ಸ್ಮಶಾನದಲ್ಲಿ ಮಗಳ ಮದುವೆ ಮಾಡಿಸಿದ ತಂದೆ: ಕಾರಣವೇನು ಗೊತ್ತೇ?
5392 views
news ವಿಡಿಯೋಗಳಿಗೆ ಚಂದಾದಾರರಾಗಿಮದುವೆ ಮನೆಯೆಂದರೆ ಹೇಗಿರುತ್ತೆ? ಹೂವು ತೋರಣಗಳಿಂದ ಅಲಂಕರಿಸಿದ ಸುಂದರ ಮಂಟಪ, ಹೋಮದ ಕುಂಡ, ಪುರೋಹಿತರ ಮಂತ್ರೋಚ್ಛಾರ, ಜೋರಾದ ವಾಲಗದ ಸದ್ದು, ಫೋಟೋಗ್ರಾಫರ್ಗಳ ಕ್ಲಿಕ್ ಸದ್ದು, ಇದು ನಾವು ನೋಡುವ ಸಾಮಾನ್ಯ ಮದುವೆ ಸನ್ನಿವೇಶ. ಆದರೆ ಮಹಾರಾಷ್ಟ್ರದ ಅಹಮದ್ನಗರದ ರಹಾತ ನಗರದಲ್ಲಿ ನಡೆದ ಮದುವೆಯೊಂದು ವ್ಯಾಪಕ ಚರ್ಚೆಗೆ ಒಳಗಾಗಿದೆ.
ಶುಭದಿನ, ಶುಭ ಲಗ್ನ ಮತ್ತು ಒಳ್ಳೆಯ ಜಾಗದಲ್ಲಿ ಮದುವೆಯಾಗಬೇಕು ಎನ್ನುವುದು ಎಲ್ಲರ ನಂಬಿಕೆ. ಆದರೆ ಈ ಮದುವೆ ನಡೆದಿರುವುದು ಹೊತ್ತಿ ಉರಿಯುತ್ತಿರುವ ಚಿತೆ, ಸುಟ್ಟುಹೋದ ಶವದ ಬೂದಿಯ ನಡುವೆ. ಜನರು ಕನಸು ಮನಸಿನಲ್ಲಿಯೂ ತೆರಳಲು ಬಯಸದ ಜಾಗವದು. ನಿಜ. ವಿವಾಹ ನಡೆದಿರುವುದು ಎಲ್ಲಿ ಅಂತೀರಾ.. ಸ್ಮಶಾನದಲ್ಲಿ.
ಮಸಣದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು, ಮೂಢನಂಬಿಕೆಗಳನ್ನು ಮುರಿಯಲು ಸ್ಮಶಾನದಲ್ಲಿಯೇ ಮಗಳ ಮದುವೆ ಮಾಡಿಸಿದ್ದಾರೆ. ಈ ಮೂಲಕ ತಾವು ಮಾಡುವ ವೃತ್ತಿ ಕುರಿತಾದ ಪ್ರೀತಿ ಹಾಗೂ ಪವಿತ್ರ ಭಾವನೆಯನ್ನು ಪ್ರದರ್ಶಿಸಿದ್ದಾರೆ. ರಹಾತ ಪಟ್ಟಣದ ಗಂಗಾಧರ್ ಗಾಯಕ್ವಾಡ್ ಮತ್ತು ಗಂಗೂಬಾಯಿ ಗಾಯಕ್ವಾಡ್ ಕುಟುಂಬವು ಮಸಣಜೋಗಿಯಾಗಿ ಜೀವನ ಸಾಗಿಸುತ್ತಿದೆ. ಬೇರೆಯವರಿಗೆ ಅಶುಭ ಹಾಗೂ ಕೆಟ್ಟದ್ದು ಎನಿಸಿರುವ ರುದ್ರಭೂಮಿಯೇ ಅವರ ಜೀವನೋಪಾಯದ ಕರ್ಮಭೂಮಿ. ಹೀಗಾಗಿ ಸ್ಮಶಾನ ಮಗಳ ಮದುವೆ ಮಂಟಪವೂ ಆಗಿದೆ.
ಮಗಳು ಮಯೂರಿಯ ಶಿಕ್ಷಣದ ಬಳಿಕ ಆಕೆಗೆ ಮದುವೆ ಮಾಡಿಸಲು ವರನನ್ನು ಹುಡುಕಿದರು. ಕಲ್ಯಾಣ ಮಂಟಪದಲ್ಲಿಯೋ, ದೇವಸ್ಥಾನದಲ್ಲಿಯೋ ಮದುವೆ ಮಾಡಿಸುವ ಬದಲು, ತಮಗೆ ಬದುಕಿಗೆ ದಿಕ್ಕಾಗಿರುವ ಸ್ಮಶಾನದಲ್ಲಿಯೇ ಮದುವೆ ಮಾಡಿಸಬಹುದಲ್ಲವೇ ಎಂದು ಗಂಗಾಧರ್ ಅವರಿಗೆ ಅನಿಸಿತ್ತು. ಹೀಗೆ ಮನೋಜ್ ಮತ್ತು ಮಯೂರಿಯ ಮದುವೆ ಬಂಧು ಬಳಗದ ಸಮ್ಮುಖದಲ್ಲಿ ಸ್ಮಶಾನದಲ್ಲಿಯೇ ನೆರವೇರಿದೆ. ಸ್ಮಶಾನದಲ್ಲಿಯೇ ಮಂಟಪ ಹಾಕಿ ಅಲಂಕರಿಸಿ ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ.
ಮಯೂರಿಯ ಕನ್ಯಾದಾನ ಸಮಾರಂಭದಲ್ಲಿ ಮಾಜಿ ಮೇಯರ್ಗಳಾದ ಮಮತಾ ಹಾಗೂ ರಾಜೇಂದ್ರ ಪಿಪಡಾ ಕೂಡ ಭಾಗವಹಿಸಿದ್ದರು. ಮೌಢ್ಯಗಳನ್ನು ಒಡೆಯಲು ಗಂಗಾಧರ್ ಗಾಯಕ್ವಾಡ್ ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ಸಾಮಾಜಿಕ ಕಾರ್ಯಕರ್ತರು ಶ್ಲಾಘಿಸಿದ್ದಾರೆ. ಇದಕ್ಕೆ ಟೀಕೆಗಳು ಕೂಡ ವ್ಯಕ್ತವಾಗಿವೆ. ಕೆಲವು ಸ್ಥಳಗಳಲ್ಲಿ ಯಾವುದು ನಡೆಯಬೇಕೋ, ಅವುಗಳಿಗಷ್ಟೇ ಅವಕಾಶ ನೀಡಬೇಕು. ಸ್ಮಶಾನದ ಬದಲು ಮನೆ ಅಥವಾ ಮಂಟಪಗಳಲ್ಲಿ ಶವಗಳನ್ನು ಸುಡಲು ಅಥವಾ ಹೂಳಲು ಸಾಧ್ಯವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಶುಭದಿನ, ಶುಭ ಲಗ್ನ ಮತ್ತು ಒಳ್ಳೆಯ ಜಾಗದಲ್ಲಿ ಮದುವೆಯಾಗಬೇಕು ಎನ್ನುವುದು ಎಲ್ಲರ ನಂಬಿಕೆ. ಆದರೆ ಈ ಮದುವೆ ನಡೆದಿರುವುದು ಹೊತ್ತಿ ಉರಿಯುತ್ತಿರುವ ಚಿತೆ, ಸುಟ್ಟುಹೋದ ಶವದ ಬೂದಿಯ ನಡುವೆ. ಜನರು ಕನಸು ಮನಸಿನಲ್ಲಿಯೂ ತೆರಳಲು ಬಯಸದ ಜಾಗವದು. ನಿಜ. ವಿವಾಹ ನಡೆದಿರುವುದು ಎಲ್ಲಿ ಅಂತೀರಾ.. ಸ್ಮಶಾನದಲ್ಲಿ.
ಮಸಣದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು, ಮೂಢನಂಬಿಕೆಗಳನ್ನು ಮುರಿಯಲು ಸ್ಮಶಾನದಲ್ಲಿಯೇ ಮಗಳ ಮದುವೆ ಮಾಡಿಸಿದ್ದಾರೆ. ಈ ಮೂಲಕ ತಾವು ಮಾಡುವ ವೃತ್ತಿ ಕುರಿತಾದ ಪ್ರೀತಿ ಹಾಗೂ ಪವಿತ್ರ ಭಾವನೆಯನ್ನು ಪ್ರದರ್ಶಿಸಿದ್ದಾರೆ. ರಹಾತ ಪಟ್ಟಣದ ಗಂಗಾಧರ್ ಗಾಯಕ್ವಾಡ್ ಮತ್ತು ಗಂಗೂಬಾಯಿ ಗಾಯಕ್ವಾಡ್ ಕುಟುಂಬವು ಮಸಣಜೋಗಿಯಾಗಿ ಜೀವನ ಸಾಗಿಸುತ್ತಿದೆ. ಬೇರೆಯವರಿಗೆ ಅಶುಭ ಹಾಗೂ ಕೆಟ್ಟದ್ದು ಎನಿಸಿರುವ ರುದ್ರಭೂಮಿಯೇ ಅವರ ಜೀವನೋಪಾಯದ ಕರ್ಮಭೂಮಿ. ಹೀಗಾಗಿ ಸ್ಮಶಾನ ಮಗಳ ಮದುವೆ ಮಂಟಪವೂ ಆಗಿದೆ.
ಮಗಳು ಮಯೂರಿಯ ಶಿಕ್ಷಣದ ಬಳಿಕ ಆಕೆಗೆ ಮದುವೆ ಮಾಡಿಸಲು ವರನನ್ನು ಹುಡುಕಿದರು. ಕಲ್ಯಾಣ ಮಂಟಪದಲ್ಲಿಯೋ, ದೇವಸ್ಥಾನದಲ್ಲಿಯೋ ಮದುವೆ ಮಾಡಿಸುವ ಬದಲು, ತಮಗೆ ಬದುಕಿಗೆ ದಿಕ್ಕಾಗಿರುವ ಸ್ಮಶಾನದಲ್ಲಿಯೇ ಮದುವೆ ಮಾಡಿಸಬಹುದಲ್ಲವೇ ಎಂದು ಗಂಗಾಧರ್ ಅವರಿಗೆ ಅನಿಸಿತ್ತು. ಹೀಗೆ ಮನೋಜ್ ಮತ್ತು ಮಯೂರಿಯ ಮದುವೆ ಬಂಧು ಬಳಗದ ಸಮ್ಮುಖದಲ್ಲಿ ಸ್ಮಶಾನದಲ್ಲಿಯೇ ನೆರವೇರಿದೆ. ಸ್ಮಶಾನದಲ್ಲಿಯೇ ಮಂಟಪ ಹಾಕಿ ಅಲಂಕರಿಸಿ ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ.
ಮಯೂರಿಯ ಕನ್ಯಾದಾನ ಸಮಾರಂಭದಲ್ಲಿ ಮಾಜಿ ಮೇಯರ್ಗಳಾದ ಮಮತಾ ಹಾಗೂ ರಾಜೇಂದ್ರ ಪಿಪಡಾ ಕೂಡ ಭಾಗವಹಿಸಿದ್ದರು. ಮೌಢ್ಯಗಳನ್ನು ಒಡೆಯಲು ಗಂಗಾಧರ್ ಗಾಯಕ್ವಾಡ್ ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ಸಾಮಾಜಿಕ ಕಾರ್ಯಕರ್ತರು ಶ್ಲಾಘಿಸಿದ್ದಾರೆ. ಇದಕ್ಕೆ ಟೀಕೆಗಳು ಕೂಡ ವ್ಯಕ್ತವಾಗಿವೆ. ಕೆಲವು ಸ್ಥಳಗಳಲ್ಲಿ ಯಾವುದು ನಡೆಯಬೇಕೋ, ಅವುಗಳಿಗಷ್ಟೇ ಅವಕಾಶ ನೀಡಬೇಕು. ಸ್ಮಶಾನದ ಬದಲು ಮನೆ ಅಥವಾ ಮಂಟಪಗಳಲ್ಲಿ ಶವಗಳನ್ನು ಸುಡಲು ಅಥವಾ ಹೂಳಲು ಸಾಧ್ಯವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.