ಪ್ರಯಾಗ್ರಾಜ್ನಲ್ಲಿ ಅತೀಕ್ ಅಹ್ಮದ್, ಅಶ್ರಫ್ ಅಹ್ಮದ್ ಹತ್ಯೆ: ಪೊಲೀಸರ ಮುಂದೆಯೇ ಹಂತಕರ ಗುಂಡಿನ ದಾಳಿ
1335 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಪ್ರಯಾಗ್ರಾಜ್: ಉತ್ತರ ಪ್ರದೇಶದ ಗ್ಯಾಂಗ್ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಹತ್ಯೆಯಾಗಿದೆ. ಶನಿವಾರ ರಾತ್ರಿ ಪೊಲೀಸರು ಹಾಗೂ ಮಾಧ್ಯಮಗಳ ಮುಂದೆಯೇ ಅತೀತ್ ಅಹ್ಮದ್ ಮತ್ತು ಆತನ ಸೋದರ ಅಶ್ರಫ್ ಅಹ್ಮದ್ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಇಬ್ಬರೂ ಗ್ಯಾಂಗ್ಸ್ಟರ್ಗಳನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಕಳೆದೊಯ್ಯುತ್ತಿದ್ದರು. ಪೊಲೀಸರ ಬಿಗಿ ಭದ್ರತೆಯೂ ಇತ್ತು ಹಾಗೂ ಮಾಧ್ಯಮ ಪ್ರತಿನಿಧಿಗಳು ಮಾತ್ರ ಆ ಸ್ಥಳದಲ್ಲಿದ್ದರು. ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರಂತೆಯೇ ಇದ್ದ ಹಂತಕರು ದಿಢೀರ್ ಗುಂಡಿನ ದಾಳಿ ನಡೆಸಿದ್ದಾರೆ. ಅತೀತ್ ಮತ್ತು ಅಶ್ರಫ್ ನೆಲಕ್ಕುರುಳುವವರೆಗೂ ಒಂದೇ ಸಮನೆ ಗುಂಡು ಹಾರಿಸಿದ್ದಾರೆ. ಅನಂತರ ಪೊಲೀಸರು ಹಂತಕರನ್ನು ಸ್ಥಳದಲ್ಲೇ ಹಿಡಿದಿದ್ದಾರೆ. ಅಷ್ಟರಲ್ಲಿ ಇಬ್ಬರೂ ಗ್ಯಾಂಗ್ಸ್ಟರ್ಗಳ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಹತ್ಯೆ ಆರೋಪಿಗಳಾದ ಲವಲೇಶ್ ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರೆ. ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ್ದ ರಿವ್ವಾಲ್ವರ್, ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತೀತ್ ಮತ್ತು ಅಶ್ರಫ್ ಮಾಧ್ಯಮದವರೊಂದಿಗೆ ಮಾತನಾಡಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ. ಅತೀಕ್ನ ತಲೆಗೆ ನೇರವಾಗಿ ಗುರಿಯಿಟ್ಟು ಹಂತಕ ಗುಂಡು ಹಾರಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. 2005ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣ ಮತ್ತು ಈ ವರ್ಷ ಫೆಬ್ರವರಿಯಲ್ಲಿ ಕೊಲೆಯಾದ ಶಾಸಕರ ವಕೀಲ ಉಮೇಶ್ ಪಾಲ್ ಹತ್ಯೆಯಲ್ಲೂ ಅತೀಕ್ ಅಹ್ಮದ್ ಪ್ರಮುಖ ಆರೋಪಿಯಾಗಿದ್ದರು. ಇದರೊಂದಿಗೆ ಭಯೋತ್ಪಾದನಾ ಕೃತ್ಯದೊಂದಿಗೆ ಸಂಪರ್ಕ ಹೊಂದಿರುವ ಆರೋಪಗಳಿದ್ದವು. ಅಪಹರಣ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾಗಿದ್ದರು.
ಪ್ರಯಾಗ್ ರಾಜ್ನಲ್ಲಿ 144 ಸೆಕ್ಷನ್ ಘೋಷಿಸಲಾಗಿದೆ ಹಾಗೂ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು, ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕ್ಷಿಪ್ರಗತಿಯಲ್ಲಿ ತನಿಖೆ ಕೈಗೊಂಡು ವರದಿ ನೀಡುವಂತೆ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಪೊಲೀಸರು ಅತೀಕ್ ಅಹ್ಮದ್ನ ಮಗ ಅಸದ್ನ ಎನ್ಕೌಂಟರ್ ಮಾಡಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ಘಟನೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಚಿವ, ಬಿಜೆಪಿ ಮುಖಂಡ ಸುರೇಶ್ ಕುಮಾರ್ ಖನ್ನಾ, ''ಅಪರಾಧ ಹಾಗೂ ಅನ್ಯಾಯವು ತೀವ್ರ ಮಟ್ಟವನ್ನು ತಲುಪಿದಾಗ ಪ್ರಕೃತಿಯ ನಿರ್ಧಾರದ ಭಾಗಿವಾಗಿಯೇ ಅಂಥ ಘಟನೆಗಳು ನಡೆಯುತ್ತವೆ. ಯೋಗಿ ಸರಕಾರವು ಅಪರಾಧ ಕೃತ್ಯಗಳ ಬಗ್ಗೆ ಶೂನ್ಯ ಸಹಿಷ್ಣತೆ ಹೊಂದಿದ್ದು, ಪರಿಸ್ಥಿತಿ ನಿಯಂತ್ರಿಸಲು ಸರಕಾರವು ಕಾನೂನಾತ್ಮಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ'' ಎಂದಿದ್ದಾರೆ.
ಹೈಕೋರ್ಟ್ನ ನ್ಯಾಯಮೂರ್ತಿ ನೇತೃತ್ವದಲ್ಲಿ ಘಟನೆಯ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾಗಿದೆ.
''ಮಾಧ್ಯಮ ಪ್ರತಿನಿಧಿಗಳು ಬೈಟ್ ಪಡೆಯಲು ಮುಂದಾದಾಗ ಅವರೊಂದಿಗೆ ಮಾಧ್ಯಮದವರಂತೆಯೇ ನಿಂತಿದ್ದ ಹಂತಕರು ಗುಂಡಿನ ದಾಳಿ ನಡೆಸಿದ್ದಾರೆ. ಹತ್ಯೆ ನಡೆಸಿರುವ ಮೂವರನ್ನು ಹಿಡಿಯಲಾಗಿದೆ. ಈ ಘಟನೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಕೆಲವು ಪೊಲೀಸರು ಗಾಯಗೊಂಡಿದ್ದಾರೆ'' ಎಂದು ಪ್ರಯಾಗ್ರಾಜ್ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಆದರೆ, 'ಈ ಕೃತ್ಯವನ್ನು ಅಪರಾಧಿಗಳ ವಿರುದ್ಧ ಸಿಎಂ ಯೋಗಿ ಸರಕಾರವು ಕೈಗೊಂಡಿರುವ ಕ್ರಮ ಹಾಗೂ ರಾಮ ರಾಜ್ಯ ಸ್ಥಾಪನೆಗೆ ಯೋಗಿ ಮುಂದಾಗಿದ್ದಾರೆ' ಎಂದು ಕೆಲವು ಮಂದಿ ಸಂಭ್ರಮಾಚರಣೆ ನಡೆಸಿದ್ದಾರೆ. ಪಟಾಕಿ ಸಿಡಿಸಿ, ಯೋಗಿ ಅವರಿಗೆ ಜೈಕಾರ ಕೂಗಿದ್ದಾರೆ. ಅಪರಾಧಿಗಳು ಉತ್ತರ ಪ್ರದೇಶ ಬಿಟ್ಟು ಹೋಗುವಂತೆ ಈ ಮೂಲಕ ಮತ್ತೆ ಎಚ್ಚರಿಕೆ ನೀಡಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
ಇಬ್ಬರೂ ಗ್ಯಾಂಗ್ಸ್ಟರ್ಗಳನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಕಳೆದೊಯ್ಯುತ್ತಿದ್ದರು. ಪೊಲೀಸರ ಬಿಗಿ ಭದ್ರತೆಯೂ ಇತ್ತು ಹಾಗೂ ಮಾಧ್ಯಮ ಪ್ರತಿನಿಧಿಗಳು ಮಾತ್ರ ಆ ಸ್ಥಳದಲ್ಲಿದ್ದರು. ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರಂತೆಯೇ ಇದ್ದ ಹಂತಕರು ದಿಢೀರ್ ಗುಂಡಿನ ದಾಳಿ ನಡೆಸಿದ್ದಾರೆ. ಅತೀತ್ ಮತ್ತು ಅಶ್ರಫ್ ನೆಲಕ್ಕುರುಳುವವರೆಗೂ ಒಂದೇ ಸಮನೆ ಗುಂಡು ಹಾರಿಸಿದ್ದಾರೆ. ಅನಂತರ ಪೊಲೀಸರು ಹಂತಕರನ್ನು ಸ್ಥಳದಲ್ಲೇ ಹಿಡಿದಿದ್ದಾರೆ. ಅಷ್ಟರಲ್ಲಿ ಇಬ್ಬರೂ ಗ್ಯಾಂಗ್ಸ್ಟರ್ಗಳ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಹತ್ಯೆ ಆರೋಪಿಗಳಾದ ಲವಲೇಶ್ ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರೆ. ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ್ದ ರಿವ್ವಾಲ್ವರ್, ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತೀತ್ ಮತ್ತು ಅಶ್ರಫ್ ಮಾಧ್ಯಮದವರೊಂದಿಗೆ ಮಾತನಾಡಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ. ಅತೀಕ್ನ ತಲೆಗೆ ನೇರವಾಗಿ ಗುರಿಯಿಟ್ಟು ಹಂತಕ ಗುಂಡು ಹಾರಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. 2005ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣ ಮತ್ತು ಈ ವರ್ಷ ಫೆಬ್ರವರಿಯಲ್ಲಿ ಕೊಲೆಯಾದ ಶಾಸಕರ ವಕೀಲ ಉಮೇಶ್ ಪಾಲ್ ಹತ್ಯೆಯಲ್ಲೂ ಅತೀಕ್ ಅಹ್ಮದ್ ಪ್ರಮುಖ ಆರೋಪಿಯಾಗಿದ್ದರು. ಇದರೊಂದಿಗೆ ಭಯೋತ್ಪಾದನಾ ಕೃತ್ಯದೊಂದಿಗೆ ಸಂಪರ್ಕ ಹೊಂದಿರುವ ಆರೋಪಗಳಿದ್ದವು. ಅಪಹರಣ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾಗಿದ್ದರು.
ಪ್ರಯಾಗ್ ರಾಜ್ನಲ್ಲಿ 144 ಸೆಕ್ಷನ್ ಘೋಷಿಸಲಾಗಿದೆ ಹಾಗೂ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು, ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕ್ಷಿಪ್ರಗತಿಯಲ್ಲಿ ತನಿಖೆ ಕೈಗೊಂಡು ವರದಿ ನೀಡುವಂತೆ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಪೊಲೀಸರು ಅತೀಕ್ ಅಹ್ಮದ್ನ ಮಗ ಅಸದ್ನ ಎನ್ಕೌಂಟರ್ ಮಾಡಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ಘಟನೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಚಿವ, ಬಿಜೆಪಿ ಮುಖಂಡ ಸುರೇಶ್ ಕುಮಾರ್ ಖನ್ನಾ, ''ಅಪರಾಧ ಹಾಗೂ ಅನ್ಯಾಯವು ತೀವ್ರ ಮಟ್ಟವನ್ನು ತಲುಪಿದಾಗ ಪ್ರಕೃತಿಯ ನಿರ್ಧಾರದ ಭಾಗಿವಾಗಿಯೇ ಅಂಥ ಘಟನೆಗಳು ನಡೆಯುತ್ತವೆ. ಯೋಗಿ ಸರಕಾರವು ಅಪರಾಧ ಕೃತ್ಯಗಳ ಬಗ್ಗೆ ಶೂನ್ಯ ಸಹಿಷ್ಣತೆ ಹೊಂದಿದ್ದು, ಪರಿಸ್ಥಿತಿ ನಿಯಂತ್ರಿಸಲು ಸರಕಾರವು ಕಾನೂನಾತ್ಮಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ'' ಎಂದಿದ್ದಾರೆ.
ಹೈಕೋರ್ಟ್ನ ನ್ಯಾಯಮೂರ್ತಿ ನೇತೃತ್ವದಲ್ಲಿ ಘಟನೆಯ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾಗಿದೆ.
''ಮಾಧ್ಯಮ ಪ್ರತಿನಿಧಿಗಳು ಬೈಟ್ ಪಡೆಯಲು ಮುಂದಾದಾಗ ಅವರೊಂದಿಗೆ ಮಾಧ್ಯಮದವರಂತೆಯೇ ನಿಂತಿದ್ದ ಹಂತಕರು ಗುಂಡಿನ ದಾಳಿ ನಡೆಸಿದ್ದಾರೆ. ಹತ್ಯೆ ನಡೆಸಿರುವ ಮೂವರನ್ನು ಹಿಡಿಯಲಾಗಿದೆ. ಈ ಘಟನೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಕೆಲವು ಪೊಲೀಸರು ಗಾಯಗೊಂಡಿದ್ದಾರೆ'' ಎಂದು ಪ್ರಯಾಗ್ರಾಜ್ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಆದರೆ, 'ಈ ಕೃತ್ಯವನ್ನು ಅಪರಾಧಿಗಳ ವಿರುದ್ಧ ಸಿಎಂ ಯೋಗಿ ಸರಕಾರವು ಕೈಗೊಂಡಿರುವ ಕ್ರಮ ಹಾಗೂ ರಾಮ ರಾಜ್ಯ ಸ್ಥಾಪನೆಗೆ ಯೋಗಿ ಮುಂದಾಗಿದ್ದಾರೆ' ಎಂದು ಕೆಲವು ಮಂದಿ ಸಂಭ್ರಮಾಚರಣೆ ನಡೆಸಿದ್ದಾರೆ. ಪಟಾಕಿ ಸಿಡಿಸಿ, ಯೋಗಿ ಅವರಿಗೆ ಜೈಕಾರ ಕೂಗಿದ್ದಾರೆ. ಅಪರಾಧಿಗಳು ಉತ್ತರ ಪ್ರದೇಶ ಬಿಟ್ಟು ಹೋಗುವಂತೆ ಈ ಮೂಲಕ ಮತ್ತೆ ಎಚ್ಚರಿಕೆ ನೀಡಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ.