ಜಾಹೀರಾತಿನಲ್ಲಿ ಚೀನಾ ಧ್ವಜ ಬಳಕೆ; ಡಿಎಂಕೆ ವಿರುದ್ಧ ಮೋದಿ ಕೆಂಡಾಮಂಡಲ
1147 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಚೆನ್ನೈ : ತಮಿಳುನಾಡು ಸರ್ಕಾರ ದೊಡ್ಡ ಎಡವಟ್ಟು ಒಂದನ್ನು ಮಾಡಿಕೊಂಡಿದೆ. ಇಸ್ರೋದ ಹೊಸ ಉಡಾವಣಾ ಕೇಂದ್ರದ ಬಗ್ಗೆ ನೀಡಿದ ಜಾಹೀರಾತಿನಲ್ಲಿ ಚೀನಾ ಧ್ವಜವನ್ನು ತಮಿಳುನಾಡು ಸರ್ಕಾರ ಬಳಸಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ಜಾಹೀರಾತಿನಲ್ಲಿ ಇಸ್ರೋದ ರಾಕೆಟ್ನ ತುದಿಯಲ್ಲಿ ಚೀನಾ ಧ್ವಜವನ್ನು ಹಾಕುವ ಮೂಲಕ ಎಡವಟ್ಟು ಮಾಡಿಕೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ತಮಿಳುನಾಡಿನ ಕುಲಶೇಖರಪಟ್ಟಣಂನಲ್ಲಿ ಇಸ್ರೋ ಬಾಹ್ಯಾಕಾಶ ನಿಲ್ದಾಣದ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಈ ಹಿನ್ನೆಲೆ ತಮಿಳುನಾಡಿನ ಮೀನುಗಾರಿಕೆ ಸಚಿವೆ ಅನಿತಾ ರಾಧಾಕೃಷ್ಣನ್ ಅವರು ಜಾಹೀರಾತು ನೀಡಿದ್ದರು. ಆದರೆ, ಅದರಲ್ಲಿ ಚೀನಾ ಧ್ವಜ ಇರುವುದು ಕಂಡುಬಂದಿದೆ. ಯೋಜನೆಯನ್ನು ತಮಿಳುನಾಡಿಗೆ ತರಲು ಮಾಜಿ ಸಿಎಂ ಕರುಣಾನಿಧಿ ಹಾಗೂ ಹಾಲಿ ಸಿಎಂ ಎಂಕೆ ಸ್ಟಾಲಿನ್ ಅವರ ಪ್ರಯತ್ನಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಜಾಹೀರಾತನ್ನು ನೀಡಲಾಗಿತ್ತು. ಆದರೆ, ಈಗ ಜಾಹೀರಾತೇ ಉಲ್ಟಾ ಹೊಡೆದಿದೆ.
ಅಜಾಗರೂಕತೆಯಿಂದ ಕಂಪ್ಯೂಟರ್ ರಚಿತ ರಾಕೆಟ್ ಅನ್ನು ಜಾಹೀರಾತಿನಲ್ಲಿ ಪ್ರದರ್ಶಿಸಲಾಗಿದ್ದು, ಅದರಲ್ಲಿ ಚೀನಾದ ಧ್ವಜವನ್ನು ಬಳಸಲಾಗಿದೆ. ಇದು ಆಡಳಿತಾರೂಢ ಡಿಎಂಕೆ ವಿರುದ್ಧ ಬಿಜೆಪಿಗೆ ಪ್ರಬಲ ಅಸ್ತ್ರ ನೀಡಿದಂತಾಗಿದೆ. ಇದೇ ವಿಷಯ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಡಿಎಂಕೆ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರದ ಯೋಜನೆಗಳನ್ನು ಡಿಎಂಕೆ ತಾನು ಮಾಡಿರುವುದು ಎಂದು ಕ್ರೆಡಿಟ್ ತೆಗೆದುಕೊಳ್ಳಲು ಬರುತ್ತಿದೆ ಎಂದು ಕಿಡಿಕಾರಿದ್ದಾರೆ.
ತಿರುನಲ್ವೇಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಡಿಎಂಕೆ ಯಾವುದೇ ಕೆಲಸ ಮಾಡುವುದಿಲ್ಲ. ಆದರೆ, ಕೆಲಸದ ಕ್ರೆಡಿಟ್ ಮಾತ್ರ ತೆಗೆದುಕೊಳ್ಳಲು ಮುಂದಾಗುತ್ತದೆ. ಇವರು ನಮ್ಮ ಯೋಜನೆಗಳ ಮೇಲೆ ತಮ್ಮ ಸ್ಟಿಕ್ಕರ್ ಹಾಕುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ಇಸ್ರೋ ಉಡಾವಣಾ ಕೇಂದ್ರದ ಶ್ರೇಯಸ್ಸನ್ನು ಪಡೆಯಲು ಚೀನಾದ ಸ್ಟಿಕ್ಕರ್ಗಳನ್ನು ಅಂಟಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅವರು ಭಾರತದ ಬಾಹ್ಯಾಕಾಶದ ಪ್ರಗತಿಯನ್ನು ನೋಡಲು ಯಾವುದೇ ಕಾರಣಕ್ಕೂ ಸಿದ್ಧವಿಲ್ಲ. ನೀವು ಪಾವತಿಸಿದ ತೆರಿಗೆಯಲ್ಲೇ ಜಾಹೀರಾತುಗಳನ್ನು ನೀಡುತ್ತಾರೆ. ಆದರೆ, ಅದರಲ್ಲಿ ಭಾರತದ ಬಾಹ್ಯಾಕಾಶದ ಚಿತ್ರವನ್ನೇ ಹಾಕಲ್ಲ ಎಂದು ಮೋದಿ ಹೇಳಿದ್ದಾರೆ. ಸ್ಥಳೀಯ ದಿನಪತ್ರಿಕೆಗಳಲ್ಲಿ ಬಿಡುಗಡೆಯಾದ ಜಾಹೀರಾತನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಖಂಡಿಸಿದ್ದು, ಡಿಎಂಕೆ ನಮ್ಮ ದೇಶದ ಸಾರ್ವಭೌಮತ್ವವನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಕುಲಶೇಖರಪಟ್ಟಣಂನಲ್ಲಿ ಇಸ್ರೋ ಬಾಹ್ಯಾಕಾಶ ನಿಲ್ದಾಣದ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಈ ಹಿನ್ನೆಲೆ ತಮಿಳುನಾಡಿನ ಮೀನುಗಾರಿಕೆ ಸಚಿವೆ ಅನಿತಾ ರಾಧಾಕೃಷ್ಣನ್ ಅವರು ಜಾಹೀರಾತು ನೀಡಿದ್ದರು. ಆದರೆ, ಅದರಲ್ಲಿ ಚೀನಾ ಧ್ವಜ ಇರುವುದು ಕಂಡುಬಂದಿದೆ. ಯೋಜನೆಯನ್ನು ತಮಿಳುನಾಡಿಗೆ ತರಲು ಮಾಜಿ ಸಿಎಂ ಕರುಣಾನಿಧಿ ಹಾಗೂ ಹಾಲಿ ಸಿಎಂ ಎಂಕೆ ಸ್ಟಾಲಿನ್ ಅವರ ಪ್ರಯತ್ನಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಜಾಹೀರಾತನ್ನು ನೀಡಲಾಗಿತ್ತು. ಆದರೆ, ಈಗ ಜಾಹೀರಾತೇ ಉಲ್ಟಾ ಹೊಡೆದಿದೆ.
ಅಜಾಗರೂಕತೆಯಿಂದ ಕಂಪ್ಯೂಟರ್ ರಚಿತ ರಾಕೆಟ್ ಅನ್ನು ಜಾಹೀರಾತಿನಲ್ಲಿ ಪ್ರದರ್ಶಿಸಲಾಗಿದ್ದು, ಅದರಲ್ಲಿ ಚೀನಾದ ಧ್ವಜವನ್ನು ಬಳಸಲಾಗಿದೆ. ಇದು ಆಡಳಿತಾರೂಢ ಡಿಎಂಕೆ ವಿರುದ್ಧ ಬಿಜೆಪಿಗೆ ಪ್ರಬಲ ಅಸ್ತ್ರ ನೀಡಿದಂತಾಗಿದೆ. ಇದೇ ವಿಷಯ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಡಿಎಂಕೆ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರದ ಯೋಜನೆಗಳನ್ನು ಡಿಎಂಕೆ ತಾನು ಮಾಡಿರುವುದು ಎಂದು ಕ್ರೆಡಿಟ್ ತೆಗೆದುಕೊಳ್ಳಲು ಬರುತ್ತಿದೆ ಎಂದು ಕಿಡಿಕಾರಿದ್ದಾರೆ.
ತಿರುನಲ್ವೇಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಡಿಎಂಕೆ ಯಾವುದೇ ಕೆಲಸ ಮಾಡುವುದಿಲ್ಲ. ಆದರೆ, ಕೆಲಸದ ಕ್ರೆಡಿಟ್ ಮಾತ್ರ ತೆಗೆದುಕೊಳ್ಳಲು ಮುಂದಾಗುತ್ತದೆ. ಇವರು ನಮ್ಮ ಯೋಜನೆಗಳ ಮೇಲೆ ತಮ್ಮ ಸ್ಟಿಕ್ಕರ್ ಹಾಕುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ಇಸ್ರೋ ಉಡಾವಣಾ ಕೇಂದ್ರದ ಶ್ರೇಯಸ್ಸನ್ನು ಪಡೆಯಲು ಚೀನಾದ ಸ್ಟಿಕ್ಕರ್ಗಳನ್ನು ಅಂಟಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅವರು ಭಾರತದ ಬಾಹ್ಯಾಕಾಶದ ಪ್ರಗತಿಯನ್ನು ನೋಡಲು ಯಾವುದೇ ಕಾರಣಕ್ಕೂ ಸಿದ್ಧವಿಲ್ಲ. ನೀವು ಪಾವತಿಸಿದ ತೆರಿಗೆಯಲ್ಲೇ ಜಾಹೀರಾತುಗಳನ್ನು ನೀಡುತ್ತಾರೆ. ಆದರೆ, ಅದರಲ್ಲಿ ಭಾರತದ ಬಾಹ್ಯಾಕಾಶದ ಚಿತ್ರವನ್ನೇ ಹಾಕಲ್ಲ ಎಂದು ಮೋದಿ ಹೇಳಿದ್ದಾರೆ. ಸ್ಥಳೀಯ ದಿನಪತ್ರಿಕೆಗಳಲ್ಲಿ ಬಿಡುಗಡೆಯಾದ ಜಾಹೀರಾತನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಖಂಡಿಸಿದ್ದು, ಡಿಎಂಕೆ ನಮ್ಮ ದೇಶದ ಸಾರ್ವಭೌಮತ್ವವನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.