Rain Alert: ಮುಂಗಾರಿಗೆ ಚಂಡಮಾರುತ ವರ: ಅರಬ್ಬಿಯಲ್ಲಿ ಸೈಕ್ಲೋನ್ ಬಂದರೆ ಭರ್ಜರಿ ಮಳೆ..!
1386 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಒಂದೆಡೆ ನೆತ್ತಿ ಸುಡುವ ರಣಬಿಸಿಲು.. ಇನ್ನೊಂದೆಡೆ ಮಳೆ ಬಂದರೆ ಸಾಕಪ್ಪ ಎನ್ನುವ ಜನರು.. ಇದರ ಮಧ್ಯೆ ಹವಾಮಾನ ಇಲಾಖೆ ಗುಡ್ನ್ಯೂಸ್ ನೀಡಿದೆ. ಏಪ್ರಿಲ್ 7ರಿಂದ ಏಪ್ರಿಲ್ 15ರ ತನಕ ರಾಜ್ಯದ ನಾನಾ ಭಾಗದಲ್ಲಿ ಗುಡುಗು, ಸಿಡಿಲಿನ ಜತೆಗೆ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಬೇಸಿಗೆ ಮಳೆ ಮುಗಿದಾಕ್ಷಣ ಚಂಡಮಾರುತ ಕಾಣಿಸಿಕೊಂಡರೆ ಪೂರ್ವ ಮುಂಗಾರು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಬಿಸಿಲು ತಣಿಸಲು ಎರಡು ಮಳೆಗಳು ಜತೆಗೂಡುವ ನಿರೀಕ್ಷೆ ಹುಟ್ಟಿಕೊಂಡಿದೆ.
ಹೌದು.. ಏಪ್ರಿಲ್ ಎರಡನೇ ವಾರದಲ್ಲಿ ರಾಜ್ಯದ ಎಲ್ಲ ಭಾಗದಲ್ಲೂ ಸಾಧಾರಣ ಪ್ರಮಾಣದ ಬೇಸಿಗೆ ಮಳೆಯ ನಿರೀಕ್ಷೆ ಮೂಡಿದೆ. ಐಎಂಡಿ ಪ್ರಕಾರ, ಏಪ್ರಿಲ್ 7ರಿಂದ ಏಪ್ರಿಲ್ 15ರ ತನಕ ರಾಜ್ಯದ ನಾನಾ ಭಾಗದಲ್ಲಿ ಗುಡುಗು, ಸಿಡಿಲಿನ ಜತೆಗೆ ಮಳೆಯಾಗಲಿದೆ. ಈ ಮಳೆ ನಿಲ್ಲುತ್ತಿದ್ದಂತೆ ತಾಪಮಾನದಲ್ಲೂ ಏರಿಕೆ ಕಾಣಿಸಿಕೊಂಡು ಏಪ್ರಿಲ್ ಕೊನೆಯ ವಾರದಲ್ಲಿ, ಮೇ ಮೊದಲ ವಾರದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ.. ಇದೇ ಸಮಯದಲ್ಲಿ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬಂದರೆ ಪೂರ್ವ ಮುಂಗಾರು ಮಳೆಯೂ ಕಾಣಿಸಿಕೊಳ್ಳಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಎರಡು ಮೂರು ವರ್ಷಗಳಲ್ಲಿ ಮಳೆಯ ಲೆಕ್ಕಾಚಾರ ಮಾಡಿದರೆ ಏಪ್ರಿಲ್ನಲ್ಲಿಯೇ ಚಂಡಮಾರುತಗಳು ಬಂಗಾಳಕೊಲ್ಲಿ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿದ್ದವು. ಆದರೆ ಕಳೆದ ವರ್ಷವಂತೂ ಮೇ ತಿಂಗಳಲ್ಲಿ 'ಮೋಕಾ' ಚಂಡಮಾರುತ ಕಾಣಿಸಿಕೊಂಡರೆ ಈ ಬಳಿಕ 'ಬಿಪರ್ಜಾಯ್' ಚಂಡಮಾರುತ 2023ರ ಜೂನ್ 15ರಲ್ಲಿ ಕಾಣಿಸಿಕೊಂಡ ಕಾರಣ ಮುಂಗಾರು ಮಾರುತಕ್ಕೆ ಬಹಳ ದೊಡ್ಡ ಹೊಡೆತ ಬಿದ್ದಿತ್ತು. ಕಳೆದ ವರ್ಷ ಒಟ್ಟು 6 ಚಂಡಮಾರುತಗಳು ವರ್ಷವಿಡೀ ಕಾಣಿಸಿಕೊಂಡಿದ್ದವು. ಇದರಲ್ಲಿ ಅಕ್ಟೋಬರ್ನಲ್ಲಿ ತೇಜ್' 'ಹಮೋನ್' ಚಂಡಮಾರುತ, 'ಮಿಜಿಲಿ' ಚಂಡಮಾರುತ, ಮಿಚಾಂವ್' ಚಂಡಮಾರುತಗಳು ಬೀಸಿದ್ದವು. ಈ ಬಳಿಕ ಚಂಡಮಾರುತದ ಆಟವೇ ಇರಲಿಲ್ಲ.
ಪೂರ್ವ ಮುಂಗಾರು ಮಳೆಯ ಆರಂಭಕ್ಕೆ ಚಂಡಮಾರುತವೇ ಪ್ರಬಲ ಕಾರಣ. ಈ ಬಾರಿಯ ಏಪ್ರಿಲ್ನಲ್ಲಿ ಯಾವುದೇ ಚಂಡಮಾರುತಗಳು ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಇಲ್ಲಿಯವರೆಗೆ ಬಂದಿಲ್ಲ. ಆದರೆ ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ತಿಂಗಳ - ಲೆಕ್ಕಾಚಾರ ಈಗಲೇ ಹೇಳಲು ಆಸಾಧ್ಯ. ಆದರೆ ಮುಂಗಾರು ಆರಂಭದಲ್ಲಿ ಚಂಡ ಮಾರುತ ಬಂದರೆ ಮುಂಗಾರು ಮಾರುತ ಕೊಂಚ ವಿಳಂಬ ವಾಗುವ ಸಾಧ್ಯತೆಗಳಿವೆ,'' ಎಂದು ಹವಾಮಾನ ಇಲಾಕೆ ಹೇಳಿದೆ.
ಅರಬ್ಬಿ ಸಮುದ್ರದಲ್ಲಿ 2020ರಲ್ಲಿ ಕಾಣಿಸಿಕೊಂಡ 'ನಿಸರ್ಗ' ಚಂಡಮಾರುತ, ಇದೇ ಹೊತ್ತಿನಲ್ಲಿ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡ 'ಹಂಪನ್' ಚಂಡಮಾರುತದಿಂದಾಗಿ ಮುಂಗಾರು ಮಾರುತ ಪ್ರಬಲಗೊಂಡು ಎಲ್ಲೆಡೆ ಭರ್ಜರಿ ಮಳೆಯಾಗಿತ್ತು. ಈ ಬಳಿಕ ಇಂತಹ ಸ್ಥಿತಿ ನಿರ್ಮಾಣವಾಗಿದ್ದೇ ಇಲ್ಲ. ಆದರೆ ಅರಬ್ಬಿಯಲ್ಲಿ ಉತ್ತಮ ಚಂಡಮಾರುತ ಮುಂಗಾರಿಗಿಂತ ಮೊದಲು ಬಂದರೆ ಮುಂಗಾರು ಮಾರುತ ಮತ್ತಷ್ಟು ಉತ್ತಮವಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಈ ಬಾರಿ ಭರ್ಜರಿ ಮಳೆ ನಿರೀಕ್ಷೇಯಲ್ಲಿ ರಾಜ್ಯದ ಜನರಿದ್ದಾರೆ..
ಹೌದು.. ಏಪ್ರಿಲ್ ಎರಡನೇ ವಾರದಲ್ಲಿ ರಾಜ್ಯದ ಎಲ್ಲ ಭಾಗದಲ್ಲೂ ಸಾಧಾರಣ ಪ್ರಮಾಣದ ಬೇಸಿಗೆ ಮಳೆಯ ನಿರೀಕ್ಷೆ ಮೂಡಿದೆ. ಐಎಂಡಿ ಪ್ರಕಾರ, ಏಪ್ರಿಲ್ 7ರಿಂದ ಏಪ್ರಿಲ್ 15ರ ತನಕ ರಾಜ್ಯದ ನಾನಾ ಭಾಗದಲ್ಲಿ ಗುಡುಗು, ಸಿಡಿಲಿನ ಜತೆಗೆ ಮಳೆಯಾಗಲಿದೆ. ಈ ಮಳೆ ನಿಲ್ಲುತ್ತಿದ್ದಂತೆ ತಾಪಮಾನದಲ್ಲೂ ಏರಿಕೆ ಕಾಣಿಸಿಕೊಂಡು ಏಪ್ರಿಲ್ ಕೊನೆಯ ವಾರದಲ್ಲಿ, ಮೇ ಮೊದಲ ವಾರದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ.. ಇದೇ ಸಮಯದಲ್ಲಿ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬಂದರೆ ಪೂರ್ವ ಮುಂಗಾರು ಮಳೆಯೂ ಕಾಣಿಸಿಕೊಳ್ಳಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಎರಡು ಮೂರು ವರ್ಷಗಳಲ್ಲಿ ಮಳೆಯ ಲೆಕ್ಕಾಚಾರ ಮಾಡಿದರೆ ಏಪ್ರಿಲ್ನಲ್ಲಿಯೇ ಚಂಡಮಾರುತಗಳು ಬಂಗಾಳಕೊಲ್ಲಿ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿದ್ದವು. ಆದರೆ ಕಳೆದ ವರ್ಷವಂತೂ ಮೇ ತಿಂಗಳಲ್ಲಿ 'ಮೋಕಾ' ಚಂಡಮಾರುತ ಕಾಣಿಸಿಕೊಂಡರೆ ಈ ಬಳಿಕ 'ಬಿಪರ್ಜಾಯ್' ಚಂಡಮಾರುತ 2023ರ ಜೂನ್ 15ರಲ್ಲಿ ಕಾಣಿಸಿಕೊಂಡ ಕಾರಣ ಮುಂಗಾರು ಮಾರುತಕ್ಕೆ ಬಹಳ ದೊಡ್ಡ ಹೊಡೆತ ಬಿದ್ದಿತ್ತು. ಕಳೆದ ವರ್ಷ ಒಟ್ಟು 6 ಚಂಡಮಾರುತಗಳು ವರ್ಷವಿಡೀ ಕಾಣಿಸಿಕೊಂಡಿದ್ದವು. ಇದರಲ್ಲಿ ಅಕ್ಟೋಬರ್ನಲ್ಲಿ ತೇಜ್' 'ಹಮೋನ್' ಚಂಡಮಾರುತ, 'ಮಿಜಿಲಿ' ಚಂಡಮಾರುತ, ಮಿಚಾಂವ್' ಚಂಡಮಾರುತಗಳು ಬೀಸಿದ್ದವು. ಈ ಬಳಿಕ ಚಂಡಮಾರುತದ ಆಟವೇ ಇರಲಿಲ್ಲ.
ಪೂರ್ವ ಮುಂಗಾರು ಮಳೆಯ ಆರಂಭಕ್ಕೆ ಚಂಡಮಾರುತವೇ ಪ್ರಬಲ ಕಾರಣ. ಈ ಬಾರಿಯ ಏಪ್ರಿಲ್ನಲ್ಲಿ ಯಾವುದೇ ಚಂಡಮಾರುತಗಳು ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಇಲ್ಲಿಯವರೆಗೆ ಬಂದಿಲ್ಲ. ಆದರೆ ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ತಿಂಗಳ - ಲೆಕ್ಕಾಚಾರ ಈಗಲೇ ಹೇಳಲು ಆಸಾಧ್ಯ. ಆದರೆ ಮುಂಗಾರು ಆರಂಭದಲ್ಲಿ ಚಂಡ ಮಾರುತ ಬಂದರೆ ಮುಂಗಾರು ಮಾರುತ ಕೊಂಚ ವಿಳಂಬ ವಾಗುವ ಸಾಧ್ಯತೆಗಳಿವೆ,'' ಎಂದು ಹವಾಮಾನ ಇಲಾಕೆ ಹೇಳಿದೆ.
ಅರಬ್ಬಿ ಸಮುದ್ರದಲ್ಲಿ 2020ರಲ್ಲಿ ಕಾಣಿಸಿಕೊಂಡ 'ನಿಸರ್ಗ' ಚಂಡಮಾರುತ, ಇದೇ ಹೊತ್ತಿನಲ್ಲಿ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡ 'ಹಂಪನ್' ಚಂಡಮಾರುತದಿಂದಾಗಿ ಮುಂಗಾರು ಮಾರುತ ಪ್ರಬಲಗೊಂಡು ಎಲ್ಲೆಡೆ ಭರ್ಜರಿ ಮಳೆಯಾಗಿತ್ತು. ಈ ಬಳಿಕ ಇಂತಹ ಸ್ಥಿತಿ ನಿರ್ಮಾಣವಾಗಿದ್ದೇ ಇಲ್ಲ. ಆದರೆ ಅರಬ್ಬಿಯಲ್ಲಿ ಉತ್ತಮ ಚಂಡಮಾರುತ ಮುಂಗಾರಿಗಿಂತ ಮೊದಲು ಬಂದರೆ ಮುಂಗಾರು ಮಾರುತ ಮತ್ತಷ್ಟು ಉತ್ತಮವಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಈ ಬಾರಿ ಭರ್ಜರಿ ಮಳೆ ನಿರೀಕ್ಷೇಯಲ್ಲಿ ರಾಜ್ಯದ ಜನರಿದ್ದಾರೆ..