ನಾಸಿಕ್ನ ಪಂಚವಟಿಯಲ್ಲಿ ರಾಮನಿಗಾಗಿ ವ್ರತ ಶುರು ಮಾಡಿದ ಪ್ರಧಾನಿ ಮೋದಿ, ಇದು 11 ದಿನಗಳ ಆಚರಣೆ
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಅಯೋಧ್ಯಾದ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅದಕ್ಕೂ ಮುನ್ನ 11 ದಿನಗಳ ಧಾರ್ಮಿಕ ಆಚರಣೆಗಳನ್ನು ಆರಂಭಿಸಿದ್ದಾರೆ. ಧರ್ಮ ಗ್ರಂಥಗಳು ಮತ್ತು ಸಂತರು ಉಲ್ಲೇಖಿಸಿರುವ ನಿಯಮಗಳನ್ನು ಪಾಲಿಸುವುದಾಗಿ ಮೋದಿ ತಿಳಿಸಿದ್ದಾರೆ.
ಜನವರಿ 22ರಂದು ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಿದ್ಧತೆ ನಡೆಸುವ 'ಕಠಿಣ ಶಪಥ ಹಾಗೂ ತ್ಯಾಗ'ದ ಜತೆಗೆ 11 ದಿನಗಳ ಆಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆರಂಭಿಸಿದರು. ಈ ಸಂದರ್ಭದಲ್ಲಿ ದೇಶಕ್ಕೆ ವಿಶೇಷ ಸಂದೇಶ ನೀಡಿದ ಅವರು, ತಾವು ಭಾವುಕ ಹಾಗೂ ಆನಂದತುಂದಿಲಾಗಿರುವುದಾಗಿ ತಿಳಿಸಿದ್ದಾರೆ. "ನಾನು ಭಾವುಕನಾಗಿದ್ದೇನೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಭಾವನೆಯ ಅನುಭವ ಉಂಟಾಗುತ್ತಿದೆ" ಎಂದು 10 ನಿಮಿಷಗಳ ಆಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಅಯೋಧ್ಯಾದ ರಾಮ ಮಂದಿರದಲ್ಲಿ ಕಂಗೊಳಿಸಲಿರುವ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗುವುದು ಸಾಧ್ಯವಾಗುತ್ತಿರುವುದು ತಮ್ಮ ಅದೃಷ್ಟ ಎಂದಿದ್ದಾರೆ. ಎಲ್ಲಾ ಭಾರತೀಯರನ್ನು ಪ್ರತಿನಿಧಿಸುವ ಸಾಧನವಾಗಿ ತಮ್ಮನ್ನು ದೇವರು ಆಯ್ಕೆ ಮಾಡಿರುವುದು 'ಐತಿಹಾಸಿಕ ಮತ್ತು ಪವಿತ್ರ' ಗಳಿಗೆ ಎಂದು ಬಣ್ಣಿಸಿದ ಪ್ರಧಾನಿ, ಇದಕ್ಕೆ ತಯಾರಿ ನಡೆಸಲು ತಾವು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಹಾಗೂ ಸಂತರ ಮಾರ್ಗದರ್ಶನದಲ್ಲಿನ ನಿಯಮಗಳನ್ನು ಕಠಿಣ ನಿಯಮಗಳನ್ನು ಪಾಲನೆ ಮಾಡುವುದಾಗಿ ತಿಳಿಸಿದ್ದಾರೆ.
"ನಮ್ಮ ಧರ್ಮ ಗ್ರಂಥಗಳು ಹೇಳುವಂತೆ, ದೇವರ ಯಜ್ಞ, ಆರಾಧನೆಗೆ ನಾವು ನಮ್ಮೊಳಗಿನ ಭಕ್ತಿ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಇದಕ್ಕಾಗಿ ಧರ್ಮ ಗ್ರಂಥಗಳು ಪ್ರತಿಜ್ಞೆಗಳು ಮತ್ತು ಕಠಿಣ ನಿಯಮಗಳನ್ನು ಸೂಚಿಸುತ್ತವೆ. ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ಅವುಗಳನ್ನು ಕಠಿಣವಾಗಿ ಪಾಲಿಸಬೇಕು. ಹೀಗಾಗಿ ಈ ಆಧ್ಯಾತ್ಮಿಕ ಪ್ರಯಾಣದಲ್ಲಿ ನಾನು ಸಂತರಿಂದ ಪಡೆದ ಮಾರ್ಗದರ್ಶನಗಳನ್ನು ಪಾಲಿಸುತ್ತಿದ್ದೇನೆ. ಅವರು ಯಾಮ- ನಿಯಮಗಳನ್ನು ಸೂಚಿಸಿದ್ದಾರೆ. ಇಂದಿನಿಂದ 11 ದಿನಗಳವರೆಗೆ ನಾನು ಅದನ್ನು ವಿಶೇಷವಾಗಿ ಅನುಸರಿಸಲಿದ್ದೇನೆ" ಎಂದು ಹೇಳಿದ್ದಾರೆ.
ಜನವರಿ 22ರಂದು ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಿದ್ಧತೆ ನಡೆಸುವ 'ಕಠಿಣ ಶಪಥ ಹಾಗೂ ತ್ಯಾಗ'ದ ಜತೆಗೆ 11 ದಿನಗಳ ಆಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆರಂಭಿಸಿದರು. ಈ ಸಂದರ್ಭದಲ್ಲಿ ದೇಶಕ್ಕೆ ವಿಶೇಷ ಸಂದೇಶ ನೀಡಿದ ಅವರು, ತಾವು ಭಾವುಕ ಹಾಗೂ ಆನಂದತುಂದಿಲಾಗಿರುವುದಾಗಿ ತಿಳಿಸಿದ್ದಾರೆ. "ನಾನು ಭಾವುಕನಾಗಿದ್ದೇನೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಭಾವನೆಯ ಅನುಭವ ಉಂಟಾಗುತ್ತಿದೆ" ಎಂದು 10 ನಿಮಿಷಗಳ ಆಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಅಯೋಧ್ಯಾದ ರಾಮ ಮಂದಿರದಲ್ಲಿ ಕಂಗೊಳಿಸಲಿರುವ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗುವುದು ಸಾಧ್ಯವಾಗುತ್ತಿರುವುದು ತಮ್ಮ ಅದೃಷ್ಟ ಎಂದಿದ್ದಾರೆ. ಎಲ್ಲಾ ಭಾರತೀಯರನ್ನು ಪ್ರತಿನಿಧಿಸುವ ಸಾಧನವಾಗಿ ತಮ್ಮನ್ನು ದೇವರು ಆಯ್ಕೆ ಮಾಡಿರುವುದು 'ಐತಿಹಾಸಿಕ ಮತ್ತು ಪವಿತ್ರ' ಗಳಿಗೆ ಎಂದು ಬಣ್ಣಿಸಿದ ಪ್ರಧಾನಿ, ಇದಕ್ಕೆ ತಯಾರಿ ನಡೆಸಲು ತಾವು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಹಾಗೂ ಸಂತರ ಮಾರ್ಗದರ್ಶನದಲ್ಲಿನ ನಿಯಮಗಳನ್ನು ಕಠಿಣ ನಿಯಮಗಳನ್ನು ಪಾಲನೆ ಮಾಡುವುದಾಗಿ ತಿಳಿಸಿದ್ದಾರೆ.
"ನಮ್ಮ ಧರ್ಮ ಗ್ರಂಥಗಳು ಹೇಳುವಂತೆ, ದೇವರ ಯಜ್ಞ, ಆರಾಧನೆಗೆ ನಾವು ನಮ್ಮೊಳಗಿನ ಭಕ್ತಿ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಇದಕ್ಕಾಗಿ ಧರ್ಮ ಗ್ರಂಥಗಳು ಪ್ರತಿಜ್ಞೆಗಳು ಮತ್ತು ಕಠಿಣ ನಿಯಮಗಳನ್ನು ಸೂಚಿಸುತ್ತವೆ. ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ಅವುಗಳನ್ನು ಕಠಿಣವಾಗಿ ಪಾಲಿಸಬೇಕು. ಹೀಗಾಗಿ ಈ ಆಧ್ಯಾತ್ಮಿಕ ಪ್ರಯಾಣದಲ್ಲಿ ನಾನು ಸಂತರಿಂದ ಪಡೆದ ಮಾರ್ಗದರ್ಶನಗಳನ್ನು ಪಾಲಿಸುತ್ತಿದ್ದೇನೆ. ಅವರು ಯಾಮ- ನಿಯಮಗಳನ್ನು ಸೂಚಿಸಿದ್ದಾರೆ. ಇಂದಿನಿಂದ 11 ದಿನಗಳವರೆಗೆ ನಾನು ಅದನ್ನು ವಿಶೇಷವಾಗಿ ಅನುಸರಿಸಲಿದ್ದೇನೆ" ಎಂದು ಹೇಳಿದ್ದಾರೆ.