Explainer Video: ಮಂದಿರಕ್ಕಾಗಿ 11 ದಿನಗಳ ಕಾಲ ಪ್ರಧಾನಿ ಮೋದಿ 'ಅನುಷ್ಠಾನ'!
1398 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಅಯೋಧ್ಯಾ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು 11 ದಿನಗಳ ಕಾಲ ಅನುಷ್ಠಾನ ಕೈಗೊಂಡಿರೋದಾಗಿ ಹೇಳಿದ್ದಾರೆ. ಈ ‘ಅನುಷ್ಠಾನ’ ಎಂದರೇನು? 11 ದಿನ ಪ್ರಧಾನಿ ಮೋದಿ ಏನು ಮಾಡ್ತಾರೆ? ‘ಅನುಷ್ಠಾನ’ ವಿಧಿಯ ಸಂಕಲ್ಪವನ್ನ ಪ್ರಧಾನಿ ಮೋದಿ ಏಕೆ ಮಾಡಿದರು? ‘ಅನುಷ್ಠಾನ’ದಿಂದ ಏನೆಲ್ಲಾ ಪ್ರಯೋಜನಗಳಿವೆ? ಈ ಕ್ರಿಯೆಗೆ ಆಧ್ಯಾತ್ಮಕ ಮಹತ್ವ ಏನು? ಈ ಕುರಿತ ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.
ಅನುಷ್ಠಾನ ಕೈಗೊಳ್ಳುವಾಗ ಯಾವುದೇ ಇಷ್ಟ ದೈವವನ್ನು ಪ್ರಾರ್ಥಿಸಬಹುದು. ರಾಮ ಮಂದಿರ ಉದ್ಘಾಟನೆ ಮಾಡುವ, ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡುವ ಮಹತ್ವದ ಕೈಂಕರ್ಯವನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ. ಈ ಅಭೂತಪೂರ್ವ ಅವಕಾಶ ಪ್ರಧಾನಿ ಮೋದಿ ಅವರಿಗೆ ಸಿಕ್ಕಿದೆ. ಹೀಗಾಗಿ, ಸಹಜವಾಗಿಯೇ ಅನುಷ್ಠಾನ ಮಾಡುವಾಗ ಭಗವಾನ್ ಶ್ರೀರಾಮರನ್ನೇ ಪ್ರಾರ್ಥಿಸುತ್ತಾರೆ.
ಶ್ರೀರಾಮನ ಮೂರ್ತಿಯ ಎದುರು ಸ್ಥಿರ ಭಂಗಿಯ ಆಸನದಲ್ಲಿ ಕುಳಿತು ರಾಮನ ಮೂರ್ತಿಯನ್ನು ಮನಸ್ಸಿಗೆ ತುಂಬಿಕೊಳ್ಳೋದು ಅನುಷ್ಠಾನದ ಮೊದಲ ಹಂತ. ಮೂರ್ತಿ ಯಾವ ರೀತಿಯದ್ದೇ ಆಗಿರಬಹುದು. ಜೇಡಿ ಮಣ್ಣು, ಕಲ್ಲು, ಲೋಹ ಸೇರಿದಂತೆ ಯಾವುದೇ ವಸ್ತುವಿನಿಂದ ತಯಾರಿಸಿದ ಮೂರ್ತಿಯಾದರೂ ಸರಿ. ರಾಮನ ಗುಣಗಳನ್ನು ಸ್ಮರಿಸುತ್ತಾ, ಧರ್ಮ ಗ್ರಂಥಗಳ ಜಪ, ಪೂಜೆ ಮಾಡಬಹುದು. ರಾಮಾಯಣ ಕೂಡಾ ಓದಬಹುದು. ಧ್ಯಾನವನ್ನೂ ಮಾಡಬಹುದು. ರಾಮನ ಗುಣಗಳನ್ನು ಆವಾಹಿಸಿಕೊಳ್ಳುತ್ತಾ ತಾವೇ ರಾಮರಾಗುವ ದಿವ್ಯ ಅನುಭವವನ್ನು ಒಟ್ಟಾರೆಯಾಗಿ ಅನುಷ್ಠಾನ ಎಂದು ಕರೆಯಬಹುದಾಗಿದೆ. ಈ ಅನುಷ್ಠಾನ ಕಾರ್ಯವನ್ನು ಪದೇ ಪದೇ ನೆರವೇರಿಸಬಹುದು.
ಅನುಷ್ಠಾನ ಅನ್ನೋದು ಅತ್ಯಂತ ಮಹತ್ವದ ಕಾರ್ಯ. ಮನೋನಿಗ್ರಹ, ಮಾನಸಿಕ ಸಾಮರ್ಥ್ಯ ವೃದ್ದಿ ಹಾಗೂ ಏಕಾಗ್ರತೆ ಹೆಚ್ಚಿಸಲು ಇದು ನೆರವಾಗುತ್ತದೆ. ಮನಸ್ಸಿನಲ್ಲಿ ಇರುವ ಋಣಾತ್ಮಕ ಆಲೋಚನೆಗಳು ದೂರವಾಗುತ್ತವೆ. ಬಾಹ್ಯ ಹಾಗೂ ಪ್ರಾಪಂಚಿಕ ವಿಷಯಗಳಿಂದ ಮನಸ್ಸು ಮುಕ್ತವಾಗುತ್ತದೆ. ಮನಸ್ಸು ಆಧ್ಯಾತ್ಮದ ಹಾದಿಯಲ್ಲಿ ಸಾಗಲು ನೆರವಾಗುತ್ತದೆ. ಭಗವಂತನ ಕಡೆಗೆ, ಇಷ್ಟ ದೇವತೆಯ ಕಡೆಗೆ ಮನಸ್ಸು ಹರಿಯಲು ಅನುಷ್ಠಾನ ಸಹಾಯ ಮಾಡಲಿದೆ. ಭಕ್ತನು ತನ್ನನ್ನು ತಾನು ಮರೆತು ಭಗವಂತನಲ್ಲಿ ಒಂದಾಗುವ ಪಾರಮಾರ್ಥಿಕ ಉದ್ದೇಶವನ್ನು ಅನುಷ್ಠಾನ ಹೊಂದಿದೆ. ದೇಹವು ಇನ್ನಷ್ಟು ಮತ್ತಷ್ಟು ಪರಿಶುದ್ಧವಾಗಲು, ದೈವಿಕ ಅನುಭೂತಿ ಪಡೆಯಲು ಹಾಗೂ ಅಂತಿಮವಾಗಿ ಸಮಾಧಿ ಸ್ಥಿತಿ ತಲುಪಲು ಈ ಕ್ರಿಯೆಯು ನೆರವಾಗುತ್ತದೆ.
ಅನುಷ್ಠಾನ ಕೈಗೊಳ್ಳುವಾಗ ಯಾವುದೇ ಇಷ್ಟ ದೈವವನ್ನು ಪ್ರಾರ್ಥಿಸಬಹುದು. ರಾಮ ಮಂದಿರ ಉದ್ಘಾಟನೆ ಮಾಡುವ, ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡುವ ಮಹತ್ವದ ಕೈಂಕರ್ಯವನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ. ಈ ಅಭೂತಪೂರ್ವ ಅವಕಾಶ ಪ್ರಧಾನಿ ಮೋದಿ ಅವರಿಗೆ ಸಿಕ್ಕಿದೆ. ಹೀಗಾಗಿ, ಸಹಜವಾಗಿಯೇ ಅನುಷ್ಠಾನ ಮಾಡುವಾಗ ಭಗವಾನ್ ಶ್ರೀರಾಮರನ್ನೇ ಪ್ರಾರ್ಥಿಸುತ್ತಾರೆ.
ಶ್ರೀರಾಮನ ಮೂರ್ತಿಯ ಎದುರು ಸ್ಥಿರ ಭಂಗಿಯ ಆಸನದಲ್ಲಿ ಕುಳಿತು ರಾಮನ ಮೂರ್ತಿಯನ್ನು ಮನಸ್ಸಿಗೆ ತುಂಬಿಕೊಳ್ಳೋದು ಅನುಷ್ಠಾನದ ಮೊದಲ ಹಂತ. ಮೂರ್ತಿ ಯಾವ ರೀತಿಯದ್ದೇ ಆಗಿರಬಹುದು. ಜೇಡಿ ಮಣ್ಣು, ಕಲ್ಲು, ಲೋಹ ಸೇರಿದಂತೆ ಯಾವುದೇ ವಸ್ತುವಿನಿಂದ ತಯಾರಿಸಿದ ಮೂರ್ತಿಯಾದರೂ ಸರಿ. ರಾಮನ ಗುಣಗಳನ್ನು ಸ್ಮರಿಸುತ್ತಾ, ಧರ್ಮ ಗ್ರಂಥಗಳ ಜಪ, ಪೂಜೆ ಮಾಡಬಹುದು. ರಾಮಾಯಣ ಕೂಡಾ ಓದಬಹುದು. ಧ್ಯಾನವನ್ನೂ ಮಾಡಬಹುದು. ರಾಮನ ಗುಣಗಳನ್ನು ಆವಾಹಿಸಿಕೊಳ್ಳುತ್ತಾ ತಾವೇ ರಾಮರಾಗುವ ದಿವ್ಯ ಅನುಭವವನ್ನು ಒಟ್ಟಾರೆಯಾಗಿ ಅನುಷ್ಠಾನ ಎಂದು ಕರೆಯಬಹುದಾಗಿದೆ. ಈ ಅನುಷ್ಠಾನ ಕಾರ್ಯವನ್ನು ಪದೇ ಪದೇ ನೆರವೇರಿಸಬಹುದು.
ಅನುಷ್ಠಾನ ಅನ್ನೋದು ಅತ್ಯಂತ ಮಹತ್ವದ ಕಾರ್ಯ. ಮನೋನಿಗ್ರಹ, ಮಾನಸಿಕ ಸಾಮರ್ಥ್ಯ ವೃದ್ದಿ ಹಾಗೂ ಏಕಾಗ್ರತೆ ಹೆಚ್ಚಿಸಲು ಇದು ನೆರವಾಗುತ್ತದೆ. ಮನಸ್ಸಿನಲ್ಲಿ ಇರುವ ಋಣಾತ್ಮಕ ಆಲೋಚನೆಗಳು ದೂರವಾಗುತ್ತವೆ. ಬಾಹ್ಯ ಹಾಗೂ ಪ್ರಾಪಂಚಿಕ ವಿಷಯಗಳಿಂದ ಮನಸ್ಸು ಮುಕ್ತವಾಗುತ್ತದೆ. ಮನಸ್ಸು ಆಧ್ಯಾತ್ಮದ ಹಾದಿಯಲ್ಲಿ ಸಾಗಲು ನೆರವಾಗುತ್ತದೆ. ಭಗವಂತನ ಕಡೆಗೆ, ಇಷ್ಟ ದೇವತೆಯ ಕಡೆಗೆ ಮನಸ್ಸು ಹರಿಯಲು ಅನುಷ್ಠಾನ ಸಹಾಯ ಮಾಡಲಿದೆ. ಭಕ್ತನು ತನ್ನನ್ನು ತಾನು ಮರೆತು ಭಗವಂತನಲ್ಲಿ ಒಂದಾಗುವ ಪಾರಮಾರ್ಥಿಕ ಉದ್ದೇಶವನ್ನು ಅನುಷ್ಠಾನ ಹೊಂದಿದೆ. ದೇಹವು ಇನ್ನಷ್ಟು ಮತ್ತಷ್ಟು ಪರಿಶುದ್ಧವಾಗಲು, ದೈವಿಕ ಅನುಭೂತಿ ಪಡೆಯಲು ಹಾಗೂ ಅಂತಿಮವಾಗಿ ಸಮಾಧಿ ಸ್ಥಿತಿ ತಲುಪಲು ಈ ಕ್ರಿಯೆಯು ನೆರವಾಗುತ್ತದೆ.