Explainer Video; ಜಲ ಸಂರಕ್ಷಣೆಗೆ ಇಲ್ಲಿದೆ ಕಡಿಮೆ ವೆಚ್ಚದ ಮನೆ ಮದ್ದು!
1575 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿರಾಜ್ಯ ರಾಜಧಾನಿ ಬೆಂಗಳೂರು ನಗರ ಮಾತ್ರವಲ್ಲ, ರಾಜಾದ್ಯಂತ ಬೇಸಿಗೆ ವೇಳೆ ನೀರಿನ ಕೊರತೆ ಕಾಡ್ತಿದೆ. ಈ ಸಮಯದಲ್ಲಿ ಜನ ಸಾಮಾನ್ಯರು ತಮ್ಮ ಮನೆಯಲ್ಲಿ ಬಳಕೆ ಮಾಡುವ ನೀರನ್ನ ಉಳಿಸೋದು ಹೇಗೆ?ಯಾವುದೇ ವೆಚ್ಚವಿಲ್ಲದೆ ನೀರನ್ನು ಮರು ಬಳಕೆ ಮಾಡೋದು ಹೇಗೆ ಅನ್ನೋದ್ರ ಕುರಿತಾಗಿ ಕೆಲವೊಂದಿಷ್ಟು ಸಿಂಪಲ್ಸ್ ಟಿಪ್ಸ್ಗಳು ಇಲ್ಲಿವ. ಈ ಮೂಲಕ ಬೇಸಿಗೆ ವೇಳೆ ನೀರಿನ ಹಾಹಾಕಾರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದಾಗಿದೆ. ಖರ್ಚಿಲ್ಲದೆ ಪರಿಸರ ರಕ್ಷಣೆಯನ್ನೂ ಮಾಡಬಹುದಾಗಿದೆ.
ಬೇಸಿಗೆ ಆರಂಭದಲ್ಲೇ ಕರ್ನಾಟಕ ರಾಜ್ಯಾದ್ಯಂತ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಂತೂ ಹಾಹಾಕಾರವೇ ಶುರುವಾಗಿದೆ. ಬೇಸಿಗೆ ಅಂತ್ಯದವರೆಗೆ ಮುಂದಿನ ಮೂರು ತಿಂಗಳು ಮಹಾ ನಗರಕ್ಕೆ ನೀರು ಸರಬರಾಜು ಮಾಡೋದೇ ದೊಡ್ಡ ಸವಾಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಾಗೋದು ಮಾಮೂಲು. ಆದರೆ, ಈ ಬಾರಿ ನೀರಿನ ಅಭಾವ ವಿಪರೀತವಾಗಿದೆ. ಕಳೆದ ವರ್ಷ ಮಳೆ ಕೈಕೊಟ್ಟಿದ್ದೇ ಇದಕ್ಕೆ ಮೊದಲ ಕಾರಣ. ಜೊತೆಯಲ್ಲೇ ನಾವು - ನೀವೂ ಕೂಡಾ ನೀರಿನ ಅಭಾವಕ್ಕೆ ಕಾರಣ ಆಗ್ತಿದ್ದೇವೆ. ಜಲ ಸಂರಕ್ಷಣೆಯ ಮಹತ್ವವೇ ನಮಗೆ ಗೊತ್ತಿಲ್ಲ.
ನಾವು ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನೀರನ್ನ ಪೋಲು ಮಾಡ್ತೇವೆ. ಯಾವುದೋ ದೇಶದಲ್ಲಿ ನೀರಿಲ್ಲದೆ ಪೇಪರ್ ಬಳಕೆ ಮಾಡ್ತಾರೆ ಅನ್ನೋದನ್ನ ಲೇವಡಿ ಮಾಡುವ ನಾವು, ನಮ್ಮ ಮನೆಯ ನಲ್ಲಿಯಲ್ಲಿ ನೀರು ಹರಿಯಲು ಬಿಟ್ಟು ಮಾತನಾಡುತ್ತಾ ನಿಲ್ಲುತ್ತೇವೆ! ಮರಳುಗಾಡಿನ ಜನರು ನೀರಿಲ್ಲದೆ ಹೇಗೆ ಬದುಕುತ್ತಾರೋ ಎಂದು ವ್ಯಥೆ ಪಟ್ಟುಕೊಳ್ಳುವ ಜನ, ಅದೇ ಚಿಂತೆಯಲ್ಲಿ ಶವರ್ ಆನ್ ಮಾಡಿ ಯೋಚಿಸುತ್ತಾ ಕುಳಿತು ನೀರು ಚರಂಡಿ ಪಾಲಾಗುವಂತೆ ಮಾಡ್ತಾರೆ! ನಮ್ಮ ಮನೆಯಲ್ಲಿ ನಾವು ಕೆಲವೊಂದು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೂ ಸಾಕು, ಸಾಕಷ್ಟು ನೀರು ಉಳಿಸಬಹುದು.
ಜಲ ಸಂರಕ್ಷಣೆ ಅನ್ನೋದು ಬೇಸಿಗೆಯ ವೇಳೆ ಮಾತ್ರ ಪಾಲನೆ ಮಾಡಬೇಕಾದ ನಿಯಮ ಅಲ್ಲವೇ ಅಲ್ಲ. ಬೆಂಗಳೂರಿನಲ್ಲಿ ಬಿಬಿಎಂಪಿ ಪ್ರತಿ ಮನೆಯಲ್ಲೂ, ಅಪಾರ್ಟ್ಮೆಂಟ್ನಲ್ಲೂ ಮಳೆ ನೀರು ಕೊಯ್ಲು ವ್ಯವಸ್ಥೆ ಇರಬೇಕು ಎನ್ನುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಈ ವ್ಯವಸ್ಥೆ ಇಲ್ಲವಾದರೆ ತಾರಸಿಯಿಂದ ಹರಿದು ಬರುವ ಮಳೆ ನೀರನ್ನು ಸಂಗ್ರಹಿಸಲು ಡ್ರಮ್ಗಳನ್ನು ಇಟ್ಟುಕೊಳ್ಳಿ. ಈ ನೀರನ್ನ ಹಲವು ಕೆಲಸ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಬೇಸಿಗೆ ಆರಂಭದಲ್ಲೇ ಕರ್ನಾಟಕ ರಾಜ್ಯಾದ್ಯಂತ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಂತೂ ಹಾಹಾಕಾರವೇ ಶುರುವಾಗಿದೆ. ಬೇಸಿಗೆ ಅಂತ್ಯದವರೆಗೆ ಮುಂದಿನ ಮೂರು ತಿಂಗಳು ಮಹಾ ನಗರಕ್ಕೆ ನೀರು ಸರಬರಾಜು ಮಾಡೋದೇ ದೊಡ್ಡ ಸವಾಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಾಗೋದು ಮಾಮೂಲು. ಆದರೆ, ಈ ಬಾರಿ ನೀರಿನ ಅಭಾವ ವಿಪರೀತವಾಗಿದೆ. ಕಳೆದ ವರ್ಷ ಮಳೆ ಕೈಕೊಟ್ಟಿದ್ದೇ ಇದಕ್ಕೆ ಮೊದಲ ಕಾರಣ. ಜೊತೆಯಲ್ಲೇ ನಾವು - ನೀವೂ ಕೂಡಾ ನೀರಿನ ಅಭಾವಕ್ಕೆ ಕಾರಣ ಆಗ್ತಿದ್ದೇವೆ. ಜಲ ಸಂರಕ್ಷಣೆಯ ಮಹತ್ವವೇ ನಮಗೆ ಗೊತ್ತಿಲ್ಲ.
ನಾವು ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನೀರನ್ನ ಪೋಲು ಮಾಡ್ತೇವೆ. ಯಾವುದೋ ದೇಶದಲ್ಲಿ ನೀರಿಲ್ಲದೆ ಪೇಪರ್ ಬಳಕೆ ಮಾಡ್ತಾರೆ ಅನ್ನೋದನ್ನ ಲೇವಡಿ ಮಾಡುವ ನಾವು, ನಮ್ಮ ಮನೆಯ ನಲ್ಲಿಯಲ್ಲಿ ನೀರು ಹರಿಯಲು ಬಿಟ್ಟು ಮಾತನಾಡುತ್ತಾ ನಿಲ್ಲುತ್ತೇವೆ! ಮರಳುಗಾಡಿನ ಜನರು ನೀರಿಲ್ಲದೆ ಹೇಗೆ ಬದುಕುತ್ತಾರೋ ಎಂದು ವ್ಯಥೆ ಪಟ್ಟುಕೊಳ್ಳುವ ಜನ, ಅದೇ ಚಿಂತೆಯಲ್ಲಿ ಶವರ್ ಆನ್ ಮಾಡಿ ಯೋಚಿಸುತ್ತಾ ಕುಳಿತು ನೀರು ಚರಂಡಿ ಪಾಲಾಗುವಂತೆ ಮಾಡ್ತಾರೆ! ನಮ್ಮ ಮನೆಯಲ್ಲಿ ನಾವು ಕೆಲವೊಂದು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೂ ಸಾಕು, ಸಾಕಷ್ಟು ನೀರು ಉಳಿಸಬಹುದು.
ಜಲ ಸಂರಕ್ಷಣೆ ಅನ್ನೋದು ಬೇಸಿಗೆಯ ವೇಳೆ ಮಾತ್ರ ಪಾಲನೆ ಮಾಡಬೇಕಾದ ನಿಯಮ ಅಲ್ಲವೇ ಅಲ್ಲ. ಬೆಂಗಳೂರಿನಲ್ಲಿ ಬಿಬಿಎಂಪಿ ಪ್ರತಿ ಮನೆಯಲ್ಲೂ, ಅಪಾರ್ಟ್ಮೆಂಟ್ನಲ್ಲೂ ಮಳೆ ನೀರು ಕೊಯ್ಲು ವ್ಯವಸ್ಥೆ ಇರಬೇಕು ಎನ್ನುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಈ ವ್ಯವಸ್ಥೆ ಇಲ್ಲವಾದರೆ ತಾರಸಿಯಿಂದ ಹರಿದು ಬರುವ ಮಳೆ ನೀರನ್ನು ಸಂಗ್ರಹಿಸಲು ಡ್ರಮ್ಗಳನ್ನು ಇಟ್ಟುಕೊಳ್ಳಿ. ಈ ನೀರನ್ನ ಹಲವು ಕೆಲಸ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.