ರಾಜ್ಯದಲ್ಲಿ ಭೀಕರ ಬರಗಾಲ: ಬಿಸಿಲ ತಾಪದ ಜೊತೆ ತಟ್ಟಿರುವ ತರಕಾರಿ ಬೆಲೆ ಹೆಚ್ಚಳದ ಬಿಸಿಯ ಬಗ್ಗೆ ಜನರು ಹೇಳೋದೇನು?
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ರಾಜ್ಯದಲ್ಲಿ ಈಗಾಗಲೇ ಭೀಕರ ಬರಗಾಲ ಎದುರಾಗಿದೆ. ಕುಡಿಯುವ ನೀರಗೂ ಹಾಹಾಕಾರ ಇರುವಾಗಲೇ ಇತ್ತ ತರಕಾರಿ ಬೆಲೆ ಕೂಡ ನಿಧಾನಗತಿಯಲ್ಲಿ ಹೆಚ್ಚಳವಾಗುತ್ತಿದೆ. ಕೆಲ ತರಕಾರಿ ಹೊರತುಪಡಿಸಿ, ಕ್ಯಾರೆಟ್, ಬೀನ್ಸ್, ಮೂಲಂಗಿ, ಊಟಿ ಕ್ಯಾರೆಟ್, ಬೀಟ್ ರೋಟ್, ಬೆಂಡೆಕಾಯಿ, ನವೀಲುಕೋಸು, ಹೀರೆಕಾಯಿ ಡಬಲ್ ರೇಟ್ ಆಗಿದೆ. ಎಂದು ವ್ಯಾಪಾರಸ್ಥರು ಹೇಳಿದರು.
ಗ್ರಾಹಕರು ಕೂಡ ಬೆಲೆ ಹೆಚ್ಚಳವಾಗಿರೋದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ರು, ಹೀಗೆ ಮುಂದುವರೆದರೆ ಬಡವರು ಬದುಕು ಕಷ್ಟಕರವಾಗುತ್ತೆ ಎಂದು ಗ್ರಾಹಕರೊಬ್ಬರು ತಿಳಿಸಿದರು. ಬಿಸಿಲ ತಾಪದ ಹೆಚ್ಚಳಕ್ಕೆ ಗ್ರಾಹಕರು ಮಾರ್ಕೆಟ್ ನತ್ತ ಸುಳಿಯುತ್ತಿಲ್ಲ, ಬಿಸಿಲಿಗೆ ತರಕಾರಿಗಳು ಒಣಗಿಹೋಗುತ್ತವೆ ಶೇಖರಣೆ ಮಾಡುವುದಕ್ಕೆ ಬಹಳ ಕಷ್ಟಕರವಾಗುತ್ತಿದೆ ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಒಂದು ಕಡೆ ಮಳೆ ಪ್ರಮಾಣ ಕಡಿಮೆಯಿದೆ. ರೈತರಿಗೆ ಬೆಳೆ ಬೆಳೆಯಲು ಸಕಾಲಕ್ಕೆ ಆಗುತ್ತಿಲ್ಲ ಅವರು ತಾನೆ ಏನ್ ಮಾಡ್ತಾರೆ ಎಂದು ಗ್ರಾಹಕರೊಬ್ಬರು ರೈತರ ಬಗ್ಗೆ ಕಾಳಜಿ ವಹಿಸಿ ಮಾತನಾಡಿದರು. ಇನ್ನೂ ರಾಜ್ಯದಲ್ಲೆ ಭೀಕರ ಬರಗಾಲ ಎದುರಿಸುತ್ತಿರೋ ಹಿನ್ನಲೆಯಲ್ಲಿ ಸರ್ಕಾರ ಇನ್ನಷ್ಟು ಕ್ರಮ ಕೈಗೊಳ್ಳಲಿ ಬಡವರ ಸಹಾಯಕ್ಕೆ ಬರಲಿ ಎಂದು ವ್ಯಾಪಾರಸ್ಥರು ಹಾಗೂ ಗ್ರಾಹಕರು ಸರ್ಕಾರದ ಗಮನ ಸೆಳೆದರು.
ಗ್ರಾಹಕರು ಕೂಡ ಬೆಲೆ ಹೆಚ್ಚಳವಾಗಿರೋದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ರು, ಹೀಗೆ ಮುಂದುವರೆದರೆ ಬಡವರು ಬದುಕು ಕಷ್ಟಕರವಾಗುತ್ತೆ ಎಂದು ಗ್ರಾಹಕರೊಬ್ಬರು ತಿಳಿಸಿದರು. ಬಿಸಿಲ ತಾಪದ ಹೆಚ್ಚಳಕ್ಕೆ ಗ್ರಾಹಕರು ಮಾರ್ಕೆಟ್ ನತ್ತ ಸುಳಿಯುತ್ತಿಲ್ಲ, ಬಿಸಿಲಿಗೆ ತರಕಾರಿಗಳು ಒಣಗಿಹೋಗುತ್ತವೆ ಶೇಖರಣೆ ಮಾಡುವುದಕ್ಕೆ ಬಹಳ ಕಷ್ಟಕರವಾಗುತ್ತಿದೆ ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಒಂದು ಕಡೆ ಮಳೆ ಪ್ರಮಾಣ ಕಡಿಮೆಯಿದೆ. ರೈತರಿಗೆ ಬೆಳೆ ಬೆಳೆಯಲು ಸಕಾಲಕ್ಕೆ ಆಗುತ್ತಿಲ್ಲ ಅವರು ತಾನೆ ಏನ್ ಮಾಡ್ತಾರೆ ಎಂದು ಗ್ರಾಹಕರೊಬ್ಬರು ರೈತರ ಬಗ್ಗೆ ಕಾಳಜಿ ವಹಿಸಿ ಮಾತನಾಡಿದರು. ಇನ್ನೂ ರಾಜ್ಯದಲ್ಲೆ ಭೀಕರ ಬರಗಾಲ ಎದುರಿಸುತ್ತಿರೋ ಹಿನ್ನಲೆಯಲ್ಲಿ ಸರ್ಕಾರ ಇನ್ನಷ್ಟು ಕ್ರಮ ಕೈಗೊಳ್ಳಲಿ ಬಡವರ ಸಹಾಯಕ್ಕೆ ಬರಲಿ ಎಂದು ವ್ಯಾಪಾರಸ್ಥರು ಹಾಗೂ ಗ್ರಾಹಕರು ಸರ್ಕಾರದ ಗಮನ ಸೆಳೆದರು.