ಗಂಗೆಗೆ ಪೂಜೆ ಸಲ್ಲಿಸಿದ ನಂತರ ಮಂದಿರದ ಮೆಟ್ಟಿಲುಗಳನ್ನು ಏರಿದ ಪ್ರಧಾನಿ ಮೋದಿ ಅವರು ಅಧಿಕೃತವಾಗಿ ಮಂದಿರದ ಉದ್ಘಾಟನೆ ನೆರವೇರಿಸಿದರು. ಸ್ವಾಮೀಜಿಗಳ ನೇತೃತ್ವದಲ್ಲಿ ಬಾಪ್ಸ್ ಹಿಂದೂ ಮಂದಿರವು ಲೋಕಾರ್ಪಣೆಗೊಂಡಿದೆ. ದೇವಾಲಯದ ಒಳಗಿನ ಕೆತ್ತನೆಯ ವೈಭವದ ಬಗ್ಗೆ ಸ್ವಾಮೀಜಿಗಳು ಮೋದಿ ಅವರಿಗೆ ವಿವರಿಸಿದರು.
ಅಬುಧಾಬಿ-ದುಬೈ ಹೆದ್ದಾರಿಯ ರಹ್ಬಾ ಪ್ರದೇಶದ ಅಬು ಮುರೇಖಾದ ವೈಭವದ ಸ್ವಾಮಿನಾರಾಯಣ ಮಂದಿರವು ದುಬೈಯಿಂದ 50 ನಿಮಿಷ, ಅಬುಧಾಬಿಯಿಂದ 35 ನಿಮಿಷದಷ್ಟು ದೂರದಲ್ಲಿದೆ. ರಹ್ಬಾದ ಸ್ವಾಮಿನಾರಾಯಣ ಮಂದಿರವು ಹಿಂದೂ-ಮುಸ್ಲಿಂ ಎರಡು ಸಮುದಾಯಗಳು ಸಾಮರಸ್ಯದಿಂದ ಈ ಭವ್ಯ ಮಂದಿರದ ನಿರ್ಮಾಣವಾಗಿದೆ. 24 ಎಕರೆ ಭೂಮಿಯನ್ನು ಮಂದಿರ ನಿರ್ಮಾಣಕ್ಕೆಂದು ಅಬುಧಾಬಿ ದೊರೆ ಕಾಣಿಕೆ ಕೊಟ್ಟಿದ್ದಾರೆ. ಜಗತ್ತಿನ ವಿವಿಧ ಭಾಗಗಳಲ್ಲಿ ನೆಲೆ ನಿಂತ ಸಿರಿವಂತ ಹಿಂದೂಗಳು ಈ ಮಂದಿರ ನಿರ್ಮಾಣಕ್ಕೆ 700 ಕೋಟಿ ರೂಪಾಯಿ ದೇಣಿಗೆ ಭರಿಸಿದ್ದಾರೆ. ಮುಸ್ಲಿಂ ದೊರೆಗಳ ಆಡಳಿತ ಭೂಮಿಯಲ್ಲಿ ಪ್ರಧಾನಿ ಮೋದಿ ಅವರು ಮಂದಿರ ಲೋಕಾರ್ಪಣೆಗೊಳಿಸಿದ್ದಾರೆ.
ಎರಡು ದಿನಗಳ ಯುಎಇ ಪ್ರವಾಸದಲ್ಲಿರುವ ಮೋದಿ ಅವರು ಮಂಗಳವಾರ ಯುಎಇ ಅಧ್ಯಕ್ಷ ಶೇಖ್ ಮೊಹಮದ್ ಬಿನ್ ಜಯೇದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಮುಖ ಸಭೆಗಳನ್ನು ಕೈಗೊಂಡರು. ರುಪೇ ಕಾರ್ಡ್ ಗಿಫ್ಟ್ ಕೊಡುವ ಮೂಲಕ ದೇಶದ ಫಿನ್ಟೆಕ್ ತಂತ್ರಜ್ಞಾನವನ್ನು ಯುಎಇಗೆ ಹಸ್ತಾಂತರಿಸಿದರು. ಇದರೊಂದಿಗೆ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ 'ಅಹ್ಲಾನ್ ಮೋದಿ ಕಾರ್ಯಕ್ರಮದಲ್ಲಿ' ಮಾತನಾಡಿದರು. ಬುಧವಾರ ಸ್ವಾಮಿ ನಾರಾಯಣ ಮಂದಿರವನ್ನು ಉದ್ಘಾಟಿಸಿದ್ದಾರೆ.
ಗಂಗೆಗೆ ಪೂಜೆ ಸಲ್ಲಿಸಿದ ನಂತರ ಮಂದಿರದ ಮೆಟ್ಟಿಲುಗಳನ್ನು ಏರಿದ ಪ್ರಧಾನಿ ಮೋದಿ ಅವರು ಅಧಿಕೃತವಾಗಿ ಮಂದಿರದ ಉದ್ಘಾಟನೆ ನೆರವೇರಿಸಿದರು. ಸ್ವಾಮೀಜಿಗಳ ನೇತೃತ್ವದಲ್ಲಿ ಬಾಪ್ಸ್ ಹಿಂದೂ ಮಂದಿರವು ಲೋಕಾರ್ಪಣೆಗೊಂಡಿದೆ. ದೇವಾಲಯದ ಒಳಗಿನ ಕೆತ್ತನೆಯ ವೈಭವದ ಬಗ್ಗೆ ಸ್ವಾಮೀಜಿಗಳು ಮೋದಿ ಅವರಿಗೆ ವಿವರಿಸಿದರು.
ಅಬುಧಾಬಿ-ದುಬೈ ಹೆದ್ದಾರಿಯ ರಹ್ಬಾ ಪ್ರದೇಶದ ಅಬು ಮುರೇಖಾದ ವೈಭವದ ಸ್ವಾಮಿನಾರಾಯಣ ಮಂದಿರವು ದುಬೈಯಿಂದ 50 ನಿಮಿಷ, ಅಬುಧಾಬಿಯಿಂದ 35 ನಿಮಿಷದಷ್ಟು ದೂರದಲ್ಲಿದೆ. ರಹ್ಬಾದ ಸ್ವಾಮಿನಾರಾಯಣ ಮಂದಿರವು ಹಿಂದೂ-ಮುಸ್ಲಿಂ ಎರಡು ಸಮುದಾಯಗಳು ಸಾಮರಸ್ಯದಿಂದ ಈ ಭವ್ಯ ಮಂದಿರದ ನಿರ್ಮಾಣವಾಗಿದೆ. 24 ಎಕರೆ ಭೂಮಿಯನ್ನು ಮಂದಿರ ನಿರ್ಮಾಣಕ್ಕೆಂದು ಅಬುಧಾಬಿ ದೊರೆ ಕಾಣಿಕೆ ಕೊಟ್ಟಿದ್ದಾರೆ. ಜಗತ್ತಿನ ವಿವಿಧ ಭಾಗಗಳಲ್ಲಿ ನೆಲೆ ನಿಂತ ಸಿರಿವಂತ ಹಿಂದೂಗಳು ಈ ಮಂದಿರ ನಿರ್ಮಾಣಕ್ಕೆ 700 ಕೋಟಿ ರೂಪಾಯಿ ದೇಣಿಗೆ ಭರಿಸಿದ್ದಾರೆ. ಮುಸ್ಲಿಂ ದೊರೆಗಳ ಆಡಳಿತ ಭೂಮಿಯಲ್ಲಿ ಪ್ರಧಾನಿ ಮೋದಿ ಅವರು ಮಂದಿರ ಲೋಕಾರ್ಪಣೆಗೊಳಿಸಿದ್ದಾರೆ.