Explainer Video: ಹಡಗುಗಳೇ ಉಗ್ರರ ಟಾರ್ಗೆಟ್! ಭಾರತಕ್ಕೆ ಏನು ಎಫೆಕ್ಟ್?
ಇಡೀ ವಿಶ್ವದ ಭೂಪಠವನ್ನು ನೋಡಿದರೆ ಭೌಗೋಳಿಕವಾಗಿ ಕೆಂಪು ಸಮುದ್ರ ತುಂಬಾನೇ ಆಯಕಟ್ಟಿನ ಸ್ಥಳದಲ್ಲಿ ಇದೆ. ಪೂರ್ವದ ದೇಶಗಳು ಹಾಗೂ ಪಶ್ಚಿಮದ ದೇಶಗಳನ್ನು ಒಂದುಗೂಡಿಸುವ ಕೊಂಡಿಯಾಗಿ ಈ ಸಮುದ್ರ ಕಾರ್ಯ ನಿರ್ವಹಿಸುತ್ತದೆ.
ಅಮೆರಿಕ ಖಂಡದಿಂದ ಪಶ್ಚಿಮ ದೇಶಗಳ ಕಡೆಗೆ ಬರುವ ಹಡಗುಗಳು ಗಿಬ್ರಾಲ್ಟರ್ ಜಲಸಂಧಿ ಮೂಲಕ ಮೆಡಿಟರೇನಿಯನ್ ಸಮುದ್ರಕ್ಕೆ ಬಂದು ಅಲ್ಲಿಂದ ಸುಜೆಯ್ ಕಾಲುವೆ ಮೂಲಕ ಕೆಂಪು ಸಮುದ್ರ ಪ್ರವೇಶ ಮಾಡುತ್ತದೆ. ಕೆಂಪು ಸಮುದ್ರದಿಂದ ಹೊರ ಬಿದ್ದ ಕೂಡಲೇ ಅರಬ್ಬಿ ಸಮುದ್ರ ತಲುಪುವ ಹಡಗುಗಳು ಹಿಂದೂ ಮಹಾ ಸಾಗರದ ಮೂಲಕ ಪೂರ್ವ ಭಾಗದ ದೇಶಗಳನ್ನು ತಲುಪುತ್ತವೆ. ಯುರೋಪ್ ರಾಷ್ಟ್ರಗಳ ಹಡಗುಗಳೂ ಕೂಡಾ ಮೆಡಿಟರೇನಿಯನ್ ಸಮುದ್ರದಿಂದ ಸುಜೆಯ್ ಕಾಲುವೆ ದಾಟಿದ ಕೂಡಲೇ ಕೆಂಪು ಸಮುದ್ರಕ್ಕೇ ಬರಬೇಕು. ಕೆಂಪು ಸಮುದ್ರ ದಾಟಿದ ಬಳಿಕ ಭಾರತ ಸೇರಿದಂತೆ ಪೂರ್ವದ ದೇಶಗಳ ಸಂಪರ್ಕ ಸಾಧ್ಯ.
ಇನ್ನು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ತಲುಪಲು ಪೂರ್ವದ ದೇಶಗಳಿಗೂ ಕೂಡಾ ಕೆಂಪು ಸಮುದ್ರವೇ ಪ್ರಮುಖ ಸಂಪರ್ಕ ಕೊಂಡಿ. ಭಾರತ ಸೇರಿದಂತೆ ಪೂರ್ವದ ದೇಶಗಳು ಅರಬ್ಬಿ ಸಮುದ್ರ ದಾಟಿ ಕೆಂಪು ಸಮುದ್ರ ತಲುಪಿದ ಬಳಿಕ ಸುಜೆಯ್ ಕಾಲುವೆ ಮೂಲಕವೇ ಮೆಡಿಟರೇನಿಯನ್ ಸಮುದ್ರಕ್ಕೆ ಹೋಗಬೇಕು. ಆಗ ಮಾತ್ರ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಪರ್ಕ ಸಾಧ್ಯ. ಒಂದು ವೇಳೆ ಕೆಂಪು ಸಮುದ್ರ ಹಾಗೂ ಸುಯೆಜ್ ಕಾಲುವೆ ಮಾರ್ಗ ನಮಗೆ ಬೇಡ ಎಂದು ಯಾರಾದರೂ ಹೇಳಿದರೆ, ಇಡೀ ಆಫ್ರಿಕಾ ಖಂಡವನ್ನೇ ದಾಟಿಕೊಂಡು ಸಮುದ್ರದಲ್ಲಿ ಒಂದು ದೊಡ್ಡ ಸುತ್ತು ಹಾಕಿಕೊಂಡು ಪಶ್ಚಿಮದ ರಾಷ್ಟ್ರಗಳನ್ನು ತಲುಪಬೇಕಾಗುತ್ತದೆ. ಇಲ್ಲವಾದ್ರೆ ಜಲ ಮಾರ್ಗ ಬಿಟ್ಟು ಭೂ ಮಾರ್ಗವಾಗಿ ಪ್ರಯಾಣ ಮಾಡಬೇಕಾಗುತ್ತದೆ. ಇದಕ್ಕೆ ವಿಪರೀತ ಹಣ ಹಾಗೂ ಸಮಯ ವೆಚ್ಚವಾಗುವ ಕಾರಣ, ಸುಯೆಜ್ ಕಾಲುವೆ ಹಾಗೂ ಕೆಂಪು ಸಮುದ್ರದ ಮಾರ್ಗವು ವಿಶ್ವದ ಪೂರ್ವ ಹಾಗೂ ಪಶ್ಚಿಮ ರಾಷ್ಟ್ರಗಳನ್ನು ಒಂದುಗೂಡಿಸಲು ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
ಯೆಮನ್ ದೇಶದಲ್ಲಿ ಹೌತಿ ಉಗ್ರರು ಪ್ರಬಲರು. ಈ ಉಗ್ರರಿಗೆ ಇರಾನ್ ದೇಶ ಪರೋಕ್ಷವಾಗಿ ಹಣಕಾಸಿನ ನೆರವು ನೀಡ್ತಿದೆ. ಇರಾನ್ ದೇಶದ ರಾಜಕಾರಣಿಗಳ ಕೃಪಾಶೀರ್ವಾದವೂ ಹೌತಿ ಉಗ್ರರಿಗೆ ಇದೆ. ಹೀಗಾಗಿ, ಇರಾನ್ ದೇಶದ ಆಣತಿಯಂತೆ ಕುಣಿಯುವ ಹೌತಿ ಉಗ್ರರು, ಇದೀಗ ವಿಶ್ವದ ಅತಿ ಪ್ರಮುಖ ಸರಕು ಸಂಪರ್ಕ ಜಾಲದ ಮೇಲೇ ದಾಳಿ ನಡೆಸ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು, ಇಸ್ರೇಲ್ - ಹಮಾಸ್ ಯುದ್ಧ..