ಮಂಗಳವಾರ ರಾಜ್ಯಸಭೆ ಚುನಾವಣೆ: ವಿಧಾನಸೌಧದಲ್ಲಿ ಅಂತಿಮ ಹಂತದ ಸಿದ್ಧತೆ, ಹೇಗಿರಲಿದೆ ಪ್ರಕ್ರಿಯೆ
1130 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಮಂಗಳವಾರ ರಾಜ್ಯಸಭೆ ಚುನಾವಣೆ ನಡೆಯಲಿದ್ದು, ವಿಧಾನಸೌಧದಲ್ಲಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ನಾಲ್ಕು ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮೈತ್ರಿ ಅಭ್ಯರ್ಥಿ ಕಣದಲ್ಲಿ ಇರುವುದರಿಂದ ಚುನಾವಣಾ ಕಣ ರಂಗೇರಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲಾಬಲ 135 ಇತ್ತು. ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮೃತ ಪಟ್ಟ ಹಿನ್ನಲೆಯಲ್ಲಿ ಸದ್ಯ ಕಾಂಗ್ರೆಸ್ ಬಲ 134 ಆಗಿದೆ. ಇನ್ನು ಬಿಜೆಪಿ 66, ಜೆಡಿಎಸ್ 19 ಸ್ಥಾನಗಳನ್ನು ಹೊಂದಿದೆ ಹಾಗೂ ನಾಲ್ವರು ಪಕ್ಷೇತರರು ಇದ್ದಾರೆ. ನಾಲ್ಕೂ ಮಂದಿ ಪಕ್ಷೇತರ ಸದಸ್ಯರು ಕಾಂಗ್ರೆಸ್ಗೆ ಮತ ಹಾಕುವ ಸಾಧ್ಯತೆ ಇದೆ. ಅದರಲ್ಲೂ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅವರು ಬಹಿರಂಗವಾಗಿ ಯಾರ ಪರವಾಗಿ ನಿಲ್ಲಲಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ.
ರಾಜ್ಯ ಸಭೆ ಮತದಾನ ಮಂಗಳವಾರ ಬೆಳಗ್ಗೆ 9 ರಿಂದ 4 ವರೆಗೆ ಮತದಾನ ನಡೆಯಲಿದೆ. ವಿಧಾನಸೌಧದ ಒಂದನೇ ಮಹಡಿಯ 106 ನೇ ಕೊಠಡಿಯಲ್ಲಿ ಮತದಾನ ನಡೆಯಲಿದೆ. ಶಾಸಕರು ಮೊದಲು ಚುನಾವಣಾ ಸಿಬ್ಬಂದಿಯಿಂದ ಮತ ಪತ್ರವನ್ನು ಪಡೆದುಕೊಳ್ಳುತ್ತಾರೆ. ಅವರಿಗೆ ಮತ ಪತ್ರಗಳನ್ನು ಹೇಗೆ ತುಂಬಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಹಾಗೂ ಅಭ್ಯರ್ಥಿಗಳ ವಿವರ ನೀಡಲಾಗುತ್ತದೆ. ಬಳಿಕ ಮತಪತ್ರಗಳನ್ನು ಪಡೆದುಕೊಂಡ ಶಾಸಕರು ಗುಪ್ತವಾಗಿ ಮತದಾನ ಮಾಡುತ್ತಾರೆ. ಆದರೆ ತಾವು ಚಲಾಯಿಸಿದ ಮತಗಳನ್ನು ಆಯಾ ಪಕ್ಷದ ಏಜೆಂಟ್ಗೆ ತೋರಿಸುತ್ತಾರೆ. ಬಳಿಕ ಮತಪೆಟ್ಟಿಗೆಗೆ ಮತಪತ್ರವನ್ನು ಹಾಕುತ್ತಾರೆ.
ಕಣದಲ್ಲಿ ಯಾರೆಲ್ಲಾ?
ಅಜಯ್ ಮಕೇನ್ ( ಕಾಂಗ್ರೆಸ್)
ಜಿಸಿ ಚಂದ್ರಶೇಖರ್ ( ಕಾಂಗ್ರೆಸ್)
ಡಾ ಸೈಯದ್ ನಾಸೀರ್ ಹುಸೇನ್ (ಕಾಂಗ್ರೆಸ್)
ನಾರಾಯಣ ಎಸ್ ಭಾಂಡಗೆ ( ಬಿಜೆಪಿ)
ಡಿ ಕುಪೇಂದ್ರ ರೆಡ್ಡಿ ( ಮೈತ್ರಿ ಅಭ್ಯರ್ಥಿ)
ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶಾಸಕರು ಮಂಗಳವಾರ ಬೆಳಗ್ಗೆ ರೆಸಾರ್ಟ್ನಿಂದ ನೇರವಾಗಿ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಲಿದ್ದಾರೆ. ಕಾಂಗ್ರೆಸ್ ಸಿಎಲ್ಪಿ ವಿಚಾರವಾಗಿ ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಮಾತನಾಡಿ, ''ಎಲ್ಲಾ ಶಾಸಕರಿಗೂ ವಿಪ್ ಕೊಟ್ಟಿದ್ದೇವೆ. ಸಂಜೆ 6 ಗಂಟೆಗೆ ಕಡ್ಡಾಯವಾಗಿ ಸಭೆಗೆ ಹಾಜರಾಗಲು ಹೇಳಿದ್ದೇವಿ. ಈ ಕುರಿತಾದ ವಾಟ್ಸಪ್ ಗೆ ಕಳಿಸಿದ್ದೀವಿ, ಪರ್ಸನಲ್ ಆಗಿ ಪೋನ್ ಮಾಡಿ ಹೇಳಿದ್ದೀವಿ. ಎಲ್ಲಾ ಶಾಸಕರು ರಾತ್ರಿ ಅಲ್ಲೇ ಉಳಿದುಕೊಳ್ಳಲ್ಲಿದ್ದಾರೆ. ಬ್ಯಾಗೇಜ್ ಸಮೇತ ಎಲ್ಲಾ ಶಾಸಕರು ಬರ್ತಿದ್ದಾರೆ'' ಎಂದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲಾಬಲ 135 ಇತ್ತು. ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮೃತ ಪಟ್ಟ ಹಿನ್ನಲೆಯಲ್ಲಿ ಸದ್ಯ ಕಾಂಗ್ರೆಸ್ ಬಲ 134 ಆಗಿದೆ. ಇನ್ನು ಬಿಜೆಪಿ 66, ಜೆಡಿಎಸ್ 19 ಸ್ಥಾನಗಳನ್ನು ಹೊಂದಿದೆ ಹಾಗೂ ನಾಲ್ವರು ಪಕ್ಷೇತರರು ಇದ್ದಾರೆ. ನಾಲ್ಕೂ ಮಂದಿ ಪಕ್ಷೇತರ ಸದಸ್ಯರು ಕಾಂಗ್ರೆಸ್ಗೆ ಮತ ಹಾಕುವ ಸಾಧ್ಯತೆ ಇದೆ. ಅದರಲ್ಲೂ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅವರು ಬಹಿರಂಗವಾಗಿ ಯಾರ ಪರವಾಗಿ ನಿಲ್ಲಲಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ.
ರಾಜ್ಯ ಸಭೆ ಮತದಾನ ಮಂಗಳವಾರ ಬೆಳಗ್ಗೆ 9 ರಿಂದ 4 ವರೆಗೆ ಮತದಾನ ನಡೆಯಲಿದೆ. ವಿಧಾನಸೌಧದ ಒಂದನೇ ಮಹಡಿಯ 106 ನೇ ಕೊಠಡಿಯಲ್ಲಿ ಮತದಾನ ನಡೆಯಲಿದೆ. ಶಾಸಕರು ಮೊದಲು ಚುನಾವಣಾ ಸಿಬ್ಬಂದಿಯಿಂದ ಮತ ಪತ್ರವನ್ನು ಪಡೆದುಕೊಳ್ಳುತ್ತಾರೆ. ಅವರಿಗೆ ಮತ ಪತ್ರಗಳನ್ನು ಹೇಗೆ ತುಂಬಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಹಾಗೂ ಅಭ್ಯರ್ಥಿಗಳ ವಿವರ ನೀಡಲಾಗುತ್ತದೆ. ಬಳಿಕ ಮತಪತ್ರಗಳನ್ನು ಪಡೆದುಕೊಂಡ ಶಾಸಕರು ಗುಪ್ತವಾಗಿ ಮತದಾನ ಮಾಡುತ್ತಾರೆ. ಆದರೆ ತಾವು ಚಲಾಯಿಸಿದ ಮತಗಳನ್ನು ಆಯಾ ಪಕ್ಷದ ಏಜೆಂಟ್ಗೆ ತೋರಿಸುತ್ತಾರೆ. ಬಳಿಕ ಮತಪೆಟ್ಟಿಗೆಗೆ ಮತಪತ್ರವನ್ನು ಹಾಕುತ್ತಾರೆ.
ಕಣದಲ್ಲಿ ಯಾರೆಲ್ಲಾ?
ಅಜಯ್ ಮಕೇನ್ ( ಕಾಂಗ್ರೆಸ್)
ಜಿಸಿ ಚಂದ್ರಶೇಖರ್ ( ಕಾಂಗ್ರೆಸ್)
ಡಾ ಸೈಯದ್ ನಾಸೀರ್ ಹುಸೇನ್ (ಕಾಂಗ್ರೆಸ್)
ನಾರಾಯಣ ಎಸ್ ಭಾಂಡಗೆ ( ಬಿಜೆಪಿ)
ಡಿ ಕುಪೇಂದ್ರ ರೆಡ್ಡಿ ( ಮೈತ್ರಿ ಅಭ್ಯರ್ಥಿ)
ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶಾಸಕರು ಮಂಗಳವಾರ ಬೆಳಗ್ಗೆ ರೆಸಾರ್ಟ್ನಿಂದ ನೇರವಾಗಿ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಲಿದ್ದಾರೆ. ಕಾಂಗ್ರೆಸ್ ಸಿಎಲ್ಪಿ ವಿಚಾರವಾಗಿ ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಮಾತನಾಡಿ, ''ಎಲ್ಲಾ ಶಾಸಕರಿಗೂ ವಿಪ್ ಕೊಟ್ಟಿದ್ದೇವೆ. ಸಂಜೆ 6 ಗಂಟೆಗೆ ಕಡ್ಡಾಯವಾಗಿ ಸಭೆಗೆ ಹಾಜರಾಗಲು ಹೇಳಿದ್ದೇವಿ. ಈ ಕುರಿತಾದ ವಾಟ್ಸಪ್ ಗೆ ಕಳಿಸಿದ್ದೀವಿ, ಪರ್ಸನಲ್ ಆಗಿ ಪೋನ್ ಮಾಡಿ ಹೇಳಿದ್ದೀವಿ. ಎಲ್ಲಾ ಶಾಸಕರು ರಾತ್ರಿ ಅಲ್ಲೇ ಉಳಿದುಕೊಳ್ಳಲ್ಲಿದ್ದಾರೆ. ಬ್ಯಾಗೇಜ್ ಸಮೇತ ಎಲ್ಲಾ ಶಾಸಕರು ಬರ್ತಿದ್ದಾರೆ'' ಎಂದರು.