ರಾಂಚಿ: ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಿಯ ಬಿಸ್ಕತ್, ರಾಹುಲ್ ಕೊಟ್ಟ ಉತ್ತರವೇನು?
1315 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಶ್ವಾನವೊಂದಕ್ಕೆ ರಾಹುಲ್ ಗಾಂಧಿ ಅವರು ತಿನ್ನಲು ಬಿಸ್ಕತ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಆದರೆ, ಆ ಶ್ವಾನವು ಬಿಸ್ಕತ್ ತಿನ್ನದಿದ್ದಾಗ, ಅದೇ ಬಿಸ್ಕತ್ ಅನ್ನು ವ್ಯಕ್ತಿಯೊಬ್ಬರಿಗೆ ಕೊಟ್ಟರು. 'ನಾಯಿ ತಿನ್ನದ ಬಿಸ್ಕತ್ ಅನ್ನು ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಟ್ಟಿದ್ದಾರೆ' ಎಂದು ವಿಪಕ್ಷಗಳು ಲೇವಡಿ ಮಾಡಿವೆ. ಈ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ''ಶ್ವಾನ ಮತ್ತು ಅದರ ಮಾಲೀಕರನ್ನು ನಾನು ಕರೆದೆ. ಆ ಶ್ವಾನವು ತುಂಬಾ ಭಯ ಪಟ್ಟುಕೊಂಡಿತ್ತು, ನಾನು ಅದಕ್ಕೆ ತಿನ್ನಿಸಲು ಪ್ರಯತ್ನಿಸಿದೆ, ಆದರೆ ಅದು ನಡುಗುತ್ತಿತ್ತು. ಹಾಗಾಗಿ ನಾನು ಬಿಸ್ಕತ್ ಅನ್ನು ಅದರ ಮಾಲೀಕರಿಗೆ ಕೊಟ್ಟೆ ಹಾಗೂ ಅವರ ಕೈಯಿಂದ ನಾಯಿಯು ಬಿಸ್ಕತ್ ಸೇವಿಸಿತು. ಅದರಲ್ಲಿ ಚರ್ಚೆ ಮಾಡುವುದೇನಿಗೆ ನನಗೆ ತಿಳಿಯಲಿಲ್ಲ'' ಎಂದರು.
''ಆ ವ್ಯಕ್ತಿಯು ಕಾಂಗ್ರೆಸ್ ಕಾರ್ಯಕರ್ತರಲ್ಲ. ಶ್ವಾನಗಳ ಬಗ್ಗೆ ಬಿಜೆಪಿ ಯಾಕೆ ಧ್ಯಾನ ಶುರು ಮಾಡಿದೆಯೋ ನನಗೆ ಅರ್ಥ ಆಗುತ್ತಿಲ್ಲ'' ಎಂದು ರಾಹುಲ್ ಪ್ರತಿಕ್ರಿಯಿಸಿದರು.
ಜಾರ್ಖಂಡ್ನ ರಾಂಚಿಯಲ್ಲಿ 'ಭಾರತ್ ಜೋಡೋ ನ್ಯಾಯ ಯಾತ್ರೆ' ಭಾಗವಾಗಿ ನಡೆದ ಯಾತ್ರೆಯ ಸಮಯದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಐಎನ್ಡಿಐಎ ಮೈತ್ರಿಕೂಟವು ಇಡೀ ದೇಶಾದ್ಯಂತ ಜಾತಿ ಗಣತಿ ನಡೆಸಲಿದೆ ಎಂದು ಪುನರುಚ್ಚರಿಸಿರುವ ರಾಹುಲ್ ಗಾಂಧಿ, ಪ್ರಸ್ತುತ ಮೀಸಲಾತಿಗೆ ಇರುವ ಶೇ 50ರಷ್ಟು ಕೋಟಾ ಮಿತಿಯನ್ನು ರದ್ದುಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
''ಜಾತಿ ಗಣತಿಗೆ ಆಗ್ರಹ ಕೇಳಿ ಬಂದಾಗ ಅಥವಾ ಒಬಿಸಿಗಳು, ದಲಿತರು, ಬುಡಕಟ್ಟು ಜನರಿಗೆ ಅವರ ಹಕ್ಕುಗಳನ್ನು ನೀಡಬೇಕಾದ ಸಮಯ ಬಂದಾಗ ಮೋದಿ ಅವರು ಜಾತಿಗಳೇ ಇಲ್ಲ ಎನ್ನುತ್ತಾರೆ. ಅದೇ ಮತ ಕೇಳುವ ಸಮಯ ಬಂದಾಗ, ಮೋದಿ ತಮ್ಮನ್ನು 'ಒಬಿಸಿ' ಎಂದು ಕರೆದುಕೊಳ್ಳುತ್ತಾರೆ,'' ಎಂದು ರಾಹುಲ್ ಕಿಡಿಕಾರಿದರು.
''ಆ ವ್ಯಕ್ತಿಯು ಕಾಂಗ್ರೆಸ್ ಕಾರ್ಯಕರ್ತರಲ್ಲ. ಶ್ವಾನಗಳ ಬಗ್ಗೆ ಬಿಜೆಪಿ ಯಾಕೆ ಧ್ಯಾನ ಶುರು ಮಾಡಿದೆಯೋ ನನಗೆ ಅರ್ಥ ಆಗುತ್ತಿಲ್ಲ'' ಎಂದು ರಾಹುಲ್ ಪ್ರತಿಕ್ರಿಯಿಸಿದರು.
ಜಾರ್ಖಂಡ್ನ ರಾಂಚಿಯಲ್ಲಿ 'ಭಾರತ್ ಜೋಡೋ ನ್ಯಾಯ ಯಾತ್ರೆ' ಭಾಗವಾಗಿ ನಡೆದ ಯಾತ್ರೆಯ ಸಮಯದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಐಎನ್ಡಿಐಎ ಮೈತ್ರಿಕೂಟವು ಇಡೀ ದೇಶಾದ್ಯಂತ ಜಾತಿ ಗಣತಿ ನಡೆಸಲಿದೆ ಎಂದು ಪುನರುಚ್ಚರಿಸಿರುವ ರಾಹುಲ್ ಗಾಂಧಿ, ಪ್ರಸ್ತುತ ಮೀಸಲಾತಿಗೆ ಇರುವ ಶೇ 50ರಷ್ಟು ಕೋಟಾ ಮಿತಿಯನ್ನು ರದ್ದುಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
''ಜಾತಿ ಗಣತಿಗೆ ಆಗ್ರಹ ಕೇಳಿ ಬಂದಾಗ ಅಥವಾ ಒಬಿಸಿಗಳು, ದಲಿತರು, ಬುಡಕಟ್ಟು ಜನರಿಗೆ ಅವರ ಹಕ್ಕುಗಳನ್ನು ನೀಡಬೇಕಾದ ಸಮಯ ಬಂದಾಗ ಮೋದಿ ಅವರು ಜಾತಿಗಳೇ ಇಲ್ಲ ಎನ್ನುತ್ತಾರೆ. ಅದೇ ಮತ ಕೇಳುವ ಸಮಯ ಬಂದಾಗ, ಮೋದಿ ತಮ್ಮನ್ನು 'ಒಬಿಸಿ' ಎಂದು ಕರೆದುಕೊಳ್ಳುತ್ತಾರೆ,'' ಎಂದು ರಾಹುಲ್ ಕಿಡಿಕಾರಿದರು.