Explainer Video: ಮಾರಣಾಂತಿಕ ಆಗದಿರಲಿ ಪರೀಕ್ಷಾ ಒತ್ತಡ!
1084 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಎಕ್ಸಾಂ ಟೈಮಲ್ಲಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮೇಲೆ ನಿಗಾ ಇರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಪರೀಕ್ಷಾ ಒತ್ತಡ ಮಕ್ಕಳ ಪಾಲಿಗೆ ಮಾರಣಾಂತಿಕ ಆಗಬಹುದಾಗಿದೆ. ದೇಶಾದ್ಯಂತ ಪರೀಕ್ಷಾ ಕಾಲ ಘಟ್ಟ ಆರಂಭವಾಗಿದ್ದು, ಬೇಸಿಗೆ ಬಿಸಿ ಜೊತೆಯಲ್ಲೇ ಎಕ್ಸಾಂ ಬಿಸಿ ಕೂಡಾ ಏರುತ್ತಿದೆ. ಇಂಥಾ ಹೊತ್ತಲ್ಲಿ ಮಕ್ಕಳು ಅಡ್ಡದಾರಿ ಹಿಡಿಯುವ ಘಟನೆಗಳೂ ವರದಿಯಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರಧಾನಿ ಮೋದಿ ಕೂಡಾ ಬುದ್ದಿವಾದ ಹೇಳಿದ್ದಾರೆ.
ಈಗಾಗಲೇ ದೇಶಾದ್ಯಂತ ಎಕ್ಸಾಂ ಫಿವರ್ ಶುರುವಾಗಿದೆ. ಒಂದನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೆ ಹಲವು ಪರೀಕ್ಷೆಗಳು ಒಂದೆರಡು ತಿಂಗಳಲ್ಲಿ ನಡೆಯಲಿವೆ. ಇದೇ ಕಾರಣಕ್ಕಾಗಿ ಪ್ರಧಾನಿ ಮೋದಿ ಅವರೂ ಕೂಡಾ ಕೆಲವೇ ದಿನಗಳ ಹಿಂದೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ನಡೆಸಿದ್ದರು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಹಲವು ನೀತಿ ಪಾಠಗಳ ಹೇಳಿದ್ರು. ಅದರಲ್ಲೂ ಪೋಷಕರು ತಮ್ಮ ಮಕ್ಕಳನ್ನ ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡಬಾರದು ಅಂತಾ ಹೇಳಿದ್ರು. ಮಕ್ಕಳ ರಿಪೋರ್ಟ್ ಕಾರ್ಡ್ ಅನ್ನೋದು ನಿಮ್ಮ ಸಾಧನೆಯ ಪಟ್ಟಿ ಅಲ್ಲ ಅಂತಾನೂ ಹೇಳಿದ್ದರು. ಆದರೆ, ಈ ಮಾತನ್ನ ಪೋಷಕರು ಕೇಳುತ್ತಾರಾ?
ಪ್ರತಿಷ್ಠಿತ ಕಾಲೇಜು, ಸಿಕ್ಕಾಪಟ್ಟೆ ಫೀಸ್, ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಪೋಷಕರಿಗೆ ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಜೊತೆಯಲ್ಲೇ ಈಗ ಅತ್ಯುತ್ತಮ ಅಂಕ ಗಳಿಸಿದರೆ ಜೀವನ ಪರ್ಯಂತ ಉತ್ತಮ ಸ್ಥಾನಮಾನ ಪಡೆಯಬಹುದು ಅಂತಾ ಮಕ್ಕಳಿಗೆ ಒತ್ತಡ ಹೇರುತ್ತಾರೆ. ಇದು ತಪ್ಪಲ್ಲ.. ಆದರೆ, ಈ ಒತ್ತಡಗಳನ್ನು ತಡೆದುಕೊಳ್ಳುವ ಶಕ್ತಿ ಎಳೆಯ ಮನಸ್ಸುಗಳಿಗೆ ಇರುತ್ತಾ ಅನ್ನೋದು ಪ್ರಶ್ನೆ.
ಪ್ರತಿಭಾವಂತರು, ಅತ್ಯುತ್ತಮ ಜ್ಞಾಪಕ ಶಕ್ತಿ ಇರುವವರು ಲೀಲಾಜಾಲವಾಗಿ ಪರೀಕ್ಷೆಗಳಲ್ಲಿ ಪಾಸ್ ಆಗಿಬಿಡಬಹುದು.. ಅಷ್ಟೊಂದು ಜ್ಞಾಪಕ ಶಕ್ತಿ, ಕಲಿಕಾ ಸಾಮರ್ಥ್ಯ ಇಲ್ಲದ ಮಕ್ಕಳ ಕಥೆ ಏನು? ತಮ್ಮ ಮಕ್ಕಳು ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಎದುರಿಸುವ ಹೊತ್ತಲ್ಲಿ ಹೊರಗೆ ನಿಂತು ಕಾತರದಿಂದ ಎದುರು ನೋಡುವ ಪೋಷಕರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾದ ವಿಚಾರ ಇದು.
ಈಗಾಗಲೇ ದೇಶಾದ್ಯಂತ ಎಕ್ಸಾಂ ಫಿವರ್ ಶುರುವಾಗಿದೆ. ಒಂದನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೆ ಹಲವು ಪರೀಕ್ಷೆಗಳು ಒಂದೆರಡು ತಿಂಗಳಲ್ಲಿ ನಡೆಯಲಿವೆ. ಇದೇ ಕಾರಣಕ್ಕಾಗಿ ಪ್ರಧಾನಿ ಮೋದಿ ಅವರೂ ಕೂಡಾ ಕೆಲವೇ ದಿನಗಳ ಹಿಂದೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ನಡೆಸಿದ್ದರು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಹಲವು ನೀತಿ ಪಾಠಗಳ ಹೇಳಿದ್ರು. ಅದರಲ್ಲೂ ಪೋಷಕರು ತಮ್ಮ ಮಕ್ಕಳನ್ನ ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡಬಾರದು ಅಂತಾ ಹೇಳಿದ್ರು. ಮಕ್ಕಳ ರಿಪೋರ್ಟ್ ಕಾರ್ಡ್ ಅನ್ನೋದು ನಿಮ್ಮ ಸಾಧನೆಯ ಪಟ್ಟಿ ಅಲ್ಲ ಅಂತಾನೂ ಹೇಳಿದ್ದರು. ಆದರೆ, ಈ ಮಾತನ್ನ ಪೋಷಕರು ಕೇಳುತ್ತಾರಾ?
ಪ್ರತಿಷ್ಠಿತ ಕಾಲೇಜು, ಸಿಕ್ಕಾಪಟ್ಟೆ ಫೀಸ್, ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಪೋಷಕರಿಗೆ ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಜೊತೆಯಲ್ಲೇ ಈಗ ಅತ್ಯುತ್ತಮ ಅಂಕ ಗಳಿಸಿದರೆ ಜೀವನ ಪರ್ಯಂತ ಉತ್ತಮ ಸ್ಥಾನಮಾನ ಪಡೆಯಬಹುದು ಅಂತಾ ಮಕ್ಕಳಿಗೆ ಒತ್ತಡ ಹೇರುತ್ತಾರೆ. ಇದು ತಪ್ಪಲ್ಲ.. ಆದರೆ, ಈ ಒತ್ತಡಗಳನ್ನು ತಡೆದುಕೊಳ್ಳುವ ಶಕ್ತಿ ಎಳೆಯ ಮನಸ್ಸುಗಳಿಗೆ ಇರುತ್ತಾ ಅನ್ನೋದು ಪ್ರಶ್ನೆ.
ಪ್ರತಿಭಾವಂತರು, ಅತ್ಯುತ್ತಮ ಜ್ಞಾಪಕ ಶಕ್ತಿ ಇರುವವರು ಲೀಲಾಜಾಲವಾಗಿ ಪರೀಕ್ಷೆಗಳಲ್ಲಿ ಪಾಸ್ ಆಗಿಬಿಡಬಹುದು.. ಅಷ್ಟೊಂದು ಜ್ಞಾಪಕ ಶಕ್ತಿ, ಕಲಿಕಾ ಸಾಮರ್ಥ್ಯ ಇಲ್ಲದ ಮಕ್ಕಳ ಕಥೆ ಏನು? ತಮ್ಮ ಮಕ್ಕಳು ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಎದುರಿಸುವ ಹೊತ್ತಲ್ಲಿ ಹೊರಗೆ ನಿಂತು ಕಾತರದಿಂದ ಎದುರು ನೋಡುವ ಪೋಷಕರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾದ ವಿಚಾರ ಇದು.